ETV Bharat / state

ತಾಕತ್ತಿದ್ದರೆ 5 ಮೀಸಲಾತಿ ಕ್ಷೇತ್ರಗಳಲ್ಲಿ ನಿಂತು ಗೆದ್ದು ಬನ್ನಿ: ಶ್ರೀರಾಮುಲುಗೆ ಶಾಸಕ ಗಣೇಶ ಸವಾಲು - ಶ್ರೀರಾಮುಲುಗೆ ಶಾಸಕ ಗಣೇಶ ಸವಾಲು

ಸಚಿವ ಶ್ರೀರಾಮುಲು ಬಳ್ಳಾರಿ ಜಿಲ್ಲೆಯ 5 ಮೀಸಲಾತಿ ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರದಲ್ಲಿ ನಿಂತು ತಾಕತ್ತಿದ್ದರೆ ಗೆದ್ದು ಬರಲಿ ಎಂದು ಕಂಪ್ಲಿ ವಿಧಾನಸಭಾ ಶಾಸಕ ಜೆ.ಎನ್.ಗಣೇಶ ಸವಾಲು ಹಾಕಿದ್ದಾರೆ.

ಶ್ರೀರಾಮುಲುಗೆ ಕಂಪ್ಲಿ ವಿಧಾನಸಭಾ ಶಾಸಕ ಗಣೇಶ ಸವಾಲು
author img

By

Published : Nov 24, 2019, 10:15 AM IST

ಬಳ್ಳಾರಿ: ಬಿ.ಶ್ರೀರಾಮುಲು ಅವರು ಜಿಲ್ಲೆಯ 5 ಮೀಸಲಾತಿ ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಅವರ ವಿರುದ್ಧ ನಾನು ಪ್ರತಿ ಸ್ಪರ್ಧಿಯಾಗಿ ನಿಂತುಕೊಳ್ಳುತ್ತೇನೆ.‌ ತಾಕತ್ತಿದ್ದರೆ ಅವರು ಗೆದ್ದು ಬರಲಿ ಎಂದು ಕಂಪ್ಲಿ ವಿಧಾನಸಭಾ ಶಾಸಕ ಜೆ.ಎನ್.ಗಣೇಶ ಸವಾಲೆಸೆದಿದ್ದಾರೆ.

ಶ್ರೀರಾಮುಲುಗೆ ಕಂಪ್ಲಿ ವಿಧಾನಸಭಾ ಶಾಸಕ ಗಣೇಶ ಸವಾಲು

ಜಿಲ್ಲೆಯ ಕಂಪ್ಲಿ ತಾಲೂಕಿನ ಬಾಳಾಪುರ ಗ್ರಾಮದಲ್ಲಿ ನಡೆದ ಸಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಹಗುರವಾಗಿ ಮಾತಾಡೋದನ್ನು ಸಚಿವ ಶ್ರೀರಾಮುಲು ಬಿಡಬೇಕು.‌ ಅವರು‌ ಏಕಾಂಗಿಯಲ್ಲ, ಈ‌ ರಾಜಕಾರಣದಲ್ಲಿ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿವರೆಗೆ ನಾವೆಲ್ಲ ಅವರೊಂದಿಗೆ ಇದ್ದೇವೆ ಎಂದರು.

ನಿಮಗೇನಾದ್ರೂ ಮತ್ತೊಂದು ಉಪಚುನಾವಣೆ ಎದುರಿಸಬೇಕೆಂಬ ಕಾತುರ ಇದ್ರೆ‌ ಮೊಳಕಾಲ್ಮೂರು ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು, ಈ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಮೀಸಲಾದ ಕ್ಷೇತ್ರದಲ್ಲಿ ಸ್ಪರ್ಧಿಸಿ. ನಿಮ್ಮ ಎದುರಾಳಿಯಾಗಿ ನಾನು ಸ್ಪರ್ಧಿಸುವೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಎಂದ ಮಾತ್ರಕ್ಕೆ ಯಾರ ಬಗೆಗೂ ಹಗುರವಾಗಿ ಮಾತನಾಡಬಹುದಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬಳ್ಳಾರಿ: ಬಿ.ಶ್ರೀರಾಮುಲು ಅವರು ಜಿಲ್ಲೆಯ 5 ಮೀಸಲಾತಿ ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಅವರ ವಿರುದ್ಧ ನಾನು ಪ್ರತಿ ಸ್ಪರ್ಧಿಯಾಗಿ ನಿಂತುಕೊಳ್ಳುತ್ತೇನೆ.‌ ತಾಕತ್ತಿದ್ದರೆ ಅವರು ಗೆದ್ದು ಬರಲಿ ಎಂದು ಕಂಪ್ಲಿ ವಿಧಾನಸಭಾ ಶಾಸಕ ಜೆ.ಎನ್.ಗಣೇಶ ಸವಾಲೆಸೆದಿದ್ದಾರೆ.

