ಬಳ್ಳಾರಿ : ಕೊರೊನಾ ವೈರಸ್ ಎಫೆಕ್ಟ್ ನಿಂದ ಇಡೀ ದೇಶವೇ ಲಾಕ್ ಡೌನ್ ಆದ ಹಿನ್ನೆಲೆ ಜಿಲ್ಲೆಯ ಹಂಪಿಯಲ್ಲಿ ಆಹಾರವಿಲ್ಲದೇ ಕಂಗೆಟ್ಟಿದ್ದ ಬೀದಿನಾಯಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಊಟ ನೀಡಿದ್ದಾರೆ.

ಸಿ.ಕೆ.ಬಾಬಾ ಹಂಪಿಗೆ ಭೇಟಿ ಕೊಡುತ್ತಿದ್ದಂತೆಯೇ ಬೀದಿನಾಯಿಗಳ ಹಿಂಡೊಂದು ಆಹಾರ ಅರಸಿ ಅವರತ್ತ ಬಂದವು. ಅವುಗಳಿಗೆ ಎಸ್ಪಿ ಸಿ.ಕೆ.ಬಾಬಾ ಬಿಸ್ಕತ್ ಹಾಕಿ ಹಸಿದ ಹೊಟ್ಟೆ ತುಂಬಿಸಿ ಮಾನವಿಯತೆ ಮೆರೆದಿದ್ದಾರೆ.