ETV Bharat / state

ಅಧಿಕಾರಿಗಳ ಮಾತಿಗೆ ಮಣಿದು ಸೇವೆಗೆ ಹಾಜರು; ಸಹೋದ್ಯೋಗಿಗಳಿಂದ 'ಶ್ರದ್ಧಾಂಜಲಿ' ಸಲ್ಲಿಕೆ

author img

By

Published : Apr 9, 2021, 9:26 AM IST

ಅಧಿಕಾರಿಗಳ ಮಾತಿಗೆ ಮಣಿದು ಬಳ್ಳಾರಿ‌ಯಿಂದ ಗುಂತಕಲ್ಲುಗೆ ಬಸ್ ಚಾಲನೆ ಮಾಡಿದ ಸಿಬ್ಬಂದಿಯ ಫೋಟೋಗೆ ಇಲಾಖೆಯ ಸಹೋದ್ಯೋಗಿಗಳೇ ಶ್ರದ್ಧಾಂಜಲಿ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ನಡೆದಿದೆ.

Bellary
ಸಿಬ್ಬಂದಿ ಕರ್ತವ್ಯಕ್ಕೆ ಹಾಜರು

ಬಳ್ಳಾರಿ: ಸಾರಿಗೆ ನೌಕರರು ರಾಜ್ಯದೆಲ್ಲೆಡೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸಿಬ್ಬಂದಿಯೊಬ್ಬರು ಅಧಿಕಾರಿಗಳ ಮಾತಿಗೆ ಮಣಿದು ಬಳ್ಳಾರಿ‌ಯಿಂದ ಗುಂತಕಲ್ಲುಗೆ ಬಸ್ ಚಾಲನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಇತರ ಪ್ರತಿಭಟನಾಕಾರರು ಆ ವ್ಯಕ್ತಿಯ ಫೋಟೋಗೆ ಶ್ರದ್ಧಾಂಜಲಿ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

"ನಿಮ್ಮ ಸೇವೆ ಸಾಕು, ಮತ್ತೊಮ್ಮೆ ನೀವು ಹುಟ್ಟಿ ಬರಬೇಡಿ" ಎಂದು ಅವಮಾನ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವೈರಲ್​ ವಿಡಿಯೋ

ಬಳ್ಳಾರಿ: ಸಾರಿಗೆ ನೌಕರರು ರಾಜ್ಯದೆಲ್ಲೆಡೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸಿಬ್ಬಂದಿಯೊಬ್ಬರು ಅಧಿಕಾರಿಗಳ ಮಾತಿಗೆ ಮಣಿದು ಬಳ್ಳಾರಿ‌ಯಿಂದ ಗುಂತಕಲ್ಲುಗೆ ಬಸ್ ಚಾಲನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಇತರ ಪ್ರತಿಭಟನಾಕಾರರು ಆ ವ್ಯಕ್ತಿಯ ಫೋಟೋಗೆ ಶ್ರದ್ಧಾಂಜಲಿ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

"ನಿಮ್ಮ ಸೇವೆ ಸಾಕು, ಮತ್ತೊಮ್ಮೆ ನೀವು ಹುಟ್ಟಿ ಬರಬೇಡಿ" ಎಂದು ಅವಮಾನ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವೈರಲ್​ ವಿಡಿಯೋ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.