ETV Bharat / state

ಕೊಳೆತು ನಾರುತ್ತಿದೆ ಬೆಳೆದ ಬೆಳೆ.. ಯಾರ್‌ಗೆ ಹೇಳೋದ್‌ರೀ ನಮ್‌ ಕಷ್ಟ.. ಇಂತಹ ಸ್ಥಿತಿ ಅದ್ಯಾರಿಗೂ ಬರಬಾರ್ದುರೀ..

author img

By

Published : Aug 31, 2019, 8:27 PM IST

ಕೃಷ್ಣೆಯ ಅಬ್ಬರಕ್ಕೆ ಬೆಳಗಾವಿ ಜಿಲ್ಲೆ ಅಕ್ಷರಶಃ ನಲುಗಿ ಹೋಗಿದ್ದು ಜನರ ಸ್ಥಿತಿ ಅತಂತ್ರವಾಗಿದೆ. ರೈತರು ಬೆಳೆದ ಬೆಳೆ ಪೂರ್ತಿ ನೆಲಕಚ್ಚಿ ಹೋಗಿದೆ. ಇಲ್ಲಿ ಬೆಳೆದ ಕಬ್ಬಿನ ಬೆಳೆ ನೀರಿನ ಪ್ರವಾಹಕ್ಕೆ ಮುಳುಗಡೆಯಾಗಿದ್ದರಿಂದ ಕೊಳೆತು ನಾರುತ್ತಿದೆ.

ಕಬ್ಬಿನ ಬೆಳೆ

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ ಹಾಗೂ ರಾಯಬಾಗ ತಾಲೂಕಿನಲ್ಲಿ ಬೆಳೆದು ನಿಂತಿದ್ದ ಕಬ್ಬನ್ನು ಈ ಬಾರಿ ಕೃಷ್ಣಾ ನದಿ ಪ್ರವಾಹ ಮುಳುಗಿಸಿಬಿಟ್ಟಿದೆ. ಅಲ್ಲಿನ ಪರಿಸರದಲ್ಲಿ ಆಳೆತ್ತರಕ್ಕೆ ಬೆಳೆದಿದ್ದ ಕಬ್ಬು ಹಲವು ದಿನಗಳವರೆಗೆ ಮುಳುಗಡೆ ಆಗಿದ್ದರಿಂದಾಗಿ ಕೊಳೆತು ನಾರುತ್ತಿದೆ.

ಸಾವಿರಾರು ಎಕರೆ ಕಬ್ಬು ಪ್ರವಾಹದಿಂದ ಹಾಳಾಗಿದ್ದು, ಒಂದು ಎಕರೆಗೆ ಸರಾಸರಿ 40 ಟನ್ ಕಬ್ಬಿನ ಇಳುವರಿ ನಿರೀಕ್ಷಿಸಲಾಗಿತ್ತು. ಪ್ರವಾಹವು ಈ ಭಾಗದ ಸಾವಿರಾರು ರೈತರ ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಅವರನ್ನು ಸಂಕಷ್ಟಕ್ಕೆ ದೂಡಿದೆ.

ಮಳೆಗೆ ಹಾಳಾಗಿರುವ ಕಬ್ಬಿನ ಬೆಳೆ..

ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ, ಇಂಗಳಿ ಬಳಿ ನೂರಾರು ಎಕರೆ ಕಬ್ಬು ಕೊಳೆತು ದುರ್ವಾಸನೆ ಬೀರುತ್ತಿದೆ. ಕೆಲವೆಡೆ ಮಣ್ಣು ಲೇಪಿಸಿದಂತೆ, ಕೆಲವೆಡೆ ಒಣಗಿದಂತೆ ಕಾಣುವ ಬೆಳೆ ಮುಂದೆ ಬೆಳೆಯಲಾಗದ ಅಥವಾ ಕತ್ತರಿಸಿ ಕಾರ್ಖಾನೆಗಳಿಗೆ ಸಾಗಿಸಲಾಗದ ಸ್ಥಿತಿಯಲ್ಲಿದೆ.