ಶ್ರೀರಾಮುಲುಗೆ ಕಂಪ್ಲಿ ವಿಧಾನಸಭಾ ಶಾಸಕ ಗಣೇಶ ಸವಾಲು

ಜಿಲ್ಲೆಯ ಕಂಪ್ಲಿ ತಾಲೂಕಿನ ಬಾಳಾಪುರ ಗ್ರಾಮದಲ್ಲಿ ನಡೆದ ಸಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಹಗುರವಾಗಿ ಮಾತಾಡೋದನ್ನು ಸಚಿವ ಶ್ರೀರಾಮುಲು ಬಿಡಬೇಕು.‌ ಅವರು‌ ಏಕಾಂಗಿಯಲ್ಲ, ಈ‌ ರಾಜಕಾರಣದಲ್ಲಿ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿವರೆಗೆ ನಾವೆಲ್ಲ ಅವರೊಂದಿಗೆ ಇದ್ದೇವೆ ಎಂದರು.

ನಿಮಗೇನಾದ್ರೂ ಮತ್ತೊಂದು ಉಪಚುನಾವಣೆ ಎದುರಿಸಬೇಕೆಂಬ ಕಾತುರ ಇದ್ರೆ‌ ಮೊಳಕಾಲ್ಮೂರು ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು, ಈ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಮೀಸಲಾದ ಕ್ಷೇತ್ರದಲ್ಲಿ ಸ್ಪರ್ಧಿಸಿ. ನಿಮ್ಮ ಎದುರಾಳಿಯಾಗಿ ನಾನು ಸ್ಪರ್ಧಿಸುವೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಎಂದ ಮಾತ್ರಕ್ಕೆ ಯಾರ ಬಗೆಗೂ ಹಗುರವಾಗಿ ಮಾತನಾಡಬಹುದಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Intro:ಸಚಿವ ಶ್ರೀರಾಮುಲು ಜಿಲ್ಲೆಯ ಐದು ಮೀಸಲಾತಿ ಕ್ಷೇತ್ರಗಳಲ್ಲಿ ನಿಂತು ತಾಕತ್ತಿದ್ದರೆ ಗೆದ್ದು ಬರಲಿ: ಶಾಸಕ ಗಣೇಶ ಸವಾಲು...!
ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಜಿಲ್ಲೆಯ ಐದು ಮೀಸಲಾತಿ
ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಲ್ಲಿ
ನಿಂತುಕೊಳ್ಳಲಿ. ಅವರ ವಿರುದ್ಧ ನಾನು ಪ್ರತಿ ಸ್ಪರ್ಧಿಯಾಗಿ ನಿಂತುಕೊಳ್ಳುವೆ.‌ ತಾಕತ್ತಿದ್ದರೆ ಗೆದ್ದು ಬರಲಿ ಎಂದು ಕಂಪ್ಲಿ ವಿಧಾನಸಭಾ ಶಾಸಕ ಜೆ.ಎನ್.ಗಣೇಶ ಸವಾಲೆಸೆದಿದ್ದಾರೆ.
ಜಿಲ್ಲೆಯ ಕಂಪ್ಲಿ ತಾಲೂಕಿನ ಬಾಳಾಪುರ ಗ್ರಾಮದಲ್ಲಿ ನಡೆದ
ಸಿಸಿ ರಸ್ತೆ ನಿರ್ಮಾಣಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿ ಗಾರರೊಂದಿಗೆ ಅವರು‌ ಮಾತನಾಡಿ, ಕಾಂಗ್ರೆಸ್ ನ ವಿರೋಧ
ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಹಗುರವಾಗಿ ಮಾತಾಡೋದನ್ನ ಸಚಿವ ಶ್ರೀರಾಮುಲು ಬಿಡಬೇಕು.‌ ಅವರು‌ ಏಕಾಂಗಿಯಲ್ಲ. ಅವರು ಈ‌ ರಾಜಕಾರಣದಲ್ಲಿ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿವರೆಗೂ‌ ಕೂಡ ನಾವೆಲ್ಲ ಅವರೊಂದಿಗೆ ಇರು ತ್ತೀವಿ ಎಂದ್ರು ಶಾಸಕ ಗಣೇಶ.
Body:ನಿಮಗೇನಾದ್ರೂ ಮತ್ತೊಂದು ಉಪಚುನಾವಣೆ ಎದುರಿಸಬೇಕೆಂಬ ಕಾತುರ ಇದ್ರೆ.‌ ಮೊಳಕಾಲ್ಮೂರು ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ಈ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡ ಸಮು ದಾಯದವರಿಗೆ ಮೀಸಲಿದೆ. ತಾಕತ್ತಿದ್ದರೆ ಸ್ಪರ್ಧಿಸಿ. ನಿಮ್ಮ ಎದು ರಾಳಿಯಾಗಿ ನಾನು ಸ್ಪರ್ಧಿಸುವೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಎಂದ ಮಾತ್ರಕ್ಕೆ ಏನಾದ್ರೂ ಹಗುರವಾಗಿ ಮಾತನಾಡಬಹುದಾ ಎಂದು ಛೇಡಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಅನುಭವದಷ್ಟು ವಯಸ್ಸಾಗದ ಶ್ರೀರಾಮುಲು, ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿ ಸವಾಲು ಹಾಕಿರುವುದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದ್ರು ಶಾಸಕ ಗಣೇಶ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_1_KAMPLI_MLA_GANESH_BYTE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.