ETV Bharat / state

ಶಾಲೆಗೆ ಮೀಸಲಿಟ್ಟ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣ.. ಪುರಸಭೆ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

author img

By

Published : Dec 15, 2022, 11:23 AM IST

Updated : Dec 15, 2022, 1:10 PM IST

ಶಾಲೆಗೆ ಮೀಸಲಿಟ್ಟ ಸ್ಥಳದಲ್ಲಿ ಸಮುದಾಯ ಭವನ ಕಟ್ಟಲು ಅನುಮತಿ ನೀಡಿರುವ ಚಿಕ್ಕೋಡಿ ಪುರಸಭೆ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು, ಎಸ್​ಡಿಎಂಸಿ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

students protest
ಪುರಸಭೆ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ
ಪುರಸಭೆ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ಚಿಕ್ಕೋಡಿ(ಬೆಳಗಾವಿ): ಚಿಕ್ಕೋಡಿ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಶಾಲೆಗೆ ಮೀಸಲಿಟ್ಟ ಸ್ಥಳದಲ್ಲಿ ಸಮುದಾಯ ಭವನ ಕಟ್ಟುವುದಕ್ಕೆ ಆದೇಶ ನೀಡುತ್ತಿದ್ದಂತೆ ವಿದ್ಯಾರ್ಥಿಗಳು, ಎಸ್​ಡಿಎಂಸಿ ಸದಸ್ಯರು ಪುರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

students protest in front chikkodi municipality
ಸಮುದಾಯ ಭವನ ನಿರ್ಮಾಣದ ಕುರಿತಾದ ಆದೇಶ ಪ್ರತಿ

ಚಿಕ್ಕೋಡಿ ಪಟ್ಟಣದ ಓತಾರಿ ಗಲ್ಲಿಯಲ್ಲಿರುವ ವೆಂಕಟೇಶ್ವರ ಮಂದಿರ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಚಿಕ್ಕೋಡಿ ಪುರಸಭೆಯಿಂದ 4 ಗುಂಟೆ ಜಾಗವನ್ನು ಘಾಲೆ ಗಲ್ಲಿಯಲ್ಲಿ ಮೀಸಲು ಇಡಲಾಗಿದೆ. ಈಗ ಅದೇ ಜಾಗದಲ್ಲಿ ಶಾಲಾ ಕಟ್ಟಡಕ್ಕೆಂದು ಶಿಕ್ಷಣ ಇಲಾಖೆಯು 10 ಲಕ್ಷ ರೂಪಾಯಿ ಮಂಜೂರು ಮಾಡಿದೆ.

ಶಾಲೆಗೆ ಬರುವ ಬಹುತೇಕ ಮಕ್ಕಳು ಬಡ ಕುಟುಂಬದವರಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ಎರಡು ಕೊಠಡಿಗಳನ್ನು ಕಟ್ಟಲು ತುರ್ತಾಗಿ ಅನುಮೋದನೆ ನೀಡಿತ್ತು. ಇನ್ನೇನು ಕಟ್ಟಡದ ಕೆಲಸ ಪ್ರಾರಂಭ ಮಾಡಬೇಕೆನ್ನುವಷ್ಟರಲ್ಲಿ ಬೇರೊಂದು ಸಮುದಾಯದ ಜನ ಬಂದು, ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಈ ಜಾಗವನ್ನು ಪುರಸಭೆ ನಮ್ಮ ಸಮುದಾಯಕ್ಕೆ ಭವನ ನಿರ್ಮಿಸಲು ನೀಡಿದೆ, ಇದು ನಮ್ಮ ಜಾಗ ಎಂದು ತಮ್ಮ ಬೋರ್ಡ್ ಹಾಕಿದ್ದಾರೆ. ಇದರಿಂದ ದಿಕ್ಕು ತೋಚದ ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ಪುರಸಭೆ ವಿರುದ್ಧ ಪ್ರತಿಭಟನೆ ನಡೆಸಿದರು.

students protest in front chikkodi municipality
ಶಾಲಾ ಕಟ್ಟಡಕ್ಕೆ ಅನುದಾನ ಮಂಜೂರು

ಇದನ್ನೂ ಓದಿ: ನೀರಿಗಾಗಿ ಲೋಟ ತಟ್ಟೆ ಹಿಡಿದು ಪಂಚಾಯಿತಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ..

ಈ ಕುರಿತು ಪ್ರತಿಕ್ರಿಯೆ ನೀಡಿದ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ್ ಹಂಚಾಟೆ, ಪುರಸಭೆ ಅಧಿಕಾರಿಗಳು ನೀಡಿರುವ ಸ್ಥಳವನ್ನು ವಾಪಸ್ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 05-07-22 ರಂದು ಪತ್ರ ಮುಖೇನ ಕೋರಿರುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು 18-08-22ರಂದು ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದು, ಈಗಾಗಲೇ ಶಿಕ್ಷಣ ಇಲಾಖೆಯೆಯಿಂದ 2022-23 ನೇ ಸಾಲಿನಲ್ಲಿ "ವಿವೇಕ ಕ್ರಿಯಾ ಯೋಜನೆ" ಅಡಿಯಲ್ಲಿ 2 ಕೊಠಡಿಗಳು ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಮಾಡುವುದಾಗಿ ಪತ್ರ ನೀಡಿದ್ದರು. ಆದರೆ, ಪುರಸಭೆ ಅಧಿಕಾರಿಗಳು ಇನ್ನೊಂದು ಸಮುದಾಯ ಭವನ ಕಟ್ಟುವ ವಿಚಾರವನ್ನ ನಮ್ಮ ಗಮನಕ್ಕೆ ತರದೇ ಪರವಾನಿಗೆ ನೀಡಿರುತ್ತಾರೆ. ಈ ಕುರಿತು ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸಾಗರದ ತಹಶೀಲ್ದಾರ್ ಕಚೇರಿಯೆದುರು ವಸತಿ ಶಾಲೆಯ ವಿದ್ಯಾರ್ಥಿಗಳ ಪ್ರತಿಭಟನೆ

