ETV Bharat / state

ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ಮುಂದಾದ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್​ - ಅನರ್ಹ ಶಾಸಕ ಶ್ರೀಮಂತ್ ಪಾಟೀಲ್

ಇಂದು ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆ ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಕಾಗವಾಡ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ​ಚಾಲನೆ ನೀಡಿದರು.

Srimantha patil
author img

By

Published : Nov 3, 2019, 9:05 PM IST

ಚಿಕ್ಕೋಡಿ: ಸುಮಾರು 70 ವರ್ಷಗಳಿಂದ ಕಾಗವಾಡ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಕಾಣದೆಯಿರುವುದರಿಂದ ಈ ಕ್ಷೇತ್ರದ ಅಭಿವೃದ್ಧಿಗೆ ನಾನು ನಿರ್ಣಯ ಕೈಗೊಂಡಿದ್ದೇನೆ ಎಂದು ಕಾಗವಾಡ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್​ ಹೇಳಿದರು.

ಕಾಗವಾಡ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್​

ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆ ಅಭಿವೃದ್ಧಿಗಾಗಿ 3.10 ಕೋಟಿ ರೂ. ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಗವಾಡ ವಿಧಾನಸಭಾ ಕ್ಷೇತ್ರ ಈವರೆಗೂ ಅಭಿವೃದ್ಧಿ ಕಂಡಿಲ್ಲ. ಇಲ್ಲಿಯ ರಸ್ತೆಗಳ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ 3 ತಿಂಗಳಿನಲ್ಲಿ 90 ಕೋಟಿ ವಿಶೇಷ ಅನುದಾನ ಪಡೆದುಕೊಂಡಿದ್ದೇನೆ ಎಂದರು.

ಬೆಳಗಾವಿಯಿಂದ ಅಥಣಿಗೆ ಸಂಪರ್ಕಿಸಲು ಕಾಗವಾಡ ಮುಖಾಂತರ ರಾಜ್ಯ ಹೆದ್ದಾರಿಯಿದ್ದರೂ ಸುಮಾರು 20 ಕಿ.ಮೀ ಅಂತರ ಕಡಿಮೆಯಾಗಲೆಂದು ಬೆಳಗಾವಿ-ಶಿರಗುಪ್ಪಿ ಮಾರ್ಗವಾಗಿ ಐನಾಪೂರ-ಅಥಣಿ ಸಂಪರ್ಕಿಸುವ ನಿಪ್ಪಾಣಿ-ಕೊಟ್ಟಲಗಿ ಮಾರ್ಗದ ಅಭಿವೃದ್ಧಿಗಾಗಿ 3 ಕೋಟಿ ರೂ. ಮಂಜೂರುಗೊಳಿಸಿದ್ದೇನೆ. ಈ ಕಾಮಗಾರಿಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.

ಕಾಗವಾಡ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಈವರೆಗಿನ ಶಾಸಕರು ತಲೆಕೆಡಿಸಿಕೊಂಡಿಲ್ಲ. 70 ವರ್ಷ ಗತಿಸಿದರು ಅಭಿವೃದ್ಧಿ ಕಂಡಿಲ್ಲ. ಉಳಿದ ಕೆಲಸಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದು ವಿಶೇಷ ಅನುದಾನ ತಂದಿದ್ದೇನೆ. ಪಿಡ್ಲ್ಯೂಡಿ ಕಡೆಯಿಂದ 25 ಕೋಟಿ, ರಾಜ್ಯ ಹೆದ್ದಾರಿ ಇಲಾಖೆಯಿಂದ 20 ಕೋಟಿ, 45 ಕೋಟಿ ಹೆಚ್ಚುವರಿಯಾಗಿ ಒಟ್ಟು 95 ಕೋಟಿ ವಿಶೇಷ ಅನುದಾನ ಮಂಜೂರುಗೊಳಿಸಿಕೊಂಡು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ ಎಂದರು.

ಚಿಕ್ಕೋಡಿ: ಸುಮಾರು 70 ವರ್ಷಗಳಿಂದ ಕಾಗವಾಡ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಕಾಣದೆಯಿರುವುದರಿಂದ ಈ ಕ್ಷೇತ್ರದ ಅಭಿವೃದ್ಧಿಗೆ ನಾನು ನಿರ್ಣಯ ಕೈಗೊಂಡಿದ್ದೇನೆ ಎಂದು ಕಾಗವಾಡ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್​ ಹೇಳಿದರು.

ಕಾಗವಾಡ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್​

ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆ ಅಭಿವೃದ್ಧಿಗಾಗಿ 3.10 ಕೋಟಿ ರೂ. ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಗವಾಡ ವಿಧಾನಸಭಾ ಕ್ಷೇತ್ರ ಈವರೆಗೂ ಅಭಿವೃದ್ಧಿ ಕಂಡಿಲ್ಲ. ಇಲ್ಲಿಯ ರಸ್ತೆಗಳ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ 3 ತಿಂಗಳಿನಲ್ಲಿ 90 ಕೋಟಿ ವಿಶೇಷ ಅನುದಾನ ಪಡೆದುಕೊಂಡಿದ್ದೇನೆ ಎಂದರು.

ಬೆಳಗಾವಿಯಿಂದ ಅಥಣಿಗೆ ಸಂಪರ್ಕಿಸಲು ಕಾಗವಾಡ ಮುಖಾಂತರ ರಾಜ್ಯ ಹೆದ್ದಾರಿಯಿದ್ದರೂ ಸುಮಾರು 20 ಕಿ.ಮೀ ಅಂತರ ಕಡಿಮೆಯಾಗಲೆಂದು ಬೆಳಗಾವಿ-ಶಿರಗುಪ್ಪಿ ಮಾರ್ಗವಾಗಿ ಐನಾಪೂರ-ಅಥಣಿ ಸಂಪರ್ಕಿಸುವ ನಿಪ್ಪಾಣಿ-ಕೊಟ್ಟಲಗಿ ಮಾರ್ಗದ ಅಭಿವೃದ್ಧಿಗಾಗಿ 3 ಕೋಟಿ ರೂ. ಮಂಜೂರುಗೊಳಿಸಿದ್ದೇನೆ. ಈ ಕಾಮಗಾರಿಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.

