ETV Bharat / state

ಭೂತಾಯಿ ರಕ್ಷಣೆಗೆ ಸಂತರ ರೈತರ ಸಮಾವೇಶ: ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

author img

By ETV Bharat Karnataka Team

Published : Dec 20, 2023, 7:15 PM IST

ಭೂತಾಯಿಯ ರಕ್ಷಣೆಗೆ ಸಂತರ-ರೈತರ ಸಮಾವೇಶವನ್ನು ಜನವರಿ 12, 13ರಂದು ಕೊಲ್ಹಾಪುರ ಜಿಲ್ಲೆಯ ಕನ್ಹೇರಿ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

Adrusya Kadasiddeshwar Swamiji spoke at a press conference.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಚಿಕ್ಕೋಡಿ: ಮನುಷ್ಯನ ಜೀವನ ಶೈಲಿಯ ಬದಲಾವಣೆಯಿಂದ ನಿಸರ್ಗ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಮಣ್ಣು, ಗಾಳಿ ಹಾಗು ನೀರಿನಲ್ಲಿ ರಾಸಾಯನಿಕ ಸೇರಿಕೊಂಡು ಹೊಸ ಸಮಸ್ಯೆಗಳಿಗೆ ನಿಸರ್ಗ ಜನ್ಮ ನೀಡುತ್ತಿದೆ. ಹೀಗಾಗಿ ಮಣ್ಣು, ನೀರು, ಗಾಳಿ, ಇಂಧನ ರಕ್ಷಣೆಗೆ ಜನವರಿ 12, 13ರಂದು ಭೂತಾಯಿಯ ರಕ್ಷಣೆಗೆ ಸಂತರ-ರೈತರ ಮಹಾಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಚಿಕ್ಕೋಡಿ ಪಟ್ಟಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರ ಕಾಲದ ಸಾವಯವ ಕೃಷಿಯನ್ನು ಪ್ರತಿಯೊಬ್ಬರೂ ಇಂದು ಮುಂದುವರಿಸಬೇಕಾಗಿದೆ. ಸಾವಯವ ಕೃಷಿ ಜಾಗೃತಿಗೆ 2024ರ ಜನವರಿ 12, 13ರಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿ ಮಠದ ಆವರಣದಲ್ಲಿ ಸಾವಯವ ಕೃಷಿ ಪರಿವಾರ ಹಾಗೂ ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಸಹಯೋಗದಲ್ಲಿ "ಭೂತಾಯಿಯ ರಕ್ಷಣೆಗೆ "ಸಂತರ-ರೈತರ ಮಹಾಸಮಾವೇಶ" ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರೈತ ಬೆಳೆಯುವ ಬೆಳೆಯ ಇಳುವರಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಹಾಕಿ ಬೆಳೆಯಲು ಹೋದರೂ ಸಹಿತ ಅಪೇಕ್ಷೆಯಂತೆ ಬೆಳೆಗಳು ಬರ್ತಿಲ್ಲ. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಹೊಸ ಹೊಸ ರೋಗಗಳೂ ಉದ್ಭವಿಸುತ್ತಿವೆ. ಆದ್ದರಿಂದ ರೈತರನ್ನು ಎಚ್ಚರಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

400ಕ್ಕೂ ಹೆಚ್ಚು ಮಠಾಧೀಶರು ಭಾಗಿ: ನಮ್ಮ ಜನರಿಗೆ ಹೆಚ್ಚು ವಿಶ್ವಾಸವಿರುವುದು ಮಠ ಮತ್ತು ಸ್ವಾಮೀಜಿಗಳ ಮೇಲೆ. ಆದ್ದರಿಂದ 400ಕ್ಕೂ ಹೆಚ್ಚು ಮಠಾಧೀಶರ ಸಮ್ಮುಖದಲ್ಲಿ ಸಾವಯವ ಕೃಷಿ ಜಾಗೃತಿಗಾಗಿ ಈ ಕಾರ್ಯಕ್ರಮ ನಡೆಯಲಿದೆ. ಕೃಷಿಕನಿಗೆ ಸಾವಯವ ಕೃಷಿ ಬಗ್ಗೆ ಮಠಗಳಿಂದ ಏನೇನು ಮಾಡಲು ಸಾಧ್ಯವಿದೆಯೋ, ಅದನ್ನು ನಮ್ಮ ಸ್ವಾಮೀಜಿಯವರು ಉಪದೇಶಗಳಲ್ಲಿ ಸಂದೇಶ ನೀಡಲಿದ್ದಾರೆ ಎಂದು ಹೇಳಿದರು.

