ETV Bharat / state

ಗಣಿನಾಡಲ್ಲಿ ಟಿಕೆಟ್​ಗಾಗಿ ಗುದ್ದಾಟ: ಬಿಜೆಪಿಗೆ ತನ್ನವರಿಂದ್ಲೇ ತಲೆನೋವು

author img

By

Published : Oct 11, 2019, 4:00 PM IST

ವಿಜಯನಗರ ಕ್ಷೇತ್ರದ ಹಾಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ಹೆಚ್. ಆರ್. ಗವಿಯಪ್ಪ ಸುತಾರಾಂ ಒಪ್ಪುತ್ತಿಲ್ಲ.‌ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಉಪಚುನಾವಣೆ ಟಿಕೆಟ್ ಬೇಕೆಂದು ಪ್ರಬಲವಾದ ಬೇಡಿಕೆಯನ್ನಿಟ್ಟಿದ್ದಾರೆ. ಹಾಗಾಗಿ ರಾಜ್ಯ ಬಿಜೆಪಿಗಿದು ತೀವ್ರ ತಲೆನೋವಾಗಿ ಪರಿಣಮಿಸಿದೆ.

ಮಾಜಿ ಶಾಸಕ ಹೆಚ್. ಆರ್. ಗವಿಯ

ಬಳ್ಳಾರಿ : ವಿಜಯ‌ನಗರ ಜಿಲ್ಲೆಯನ್ನಾಗಿಸುವ ಪ್ರಬಲ ಬೇಡಿಕೆಯನ್ನೇ ಮುಂದಿಟ್ಟುಕೊಂಡು ಪರ-ವಿರೋಧಾಭಿಪ್ರಾಯ ಎದುರಿಸುತ್ತಿರುವ ಅನರ್ಹ ಶಾಸಕ ಆನಂದಸಿಂಗ್ ಅವರಿಗೆ ಬಿಜೆಪಿಯಿಂದ ಉಪಚುನಾವಣೆ ಟಿಕೆಟ್ ನೀಡುವ ಸಲುವಾಗಿ ಮಾಜಿ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನವನ್ನು ಹಂಚಿಕೆ ಮಾಡಿ ಸಮಾಧಾನಪಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ.

ಆದರೆ, ವಿಜಯನಗರ ಕ್ಷೇತ್ರದ ಹಾಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ಹೆಚ್. ಆರ್. ಗವಿಯಪ್ಪ ಸುತಾರಾಂ ಒಪ್ಪುತ್ತಿಲ್ಲ.‌ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಉಪಚುನಾವಣೆ ಟಿಕೇಟ್ ಬೇಕೆಂದು ಪ್ರಬಲವಾದ ಬೇಡಿಕೆಯನ್ನಿಟ್ಟಿದ್ದಾರೆ. ಅದರಿಂದ ರಾಜ್ಯ ಬಿಜೆಪಿಗೆ ಇದು ತೀವ್ರ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿಯಲ್ಲಿನ ಬಂಡಾಯ ಶಮನಕ್ಕೆ ಗವಿಯಪ್ಪ ಅವರಿಗೆ ಸಣ್ಣ ಕೈಗಾರಿಕೆ‌ ಅಭಿವೃದ್ದಿ ನಿಗಮ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಆದರೆ, ಅದನ್ನ ಒಪ್ಪೋದಕ್ಕೆ ಗವಿಯಪ್ಪ ರೆಡಿಯಾಗಿಲ್ಲ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಒಪ್ಪೋದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಉಪಚುನಾವಣೆಯಲಿ ನನಗೂ ಟಿಕೇಟ್ ಕೊಡ್ತಾರೆ ಅಂತಾ ವಿಶ್ವಾಸ ಇದೆ. ಹೀಗಾಗಿ ಕಾದು ನೋಡುವೆ ಎಂದಿದ್ದಾರೆ ಗವಿಯಪ್ಪ.

