ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ವಿರೂಪಾಕ್ಷ ದೇವಾಲಯದ ಹಿಂಭಾಗ ಹರಿಯುತ್ತಿರುವ ತುಂಗಭದ್ರಾ ನದಿ ತಟದಲ್ಲಿಂದು ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯೋರ್ವಳು ಪಿತೃತರ್ಪಣ ನೆರವೇರಿಸಿ ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿದಿದ್ದಾರೆ.
ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯ ತಾಯಿ ಖಾಲಿಯಾ ಅವರು ಇತ್ತೀಚೆಗೆ ಮೃತಪಟ್ಟಿದ್ದರು. ಆದರೆ ತಾಯಿಯ ಅಂತ್ಯಕ್ರಿಯೆಗೆ ಹೋಗಲು ಆ ಮಹಿಳೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ತಾಯಿಯ ಆತ್ಮಕ್ಕೆ ಶಾಂತಿಕೋರಿ ಭಾರತೀಯ ಸಂಪ್ರದಾಯದಂತೆಯೇ ಆಕೆ ಪಿತೃತರ್ಪಣ ಮಾಡಿದ್ದಾರೆ.
ಕಾಗೆಗಿಟ್ಟ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ಧ ಸಮರ ಸಾರಿದ ಯುವಕರು!
ಮೋಹನ ಚಿಕ್ಕಭಟ್ ಜೋಷಿ ಎಂಬುವರು ಈ ಪಿತೃತರ್ಪಣ ಕಾರ್ಯ ನೆರವೇರಿಸಿಕೊಟ್ಟರು. ಬಳಿಕ ಮಾತನಾಡಿದ ಆ ಮಹಿಳೆ ದಕ್ಷಿಣ ಆಫ್ರಿಕಾದಲ್ಲಿ ತಾಯಿ ಕಾಲಿಯಾ ಮೃತಪಟ್ಟಿದ್ದರು. ಆದರೆ ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಈ ಐತಿಹಾಸಿಕ ಪ್ರಸಿದ್ಧ ಹಂಪಿಯಲ್ಲಿ ಶ್ರಾದ್ಧಕರ್ಮಗಳನ್ನು ಮಾಡಲಾಯಿತೆಂದರು.