ETV Bharat / state

ಕಣ್ಣು ಕಾಣದ ಸಹೋದರರಿಗಿದೆ ಕೋಗಿಲೆ ಕಂಠ: ಕೊರೊನಾದಿಂದ ಬಂತು ಇವರಿಗೆ ಸಂಕಷ್ಟ - Siruguppa of Bellary district

ಸಿರುಗುಪ್ಪ ತಾಲೂಕಿನ ರಾವಿಹಾಳ್​​ ಗ್ರಾಮದ ಹುಚ್ಚಯ್ಯ ಹಿರೇಮಠ ಮತ್ತು ವೀರೇಶ್ ಹಿರೇಮಠ ಇಬ್ಬರು ಅಂಧರು. ಆದ್ರೂ ಹೇಗೋ ಹಾಡು ಹೇಳಿಕೊಂಡು ಜೀವನ ನಡೆಸುತ್ತಿದ್ದರು. ಆದ್ರೆ ಈ ಕೊರೊನಾದಿಂದ ಇದೀಗ ಈವರ ಜೀವನ ಸಂಕಷ್ಟಕ್ಕೀಡಾಗಿದೆ.

ಹುಚ್ಚಯ್ಯ ಹೀರೆಮಠ ಮತ್ತು ವೀರೇಶ್ ಹೀರೆಮಠ
ಹುಚ್ಚಯ್ಯ ಹೀರೆಮಠ ಮತ್ತು ವೀರೇಶ್ ಹೀರೆಮಠ
author img

By

Published : Aug 26, 2020, 5:15 PM IST

Updated : Aug 26, 2020, 6:44 PM IST

ಬಳ್ಳಾರಿ: ಒಡಹುಟ್ಟಿದ ಅಂಧ ಸಹೋದರರಿಬ್ಬರು ಮನೆಯಲ್ಲಿಯೇ ಶಾಸ್ತ್ರೀಯ ಸಂಗೀತ, ಭಾವಗೀತೆ, ಭಜನೆಗಳನ್ನು ಹಾಡುವ ಮೂಲಕ ಜನರಿಗೆ ಸಾಮಾಜಿಕ ಮಾಧ್ಯಮಗಳಾದ ಫೇಸ್​​ಬುಕ್​​, ವಾಟ್ಸಾಪ್, ಯೂಟ್ಯೂಬ್ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳ್ ಗ್ರಾಮದ ಹುಚ್ಚಯ್ಯ ಹಿರೇಮಠ ಮತ್ತು ವೀರೇಶ್ ಹಿರೇಮಠ ಇಬ್ಬರು ಅಂಧ ಸಹೋದರರು. ಇವರು ಶಾಸ್ತ್ರಿಯ ಸಂಗೀತ, ತಬಲ, ಹಾರ್ಮೋನಿಯಂ ಕಲಾವಿದರು.

ಕಣ್ಣು ಕಾಣದ ಸಹೋದರರಿಗಿದೆ ಕೋಗಿಲೆ ಕಂಠ

'ಈಟಿವಿ ಭಾರತ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ವಿರೇಶ್‌ ಹಿರೇಮಠ ಅವರು, ನಾವಿಬ್ಬರು ಗದುಗಿನ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಸಂಗೀತ, ತಬಲ ಮತ್ತು ಹಾರ್ಮೋನಿಯಂ ವಿದ್ಯಾಭ್ಯಾಸ ಮಾಡಿದ್ದೇವೆ. ಕೊರೊನಾ ವೈರಸ್​ನಿಂದಾಗಿ ಮನೆಯಲ್ಲಿಯೇ ಇದ್ದೇವೆ. ಕಳೆದ ಐದಾರು ತಿಂಗಳಿಂದ ಯಾವುದೇ ಪುರಾಣ, ಪ್ರವಚನ, ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮಗಳು ಇಲ್ಲದೆ ಮನೆಯಲ್ಲಿಯೇ ಕಾಲಕಳೆಯುವ ಪರಿಸ್ಥಿತಿ ಉಂಟಾಗಿದೆ ಎಂದರು.

