ETV Bharat / state

ಬೆಳಗಾವಿ: ಸೆಲ್ಫಿ ಕ್ಲಿಕ್ಕಿಸುವಾಗ ಕಲ್ಲು ಕ್ವಾರಿಗೆ ಬಿದ್ದ ಸ್ನೇಹಿತರಿಬ್ಬರು ಜಲಸಮಾಧಿ.. ಓರ್ವ ಪಾರು

author img

By

Published : Oct 18, 2021, 9:10 AM IST

Updated : Oct 18, 2021, 9:31 AM IST

ಮಳೆಯಿಂದ ಕೆರೆಯಂತಾಗಿದ್ದ ಕಲ್ಲು ಕ್ವಾರಿಯಲ್ಲಿ ಫೋಟೋಶೂಟ್​​ಗೆಂದು ತೆರಳಿದ್ದ ಮೂವರು ಸ್ನೇಹಿತರ ಪೈಕಿ ಇಬ್ಬರು ಜಲಸಮಾಧಿಯಾಗಿದ್ದಾರೆ. ಎನ್​ಡಿಆರ್​ಎಫ್​ ತಂಡ ಮೇತದೇಹ ಹೊರತೆಗೆದಿದ್ದು, ಗ್ರಾಮೀಣ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

two-friends-drowned-in-open-quarry-one-escaped
ಸೆಲ್ಫಿ ತೆಗೆಯಲು ಕಲ್ಲು ಕ್ವಾರಿಗೆ ತೆರಳಿದ್ದ ಸ್ನೇಹಿತರಿಬ್ಬರು ಜಲಸಮಾಧಿ..ಓರ್ವ ಪಾರು

ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಬೆಳಗಾವಿ ತಾಲೂಕಿನ ರಾಜಹಂಸಘಡ ಬಳಿಯ ಕ್ವಾರಿಯಲ್ಲಿ ನಡೆದಿದೆ.

ಬೆಳಗಾವಿಯ ಸರ್ವೋದಯ ಕಾಲೊನಿಯ ಗಣೇಶ ಕಾಂಬಳೆ (17), ಆನಂದವಾಡಿಯ ತೇಜಸ್ ಯಲಕಪಾಟಿ (19) ಮೃತರು. ಘಟನೆಯಲ್ಲಿ ಓರ್ವ ಬಚಾವ್​ ಆಗಿದ್ದಾನೆ.

two-friends-drowned-in-open-quarry
ಸ್ನೇಹಿತರಿಬ್ಬರು ಜಲಸಮಾಧಿ

ಭಾನುವಾರ ಮಧ್ಯಾಹ್ನ ಫೋಟೋಶೂಟ್​​ಗೆಂದು ಯುವಕರು ಕ್ವಾರಿಗೆ ಇಳಿದಿದ್ದಾರೆ. ಮಳೆಯಿಂದ ಕಲ್ಲು ಕ್ವಾರಿ ಕೆರೆಯಂತಾಗಿತ್ತು. ಸೆಲ್ಫಿ ತೆಗೆದುಕೊಳ್ಳುವ ವೇಳೆ ಯುವಕರು ಜಾರಿ ಕ್ವಾರಿಯಲ್ಲಿ ಬಿದ್ದಿದ್ದಾರೆ. ನೀರಿಗೆ ಬಿದ್ದ ಇಬ್ಬರ ರಕ್ಷಣೆಗೆ ಮತ್ತೋರ್ವ ಸ್ನೇಹಿತ ಮುಂದಾದರೂ ಆತನ ಪ್ರಯತ್ನ ವಿಫಲವಾಗಿದೆ.

ತಕ್ಷಣ ಯುವಕ ಘಟನೆ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ಜೊತೆಗೆ ಸ್ಥಳಕ್ಕೆ ಎನ್​ಡಿಆರ್​ಎಫ್ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿ ತಡರಾತ್ರಿ ಇಬ್ಬರ ಮೃತದೇಹ ಹೊರತೆಗೆದಿದ್ದಾರೆ.

ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೈಕ್​ಗೆ ಲಾರಿ ಡಿಕ್ಕಿ : ತಂದೆ-ಮಗ ಸ್ಥಳದಲ್ಲೇ ಸಾವು

ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಬೆಳಗಾವಿ ತಾಲೂಕಿನ ರಾಜಹಂಸಘಡ ಬಳಿಯ ಕ್ವಾರಿಯಲ್ಲಿ ನಡೆದಿದೆ.

ಬೆಳಗಾವಿಯ ಸರ್ವೋದಯ ಕಾಲೊನಿಯ ಗಣೇಶ ಕಾಂಬಳೆ (17), ಆನಂದವಾಡಿಯ ತೇಜಸ್ ಯಲಕಪಾಟಿ (19) ಮೃತರು. ಘಟನೆಯಲ್ಲಿ ಓರ್ವ ಬಚಾವ್​ ಆಗಿದ್ದಾನೆ.

two-friends-drowned-in-open-quarry
ಸ್ನೇಹಿತರಿಬ್ಬರು ಜಲಸಮಾಧಿ

ಭಾನುವಾರ ಮಧ್ಯಾಹ್ನ ಫೋಟೋಶೂಟ್​​ಗೆಂದು ಯುವಕರು ಕ್ವಾರಿಗೆ ಇಳಿದಿದ್ದಾರೆ. ಮಳೆಯಿಂದ ಕಲ್ಲು ಕ್ವಾರಿ ಕೆರೆಯಂತಾಗಿತ್ತು. ಸೆಲ್ಫಿ ತೆಗೆದುಕೊಳ್ಳುವ ವೇಳೆ ಯುವಕರು ಜಾರಿ ಕ್ವಾರಿಯಲ್ಲಿ ಬಿದ್ದಿದ್ದಾರೆ. ನೀರಿಗೆ ಬಿದ್ದ ಇಬ್ಬರ ರಕ್ಷಣೆಗೆ ಮತ್ತೋರ್ವ ಸ್ನೇಹಿತ ಮುಂದಾದರೂ ಆತನ ಪ್ರಯತ್ನ ವಿಫಲವಾಗಿದೆ.

ತಕ್ಷಣ ಯುವಕ ಘಟನೆ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ಜೊತೆಗೆ ಸ್ಥಳಕ್ಕೆ ಎನ್​ಡಿಆರ್​ಎಫ್ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿ ತಡರಾತ್ರಿ ಇಬ್ಬರ ಮೃತದೇಹ ಹೊರತೆಗೆದಿದ್ದಾರೆ.

ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೈಕ್​ಗೆ ಲಾರಿ ಡಿಕ್ಕಿ : ತಂದೆ-ಮಗ ಸ್ಥಳದಲ್ಲೇ ಸಾವು

Last Updated : Oct 18, 2021, 9:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.