ಅಧಿವೇಶನ ಮುಗಿಯುವವರೆಗೂ ಸುಮ್ಮನಿರುವೆ. ನಂತರ ವರಿಷ್ಠರ ಜೊತೆ ಮಾತನಾಡುವೆ. ಆನಂದ್ ಸಿಂಗ್ ಅವರ ಪ್ರಯತ್ನ ಅವರು ಮಾಡಲಿ ನಮ್ಮ ಪ್ರಯತ್ನ ನಾನು ಮಾಡ್ತೀನಿ. ಟಿಕೆಟ್ ಪಡೆಯಲು ಹೋರಾಡುವೆ‌ ಎಂದಿದ್ದಾರೆ. ಮಗ ಗುರುದತ್ತ ಕೂಡ ಸಾಥ್ ನೀಡಿದ್ದು ನಿಗಮಗಿರಿ ಬೇಡವೆಂದಿದ್ದಾರೆ. ಬರುವ ಉಪಚುನಾವಣೆಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಅನಗತ್ಯವಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸೋದು ಬೇಡ. ಕಳೆದ‌ಬಾರಿ ಅಲ್ಪ ಮತಗಳಿಂದ ಪರಾಜಿತರಾಗಿದ್ದೆವು. ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಖಚಿತ ಎಂದು ಗುರುದತ್ತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ಹೆಚ್. ಆರ್ ಗವಿಯಪ್ಪ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 8228 ಮತಗಳಿಂದ ಸಿಂಗ್ ವಿರುದ್ದ ಸೋತಿದ್ದರು. ಈಗಾಗಲೇ ಸಿಂಗ್ ವಿರುದ್ದ ಎರಡು ಬಾರಿ ಸೋತಿರುವ ಅನುಕಂಪವಿದೆ. ಕಳೆದಬಾರಿ ಗವಿಯಪ್ಪರನ್ನ ಹಾಲಿ ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ ನಿಂದ ಕರೆ ತಂದಿದ್ದರು.

ಬಳ್ಳಾರಿ : ವಿಜಯ‌ನಗರ ಜಿಲ್ಲೆಯನ್ನಾಗಿಸುವ ಪ್ರಬಲ ಬೇಡಿಕೆಯನ್ನೇ ಮುಂದಿಟ್ಟುಕೊಂಡು ಪರ-ವಿರೋಧಾಭಿಪ್ರಾಯ ಎದುರಿಸುತ್ತಿರುವ ಅನರ್ಹ ಶಾಸಕ ಆನಂದಸಿಂಗ್ ಅವರಿಗೆ ಬಿಜೆಪಿಯಿಂದ ಉಪಚುನಾವಣೆ ಟಿಕೆಟ್ ನೀಡುವ ಸಲುವಾಗಿ ಮಾಜಿ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನವನ್ನು ಹಂಚಿಕೆ ಮಾಡಿ ಸಮಾಧಾನಪಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ.

ಆದರೆ, ವಿಜಯನಗರ ಕ್ಷೇತ್ರದ ಹಾಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ಹೆಚ್. ಆರ್. ಗವಿಯಪ್ಪ ಸುತಾರಾಂ ಒಪ್ಪುತ್ತಿಲ್ಲ.‌ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಉಪಚುನಾವಣೆ ಟಿಕೇಟ್ ಬೇಕೆಂದು ಪ್ರಬಲವಾದ ಬೇಡಿಕೆಯನ್ನಿಟ್ಟಿದ್ದಾರೆ. ಅದರಿಂದ ರಾಜ್ಯ ಬಿಜೆಪಿಗೆ ಇದು ತೀವ್ರ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿಯಲ್ಲಿನ ಬಂಡಾಯ ಶಮನಕ್ಕೆ ಗವಿಯಪ್ಪ ಅವರಿಗೆ ಸಣ್ಣ ಕೈಗಾರಿಕೆ‌ ಅಭಿವೃದ್ದಿ ನಿಗಮ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಆದರೆ, ಅದನ್ನ ಒಪ್ಪೋದಕ್ಕೆ ಗವಿಯಪ್ಪ ರೆಡಿಯಾಗಿಲ್ಲ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಒಪ್ಪೋದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಉಪಚುನಾವಣೆಯಲಿ ನನಗೂ ಟಿಕೇಟ್ ಕೊಡ್ತಾರೆ ಅಂತಾ ವಿಶ್ವಾಸ ಇದೆ. ಹೀಗಾಗಿ ಕಾದು ನೋಡುವೆ ಎಂದಿದ್ದಾರೆ ಗವಿಯಪ್ಪ.