ಈ ಒಣಗಿದ ಕಬ್ಬು ಯಾವುದಕ್ಕೂ ಪ್ರಯೋಜನಕ್ಕೆ ಬರೋದಿಲ್ಲ. ಈ ಒಣಗಿದ ಕಬ್ಬನ್ನು ಕಟಾವು ಮಾಡಿ ಮತ್ತೆ ಗದ್ದೆಯಿಂದ ಹೊರಗೆ ತೆಗೆದು ಮತ್ತೆ ನೆಲ ಹದ ಮಾಡಿ ಬಿತ್ತನೆಗೆ ಮುಂದಾಗ ಬೇಕಾದರೆ ರೈತರ ಹತ್ತಿರ ಹಣ ಕೂಡ ಇಲ್ಲ. ಬೆಳೆ ವಿಮೆ ಬರುವ ನೀರಿಕ್ಷೆಯಲ್ಲಿದ್ದಾರೆ ಸಂತ್ರಸ್ತ ರೈತರು. ಆದರೆ, ಪರಿಹಾರದ ಹಣ ಮಾತ್ರ ಅದ್ಯಾವಾಗ ಸಿಕ್ಕುತ್ತೋ ಏನೋ.. ಈಗ ಹೊಲಗಳಲ್ಲಿ ಹೊಸ ಕೆಲಸ ಮಾಡಬೇಕೆಂದರೆ ಕೈಯಲ್ಲಿ ದುಡ್ಡಿಲ್ಲ. ಇದರಿಂದ ಆತಂಕಕ್ಕೊಳಗಾದ ರೈತರಿಗೆ ಮುಂದೆ ಜಮೀನುಗಳಲ್ಲಿ ಏನು‌ ಮಾಡಬೇಕು ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.

ಇನ್ನು, ಕೆಲವು ಕಬ್ಬಿನ ಗದ್ದೆಗಳಲ್ಲಿ ಪ್ರವಾಹ ಇಳಿದರೂ ಸಹಿತ ನೀರು ಹಾಗೆ ಉಳಿದಿದೆ. ನೀರು ಒಂದೇ ಸ್ಥಳದಲ್ಲಿ ನಿಂತು ಹಸಿರು ಬಣ್ಣಕ್ಕೆ ತಿರಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಮೊದಲು ಗ್ರಾಮ ಪಂಚಾಯತ್‌ನವರು ಕೀಟ ನಾಶಕ ಸಿಂಪಡಿಸಬೇಕಿದೆ. ಆದರೆ, ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗರೂಕತೆ ಕೈಗೊಳ್ಳದೇ ಅದೇ ಹೆಸರಿನಲ್ಲಿ ಬಿಲ್ ತೆಗೆಯಲಾಗುತ್ತಿದೆ ಎಂಬ ಆರೋಪವನ್ನೂ ಸ್ಥಳೀಯ ನಿರಾಶ್ರಿತರು ಮಾಡುತ್ತಿದ್ದಾರೆ.

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ ಹಾಗೂ ರಾಯಬಾಗ ತಾಲೂಕಿನಲ್ಲಿ ಬೆಳೆದು ನಿಂತಿದ್ದ ಕಬ್ಬನ್ನು ಈ ಬಾರಿ ಕೃಷ್ಣಾ ನದಿ ಪ್ರವಾಹ ಮುಳುಗಿಸಿಬಿಟ್ಟಿದೆ. ಅಲ್ಲಿನ ಪರಿಸರದಲ್ಲಿ ಆಳೆತ್ತರಕ್ಕೆ ಬೆಳೆದಿದ್ದ ಕಬ್ಬು ಹಲವು ದಿನಗಳವರೆಗೆ ಮುಳುಗಡೆ ಆಗಿದ್ದರಿಂದಾಗಿ ಕೊಳೆತು ನಾರುತ್ತಿದೆ.

ಸಾವಿರಾರು ಎಕರೆ ಕಬ್ಬು ಪ್ರವಾಹದಿಂದ ಹಾಳಾಗಿದ್ದು, ಒಂದು ಎಕರೆಗೆ ಸರಾಸರಿ 40 ಟನ್ ಕಬ್ಬಿನ ಇಳುವರಿ ನಿರೀಕ್ಷಿಸಲಾಗಿತ್ತು. ಪ್ರವಾಹವು ಈ ಭಾಗದ ಸಾವಿರಾರು ರೈತರ ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಅವರನ್ನು ಸಂಕಷ್ಟಕ್ಕೆ ದೂಡಿದೆ.

ಮಳೆಗೆ ಹಾಳಾಗಿರುವ ಕಬ್ಬಿನ ಬೆಳೆ..

ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ, ಇಂಗಳಿ ಬಳಿ ನೂರಾರು ಎಕರೆ ಕಬ್ಬು ಕೊಳೆತು ದುರ್ವಾಸನೆ ಬೀರುತ್ತಿದೆ. ಕೆಲವೆಡೆ ಮಣ್ಣು ಲೇಪಿಸಿದಂತೆ, ಕೆಲವೆಡೆ ಒಣಗಿದಂತೆ ಕಾಣುವ ಬೆಳೆ ಮುಂದೆ ಬೆಳೆಯಲಾಗದ ಅಥವಾ ಕತ್ತರಿಸಿ ಕಾರ್ಖಾನೆಗಳಿಗೆ ಸಾಗಿಸಲಾಗದ ಸ್ಥಿತಿಯಲ್ಲಿದೆ.

