ETV Bharat / state

ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ಸ್ನೇಹಿತರೊಂದಿಗೆ ಸಚಿವ ಆನಂದಸಿಂಗ್ ಮಾತು!

author img

By

Published : Jan 16, 2021, 7:36 PM IST

31 ಜಿಲ್ಲೆಯಾಗಲಿರುವ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಜೊತೆ ಮಾತನಾಡಲು ಹೋಗಬೇಕಿತ್ತು. ಆದರೆ ಕಾರಣಾಂತರಗಳಿಂದ ಹೋಗುತ್ತಿಲ್ಲ ಎಂದು ಬಳ್ಳಾರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್​ ಹೇಳಿದ್ದಾರೆ.

Ballari dist incharge minister anand singh
ಸಚಿವ ಆನಂದಸಿಂಗ್ ಹೇಳಿಕೆ

ಬಳ್ಳಾರಿ: ನೂತನ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ಚರ್ಚಿಸಲು ರಾತ್ರಿ ಬೆಂಗಳೂರಿಗೆ ಹೋಗಬೇಕಾಗಿತ್ತು, ನಾನು ಅದನ್ನ ಕ್ಯಾನ್ಸಲ್ ಮಾಡಿಕೊಂಡೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ತಮ್ಮ‌ ಸ್ನೇಹಿತರೊಂದಿಗೆ ವಿಚಾರ ಹಂಚಿಕೊಂಡಿದ್ದಾರೆ.

ಸಚಿವ ಆನಂದಸಿಂಗ್ ಹೇಳಿಕೆ

ಹೊಸಪೇಟೆಯಲ್ಲಿಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆಂದು ದೇಣಿಗೆ ಸಂಗ್ರಹಿಸೋ ಅಭಿಯಾನದ ನಿಮಿತ್ತ ಸ್ನೇಹಿತರೊಂದಿಗೆ ಮಾತುಕತೆ ನಡೆಸುವ ವೇಳೆ ಸಚಿವ ಆನಂದಸಿಂಗ್ ಅವರು ಈ ರೀತಿಯಾಗಿ ಹೇಳಿರೋದು ಈಗ ಅತೀವ ಚರ್ಚೆಗೆ ಕಾರಣವಾಗಿದೆ.

ನಾನು ರಾತ್ರಿ ಬೆಂಗಳೂರಿಗೆ ಹೋಗಬೇಕಾಗಿತ್ತು, ಅದೇ ನೂತನ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ಚರ್ಚಿಸೋ ಸಲುವಾಗಿ ಸಿಎಂ ಜೊತೆ ಚರ್ಚಿಸಬೇಕಿತ್ತು. ಆದರೆ, ಅದನ್ನು ಇನ್ನೂ ಮುರ್ನಾಲ್ಕು ದಿನಗಳ ಕಾಲ ಮುಂದೂಡುವ ಸಾಧ್ಯತೆಯಿದೆ. ಅದೂ ಕೂಡ ಆಗಲಿ. ಆ ಅವಧಿಯೊಳಗೆ ನಿಮ್ಮೆಲ್ಲರ ಜೊತೆ ಕೆಲಕಾಲ ಬೆರೆತ ಹಂಗೆ ಆಗುತ್ತೆ. ಹೀಗಾಗಿ, ಇಲ್ಲೇ ಉಳಿದುಕೊಂಡೆ ಎಂದಿದ್ದಾರೆ ಸಚಿವ ಆನಂದಸಿಂಗ್.

ಬಳ್ಳಾರಿ: ನೂತನ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ಚರ್ಚಿಸಲು ರಾತ್ರಿ ಬೆಂಗಳೂರಿಗೆ ಹೋಗಬೇಕಾಗಿತ್ತು, ನಾನು ಅದನ್ನ ಕ್ಯಾನ್ಸಲ್ ಮಾಡಿಕೊಂಡೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ತಮ್ಮ‌ ಸ್ನೇಹಿತರೊಂದಿಗೆ ವಿಚಾರ ಹಂಚಿಕೊಂಡಿದ್ದಾರೆ.

ಸಚಿವ ಆನಂದಸಿಂಗ್ ಹೇಳಿಕೆ

ಹೊಸಪೇಟೆಯಲ್ಲಿಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆಂದು ದೇಣಿಗೆ ಸಂಗ್ರಹಿಸೋ ಅಭಿಯಾನದ ನಿಮಿತ್ತ ಸ್ನೇಹಿತರೊಂದಿಗೆ ಮಾತುಕತೆ ನಡೆಸುವ ವೇಳೆ ಸಚಿವ ಆನಂದಸಿಂಗ್ ಅವರು ಈ ರೀತಿಯಾಗಿ ಹೇಳಿರೋದು ಈಗ ಅತೀವ ಚರ್ಚೆಗೆ ಕಾರಣವಾಗಿದೆ.

ನಾನು ರಾತ್ರಿ ಬೆಂಗಳೂರಿಗೆ ಹೋಗಬೇಕಾಗಿತ್ತು, ಅದೇ ನೂತನ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ಚರ್ಚಿಸೋ ಸಲುವಾಗಿ ಸಿಎಂ ಜೊತೆ ಚರ್ಚಿಸಬೇಕಿತ್ತು. ಆದರೆ, ಅದನ್ನು ಇನ್ನೂ ಮುರ್ನಾಲ್ಕು ದಿನಗಳ ಕಾಲ ಮುಂದೂಡುವ ಸಾಧ್ಯತೆಯಿದೆ. ಅದೂ ಕೂಡ ಆಗಲಿ. ಆ ಅವಧಿಯೊಳಗೆ ನಿಮ್ಮೆಲ್ಲರ ಜೊತೆ ಕೆಲಕಾಲ ಬೆರೆತ ಹಂಗೆ ಆಗುತ್ತೆ. ಹೀಗಾಗಿ, ಇಲ್ಲೇ ಉಳಿದುಕೊಂಡೆ ಎಂದಿದ್ದಾರೆ ಸಚಿವ ಆನಂದಸಿಂಗ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.