ಹೊಸಪೇಟೆ : ರಾಜಕೀಯದಲ್ಲಿ ನಾನು ಗೆಲ್ಲಿಸುತ್ತೇನೆ, ಸೋಲಿಸುತ್ತೇನೆ ಎಂದು ನಾಯಕರು ಹೇಳುವ ಮಾತು ಸುಳ್ಳು. ಮತದಾರರು ಸೋಲು, ಗೆಲುವಿನ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅನರ್ಹ ಶಾಸಕ ಆನಂದ ಸಿಂಗ್ ಟಾಂಗ್ ನೀಡಿದರು.
ಅಭಿಮಾನಿಗಳು ಮತ್ತು ಕಾರ್ಯಕರ್ತರ ಉಭಯ ಸದನಗಳ ಕಾರ್ಯಕ್ರಮ ಆಯೋಜನೆಯಲ್ಲಿ ಆನಂದ್ ಸಿಂಗ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ 17 ಜನ ಶಾಸಕರನ್ನು ಸೋಲಿಸುವುದೇ ನನ್ನ ಗುರಿ ಎಂಬ ಹೇಳಿಕೆಗೆ ತಿರುಗೇಟು ನೀಡಿದರು. 'ಮತದಾರಿಗೆ ಯಾರನ್ನು ಗೆಲ್ಲಿಸಬೇಕು, ಯಾರನ್ನು ಬಿಡಬೇಕು ಎಂಬುದು ಗೊತ್ತಿದೆ'. ಅವರ ತೀರ್ಮಾನವೇ ಅಂತಿಮ ಎಂದರು.
ನಾಯಕರು ಕ್ಷೇತ್ರದಲ್ಲಿ ಬಂದು ನಾನು ಗೆಲ್ಲಿಸುತ್ತೇನೆ. ಸೋಲಿಸುತ್ತೇನೆ ಎನ್ನುವುದು ಸರಿಯಲ್ಲ. ಮತದಾರರೇ ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.