ETV Bharat / state

ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ​ ರೈತರ ಒತ್ತಾಯ, ಪ್ರತಿಭಟನೆ

author img

By

Published : Nov 8, 2019, 4:57 PM IST

ಐ.ಎಸ್.ಆರ್.ಕಬ್ಬಿನ ಕಾರ್ಖಾನೆ ಪುನರ್​ ಆರಂಭಿಸುವಂತೆ ಆಗ್ರಹಿಸಿ ರೈತರು ನಗರದ ಚಿತ್ತವಾಡಿಯಲ್ಲಿರುವ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.

Hospet farmers protest

ಹೊಸಪೇಟೆ: ಐ.ಎಸ್.ಆರ್.ಕಬ್ಬಿನ ಕಾರ್ಖಾನೆ ಪುನರ್​ ಆರಂಭಿಸುವಂತೆ ಮತ್ತು ಕಬ್ಬಿನ ಬಾಕಿ ಹಣ ನೀಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ವಿಜಯನಗರ ರೈತ ಹೋರಾಟ ಸಮಿತಿಯ ಸದಸ್ಯರು ನಗರದ ಚಿತ್ತವಾಡಿಯಲ್ಲಿರುವ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನಲ್ಲಿ 4 ಲಕ್ಷ ಟನ್ ಕಬ್ಬನ್ನು ರೈತರು ಬೆಳೆಯುತ್ತಿದ್ದಾರೆ. ಸುತ್ತಮುತ್ತಲಿನ ಕಬ್ಬಿನ ಎಲ್ಲ ಕಾರ್ಖಾನೆಗಳನ್ನು ಮುಚ್ಚಿದ್ದಾರೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಕಬ್ಬನ್ನು ಬೆಳೆಯುವುದರಿಂದ ಸಾರಿಗೆ ಭತ್ಯೆ ಭರಿಸಲು ತೊಂದರೆಯಾಗುತ್ತಿದೆ ಎಂದರು.

ರೈತರ ಪ್ರತಿಭಟನೆ

ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದರಿಂದ ತಾಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿದಂತಾಗತ್ತದೆ. ಕೂಲಿ ಕಾರ್ಮಿಕರಿಗೆ, ಬಡ ರೈತರಿಗೆ ಅನೂಕೂಲವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ, ರೈತರ ಸಮಸ್ಯೆಗಳಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ಒದಗಿಸಬೇಕು ಎಂದು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಹೊಸಪೇಟೆ: ಐ.ಎಸ್.ಆರ್.ಕಬ್ಬಿನ ಕಾರ್ಖಾನೆ ಪುನರ್​ ಆರಂಭಿಸುವಂತೆ ಮತ್ತು ಕಬ್ಬಿನ ಬಾಕಿ ಹಣ ನೀಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ವಿಜಯನಗರ ರೈತ ಹೋರಾಟ ಸಮಿತಿಯ ಸದಸ್ಯರು ನಗರದ ಚಿತ್ತವಾಡಿಯಲ್ಲಿರುವ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನಲ್ಲಿ 4 ಲಕ್ಷ ಟನ್ ಕಬ್ಬನ್ನು ರೈತರು ಬೆಳೆಯುತ್ತಿದ್ದಾರೆ. ಸುತ್ತಮುತ್ತಲಿನ ಕಬ್ಬಿನ ಎಲ್ಲ ಕಾರ್ಖಾನೆಗಳನ್ನು ಮುಚ್ಚಿದ್ದಾರೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಕಬ್ಬನ್ನು ಬೆಳೆಯುವುದರಿಂದ ಸಾರಿಗೆ ಭತ್ಯೆ ಭರಿಸಲು ತೊಂದರೆಯಾಗುತ್ತಿದೆ ಎಂದರು.

ರೈತರ ಪ್ರತಿಭಟನೆ

ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದರಿಂದ ತಾಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿದಂತಾಗತ್ತದೆ. ಕೂಲಿ ಕಾರ್ಮಿಕರಿಗೆ, ಬಡ ರೈತರಿಗೆ ಅನೂಕೂಲವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ, ರೈತರ ಸಮಸ್ಯೆಗಳಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ಒದಗಿಸಬೇಕು ಎಂದು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

Intro: ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಿ : ಹೊಸಪೇಟೆ ರೈತರ ಪ್ರತಿಭಟನೆ
ಹೊಸಪೇಟೆ : ನಗರದಲ್ಲಿ ಐ.ಎಸ್. ಆರ್.ಕಬ್ಬಿನ ಕಾರ್ಖಾನೆಯನ್ನು ಪುನರಾರಂಭಿಸಬೇಕು. ಹಳೆಯ ಕಬ್ಬಿನ ಬಾಕಿ ಹಣವನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯ ಕಾಳಿದಾಸ ಮಾತನಾಡಿದರು.


Body: ವಿಜಯ ನಗರ ರೈತ ಹೋರಾಟ ಸಮಿತಿಯು ಇಂದು ಬೆಳಿಗ್ಗೆ ಚಿತ್ತವಾಡಿಗಿಯಲ್ಲಿರುವ ಮುಚ್ಚಿದ ಐ.ಎಸ್. ಆರ್ ಸಕ್ಕರೆ ಕಾರ್ಖಾನೆಯನ್ನು ಪುನಾರಾರಂಭಿಸಬೇಕೆಂದು ಪ್ರತಿಭಟನೆಯನ್ನು ಮಾಡಿದರು.

ಹೊಸಪೇಟೆ ತಾಲೂಕಿನಲ್ಲಿ 4 ಲಕ್ಷ ಟನ್ ಕಬ್ಬನ್ನು ರೈತರು ಬೆಳೆಯುತ್ತಿದ್ದಾರೆ. ಸುತ್ತ ಮತ್ತಲಿನ ಕಬ್ಬಿನ ಎಲ್ಲಾ ಕಾರ್ಖಾನೆಯನ್ನು ಮುಚ್ಚಿದ್ದಾರೆ. ತಾಲೂಕಿನಲ್ಲಿ ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರು ಕಬ್ಬನ್ನು ಬೆಳೆಯುವುದರಿಂದ ರೈತರು ಸಾರಿಗೆ ಭತ್ಯಯನ್ನು ಭರಿಸಲು ತೊಂದರೆಯಾಗುತ್ತಿದೆ ಎಂದರು.

ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡುವುದರಿಂದ ತಾಲೂಕಿನ ನಿರುದ್ಯೋಗ ಯುವಕ ಯುವತಿಯರಿಗೆ ಕೆಲಸವನ್ನು ನಿಡಿದಂತಾಗುತ್ತದೆ.ಕೂಲಿ ಕಾರ್ಮಿಕರಿಗೆ ಬಡ ರೈತರಿಗೆ ಅನೂಕುಲವಾಗುತ್ತದೆ.ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಇತ್ತ ಕಡೆ ಗಮನ ಹರಿಸಿ ರೈತರ ಸಮಸ್ಯೆಗಳನ್ನು ಸರಕಾರ ಆದಷ್ಟು ಬೇಗನೆ ಬಗೆಹರಿಸಬೇಕಿದೆ ಎಂದು ತಹಶಿಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಮಾಡಿಕೊಂಡರು.


Conclusion:KN_HPT_1_ FARMERS_PROTEST_SCRIPT_KA10028

BITE : ಕಾಳಿದಾಸ. ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.