ಕಾಗವಾಡ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಈವರೆಗಿನ ಶಾಸಕರು ತಲೆಕೆಡಿಸಿಕೊಂಡಿಲ್ಲ. 70 ವರ್ಷ ಗತಿಸಿದರು ಅಭಿವೃದ್ಧಿ ಕಂಡಿಲ್ಲ. ಉಳಿದ ಕೆಲಸಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದು ವಿಶೇಷ ಅನುದಾನ ತಂದಿದ್ದೇನೆ. ಪಿಡ್ಲ್ಯೂಡಿ ಕಡೆಯಿಂದ 25 ಕೋಟಿ, ರಾಜ್ಯ ಹೆದ್ದಾರಿ ಇಲಾಖೆಯಿಂದ 20 ಕೋಟಿ, 45 ಕೋಟಿ ಹೆಚ್ಚುವರಿಯಾಗಿ ಒಟ್ಟು 95 ಕೋಟಿ ವಿಶೇಷ ಅನುದಾನ ಮಂಜೂರುಗೊಳಿಸಿಕೊಂಡು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ ಎಂದರು.

Intro:ಯಡಿಯೂರಪ್ಪ ಅವರಿಂದ ವಿಶೇಷ ಅನುದಾನ : ಅನರ್ಹ ಶಾಸಕ ಶ್ರೀಮಂತ ಪಾಟೀಲBody:

ಚಿಕ್ಕೋಡಿ

70 ವರ್ಷಗಳ ನಂತರವು ಕಾಗವಾಡ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಕಾಣದೆಯಿರುವದರಿಂದ ಅಭಿವೃದ್ಧಿಗಾಗಿ ನಾನು ನಿರ್ಣಯ ಕೈಗೊಂಡಿದ್ದೇನೆ ಎಂದು ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆ ಅಭಿವೃದ್ಧಿಗಾಗಿ 3.10 ಕೋಟಿ ರೂ. ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಕಾಗವಾಡ ವಿಧಾನಸಭಾ ಕ್ಷೇತ್ರ ಈ ವರೆಗೆ ಅಭಿವೃದ್ಧಿ ಕಂಡಿಲ್ಲಾ. ಇಲ್ಲಿಯ ರಸ್ತೆಗಳು ಇನ್ನೂಳಿದ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಾ ಅವರಿಂದ 3 ತಿಂಗಳಿನಲ್ಲಿ 90 ಕೋಟಿ ವಿಶೇಷ ಅನುದಾನ ಪಡೆದುಕೊಂಡಿದ್ದೇನೆ ಎಂದರು.

ಬೆಳಗಾವಿಯಿಂದ ಅಥಣಿಗೆ ಸಂಪರ್ಕಿಸಲು ಕಾಗವಾಡ ಮುಖಾಂತರ ರಾಜ್ಯ ಹೆದ್ದಾರಿಯಿದ್ದರೂ ಸುಮಾರು 20 ಕಿ.ಮೀ ಅಂತರ ಕಡಿಮೆವಾಗುವ ಬೆಳಗಾವಿ-ಶಿರಗುಪ್ಪಿ ಮಾರ್ಗವಾಗಿ ಐನಾಪೂರ-ಅಥಣಿಗೆ ಸಂಪರ್ಕಿಸುವ ನಿಪ್ಪಾಣಿ-ಕೊಟ್ಟಲಗಿ ಮಾರ್ಗ ಅಭಿವೃದ್ಧಿಗಾಗಿ 3 ಕೋಟಿ ರೂ. ಮಂಜೂರುಗೊಳಿಸಿದ್ದೇನೆ. ಈ ಕಾಮಗಾರಿಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಶ್ರೀಮಂತ ಪಾಟೀಲ ಹೇಳಿದರು.

ಕಾಗವಾಡ ವಿಧಾನಸಭಾ ಕ್ಷೇತ್ರ ಕಡೆ ಈ ವರೆಗಿನ ಶಾಸಕರು ಅಭಿವೃದ್ಧಿಯತ್ತ ತಮ್ಮ ತೆಲೆ ಕೆಡಿಸಿಕೊಂಡಿಲ್ಲಾ. 70 ವರ್ಷ ಗತಿಸಿದರೂ ಅಭಿವೃದ್ಧಿ ಕಂಡಿಲ್ಲಾ. ಮುಖ್ಯ ಕೆಲಸ ಆಗದೆ ಉಳಿದ ಕೆಲಸಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಾ ಅವರ ಗಮನಕ್ಕೆ ತಂದು ವಿಶೇಷ ಅನುದಾನ ತಂದಿದ್ದೇನೆ. 45 ಕೋಟಿ, ಲೊಕೋಪಯೋಗಿ ಇಲಾಖೆ 25 ಕೋಟಿ, ರಾಜ್ಯ ಹೆದ್ದಾರಿ ಇಲಾಖೆಯಿಂದ 20 ಕೋಟಿ, ಹೀಗೆ 95 ಕೋಟಿ ವಿಶೇಷ ಅನುದಾನ ಮಂಜೂರುಗೊಳಿಸಿಕೊಂಡು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ ಎಂದು ಅನರ್ಹ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಬೈಟ್ 1: ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.