ETV Bharat / state

ಡಿಸಿಎಂ ಕನಸು ಕನಸಾಗಿಯೇ ಉಳೀತು.. 4ನೇ ಬಾರಿ ಸಚಿವರಾದ ಶ್ರೀರಾಮುಲು ರಾಜಕೀಯ ಹೆಜ್ಜೆ ಗುರುತು..

ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿ (2004ರ ಆಸುಪಾಸು) ದಿವಂಗತ ಎಂ ಪಿ ಪ್ರಕಾಶ ಅವರಿಗೆ ಡಿಸಿಎಂ ಹುದ್ದೆ ಒಲಿದಿದ್ದು ಬಿಟ್ಟರೆ, ಅಲ್ಲಿಂದ ಈವರೆಗೂ‌ ಕೂಡ ಡಿಸಿಎಂ ಹುದ್ದೆ ಗಣಿಜಿಲ್ಲೆಯ ‌ಮಟ್ಟಿಗೆ ಯಾರಿಗೂ ಒಲಿಯಲಿಲ್ಲ..

author img

By

Published : Aug 4, 2021, 10:23 PM IST

sriramulu
ಶ್ರೀರಾಮುಲು

ಬಳ್ಳಾರಿ : ಬಳ್ಳಾರಿ ನಗರಸಭೆ ಸದಸ್ಯನಿಂದ ಹಿಡಿದು ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಾಲ್ಕನೆ ಬಾರಿಗೆ ಸಚಿವನಾದ ಹೆಗ್ಗಳಿಕೆಗೆ ಶ್ರೀರಾಮುಲು ಪಾತ್ರರಾಗಿದ್ದಾರೆ. 1998ರ ಆಸುಪಾಸಿನಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರಸಭೆ ಸದಸ್ಯರಾಗಿ ಆಯ್ಕೆಯಾದ ಹಾಲಿ ಸಚಿವ ಶ್ರೀರಾಮುಲು ಅವರು, 1999ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 2004ರಲ್ಲಿ ಶ್ರೀರಾಮುಲು ಅವರು ಬಿಜೆಪಿ ಶಾಸಕರಾಗಿ ಆಯ್ಕೆಯಾದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಒಂದು ಬಾರಿ, ಮಾಜಿ ಸಿಎಂ ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಎರಡು ಬಾರಿ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ‌. ಈವರೆಗೆ ಐದು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

1999ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ ಸಚಿವ ಶ್ರೀರಾಮುಲು ಅವರು, ಸೋಲನ್ನ ಅನುಭವಿಸಿದ್ದರು. 2004ರಲ್ಲಿ ಮರಳಿ ಬಿಜೆಪಿಯಿಂದ ಸ್ಪರ್ಧಿಸಿದ ಸಚಿವ ಶ್ರೀರಾಮುಲು, ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿ ಇಡೀ ರಾಜ್ಯದ ಗಮನ ಸೆಳೆದಿದ್ದರು.

ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾದ ಇವರಿಗೆ ಅಲ್ಲಿಂದ ಈವರೆಗೆ ನಾಲ್ಕು ಬಾರಿ ಸಚಿವರಾಗುವ ಅವಕಾಶ ದೊರೆತಿದೆ. ರಾಜ್ಯ ಪ್ರವಾಸೋದ್ಯಮ, ವಿಮಾನಯಾನ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ‌ ಕೂಡ ಇವರಿಗಿದೆ.

ಶಾಸಕರಾಗಿ ಆಯ್ಕೆಯಾಗುವಲ್ಲಿ ಹ್ಯಾಟ್ರಿಕ್ ಸಾಧನೆ : ಹಾಲಿ ಸಚಿವ ಶ್ರೀರಾಮುಲು ಅವರು, ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗುವ ಮುಖೇನ ಹ್ಯಾಟ್ರಿಕ್ ಸಾಧನೆ ಮಾಡಿದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ.

ಮತ್ಯಾರಿಗೂ ಲಭಿಸಲಿಲ್ಲ ಈ ಹುದ್ದೆ : ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿ (2004ರ ಆಸುಪಾಸು) ದಿವಂಗತ ಎಂ ಪಿ ಪ್ರಕಾಶ ಅವರಿಗೆ ಡಿಸಿಎಂ ಹುದ್ದೆ ಒಲಿದಿದ್ದು ಬಿಟ್ಟರೆ, ಅಲ್ಲಿಂದ ಈವರೆಗೂ‌ ಕೂಡ ಡಿಸಿಎಂ ಹುದ್ದೆ ಗಣಿಜಿಲ್ಲೆಯ ‌ಮಟ್ಟಿಗೆ ಯಾರಿಗೂ ಒಲಿಯಲಿಲ್ಲ.

ಹಾಲಿ ಸಚಿವ ಶ್ರೀರಾಮುಲು ಅವರು, ಕಳೆದ ಎರಡೂವರೆ ದಶಕದಿಂದಲೂ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೂರು ಬಾರಿ ಸಚಿವರಾಗಿ, ಒಂದು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಿಂದಲೇ ಈ ಡಿಸಿಎಂ ಹುದ್ದೆಯ ಕನಸಿನ ಕನವರಿಕೆಗೆ ಚಿಗುರೊಡೆಸುವ ಪ್ರಯತ್ನಕ್ಕೆ ಸಚಿವ ಶ್ರೀರಾಮುಲು ಕೈಹಾಕಿದ್ದರು. ಆದರೀಗ ಅದು ಕೂಡ ಸಾಫಲ್ಯತೆ ಕಾಣಲಿಲ್ಲ.

