ETV Bharat / state

ಗಣಿನಾಡಿನ ತಾಯಿ ಶ್ರೀ ಕನಕದುರ್ಗಮ್ಮ ದೇವಿ ಸಿಡಿಬಂಡಿ‌ ಉತ್ಸವ ಕಣ್ತುಂಬಿಕೊಂಡ ಭಕ್ತಸಾಗರ

author img

By

Published : Mar 2, 2020, 10:40 PM IST

ಇಂದು ನಗರದಲ್ಲಿ ಶ್ರೀ ಕನಕದುರ್ಗಮ್ಮ ದೇವಿ ಸಿಡಿಬಂಡಿ‌ ಉತ್ಸವ ಸಂಭ್ರಮದಿಂದ ನಡೆಯಿತು.

Shree Kanakadurgamma Devi Festival
ಗಣಿನಾಡಿನ ತಾಯಿ ಶ್ರೀ ಕನಕದುರ್ಗಮ್ಮ ದೇವಿ ಸಿಡಿಬಂಡಿ‌ ಉತ್ಸವ ಕಣ್ತುಂಬಿಕೊಂಡ ಭಕ್ತಸಾಗರ

ಬಳ್ಳಾರಿ: ನಗರದಲ್ಲಿಂದು ಶ್ರೀ ಕನಕದುರ್ಗಮ್ಮ ದೇವಿ ಸಿಡಿಬಂಡಿ‌ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ತಾಯಿ ದರ್ಶನ ಪಡೆದು ಪುನಿತರಾದರು.

ಗಣಿನಾಡಿನ ತಾಯಿ ಶ್ರೀ ಕನಕದುರ್ಗಮ್ಮ ದೇವಿ ಸಿಡಿಬಂಡಿ‌ ಉತ್ಸವ ಕಣ್ತುಂಬಿಕೊಂಡ ಭಕ್ತಸಾಗರ

ನಗರದ ಗಾಣಿಗ ಬೀದಿಯ ಮೂರು ಜೊತೆ ಎತ್ತುಗಳಿಗೆ ಪೂಜೆ, ಆರತಿ ಮಾಡಿ. ನಂತರ ನಗರದ ಕೌಲ್ ಬಜಾರ್ ಹತ್ತಿರದ ಸಣ್ಣ ದುರ್ಗಮ್ಮ ದೇವಸ್ಥಾನದಿಂದ ಸಿಡಿಬಂಡಿ ಆರಂಭಿಸಿಲಾಯಿತು. ಭಕ್ತರು ಸಿಡಿಬಂಡಿ ಎಳೆಯುವ ಮೂಲಕ ಎತ್ತುಗಳಿಗೆ ಹೂವಿನ ಹಾರ, ಕಾಯಿ, ಕರ್ಪೂರದ ಮೂಲಕ ಮಂಗಳಾರತಿ ಮಾಡಿ ಆರ್ಶಿವಾದ ಪಡೆದರು. ಇದನ್ನು ನೋಡಲು ಸಾವಿರಾರು ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು.

ಇಂದು ಗಾಣಿಗ ಸಮುದಾಯದ ಮೂರು ಜೊತೆಯ ಆರು ಎತ್ತುಗಳು ಸಿಡಿಬಂಡಿಯನ್ನು ಎಳೆದುಕೊಂಡು ನಗರದ ಕೌಲ್ ಬಜಾರ್, ಮೊದಲನೇ ಗೇಟ್ ಮಾರ್ಗವಾಗಿ,‌ ಬಸವಕುಂಟೆ, ಎಸ್.ಪಿ ಸರ್ಕಲ್​ನಿಂದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ತಲುಪುತ್ತವೆ.

ನಾಳೆ ಸಂಜೆ 5 ಗಂಟೆ 30 ನಿಮಿಷಕ್ಕೆ ಸಿಡಿಬಂಡಿ ಶ್ರೀ ಕನಕದುರ್ಗಮ್ಮ ದೇವಿಯ ದೇವಸ್ಥಾನದ ಮೂರು ಸುತ್ತುಗಳ ಪ್ರದರ್ಶನ ಹಾಕಲಾಗುತ್ತದೆ.

ಬಳ್ಳಾರಿ: ನಗರದಲ್ಲಿಂದು ಶ್ರೀ ಕನಕದುರ್ಗಮ್ಮ ದೇವಿ ಸಿಡಿಬಂಡಿ‌ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ತಾಯಿ ದರ್ಶನ ಪಡೆದು ಪುನಿತರಾದರು.

ಗಣಿನಾಡಿನ ತಾಯಿ ಶ್ರೀ ಕನಕದುರ್ಗಮ್ಮ ದೇವಿ ಸಿಡಿಬಂಡಿ‌ ಉತ್ಸವ ಕಣ್ತುಂಬಿಕೊಂಡ ಭಕ್ತಸಾಗರ

ನಗರದ ಗಾಣಿಗ ಬೀದಿಯ ಮೂರು ಜೊತೆ ಎತ್ತುಗಳಿಗೆ ಪೂಜೆ, ಆರತಿ ಮಾಡಿ. ನಂತರ ನಗರದ ಕೌಲ್ ಬಜಾರ್ ಹತ್ತಿರದ ಸಣ್ಣ ದುರ್ಗಮ್ಮ ದೇವಸ್ಥಾನದಿಂದ ಸಿಡಿಬಂಡಿ ಆರಂಭಿಸಿಲಾಯಿತು. ಭಕ್ತರು ಸಿಡಿಬಂಡಿ ಎಳೆಯುವ ಮೂಲಕ ಎತ್ತುಗಳಿಗೆ ಹೂವಿನ ಹಾರ, ಕಾಯಿ, ಕರ್ಪೂರದ ಮೂಲಕ ಮಂಗಳಾರತಿ ಮಾಡಿ ಆರ್ಶಿವಾದ ಪಡೆದರು. ಇದನ್ನು ನೋಡಲು ಸಾವಿರಾರು ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು.

ಇಂದು ಗಾಣಿಗ ಸಮುದಾಯದ ಮೂರು ಜೊತೆಯ ಆರು ಎತ್ತುಗಳು ಸಿಡಿಬಂಡಿಯನ್ನು ಎಳೆದುಕೊಂಡು ನಗರದ ಕೌಲ್ ಬಜಾರ್, ಮೊದಲನೇ ಗೇಟ್ ಮಾರ್ಗವಾಗಿ,‌ ಬಸವಕುಂಟೆ, ಎಸ್.ಪಿ ಸರ್ಕಲ್​ನಿಂದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ತಲುಪುತ್ತವೆ.

ನಾಳೆ ಸಂಜೆ 5 ಗಂಟೆ 30 ನಿಮಿಷಕ್ಕೆ ಸಿಡಿಬಂಡಿ ಶ್ರೀ ಕನಕದುರ್ಗಮ್ಮ ದೇವಿಯ ದೇವಸ್ಥಾನದ ಮೂರು ಸುತ್ತುಗಳ ಪ್ರದರ್ಶನ ಹಾಕಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.