ETV Bharat / state

​​​​​​​ಉಚಿತ ಕೃತಕ ಕೈ, ಕಾಲು ಜೋಡಣೆ ಶಿಬಿರ: 250 ವಿಕಲಚೇತನರಿಗೆ ತ್ರೈಸಿಕಲ್ ವಿತರಣೆ

author img

By

Published : Oct 26, 2019, 10:37 AM IST

ಬಳ್ಳಾರಿಯಲ್ಲಿ ವಿಕಲಚೇತನರ ಕಲ್ಯಾಣ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಚಿತ ಕೃತಕ ಕೈ, ಕಾಲು ಜೋಡಣೆ ಶಿಬಿರ ಹಾಗೂ ಟ್ರೈಸಿಕಲ್ ವಿತರಣೆ ನಡೆಯಿತು.

ಉಚಿತ ಕೃತಕ ಕೈ, ಕಾಲು ಜೋಡಣೆ ಶಿಬಿರ

ಬಳ್ಳಾರಿ: ಅಪಘಾತದಲ್ಲಿ ಕಾಲು, ಕೈ ಕಳೆದುಕೊಂಡವರಿಗೆ ಮತ್ತು ವಿಶೇಷ ಚೇತನರು, ಬುದ್ಧಿಮಾಂದ್ಯರು ಹಾಗು ಅಂಧರಿಗೆ 250ಕ್ಕೂ ಅಧಿಕ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು.

ಉಚಿತ ಕೃತಕ ಕೈ, ಕಾಲು ಜೋಡಣೆ ಶಿಬಿರ

ಇಲ್ಲಿನ ವಿಮ್ಸ್ ಆಸ್ಪತ್ರೆ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಆವರಣದಲ್ಲಿ ಕೊಲ್ಕತ್ತಾ ಕೋಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜೈ ಗುರುದೇವ ಚಾರಿಟೇಬಲ್ ಟ್ರಸ್ಟ್, ವಿಶ್ವಭಾರತಿ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ವೇಳೆ ಉಚಿತ ಕೃತಕ ಕೈ-ಕಾಲು ಜೋಡಣೆ ಶಿಬಿರ
ಹಾಗೂ ತ್ರೈಸಿಕಲ್ ವಿತರಣೆ ನಡೆಯಿತು.

ಜಿಲ್ಲೆ, ತಾಲೂಕು, ಹೋಬಳಿ ಮತ್ತು ನೆರೆಹೊರೆಯ ಜಿಲ್ಲೆಗಳಿಂದ 2 ಸಾವಿರಕ್ಕೂ ಅಧಿಕ ಫಲಾನುಭವಿಗಳು ಪಾಲ್ಗೊಂಡಿದ್ದರು.

ಬಳ್ಳಾರಿ: ಅಪಘಾತದಲ್ಲಿ ಕಾಲು, ಕೈ ಕಳೆದುಕೊಂಡವರಿಗೆ ಮತ್ತು ವಿಶೇಷ ಚೇತನರು, ಬುದ್ಧಿಮಾಂದ್ಯರು ಹಾಗು ಅಂಧರಿಗೆ 250ಕ್ಕೂ ಅಧಿಕ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು.

ಉಚಿತ ಕೃತಕ ಕೈ, ಕಾಲು ಜೋಡಣೆ ಶಿಬಿರ

ಇಲ್ಲಿನ ವಿಮ್ಸ್ ಆಸ್ಪತ್ರೆ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಆವರಣದಲ್ಲಿ ಕೊಲ್ಕತ್ತಾ ಕೋಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜೈ ಗುರುದೇವ ಚಾರಿಟೇಬಲ್ ಟ್ರಸ್ಟ್, ವಿಶ್ವಭಾರತಿ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ವೇಳೆ ಉಚಿತ ಕೃತಕ ಕೈ-ಕಾಲು ಜೋಡಣೆ ಶಿಬಿರ
ಹಾಗೂ ತ್ರೈಸಿಕಲ್ ವಿತರಣೆ ನಡೆಯಿತು.

ಜಿಲ್ಲೆ, ತಾಲೂಕು, ಹೋಬಳಿ ಮತ್ತು ನೆರೆಹೊರೆಯ ಜಿಲ್ಲೆಗಳಿಂದ 2 ಸಾವಿರಕ್ಕೂ ಅಧಿಕ ಫಲಾನುಭವಿಗಳು ಪಾಲ್ಗೊಂಡಿದ್ದರು.