ಓದಿ: BBMPಯಿಂದ ಸೆರೋ ಸಮೀಕ್ಷೆ: ಆಯುಕ್ತ ಗೌರವ ಗುಪ್ತ ಚಾಲನೆ

ಬಳ್ಳಾರಿ : ಬಳ್ಳಾರಿ ನಗರಸಭೆ ಸದಸ್ಯನಿಂದ ಹಿಡಿದು ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಾಲ್ಕನೆ ಬಾರಿಗೆ ಸಚಿವನಾದ ಹೆಗ್ಗಳಿಕೆಗೆ ಶ್ರೀರಾಮುಲು ಪಾತ್ರರಾಗಿದ್ದಾರೆ. 1998ರ ಆಸುಪಾಸಿನಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರಸಭೆ ಸದಸ್ಯರಾಗಿ ಆಯ್ಕೆಯಾದ ಹಾಲಿ ಸಚಿವ ಶ್ರೀರಾಮುಲು ಅವರು, 1999ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 2004ರಲ್ಲಿ ಶ್ರೀರಾಮುಲು ಅವರು ಬಿಜೆಪಿ ಶಾಸಕರಾಗಿ ಆಯ್ಕೆಯಾದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಒಂದು ಬಾರಿ, ಮಾಜಿ ಸಿಎಂ ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಎರಡು ಬಾರಿ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ‌. ಈವರೆಗೆ ಐದು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

1999ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ ಸಚಿವ ಶ್ರೀರಾಮುಲು ಅವರು, ಸೋಲನ್ನ ಅನುಭವಿಸಿದ್ದರು. 2004ರಲ್ಲಿ ಮರಳಿ ಬಿಜೆಪಿಯಿಂದ ಸ್ಪರ್ಧಿಸಿದ ಸಚಿವ ಶ್ರೀರಾಮುಲು, ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿ ಇಡೀ ರಾಜ್ಯದ ಗಮನ ಸೆಳೆದಿದ್ದರು.

ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾದ ಇವರಿಗೆ ಅಲ್ಲಿಂದ ಈವರೆಗೆ ನಾಲ್ಕು ಬಾರಿ ಸಚಿವರಾಗುವ ಅವಕಾಶ ದೊರೆತಿದೆ. ರಾಜ್ಯ ಪ್ರವಾಸೋದ್ಯಮ, ವಿಮಾನಯಾನ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ‌ ಕೂಡ ಇವರಿಗಿದೆ.

ಶಾಸಕರಾಗಿ ಆಯ್ಕೆಯಾಗುವಲ್ಲಿ ಹ್ಯಾಟ್ರಿಕ್ ಸಾಧನೆ : ಹಾಲಿ ಸಚಿವ ಶ್ರೀರಾಮುಲು ಅವರು, ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗುವ ಮುಖೇನ ಹ್ಯಾಟ್ರಿಕ್ ಸಾಧನೆ ಮಾಡಿದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ.

ಮತ್ಯಾರಿಗೂ ಲಭಿಸಲಿಲ್ಲ ಈ ಹುದ್ದೆ : ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿ (2004ರ ಆಸುಪಾಸು) ದಿವಂಗತ ಎಂ ಪಿ ಪ್ರಕಾಶ ಅವರಿಗೆ ಡಿಸಿಎಂ ಹುದ್ದೆ ಒಲಿದಿದ್ದು ಬಿಟ್ಟರೆ, ಅಲ್ಲಿಂದ ಈವರೆಗೂ‌ ಕೂಡ ಡಿಸಿಎಂ ಹುದ್ದೆ ಗಣಿಜಿಲ್ಲೆಯ ‌ಮಟ್ಟಿಗೆ ಯಾರಿಗೂ ಒಲಿಯಲಿಲ್ಲ.

ಹಾಲಿ ಸಚಿವ ಶ್ರೀರಾಮುಲು ಅವರು, ಕಳೆದ ಎರಡೂವರೆ ದಶಕದಿಂದಲೂ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೂರು ಬಾರಿ ಸಚಿವರಾಗಿ, ಒಂದು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಿಂದಲೇ ಈ ಡಿಸಿಎಂ ಹುದ್ದೆಯ ಕನಸಿನ ಕನವರಿಕೆಗೆ ಚಿಗುರೊಡೆಸುವ ಪ್ರಯತ್ನಕ್ಕೆ ಸಚಿವ ಶ್ರೀರಾಮುಲು ಕೈಹಾಕಿದ್ದರು. ಆದರೀಗ ಅದು ಕೂಡ ಸಾಫಲ್ಯತೆ ಕಾಣಲಿಲ್ಲ.

ಓದಿ: BBMPಯಿಂದ ಸೆರೋ ಸಮೀಕ್ಷೆ: ಆಯುಕ್ತ ಗೌರವ ಗುಪ್ತ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.