ಈ ಒಣಗಿದ ಕಬ್ಬು ಯಾವುದಕ್ಕೂ ಪ್ರಯೋಜನಕ್ಕೆ ಬರೋದಿಲ್ಲ. ಈ ಒಣಗಿದ ಕಬ್ಬನ್ನು ಕಟಾವು ಮಾಡಿ ಮತ್ತೆ ಗದ್ದೆಯಿಂದ ಹೊರಗೆ ತೆಗೆದು ಮತ್ತೆ ನೆಲ ಹದ ಮಾಡಿ ಬಿತ್ತನೆಗೆ ಮುಂದಾಗ ಬೇಕಾದರೆ ರೈತರ ಹತ್ತಿರ ಹಣ ಕೂಡ ಇಲ್ಲ. ಬೆಳೆ ವಿಮೆ ಬರುವ ನೀರಿಕ್ಷೆಯಲ್ಲಿದ್ದಾರೆ ಸಂತ್ರಸ್ತ ರೈತರು. ಆದರೆ, ಪರಿಹಾರದ ಹಣ ಮಾತ್ರ ಅದ್ಯಾವಾಗ ಸಿಕ್ಕುತ್ತೋ ಏನೋ.. ಈಗ ಹೊಲಗಳಲ್ಲಿ ಹೊಸ ಕೆಲಸ ಮಾಡಬೇಕೆಂದರೆ ಕೈಯಲ್ಲಿ ದುಡ್ಡಿಲ್ಲ. ಇದರಿಂದ ಆತಂಕಕ್ಕೊಳಗಾದ ರೈತರಿಗೆ ಮುಂದೆ ಜಮೀನುಗಳಲ್ಲಿ ಏನು‌ ಮಾಡಬೇಕು ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.

ಇನ್ನು, ಕೆಲವು ಕಬ್ಬಿನ ಗದ್ದೆಗಳಲ್ಲಿ ಪ್ರವಾಹ ಇಳಿದರೂ ಸಹಿತ ನೀರು ಹಾಗೆ ಉಳಿದಿದೆ. ನೀರು ಒಂದೇ ಸ್ಥಳದಲ್ಲಿ ನಿಂತು ಹಸಿರು ಬಣ್ಣಕ್ಕೆ ತಿರಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಮೊದಲು ಗ್ರಾಮ ಪಂಚಾಯತ್‌ನವರು ಕೀಟ ನಾಶಕ ಸಿಂಪಡಿಸಬೇಕಿದೆ. ಆದರೆ, ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗರೂಕತೆ ಕೈಗೊಳ್ಳದೇ ಅದೇ ಹೆಸರಿನಲ್ಲಿ ಬಿಲ್ ತೆಗೆಯಲಾಗುತ್ತಿದೆ ಎಂಬ ಆರೋಪವನ್ನೂ ಸ್ಥಳೀಯ ನಿರಾಶ್ರಿತರು ಮಾಡುತ್ತಿದ್ದಾರೆ.

Intro:ಬೆಳೆದ ಕಬ್ಬು ಈಗ ಒಣಗಿ ನಿಂತಿದೆ ಇದರಿಂದ ಬೆಸತ್ತ ರೈತರು
Body:
ಚಿಕ್ಕೋಡಿ :
ಸ್ಟೋರಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ ಹಾಗೂ ರಾಯಬಾಗ ತಾಲ್ಲೂಕಿನಲ್ಲಿ ಬೆಳೆದ ನಿಂತಿದ್ದ ಕಬ್ಬನ್ನು ಈ ಬಾರಿ ಕೃಷ್ಣಾ ನದಿ ಪ್ರವಾಹ ಬಲಿ ಪಡೆದಿದೆ. ಅಲ್ಲಿನ ಪರಿಸರದಲ್ಲಿ ಆಳೆತ್ತರಕ್ಕೆ ಬೆಳೆದಿದ್ದ ಕಬ್ಬು ಹಲವು ದಿನಗಳವರೆಗೆ ಮುಳುಗಡೆ ಆಗಿದ್ದರಿಂದಾಗಿ ಕೊಳೆತು ನಾರುತ್ತಿದೆ.

