ಹೊಸಪೇಟೆ: ರೈತನಿಂದ 100 ರೂ. ಲಂಚ ಪಡೆದ ಆರೋಪದ ಮೇಲೆ ಹೆಡ್ ಕಾನ್ಸ್ಟೇಬಲ್ವೊಬ್ಬರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಆದೇಶ ಹೊರಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನೆಲ್ಲು ಕೊಯ್ಯುವ ಮಿಷಿನ್ನೊಂದಿಗೆ ರಸ್ತೆಯಲ್ಲಿ ಹೊರಟಿದ್ದ ರೈತನಿಂದ ಹೆಡ್ ಕಾನ್ಸ್ಟೇಬಲ್ ಹಣ ಪಡೆದುಕೊಂಡಿರುವ ದೃಶ್ಯ ವೈರಲ್ ಆಗಿತ್ತು. ಇದನ್ನು ಆಧರಿಸಿ ಎಸ್ಪಿ ಕ್ರಮ ಕೈಗೊಂಡಿದ್ದು, ನಗರದ ಟಿ.ಬಿ ಡ್ಯಾಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆಯಾದರೆ ಪೊಲೀಸ್ ಕಂಟ್ರೋಲ್ ರೂಂ. 08392-258101, 258100,258600, 9480803000 ದೂರವಾಣಿ ಮೂಲಕ ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ಎಸ್ಪಿ ತಿಳಿಸಿದ್ದಾರೆ.