ಕೊರೊನಾ ಸಮಯದಲ್ಲಿ ಯಾವುದೇ ಸಂಪಾದನೆ ಇಲ್ಲ, ಸರ್ಕಾರ ನೀಡುವ ಸಹಾಯಧನ ಸಾಕಾಗುವುದಿಲ್ಲ. ತಂದೆ- ತಾಯಿ ಅಂಗಡಿ ಇಟ್ಟಿದ್ದಾರೆ. ಅದರಿಂದ ನಮ್ಮ ಜೀವನ ನಡೆಯುತ್ತಿದೆ ಎಂದು ತಿಳಿಸಿದರು.

ಬಳ್ಳಾರಿ: ಒಡಹುಟ್ಟಿದ ಅಂಧ ಸಹೋದರರಿಬ್ಬರು ಮನೆಯಲ್ಲಿಯೇ ಶಾಸ್ತ್ರೀಯ ಸಂಗೀತ, ಭಾವಗೀತೆ, ಭಜನೆಗಳನ್ನು ಹಾಡುವ ಮೂಲಕ ಜನರಿಗೆ ಸಾಮಾಜಿಕ ಮಾಧ್ಯಮಗಳಾದ ಫೇಸ್​​ಬುಕ್​​, ವಾಟ್ಸಾಪ್, ಯೂಟ್ಯೂಬ್ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳ್ ಗ್ರಾಮದ ಹುಚ್ಚಯ್ಯ ಹಿರೇಮಠ ಮತ್ತು ವೀರೇಶ್ ಹಿರೇಮಠ ಇಬ್ಬರು ಅಂಧ ಸಹೋದರರು. ಇವರು ಶಾಸ್ತ್ರಿಯ ಸಂಗೀತ, ತಬಲ, ಹಾರ್ಮೋನಿಯಂ ಕಲಾವಿದರು.

ಕಣ್ಣು ಕಾಣದ ಸಹೋದರರಿಗಿದೆ ಕೋಗಿಲೆ ಕಂಠ

'ಈಟಿವಿ ಭಾರತ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ವಿರೇಶ್‌ ಹಿರೇಮಠ ಅವರು, ನಾವಿಬ್ಬರು ಗದುಗಿನ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಸಂಗೀತ, ತಬಲ ಮತ್ತು ಹಾರ್ಮೋನಿಯಂ ವಿದ್ಯಾಭ್ಯಾಸ ಮಾಡಿದ್ದೇವೆ. ಕೊರೊನಾ ವೈರಸ್​ನಿಂದಾಗಿ ಮನೆಯಲ್ಲಿಯೇ ಇದ್ದೇವೆ. ಕಳೆದ ಐದಾರು ತಿಂಗಳಿಂದ ಯಾವುದೇ ಪುರಾಣ, ಪ್ರವಚನ, ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮಗಳು ಇಲ್ಲದೆ ಮನೆಯಲ್ಲಿಯೇ ಕಾಲಕಳೆಯುವ ಪರಿಸ್ಥಿತಿ ಉಂಟಾಗಿದೆ ಎಂದರು.

ಕೊರೊನಾ ಸಮಯದಲ್ಲಿ ಯಾವುದೇ ಸಂಪಾದನೆ ಇಲ್ಲ, ಸರ್ಕಾರ ನೀಡುವ ಸಹಾಯಧನ ಸಾಕಾಗುವುದಿಲ್ಲ. ತಂದೆ- ತಾಯಿ ಅಂಗಡಿ ಇಟ್ಟಿದ್ದಾರೆ. ಅದರಿಂದ ನಮ್ಮ ಜೀವನ ನಡೆಯುತ್ತಿದೆ ಎಂದು ತಿಳಿಸಿದರು.

Last Updated : Aug 26, 2020, 6:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.