ಸಾವಿರಾರು ಎಕೆರೆ ಕಬ್ಬು ಪ್ರವಾಹದಿಂದ ಹಾಳಾಗಿದ್ದು ಒಂದು ಎಕರೆಗೆ ಸರಾಸರಿ 40 ಟನ್ ಕಬ್ಬಿನ ಇಳುವರಿ ನಿರೀಕ್ಷಿಸಲಾಗಿತ್ತು. ಪ್ರವಾಹವು ಈ ಭಾಗದ ಸಾವಿರಾರು ರೈತರ ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಅವರನ್ನು ಸಂಕಷ್ಟಕ್ಕೆ ದೂಡಿದೆ.  

ಚಿಕ್ಕೋಡಿ ತಾಲ್ಲೂಕಿನ ಮಾಂಜರಿ, ಅಂಕಲಿ, ಇಂಗಳಿ ಬಳಿ ನೂರಾರು ಎಕರೆ ಕಬ್ಬು ಕೊಳೆತು ದುರ್ವಾಸನೆ ಬೀರುತ್ತಿದೆ. ಕೆಲವೆಡೆ ಮಣ್ಣು ಲೇಪಿಸಿದಂತೆ, ಕೆಲವೆಡೆ ಒಣಗಿದಂತೆ ಕಾಣುವ ಬೆಳೆ ಮುಂದೆ ಬೆಳೆಯಲಾಗದ ಅಥವಾ ಕತ್ತರಿಸಿ ಕಾರ್ಖಾನೆಗಳಿಗೆ ಸಾಗಿಸಲಾಗದ ಸ್ಥಿತಿಯಲ್ಲಿವೆ.

ಈ ಒಣಗಿದ ಕಬ್ಬು ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತಿದ್ದು ಈ ಕಬ್ಬು ಮತ್ತೆ ಖರ್ಚಿಗೆ ಮೂಲವಾಗಿದೆ. ಈ ಒಣಗಿದ ಕಬ್ಬನ್ನು ಕಟಾವು ಮಾಡಿ ಮತ್ತೆ ಗದ್ದೆಯಿಂದ ಹೊರಗೆ ತರಬೇಕು ಮತ್ತೆ ನೆಲ ಹದ ಮಾಡಿ ಬಿತ್ತನೆಗೆ ಮುಂದಾಗ ಬೇಕಾದರೆ, ರೈತರ ಹತ್ತಿರ ಹಣ ಇಲ್ಲ. ಬೆಳೆ ವಿಮೆ ಬರುವ ನೀರಿಕ್ಷೆಯಲ್ಲಿರುವ ರೈತರಿಗೆ ನೀರಿಕ್ಷೆಗಳು ಮಾತ್ರ ಕಾಣುತ್ತಿದ್ದು ಹಣ ಮಾತ್ರ ಕೈಗೆ ಬಂದು ಸಿಕ್ಕಿಲ್ಲ. ಈಗ ಹೊಲಗಳಲ್ಲಿ ಹೊಸ ಕೆಲಸ ಮಾಡಬೇಕೆಂದರೆ ಕೈಯಲ್ಲಿ ದುಡ್ಡಿಲ್ಲ ಇದರಿಂದ ನಿರಾಶ್ರಿತರು ಮುಂದೆ ಜಮೀನುಗಳಲ್ಲಿ ಏನು‌ ಮಾಡಬೇಕು ಎನ್ನುವುದು ಪ್ತಶ್ನೆಯಾಗಿ ಉಳದಿದೆ.

ಇನ್ನು ಕೆಲವು ಕಬ್ಬಿನ ಗದ್ದೆಗಳಲ್ಲಿ ಪ್ರವಾಹ ಇಳಿದರು ಸಹಿತ ಗದ್ದೆಗಳಲ್ಲಿ ನೀರು ಹಾಗೆ ಉಳದಿದ್ದು ನೀರು ಒಂದೆ ಸ್ಥಳದಲ್ಲಿ ನಿಂತು ಅವು ಹಸಿರು ಬಣ್ಣಕ್ಕೆ ತೀರಗುತ್ತೀವೆ ಇದರಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಮೊದಲು ಗ್ರಾಮ ಪಂಚಾಯತಿ ಅವರು ಪಾಂಗಿಗ ಮೂಲಕ ಕೀಟ ನಾಶಕ ಹೋಡೆಯಬೇಕಿದೆ. ಆದರೆ, ಅವುಗಳನ್ನು ಹೊಡೆಯಲಾಗಿದೆ ಎಂದು ಬುಕ್ಕನಲ್ಲಿ ತೋರಿಸಿ ಬಿಲ್ ತೆಗೆಯಲಾಗುತ್ತಿದೆ ಎಂದು ನಿರಾಶ್ರಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.