ಪುರಸಭೆ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ಚಿಕ್ಕೋಡಿ(ಬೆಳಗಾವಿ): ಚಿಕ್ಕೋಡಿ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಶಾಲೆಗೆ ಮೀಸಲಿಟ್ಟ ಸ್ಥಳದಲ್ಲಿ ಸಮುದಾಯ ಭವನ ಕಟ್ಟುವುದಕ್ಕೆ ಆದೇಶ ನೀಡುತ್ತಿದ್ದಂತೆ ವಿದ್ಯಾರ್ಥಿಗಳು, ಎಸ್​ಡಿಎಂಸಿ ಸದಸ್ಯರು ಪುರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

students protest in front chikkodi municipality
ಸಮುದಾಯ ಭವನ ನಿರ್ಮಾಣದ ಕುರಿತಾದ ಆದೇಶ ಪ್ರತಿ

ಚಿಕ್ಕೋಡಿ ಪಟ್ಟಣದ ಓತಾರಿ ಗಲ್ಲಿಯಲ್ಲಿರುವ ವೆಂಕಟೇಶ್ವರ ಮಂದಿರ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಚಿಕ್ಕೋಡಿ ಪುರಸಭೆಯಿಂದ 4 ಗುಂಟೆ ಜಾಗವನ್ನು ಘಾಲೆ ಗಲ್ಲಿಯಲ್ಲಿ ಮೀಸಲು ಇಡಲಾಗಿದೆ. ಈಗ ಅದೇ ಜಾಗದಲ್ಲಿ ಶಾಲಾ ಕಟ್ಟಡಕ್ಕೆಂದು ಶಿಕ್ಷಣ ಇಲಾಖೆಯು 10 ಲಕ್ಷ ರೂಪಾಯಿ ಮಂಜೂರು ಮಾಡಿದೆ.

ಶಾಲೆಗೆ ಬರುವ ಬಹುತೇಕ ಮಕ್ಕಳು ಬಡ ಕುಟುಂಬದವರಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ಎರಡು ಕೊಠಡಿಗಳನ್ನು ಕಟ್ಟಲು ತುರ್ತಾಗಿ ಅನುಮೋದನೆ ನೀಡಿತ್ತು. ಇನ್ನೇನು ಕಟ್ಟಡದ ಕೆಲಸ ಪ್ರಾರಂಭ ಮಾಡಬೇಕೆನ್ನುವಷ್ಟರಲ್ಲಿ ಬೇರೊಂದು ಸಮುದಾಯದ ಜನ ಬಂದು, ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಈ ಜಾಗವನ್ನು ಪುರಸಭೆ ನಮ್ಮ ಸಮುದಾಯಕ್ಕೆ ಭವನ ನಿರ್ಮಿಸಲು ನೀಡಿದೆ, ಇದು ನಮ್ಮ ಜಾಗ ಎಂದು ತಮ್ಮ ಬೋರ್ಡ್ ಹಾಕಿದ್ದಾರೆ. ಇದರಿಂದ ದಿಕ್ಕು ತೋಚದ ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ಪುರಸಭೆ ವಿರುದ್ಧ ಪ್ರತಿಭಟನೆ ನಡೆಸಿದರು.

students protest in front chikkodi municipality
ಶಾಲಾ ಕಟ್ಟಡಕ್ಕೆ ಅನುದಾನ ಮಂಜೂರು

ಇದನ್ನೂ ಓದಿ: ನೀರಿಗಾಗಿ ಲೋಟ ತಟ್ಟೆ ಹಿಡಿದು ಪಂಚಾಯಿತಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ..

ಈ ಕುರಿತು ಪ್ರತಿಕ್ರಿಯೆ ನೀಡಿದ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ್ ಹಂಚಾಟೆ, ಪುರಸಭೆ ಅಧಿಕಾರಿಗಳು ನೀಡಿರುವ ಸ್ಥಳವನ್ನು ವಾಪಸ್ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 05-07-22 ರಂದು ಪತ್ರ ಮುಖೇನ ಕೋರಿರುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು 18-08-22ರಂದು ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದು, ಈಗಾಗಲೇ ಶಿಕ್ಷಣ ಇಲಾಖೆಯೆಯಿಂದ 2022-23 ನೇ ಸಾಲಿನಲ್ಲಿ "ವಿವೇಕ ಕ್ರಿಯಾ ಯೋಜನೆ" ಅಡಿಯಲ್ಲಿ 2 ಕೊಠಡಿಗಳು ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಮಾಡುವುದಾಗಿ ಪತ್ರ ನೀಡಿದ್ದರು. ಆದರೆ, ಪುರಸಭೆ ಅಧಿಕಾರಿಗಳು ಇನ್ನೊಂದು ಸಮುದಾಯ ಭವನ ಕಟ್ಟುವ ವಿಚಾರವನ್ನ ನಮ್ಮ ಗಮನಕ್ಕೆ ತರದೇ ಪರವಾನಿಗೆ ನೀಡಿರುತ್ತಾರೆ. ಈ ಕುರಿತು ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸಾಗರದ ತಹಶೀಲ್ದಾರ್ ಕಚೇರಿಯೆದುರು ವಸತಿ ಶಾಲೆಯ ವಿದ್ಯಾರ್ಥಿಗಳ ಪ್ರತಿಭಟನೆ

Last Updated : Dec 15, 2022, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.