ETV Bharat / state

ಹಂಪಿ‌ ಉತ್ಸವ ಭಿತ್ತಿಪತ್ರ ಲೋಕಾರ್ಪಣೆ: ಜೇಬುಗಳ್ಳರ ಮೇಲೆ ನಿಗಾವಹಿಸಲು ಕರೆ - ಜನವರಿಯಲ್ಲಿ ಹಂಪಿ‌ ಉತ್ಸವ

ಹಂಪಿ ಉತ್ಸವ ಸಂಭ್ರಮದ 2020ರ ಭಿತ್ತಿಪತ್ರಗಳನ್ನು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ, ಎಂಎಲ್ಸಿಗಳಾದ ಅಲ್ಲಂ ವೀರಭದ್ರಪ್ಪ ಮತ್ತಿತರರು ಲೋಕಾರ್ಪಣೆ ಮಾಡಿದರು.

Hampi Uthsava poster release: alertness regarding pick pocket
ಹಂಪಿ‌ ಉತ್ಸವ ಭಿತ್ತಿಪತ್ರ ಲೋಕಾರ್ಪಣೆ: ಜೇಬುಗಳ್ಳರ ಮೇಲೆ ನಿಗಾವಹಿಸಲು ಕರೆ
author img

By

Published : Jan 1, 2020, 2:12 PM IST

ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ‌ ಉತ್ಸವವನ್ನು ಜನವರಿ 10 ಮತ್ತು 11ರಂದು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಕಲ ತಯಾರಿ ನಡೆಸಿಕೊಂಡಿದೆ. ಈ ಸಂಬಂಧ ಹಂಪಿ ಉತ್ಸವ ಸಂಭ್ರಮದ 2020ರ ಭಿತ್ತಿಪತ್ರಗಳನ್ನು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಹರಪನಹಳ್ಳಿ ಶಾಸಕ ಜಿ. ಕರುಣಾಕರರೆಡ್ಡಿ, ಎಂಎಲ್ಸಿಗಳಾದ ಅಲ್ಲಂ ವೀರಭದ್ರಪ್ಪ ಮತ್ತಿತರರು ಲೋಕಾರ್ಪಣೆ ಮಾಡಿದರು.

ಹಂಪಿ‌ ಉತ್ಸವ ಭಿತ್ತಿಪತ್ರ ಲೋಕಾರ್ಪಣೆ: ಜೇಬುಗಳ್ಳರ ಮೇಲೆ ನಿಗಾವಹಿಸಲು ಕರೆ

ಕಾರ್ಯಕ್ರಮದಲ್ಲಿ ಜಿಲ್ಲೆಯ ಹರಪನಹಳ್ಳಿ ಶಾಸಕ ಗಾಲಿ ಕರುಣಾಕರರೆಡ್ಡಿ ಮಾತನಾಡಿ, ಮೈಸೂರು ದಸರಾದಂತೆ ಹಂಪಿ ಉತ್ಸವವನ್ನೂ ಅದ್ಧೂರಿಯಾಗಿ ಆಚರಿಸುವ ಪ್ರತೀತಿ ಇದೆ. ಹೀಗಾಗಿ, ಈ ಬಾರಿಯ ಹಂಪಿ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಸಹಕರಿಸುವಂತೆ ಮನವಿ ಮಾಡಿದರು.

ಜೇಬುಗಳ್ಳರ ಮೇಲೆ ನಿಗಾವಹಿಸಿ:

ಉತ್ಸವದ ಸಂದರ್ಭದಲ್ಲಿ ಜೇಬುಗಳ್ಳರ ಹಾವಳಿ ಜಾಸ್ತಿ ಇರುತ್ತದೆ. ಹೀಗಾಗಿ, ಜಿಲ್ಲಾ ಪೊಲೀಸ್ ಇಲಾಖೆಯು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು. ದೂರದ ಊರುಗಳಿಂದ ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಬರುವ ಸಾವಿರಾರು ಪ್ರವಾಸಿಗರಿಗೆ ತೊಂದರೆಯಾಗಬಾರದು. ಇದೊಂದು ಸಣ್ಣ ವಿಷಯವಾದ್ರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಪೊಲೀಸರಿಗೆ ಸೂಚಿಸಿದರು.

ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ‌ ಉತ್ಸವವನ್ನು ಜನವರಿ 10 ಮತ್ತು 11ರಂದು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಕಲ ತಯಾರಿ ನಡೆಸಿಕೊಂಡಿದೆ. ಈ ಸಂಬಂಧ ಹಂಪಿ ಉತ್ಸವ ಸಂಭ್ರಮದ 2020ರ ಭಿತ್ತಿಪತ್ರಗಳನ್ನು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಹರಪನಹಳ್ಳಿ ಶಾಸಕ ಜಿ. ಕರುಣಾಕರರೆಡ್ಡಿ, ಎಂಎಲ್ಸಿಗಳಾದ ಅಲ್ಲಂ ವೀರಭದ್ರಪ್ಪ ಮತ್ತಿತರರು ಲೋಕಾರ್ಪಣೆ ಮಾಡಿದರು.

ಹಂಪಿ‌ ಉತ್ಸವ ಭಿತ್ತಿಪತ್ರ ಲೋಕಾರ್ಪಣೆ: ಜೇಬುಗಳ್ಳರ ಮೇಲೆ ನಿಗಾವಹಿಸಲು ಕರೆ

ಕಾರ್ಯಕ್ರಮದಲ್ಲಿ ಜಿಲ್ಲೆಯ ಹರಪನಹಳ್ಳಿ ಶಾಸಕ ಗಾಲಿ ಕರುಣಾಕರರೆಡ್ಡಿ ಮಾತನಾಡಿ, ಮೈಸೂರು ದಸರಾದಂತೆ ಹಂಪಿ ಉತ್ಸವವನ್ನೂ ಅದ್ಧೂರಿಯಾಗಿ ಆಚರಿಸುವ ಪ್ರತೀತಿ ಇದೆ. ಹೀಗಾಗಿ, ಈ ಬಾರಿಯ ಹಂಪಿ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಸಹಕರಿಸುವಂತೆ ಮನವಿ ಮಾಡಿದರು.

ಜೇಬುಗಳ್ಳರ ಮೇಲೆ ನಿಗಾವಹಿಸಿ:

ಉತ್ಸವದ ಸಂದರ್ಭದಲ್ಲಿ ಜೇಬುಗಳ್ಳರ ಹಾವಳಿ ಜಾಸ್ತಿ ಇರುತ್ತದೆ. ಹೀಗಾಗಿ, ಜಿಲ್ಲಾ ಪೊಲೀಸ್ ಇಲಾಖೆಯು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು. ದೂರದ ಊರುಗಳಿಂದ ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಬರುವ ಸಾವಿರಾರು ಪ್ರವಾಸಿಗರಿಗೆ ತೊಂದರೆಯಾಗಬಾರದು. ಇದೊಂದು ಸಣ್ಣ ವಿಷಯವಾದ್ರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಪೊಲೀಸರಿಗೆ ಸೂಚಿಸಿದರು.

Intro:ಹಂಪಿ‌ ಉತ್ಸವದಲ್ಲಿ ಜೇಬುಗಳ್ಳರ ಮೇಲೆ ನಿಗಾವಹಿಸಲು ಜನಪ್ರತಿನಿಧಿಗಳ ಮನವಿ
ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ‌ ಉತ್ಸವವು ಜನವರಿ 10 ಮತ್ತು 11 ರಂದು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಕಲ ತಯಾರಿ ನಡೆಸಿಕೊಂಡಿದೆ.
ಈ ಸಂಬಂಧ ಹಂಪಿ ಉತ್ಸವ ಸಂಭ್ರಮದ 2020ರ ಭಿತ್ತಿಪತ್ರಗಳನ್ನು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಹರಪನಹಳ್ಳಿ ಶಾಸಕ ಜಿ.ಕರುಣಾಕರರೆಡ್ಡಿ, ಎಂಎಲ್ಸಿ
ಗಳಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಎಸ್ಪಿ
ಸಿ.ಕೆ.ಬಾಬಾ, ಡಿಸಿ ನಕುಲ್, ಎಡಿಸಿ ಮಂಜುನಾಥ,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಹಿರಿಯ ಸಹಾಯಕ‌ ನಿರ್ದೇಶಕ‌ ಬಿ.ಕೆ.ರಾಮಲಿಂಗಪ್ಪ
ನವ್ರು ಲೋಕಾರ್ಪಣೆ ಮಾಡಿದ್ರು.