ಅಧಿವೇಶನ ಮುಗಿಯುವವರೆಗೂ ಸುಮ್ಮನಿರುವೆ. ನಂತರ ವರಿಷ್ಠರ ಜೊತೆ ಮಾತನಾಡುವೆ. ಆನಂದ್ ಸಿಂಗ್ ಅವರ ಪ್ರಯತ್ನ ಅವರು ಮಾಡಲಿ ನಮ್ಮ ಪ್ರಯತ್ನ ನಾನು ಮಾಡ್ತೀನಿ. ಟಿಕೆಟ್ ಪಡೆಯಲು ಹೋರಾಡುವೆ‌ ಎಂದಿದ್ದಾರೆ. ಮಗ ಗುರುದತ್ತ ಕೂಡ ಸಾಥ್ ನೀಡಿದ್ದು ನಿಗಮಗಿರಿ ಬೇಡವೆಂದಿದ್ದಾರೆ. ಬರುವ ಉಪಚುನಾವಣೆಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಅನಗತ್ಯವಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸೋದು ಬೇಡ. ಕಳೆದ‌ಬಾರಿ ಅಲ್ಪ ಮತಗಳಿಂದ ಪರಾಜಿತರಾಗಿದ್ದೆವು. ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಖಚಿತ ಎಂದು ಗುರುದತ್ತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ಹೆಚ್. ಆರ್ ಗವಿಯಪ್ಪ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 8228 ಮತಗಳಿಂದ ಸಿಂಗ್ ವಿರುದ್ದ ಸೋತಿದ್ದರು. ಈಗಾಗಲೇ ಸಿಂಗ್ ವಿರುದ್ದ ಎರಡು ಬಾರಿ ಸೋತಿರುವ ಅನುಕಂಪವಿದೆ. ಕಳೆದಬಾರಿ ಗವಿಯಪ್ಪರನ್ನ ಹಾಲಿ ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ ನಿಂದ ಕರೆ ತಂದಿದ್ದರು.