Intro:ಗಣಿನಗರಿಯಲಿ ಉಚಿತ ಕೃತಕ ಕಾಲು, ಕೈ ಜೋಡಣೆ ಶಿಬಿರ
ಸರಿಸುಮಾರು 250 ವಿಕಲಚೇತನರಿಗೆ ತ್ರೈಸಿಕಲ್ ವಿತರಣೆ
ಬಳ್ಳಾರಿ: ಗಣಿನಗರಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿನ
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಆವರಣ ದಲ್ಲಿಂದು ಉಚಿತ ಕೃತಕ ಕಾಲು- ಕೈ ಜೋಡಣೆ ಶಿಬಿರ
ಹಾಗೂ ತ್ರೈಸಿಕಲ್ ವಿತರಣೆ ಕಾರ್ಯಕ್ರಮ ನಡೆಯಿತು.
ಜಿಲ್ಲೆಯ ನಾನಾ ತಾಲೂಕು, ಹೋಬಳಿ ಮತ್ತು ನೆರೆಹೊರೆಯ ಜಿಲ್ಲೆಗಳಿಂದ ನೂರಾರು ಬುದ್ಧಿಮಾಂದ್ಯರು, ಅಂಧರು, ವಿಶೇಷ ವಿಕಲಚೇತನರು, ಅಪಘಾತ ಸೇರಿದಂತೆ ಇತರೆ ಅವಘಡಗಳಲ್ಲಿ ಕಾಲು, ಕೈ ಕಳೆದುಕೊಂಡವರು ಇಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆಯ ತೋರಣಗಲ್ಲಿನ ಪ್ರದೇಶ ವ್ಯಾಪ್ತಿಯಲ್ಲಿನ ರೈಲ್ವೇ ಹಳಿಯತ್ತ ಕಟ್ಟಿಗೆ ಕಡಿದುಕೊಂಡು ಬರಲು ಹೋದ ಆ‌ ಮಹಿಳೆ ಅರ್ಧ ಕೈ ಕಟ್ ಆಗಿದೆ. ಕಳೆದ ಹತ್ತು ವರ್ಷಗಳಿಂದ ಈ ಅರ್ಧ ಕೈಯಿಂದಲೇ ಮನೆ ಕೆಲಸ ಮಾಡುತ್ತಿದ್ದಾಳೆ ಆಕೆ. ಕಳೆದ ವಾರ ಕೃತಕ ಕೈ ಜೋಡಣೆ ಶಿಬಿರ ನಡೆಯುತ್ತೆ ಎಂಬ ಮಾಹಿತಿಯನ್ನು ತಿಳಿದ ಕುಟುಂಬಸ್ಥರು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿಕೊಂಡಿದ್ದು, ಈ ದಿನ ಕೃತಕ ಕೈ ಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.



Body:ಜಿಲ್ಲೆಯ ಸಂಡೂರು ತಾಲೂಕಿನ ಕುಡಿತಿನಿ ಗ್ರಾಮದ ಲಾರಿ ಕ್ಲೀನರ್ ಒಬ್ಬರು ತಮ್ಮ ಎಡಭಾಗದ ಕಾಲಿನ ಅರ್ಧ ಭಾಗ
ವನ್ನು ಕಳೆದುಕೊಂಡಿದ್ದು, ಅವರೂ ಕೂಡ ಈ ದಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಉಳಿದಂತೆಯೇ ಬುದ್ಧಿಮಾಂದ್ಯರು ಹಾಗೂ ಅಂಧರಿಗೂ ಈ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು. ತಬಲಾ ವಾದಕ ಉಮೇಶ ಅವರ ಅಂಧತ್ವ ನಿವಾರಣೆಯ ಶಸ್ತ್ರಚಿಕಿತ್ಸೆಯನ್ನು ಪಡೆದುಕೊಂಡರು.
ವಿಕಲಚೇತನರ ಕಲ್ಯಾಣಾಧಿಕಾರಿ ಮಹಾಂತೇಶ ಅವರು
ಈ ಟಿವಿ ಭಾರತ್ ದೊಂದಿಗೆ ಮಾತನಾಡಿ, ಜಿಲ್ಲಾದ್ಯಂತ ಸರಿ ಸುಮಾರು 2000 ವಿಶೇಷ ಚೇತನರಿದ್ದು, ಈ ದಿನ ಅಂದಾಜು 250 ವಿಕಲಚೇತನರಿಗೆ ಮಾತ್ರ ಸಾಧನಾ ಸಲಕರಣೆಗಳನ್ನು ವಿತರಿಸಲಾಗುವುದೆಂದರು.





Conclusion:ಕೊಲ್ಕತ್ತಾ ಕೋಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಜೈ ಗುರುದೇವ ಚಾರಿಟಬಲ್ ಟ್ರಸ್ಟ್, ವಿಶ್ವಭಾರತಿ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಅಧಿಕಾರಿ ಗುರುಮೂರ್ತಿ ಇದ್ದರು.

ಬೈಟ್: ಮಹಾಂತೇಶ, ವಿಕಲಚೇತನರ ಕಲ್ಯಾಣಾಧಿಕಾರಿ, ಬಳ್ಳಾರಿ.

ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_4_HARTIFICIAL_LEG_HAND_SIBIRA_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.