Body:ಜೇಬುಗಳ್ಳರ ಮೇಲೆ ನಿಗಾವಹಿಸಿ: ಜಿಲ್ಲೆಯ ಹರಪನಹಳ್ಳಿ ಶಾಸಕ ಗಾಲಿ ಕರುಣಾಕರರೆಡ್ಡಿಯವ್ರು ಮಾತನಾಡಿ, ಮೈಸೂರು ದಸರಾ ಹಬ್ಬದಂತೆ ಈ ಹಂಪಿ ಉತ್ಸವ ವನ್ನು ಆಚರಿಸುವ ಪ್ರತೀತಿಯೂ ಇಲ್ಲಿ ಚಾಲ್ತಿಯಿದೆ. ಹೀಗಾಗಿ, ಈ ಬಾರಿಯ ಹಂಪಿ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಜಿಲ್ಲಾಡಳಿತ ಸಕಲ ತಯಾರಿ ನಡೆಸಿಕೊಂಡಿದೆ.
ಹಂಪಿ ಉತ್ಸವದ ಸಂದರ್ಭ ಈ ಜೇಬುಗಳ್ಳರ ಹಾವಳಿ
ಜಾಸ್ತಿ ಇರುತ್ತೆ ಎಂಬ ಗುಮಾನೆಗಳು ಹಬ್ಬಿವೆ. ಆಗಾಗಿ,
ಜಿಲ್ಲಾ ಪೊಲೀಸ್ ಇಲಾಖೆಯು ಆ ಕುರಿತು ಹೆಚ್ಚಿನ ಗಮನ ಹರಿಸಬೇಕೆಂದು ಕರುಣಾಕರರೆಡ್ಡಿ ಮನವಿ ಮಾಡಿದ್ದಾರೆ.
ಯಾಕಂದ್ರೆ ದೂರದ ಊರುಗಳಿಂದ ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಪ್ರವಾಸಿಗರು ಬಂದಿರುತ್ತಾರೆ. ಆಗಾಗಿ, ಅವರು ಜೇಬುಗಳ್ಳರ ಇಕ್ಕಟ್ಟಿಗೆ ಸಿಲುಕಿಕೊಂಡು ವಾಪಾಸ್ ಹೋಗಲಿಕ್ಕೂ ದುಡ್ಡು ಇರಲಾ
ರದಂತಹ ಪರಿಸ್ಥಿತಿ ಎದುರಾಗಬಾರದು. ಇದೊಂದು ಸಣ್ಣ ವಿಷಯವಾದ್ರೂ ಗಂಭೀರವಾಗಿ ಪರಿಗಣಿಸಬೇಕೆಂದ್ರು.‌
ಅದಕ್ಕೆ ಧ್ವನಿಗೂಡಿಸಿದ ಎಂಎಲ್ಸಿ ಅಲ್ಲಂ ವೀರಭದ್ರಪ್ಪ, ಜೇಬುಗಳ್ಳರಿದ್ದಾರೆ ಎಚ್ಚರಿಕೆ ಎಂಬ ಸಂದೇಶವನ್ನು ಹಾಕಿ
ಬಿಡಿ. ಪ್ರವಾಸಿಗರು ಹಣ ಕಳೆದುಕೊಂಡರೆ ಶಾಸಕರ ಬಳಿ ಬಂದು ಹಣ ಕೇಳಲು ಶುರು ಮಾಡುತ್ತಾರೆಂದು ನಸುನಕ್ಕರು.
ರಾಜ್ಯದ ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕ ಮಗಳೂರು ಸೇರಿದಂತೆ ಇತರೆಡೆಯಿಂದ ಆಗಮಿಸುವ ಪ್ರವಾಸಿಗರಿಗೆ ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡುವಂತೆ ಜಿಲ್ಲಾಧಿಕಾರಿ ನಕುಲ್ ಅವರಿಗೆ ಕೋರಿದ್ರು ಶಾಸಕ ಕರುಣಾಕರರೆಡ್ಡಿ.



Conclusion:ಎಂಎಲ್ ಸಿ ಕೆ.ಸಿ.ಕೊಂಡಯ್ಯನವ್ರು ಮಾತನಾಡಿ, ಇದೊಂದು ನಾಡಹಬ್ಬ. ಈ ಉತ್ಸವವನ್ನ ನಾವೆಲ್ಲ ಸಂಭ್ರಮದಿಂದ ಆಚರಿಸೋಣ ಬನ್ನಿ ಎಂದು ಕರೆ ನೀಡಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

KN_BLY_4_HAMPI_USTAVA_BYTE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.