Intro:ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿಗೆ ಗವಿಯಪ್ಪನವ್ರೇ ಮುಳುವಾಗಲಿದ್ದಾರಾ….?
ಬಳ್ಳಾರಿ: 2019ರ ಡಿಸೆಂಬರ್ ತಿಂಗಳಲ್ಲಿ ರಾಜ್ಯದ 15 ಕ್ಷೇತ್ರಗಳಿಗೆ ನಡೆಯಲಿರೊ ಉಪಚುನಾವಣೆ ಪೈಕಿ ಗಣಿಜಿಲ್ಲೆಯ ವಿಜಯನಗರ ಕ್ಷೇತ್ರವೂ ಒಂದಾಗಿದೆ.
ಪ್ರತ್ಯೇಕ ವಿಜಯ‌ನಗರ ಜಿಲ್ಲೆಯನ್ನಾಗಿಸು ವ ಪ್ರಬಲ ಬೇಡಿಕೆಯನ್ನೇ ಮುಂದಿಟ್ಟುಕೊಂಡು ಪರ- ವಿರೋಧ ಎದುರಿಸುತ್ತಿರುವ ಅನರ್ಹ ಶಾಸಕ ಆನಂದಸಿಂಗ್ ರಿಗೆ ಬಿಜೆಪಿಯಿಂದ ಟಿಕೇಟ್ ನೀಡುವ ಸಲುವಾಗಿ ಮಾಜಿ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನವನ್ನು ಹಂಚಿಕೆ ಮಾಡಿ ಸಮಾ ಧಾನ ಪಡಿಸಲು ರಾಜ್ಯ
ಬಿಜೆಪಿ ಸರ್ಕಾರ ಮುಂದಾಗಿದೆ.
ಆದರೆ, ವಿಜಯನಗರ ಕ್ಷೇತ್ರದ ಹಾಲಿ ಬಿಜೆಪಿ ಮುಖಂಡರೂ, ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪನವ್ರು ಸುತಾರಾಂ ಒಪ್ಪು ತ್ತಿಲ್ಲ.‌ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಉಪಚುನಾವಣೆ ಯಲಿ ಟಿಕೇಟ್ ಬೇಕೆಂದು ಪ್ರಬಲವಾದ ಬೇಡಿಕೆಯನ್ನೂ ಕೂಡ ಗವಿಯಪ್ಪನವ್ರು ಮುಂದಿಟ್ಟಿದ್ದಾರೆ. ಅದರಿಂದ ರಾಜ್ಯ ಬಿಜೆಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದ ಹೊಸಕೋಟೆ ವಿಧಾನಸಭಾ ಕ್ಷೇತ್ರದಂತೆಯೇ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್.ಆರ್.ಗವಿಯಪ್ಪನವ್ರು ತಲೆನೋವಾಗಲಿದ್ದಾರಾ?
ಎಂಬುದೇ ತೀವ್ರ ಕುತೂಹಲ ಕೆರಳಿಸಿದೆ.
ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪ ಹಾಗೂ ಅವರ ಮಗ ಗುರುದತ್ತ ಅವರು ಬಿಜೆಪಿ ವಿರುದ್ಧ ಸಿಡಿದ್ಹೇಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಬಿಜೆಪಿಯಲ್ಲಿನ ಬಂಡಾಯ ಶಮನಕ್ಕೆ ಗವಿಯಪ್ಪ ಅವರಿಗೆ
ಸಣ್ಣ ಕೈಗಾರಿಕೆ‌ ಅಭಿವೃದ್ದಿ ನಿಗಮ ಅಧ್ಯಕ್ಷ ಸ್ಥಾನವನ್ನು ನೀಡ ಲಾಗಿತ್ತು.
ಆದರೆ, ಅದನ್ನ ಒಪ್ಪೋದಕ್ಕೆ ಗವಿಯಪ್ಪ ರೆಡಿಯಾಗಿಲ್ಲ. ಮಾಜಿ ಶಾಸಕ ಗವಿಯಪ್ಪನವ್ರು ಸದ್ಯಕ್ಕೆ ನನಗೆ ಕೊಟ್ಟಿರುವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಒಪ್ಪೋದಿಲ್ಲ
ಎಂದು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಉಪಚುನಾವಣೆ ಯಲಿ ನನಗೂ ಟಿಕೇಟ್ ಕೊಡ್ತಾರೆ ಅಂತಾ ವಿಶ್ವಾಸ ಇದೆ. ಹೀಗಾಗಿ
ಕಾದು ನೋಡುವೆ ಎಂದಿದ್ದಾರೆ ಗವಿಯಪ್ಪ.
ಅಧಿವೇಶನ ಮುಗಿಯುವವರೆಗೂ ಸುಮ್ಮನಿರುವೆ. ನಂತರ ವರಿಷ್ಠರ ಜೊತೆ ಮಾತನಾಡುವೆ. ಆನಂದ್ ಸಿಂಗ್ ಅವರ ಪ್ರಯತ್ನ ಅವರು ಮಾಡಲಿ ನಮ್ಮ ಪ್ರಯತ್ನ ನಾನು ಮಾಡ್ತೀನಿ. ಪಕ್ಕದಲ್ಲೇ ಇದ್ದುಕೊಂಡು ಟಿಕೇಟ್ ಪಡೆಯಲು ಹೋರಾಡುವೆ‌ ಎಂದಿದ್ದಾರೆ.
ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪಗೆ ಅವರ ಮಗ ಗುರುದತ್ತ ಕೂಡ ಸಾಥ್ ನೀಡಿದ್ದಾರೆ. ಕಾರ್ಯಕರ್ತರಿಗೆ ಪುಷ್ಪದತ್ತ ಎಂಬ ಈ ಮೇಲ್ ಐಡಿ ಮೂಲಕ ಸಂದೇಶ ಗವಿಯಪ್ಪ ಮಗ ಗುರುದತ್ತ ರವಾ ನಿಸಿದ್ದಾರೆ. ಮಗ ಗುರುದತ್ತ ನಿಗಮಗಿರಿ ಬೇಡವೆಂದಿದ್ದಾರೆ.
Body:ಬರುವ ಉಪಚುನಾವಣೆಗೆ ಟೀಕೆಟ್ ಸಿಗುವ ವಿಶ್ವಾಸವಿದೆ. ಅನಗತ್ಯವಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸೋದು ಬ್ಯಾಡ. ಬರುವ ಉಪ ಚುನಾವಣೆಗೆ ಗವಿಯಪ್ಪ ಬಿಜೆಪಿ ಟಿಕೆಟ್ ನಿರೀಕ್ಷೆ ಇದೆ. ಕಳೆದ‌ಬಾರಿ ಅಲ್ಪ ಮತಗಳಿಂದ ಪರಾಜಿತರಾಗಿದ್ದೆವು. ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಖಚಿತ ಎಂದಿರುವ ಗವಿಯಪ್ಪ ಮಗ ಗುರುದತ್ತ.
ಗವಿಯಪ್ಪ ಪರಾಜಿತ ಅಭ್ಯರ್ಥಿ: ಮಾಜಿ ಶಾಸಕ ಹೆಚ್.ಆರ್ ಗವಿಯಪ್ಪ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 8228 ಮತಗಳಿಂದ ಸಿಂಗ್ ವಿರುದ್ದ ಸೊತ್ತಿದ್ದರು. ಈಗಾಗಲೇ ಸಿಂಗ್ ವಿರುದ್ದ ಎರಡು ಬಾರಿ ಸೋತಿರುವ ಅನುಕಂಪವಿದೆ. ಕಳೆದಬಾರಿ ಗವಿಯಪ್ಪರನ್ನ ಹಾಲಿ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ನಿಂದ ಕರೆ ತಂದಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_EX_MLA_GAVIYAPPA_STORY_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.