ಸಾವಯವ ಕೃಷಿಗೆ ಉತ್ತೇಜನ: ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ವಿವಿಧ ಮಠಗಳ ಮಠಾಧೀಶರು, ಧರ್ಮದರ್ಶಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಕೃಷಿ-ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಶ್ವ ವಿದ್ಯಾಲಯಗಳ ಕುಲಪತಿಗಳು ಮತ್ತು ರೈತರು ಪಾಲ್ಗೊಳ್ಳುವರು. ಕನ್ಹೇರಿ ಮಠದ ಆವರಣದಲ್ಲಿ ಸಾವಯವ ಕೃಷಿ ಕುರಿತು ಹಲವು ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದು, ಅವುಗಳನ್ನು ರೈತರು ವೀಕ್ಷಿಸಿ ಸಾವಯವ ಕೃಷಿ ಮಾಡಲು ಉತ್ತೇಜನ ಪಡೆದುಕೊಳ್ಳಬಹುದು. ಸಾವಯವ ಕೃಷಿ ಉತ್ಪನ್ನದ ಮಾರಾಟ ಮಳಿಗೆ, ಸಾವಯವ ಕೃಷಿ ಪರಿಕರ ತಯಾರಿಕಾ ತರಬೇತಿ ಕೇಂದ್ರವನ್ನು ವೀಕ್ಷಣೆ ಮಾಡಬಹುದು ಎಂದು ಶ್ರೀಗಳು ಮಾಹಿತಿ ನೀಡಿದರು.

ಇದನ್ನೂಓದಿ:'ವಿಶ್ವಕರ್ಮ ಶ್ರಮ ಸನ್ಮಾನ ಯೋಜನೆ' ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಿ: ವಿಜಯೇಂದ್ರ

ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಚಿಕ್ಕೋಡಿ: ಮನುಷ್ಯನ ಜೀವನ ಶೈಲಿಯ ಬದಲಾವಣೆಯಿಂದ ನಿಸರ್ಗ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಮಣ್ಣು, ಗಾಳಿ ಹಾಗು ನೀರಿನಲ್ಲಿ ರಾಸಾಯನಿಕ ಸೇರಿಕೊಂಡು ಹೊಸ ಸಮಸ್ಯೆಗಳಿಗೆ ನಿಸರ್ಗ ಜನ್ಮ ನೀಡುತ್ತಿದೆ. ಹೀಗಾಗಿ ಮಣ್ಣು, ನೀರು, ಗಾಳಿ, ಇಂಧನ ರಕ್ಷಣೆಗೆ ಜನವರಿ 12, 13ರಂದು ಭೂತಾಯಿಯ ರಕ್ಷಣೆಗೆ ಸಂತರ-ರೈತರ ಮಹಾಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಚಿಕ್ಕೋಡಿ ಪಟ್ಟಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರ ಕಾಲದ ಸಾವಯವ ಕೃಷಿಯನ್ನು ಪ್ರತಿಯೊಬ್ಬರೂ ಇಂದು ಮುಂದುವರಿಸಬೇಕಾಗಿದೆ. ಸಾವಯವ ಕೃಷಿ ಜಾಗೃತಿಗೆ 2024ರ ಜನವರಿ 12, 13ರಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿ ಮಠದ ಆವರಣದಲ್ಲಿ ಸಾವಯವ ಕೃಷಿ ಪರಿವಾರ ಹಾಗೂ ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಸಹಯೋಗದಲ್ಲಿ "ಭೂತಾಯಿಯ ರಕ್ಷಣೆಗೆ "ಸಂತರ-ರೈತರ ಮಹಾಸಮಾವೇಶ" ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರೈತ ಬೆಳೆಯುವ ಬೆಳೆಯ ಇಳುವರಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಹಾಕಿ ಬೆಳೆಯಲು ಹೋದರೂ ಸಹಿತ ಅಪೇಕ್ಷೆಯಂತೆ ಬೆಳೆಗಳು ಬರ್ತಿಲ್ಲ. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಹೊಸ ಹೊಸ ರೋಗಗಳೂ ಉದ್ಭವಿಸುತ್ತಿವೆ. ಆದ್ದರಿಂದ ರೈತರನ್ನು ಎಚ್ಚರಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

