ETV Bharat / state

ಕೆರೆಯಲ್ಲಿ ಮಗುಚಿದ ಹರಗೋಲು.. ನೀರಲ್ಲಿ ಮುಳುಗಿ ಸಿರುಗುಪ್ಪದ ಮೂವರು ಯುವಕರು ಸಾವು - 3 people died by drown in lake at ballary

ಮೀನು ಸಾಕಾಣಿಕೆ ಕೆರೆಯಲ್ಲಿ ಮೂವರು ಯುವಕರು ಮುಳುಗಿ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಸಂಭವಿಸಿದೆ.

3-people-died-by-drown-in-lake-at-ballary
ಕೆರೆಯಲ್ಲಿ ಮುಳುಗಿ ಮೂವರು ಯುವಕರ ಸಾವು
author img

By

Published : May 2, 2021, 9:42 PM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆ.ಸೂಗೂರು ಗ್ರಾಮ ಸಮೀಪದ ಬೆಂಚಿ ಕ್ಯಾಂಪಿನ ಮೀನು ಸಾಕಾಣಿಕೆ ಕೆರೆಯಲ್ಲಿ ಮೂವರು ಯುವಕರು ಮುಳುಗಿ ಮೃತಪಟ್ಟಿರುವ ಘಟನೆ ಇಂದು‌ ಸಂಜೆ ನಡೆದಿದೆ.

ಸಿರುಗುಪ್ಪ ತಾಲೂಕಿನ ಟಿ.ರಾಂಪುರ ಗ್ರಾಮದ ಆರ್.ಜೆ ರಾಜಗೌಡ (40), ಕೆ.ಸೂಗೂರು ಗ್ರಾಮದ ಯೋಗೇಶ್​ಗೌಡ (32), ಸಿರುಗುಪ್ಪ ನಗರದ ನಿವಾಸಿ ಸುರೇಶ (30) ಮೃತರು.

ಇಂದು ಮಧ್ಯಾಹ್ನದ ವೇಳೆ ಐವರು ಯುವಕರ ತಂಡ ಈ ಕೆರೆಯ ಬಳಿ ಊಟಕ್ಕೆಂದು ತೆರಳಿದ್ದು, ನಂತರ ಸಂಜೆ ನಾಲ್ಕರ ಸಮಯದಲ್ಲಿ ಕೆರೆಯಲ್ಲಿ ಮೀನಿಗೆ ಆಹಾರ ಹಾಕುವ ಹರಗೋಲು ಬುಟ್ಟಿಯಲ್ಲಿ ನಾಲ್ವರು ತೆರಳಿದ್ದಾರೆ. ಆಗ ಇದ್ದಕ್ಕಿದ್ದಂತೆ ಬುಟ್ಟಿ ಮಗುಚಿ ಬಿದ್ದಿದ್ದರಿಂದ ಅದರಲ್ಲಿದ್ದ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಈ ಪೈಕಿ ಬಸವ ಎಂಬ ಯುವಕ ಈಜಿ ಪಾರಾಗಿದ್ದಾನೆ. ಮತ್ತೊಬ್ಬ ಯುವಕ ಮೂಕಯ್ಯಸ್ವಾಮಿ ಕೆರೆಗೆ ಇಳಿಯದೆ ಘಟನೆಯನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾನೆ.
ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಯುವಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ತಡರಾತ್ರಿ 8 ಗಂಟೆವರೆಗೂ ಸಹ ಮೃತದೇಹಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ತಹಶೀಲ್ದಾರ್​ ಎಸ್.ಬಿ. ಕೂಡಲಗಿ, ಸಿಪಿಐ ಟಿ.ಆರ್.ಪವಾರ್, ಪಿಎಸ್‍ಐ ಕೆ.ರಂಗಯ್ಯ ಹಾಗೂ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.

ಓದಿ: ಸಿಎಂ ಸತತ ಸಭೆ ಸಫಲ : ಭುವನೇಶ್ವರದಿಂದ ರಾಜ್ಯಕ್ಕೆ 30 ಮೆಟ್ರಿಕ್ ಟನ್ ಆಮ್ಲಜನಕ

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆ.ಸೂಗೂರು ಗ್ರಾಮ ಸಮೀಪದ ಬೆಂಚಿ ಕ್ಯಾಂಪಿನ ಮೀನು ಸಾಕಾಣಿಕೆ ಕೆರೆಯಲ್ಲಿ ಮೂವರು ಯುವಕರು ಮುಳುಗಿ ಮೃತಪಟ್ಟಿರುವ ಘಟನೆ ಇಂದು‌ ಸಂಜೆ ನಡೆದಿದೆ.

ಸಿರುಗುಪ್ಪ ತಾಲೂಕಿನ ಟಿ.ರಾಂಪುರ ಗ್ರಾಮದ ಆರ್.ಜೆ ರಾಜಗೌಡ (40), ಕೆ.ಸೂಗೂರು ಗ್ರಾಮದ ಯೋಗೇಶ್​ಗೌಡ (32), ಸಿರುಗುಪ್ಪ ನಗರದ ನಿವಾಸಿ ಸುರೇಶ (30) ಮೃತರು.

ಇಂದು ಮಧ್ಯಾಹ್ನದ ವೇಳೆ ಐವರು ಯುವಕರ ತಂಡ ಈ ಕೆರೆಯ ಬಳಿ ಊಟಕ್ಕೆಂದು ತೆರಳಿದ್ದು, ನಂತರ ಸಂಜೆ ನಾಲ್ಕರ ಸಮಯದಲ್ಲಿ ಕೆರೆಯಲ್ಲಿ ಮೀನಿಗೆ ಆಹಾರ ಹಾಕುವ ಹರಗೋಲು ಬುಟ್ಟಿಯಲ್ಲಿ ನಾಲ್ವರು ತೆರಳಿದ್ದಾರೆ. ಆಗ ಇದ್ದಕ್ಕಿದ್ದಂತೆ ಬುಟ್ಟಿ ಮಗುಚಿ ಬಿದ್ದಿದ್ದರಿಂದ ಅದರಲ್ಲಿದ್ದ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಈ ಪೈಕಿ ಬಸವ ಎಂಬ ಯುವಕ ಈಜಿ ಪಾರಾಗಿದ್ದಾನೆ. ಮತ್ತೊಬ್ಬ ಯುವಕ ಮೂಕಯ್ಯಸ್ವಾಮಿ ಕೆರೆಗೆ ಇಳಿಯದೆ ಘಟನೆಯನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾನೆ.
ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಂದು ಯುವಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ತಡರಾತ್ರಿ 8 ಗಂಟೆವರೆಗೂ ಸಹ ಮೃತದೇಹಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ತಹಶೀಲ್ದಾರ್​ ಎಸ್.ಬಿ. ಕೂಡಲಗಿ, ಸಿಪಿಐ ಟಿ.ಆರ್.ಪವಾರ್, ಪಿಎಸ್‍ಐ ಕೆ.ರಂಗಯ್ಯ ಹಾಗೂ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.

ಓದಿ: ಸಿಎಂ ಸತತ ಸಭೆ ಸಫಲ : ಭುವನೇಶ್ವರದಿಂದ ರಾಜ್ಯಕ್ಕೆ 30 ಮೆಟ್ರಿಕ್ ಟನ್ ಆಮ್ಲಜನಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.