ETV Bharat / state

ಅಥಣಿಯಲ್ಲಿ ಲಾಕ್​​ಡೌನ್ ತೆರವುಗೊಳಿಸಲು ಕಾರ್ಮಿಕರ ಒತ್ತಾಯ - lock down in Athani

ತಾಲೂಕಿನಲ್ಲಿ ಕೊರೊನಾ ವೈರಸ್ ಅಬ್ಬರಕ್ಕೆ ಕಳೆದ ಹದಿನೈದು ದಿನಗಳಿಂದ ಪಟ್ಟನದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಪರಿಣಾಮ, ದುಡಿಯುವ ಕೈಗಳಿಗೆ ಕೆಲಸ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಲಾಕ್ ಡೌನ್ ತೆರವು ಮಾಡಿ ಎಂದು ಕೆಲವರು ಆಗ್ರಹಿಸಿದ್ದಾರೆ.

Workers demand clearance of lock down in Athani
ಅಥಣಿಯಲ್ಲಿ ಲಾಕ್​​ಡೌನ್ ತೆರವುಗೊಳಿಸಲು ಕಾರ್ಮಿಕರ ಒತ್ತಾಯ
author img

By

Published : Jul 21, 2020, 4:53 PM IST

ಅಥಣಿ (ಬೆಳಗಾವಿ): ತಾಲೂಕಿನಲ್ಲಿ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಕಳೆದ ಹದಿನೈದು ದಿನಗಳಿಂದ ಪಟ್ಟಣವನ್ನು ಲಾಕ್​​ಡೌನ್ ಮಾಡಲಾಗಿದೆ. ಹೀಗಾಗಿ, ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟು ಬೇಗ ಲಾಕ್​​ಡೌನ್ ತೆರವು ಮಾಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಥಣಿ ತಾಲೂಕಿನಲ್ಲಿ ಕೊರೊನಾ ವೇಗ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಳೆದ 15 ರಿಂದ ಜೂಲೈ 22ರವರೆಗೆ ಒಂದು ವಾರಗಳ ಮಟ್ಟಿಗೆ ಸರ್ಕಾರಿ ಮಟ್ಟದ ಲಾಕ್​​ಡೌನ್ ಜಾರಿ ಮಾಡಲಾಗಿದೆ. ಹಾಗೂ ಸ್ವಯಂ ಘೋಷಿತವಾಗಿ ಅಥಣಿ ಪಟ್ಟಣ ಕಳೆದ 10ರಿಂದ ಸಂಪೂರ್ಣ ಸ್ಥಬ್ದವಾಗಿದೆ. ಇದರಿಂದ ಕೆಲವು ಕಾರ್ಮಿಕರು ಕೈ ಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೀವನ ನಡೆಸುವುದು ಕಷ್ಟ ಆಗಿದೆ ಅಂತಾರೆ ಸ್ಥಳೀಯ ಇರ್ಫಾನ್ ಭಾಗವಾನ್.

ಅಥಣಿಯಲ್ಲಿ ಲಾಕ್​​ಡೌನ್ ತೆರವುಗೊಳಿಸಲು ಕಾರ್ಮಿಕರ ಒತ್ತಾಯ

ತಾಲೂಕಿನಲ್ಲಿ 200 ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 12 ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಹಬ್ಬಿದ್ದರಿಂದ ಜಿಲ್ಲಾಡಳಿತ ಯಾವ ರೀತಿ ಹತೋಟಿಗೆ ತರುತ್ತದೆ ಎಂಬುದು ಕಾದು ನೋಡಬೇಕಿದೆ.

ಅಥಣಿ (ಬೆಳಗಾವಿ): ತಾಲೂಕಿನಲ್ಲಿ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಕಳೆದ ಹದಿನೈದು ದಿನಗಳಿಂದ ಪಟ್ಟಣವನ್ನು ಲಾಕ್​​ಡೌನ್ ಮಾಡಲಾಗಿದೆ. ಹೀಗಾಗಿ, ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟು ಬೇಗ ಲಾಕ್​​ಡೌನ್ ತೆರವು ಮಾಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಥಣಿ ತಾಲೂಕಿನಲ್ಲಿ ಕೊರೊನಾ ವೇಗ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಳೆದ 15 ರಿಂದ ಜೂಲೈ 22ರವರೆಗೆ ಒಂದು ವಾರಗಳ ಮಟ್ಟಿಗೆ ಸರ್ಕಾರಿ ಮಟ್ಟದ ಲಾಕ್​​ಡೌನ್ ಜಾರಿ ಮಾಡಲಾಗಿದೆ. ಹಾಗೂ ಸ್ವಯಂ ಘೋಷಿತವಾಗಿ ಅಥಣಿ ಪಟ್ಟಣ ಕಳೆದ 10ರಿಂದ ಸಂಪೂರ್ಣ ಸ್ಥಬ್ದವಾಗಿದೆ. ಇದರಿಂದ ಕೆಲವು ಕಾರ್ಮಿಕರು ಕೈ ಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೀವನ ನಡೆಸುವುದು ಕಷ್ಟ ಆಗಿದೆ ಅಂತಾರೆ ಸ್ಥಳೀಯ ಇರ್ಫಾನ್ ಭಾಗವಾನ್.

ಅಥಣಿಯಲ್ಲಿ ಲಾಕ್​​ಡೌನ್ ತೆರವುಗೊಳಿಸಲು ಕಾರ್ಮಿಕರ ಒತ್ತಾಯ

ತಾಲೂಕಿನಲ್ಲಿ 200 ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 12 ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಹಬ್ಬಿದ್ದರಿಂದ ಜಿಲ್ಲಾಡಳಿತ ಯಾವ ರೀತಿ ಹತೋಟಿಗೆ ತರುತ್ತದೆ ಎಂಬುದು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.