400ಕ್ಕೂ ಹೆಚ್ಚು ಮಠಾಧೀಶರು ಭಾಗಿ: ನಮ್ಮ ಜನರಿಗೆ ಹೆಚ್ಚು ವಿಶ್ವಾಸವಿರುವುದು ಮಠ ಮತ್ತು ಸ್ವಾಮೀಜಿಗಳ ಮೇಲೆ. ಆದ್ದರಿಂದ 400ಕ್ಕೂ ಹೆಚ್ಚು ಮಠಾಧೀಶರ ಸಮ್ಮುಖದಲ್ಲಿ ಸಾವಯವ ಕೃಷಿ ಜಾಗೃತಿಗಾಗಿ ಈ ಕಾರ್ಯಕ್ರಮ ನಡೆಯಲಿದೆ. ಕೃಷಿಕನಿಗೆ ಸಾವಯವ ಕೃಷಿ ಬಗ್ಗೆ ಮಠಗಳಿಂದ ಏನೇನು ಮಾಡಲು ಸಾಧ್ಯವಿದೆಯೋ, ಅದನ್ನು ನಮ್ಮ ಸ್ವಾಮೀಜಿಯವರು ಉಪದೇಶಗಳಲ್ಲಿ ಸಂದೇಶ ನೀಡಲಿದ್ದಾರೆ ಎಂದು ಹೇಳಿದರು.

ಸಾವಯವ ಕೃಷಿಗೆ ಉತ್ತೇಜನ: ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ವಿವಿಧ ಮಠಗಳ ಮಠಾಧೀಶರು, ಧರ್ಮದರ್ಶಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಕೃಷಿ-ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಶ್ವ ವಿದ್ಯಾಲಯಗಳ ಕುಲಪತಿಗಳು ಮತ್ತು ರೈತರು ಪಾಲ್ಗೊಳ್ಳುವರು. ಕನ್ಹೇರಿ ಮಠದ ಆವರಣದಲ್ಲಿ ಸಾವಯವ ಕೃಷಿ ಕುರಿತು ಹಲವು ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದು, ಅವುಗಳನ್ನು ರೈತರು ವೀಕ್ಷಿಸಿ ಸಾವಯವ ಕೃಷಿ ಮಾಡಲು ಉತ್ತೇಜನ ಪಡೆದುಕೊಳ್ಳಬಹುದು. ಸಾವಯವ ಕೃಷಿ ಉತ್ಪನ್ನದ ಮಾರಾಟ ಮಳಿಗೆ, ಸಾವಯವ ಕೃಷಿ ಪರಿಕರ ತಯಾರಿಕಾ ತರಬೇತಿ ಕೇಂದ್ರವನ್ನು ವೀಕ್ಷಣೆ ಮಾಡಬಹುದು ಎಂದು ಶ್ರೀಗಳು ಮಾಹಿತಿ ನೀಡಿದರು.

ಇದನ್ನೂಓದಿ:'ವಿಶ್ವಕರ್ಮ ಶ್ರಮ ಸನ್ಮಾನ ಯೋಜನೆ' ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಿ: ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.