ETV Bharat / state

ಎಸ್ಕಾರ್ಟ್‌ನಲ್ಲಿ ಖಾಲಿ ಆಕ್ಸಿಜನ್‌ ಟ್ಯಾಂಕರ್ ತರಲು ಎಸ್‌ಪಿಗೆ ಕಾರಜೋಳ ಸೂಚನೆ - ಬಳ್ಳಾರಿಯಿಂದ ಬೆಳಗಾವಿಗೆ ಬರುತ್ತಿದ್ದ ಆಕ್ಸಿಜನ್ ಟ್ಯಾಂಕರ್ ಅಪಘಾತ

ಎಸ್ಕಾರ್ಟ್‌ ಮೂಲಕ ಕೊಲ್ಲಾಪುರದಿಂದ ಖಾಲಿ ಆಕ್ಸಿಜನ್‌ ಟ್ಯಾಂಕರ್ ತರಲು ಡಿಸಿಎಂ‌ ಗೋವಿಂದ ಕಾರಜೋಳ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರಿಗೆ ಸೂಚನೆ ನೀಡಿದ್ದು, ಈಗಾಗಲೇ ಟ್ಯಾಂಕರ್ ನಿಪ್ಪಾಣಿಗೆ ತಲುಪಿದೆ. ಆದಷ್ಟು ಬೇಗ ಬೆಳಗಾವಿಗೆ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.

ಆಕ್ಸಿಜನ್ ಟ್ಯಾಂಕರ್ ಅಪಘಾತ
ಆಕ್ಸಿಜನ್ ಟ್ಯಾಂಕರ್ ಅಪಘಾತ
author img

By

Published : May 7, 2021, 9:51 AM IST

Updated : May 7, 2021, 2:10 PM IST

ಬೆಳಗಾವಿ: ತಾಲೂಕಿನ ಮುತ್ನಾಳ ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಓವರ್ ಟೇಕ್ ಮಾಡುವ ಸಂದರ್ಭ ಮುಂಬದಿಯ ಲಾರಿಗೆ ಆಕ್ಸಿಜನ್ ಟ್ಯಾಂಕರ್ ಡಿಕ್ಕಿ ಹೊಡೆದ ಘಟನೆ ಬೆಳಗ್ಗೆ ನಡೆದಿತ್ತು. ಅದೃಷ್ಟವಶಾತ್ ಅಪಘಾತದ ವೇಳೆ ಆಕ್ಸಿಜನ್ ಲಿಕ್ವಿಡ್‌ ಟ್ಯಾಂಕ್‌ಗೆ ಯಾವುದೇ ರೀತಿಯ‌ ಹಾನಿ ಸಂಭವಿಸಿಲ್ಲ. ಇದೀಗ ಕೊಲ್ಲಾಪುರದಿಂದ ಎಸ್ಕಾರ್ಟ್‌ನಲ್ಲಿ ಖಾಲಿ ಟ್ಯಾಂಕರ್ ತರಲು ಡಿಸಿಎಂ‌ ಗೋವಿಂದ ಕಾರಜೋಳ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರಿಗೆ ಸೂಚನೆ ನೀಡಿದ್ದಾರೆ.

ಆಕ್ಸಿಜನ್ ಟ್ಯಾಂಕರ್ ಡಿಕ್ಕಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಕೊಲ್ಲಾಪುರದಿಂದ ಎಸ್ಕಾರ್ಟ್‌ನಲ್ಲಿ ಖಾಲಿ ಟ್ಯಾಂಕರ್ ತರಲು ಎಸ್‌ಪಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಟ್ಯಾಂಕರ್ ನಿಪ್ಪಾಣಿಗೆ ತಲುಪಿದ್ದು, ಆದಷ್ಟು ಬೇಗ ಬೆಳಗಾವಿಗೆ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲಾಗುವುದು ಎಂದರು.

16 ಕೆ.ಎಲ್‌ ಸಾಮರ್ಥ್ಯದ ಆಕ್ಸಿಜನ್ ಲಿಕ್ವಿಡ್ ಇದ್ದ ಈ ಟ್ಯಾಂಕರ್ ಬಳ್ಳಾರಿಯಿಂದ ಬೆಳಗಾವಿಗೆ ಬರುತ್ತಿತ್ತು. ಈ ವೇಳೆ ಅಪಘಾತಕ್ಕೀಡಾಗಿ ಟ್ಯಾಂಕರ್‌ನ ಚಕ್ರ ಸ್ಫೋಟಗೊಂಡು ಎಕ್ಸಲ್ ತುಂಡಾಗಿತ್ತು.

ಇದನ್ನೂ ಓದಿ : ಚಾಮರಾಜನಗರ ದುರಂತ: ತನಿಖೆ ನಡೆಸಲು ಮುಂದಾದ ಲೋಕಾಯುಕ್ತ ಸಂಸ್ಥೆ

ಬೆಳಗಾವಿ: ತಾಲೂಕಿನ ಮುತ್ನಾಳ ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಓವರ್ ಟೇಕ್ ಮಾಡುವ ಸಂದರ್ಭ ಮುಂಬದಿಯ ಲಾರಿಗೆ ಆಕ್ಸಿಜನ್ ಟ್ಯಾಂಕರ್ ಡಿಕ್ಕಿ ಹೊಡೆದ ಘಟನೆ ಬೆಳಗ್ಗೆ ನಡೆದಿತ್ತು. ಅದೃಷ್ಟವಶಾತ್ ಅಪಘಾತದ ವೇಳೆ ಆಕ್ಸಿಜನ್ ಲಿಕ್ವಿಡ್‌ ಟ್ಯಾಂಕ್‌ಗೆ ಯಾವುದೇ ರೀತಿಯ‌ ಹಾನಿ ಸಂಭವಿಸಿಲ್ಲ. ಇದೀಗ ಕೊಲ್ಲಾಪುರದಿಂದ ಎಸ್ಕಾರ್ಟ್‌ನಲ್ಲಿ ಖಾಲಿ ಟ್ಯಾಂಕರ್ ತರಲು ಡಿಸಿಎಂ‌ ಗೋವಿಂದ ಕಾರಜೋಳ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರಿಗೆ ಸೂಚನೆ ನೀಡಿದ್ದಾರೆ.

ಆಕ್ಸಿಜನ್ ಟ್ಯಾಂಕರ್ ಡಿಕ್ಕಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಕೊಲ್ಲಾಪುರದಿಂದ ಎಸ್ಕಾರ್ಟ್‌ನಲ್ಲಿ ಖಾಲಿ ಟ್ಯಾಂಕರ್ ತರಲು ಎಸ್‌ಪಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಟ್ಯಾಂಕರ್ ನಿಪ್ಪಾಣಿಗೆ ತಲುಪಿದ್ದು, ಆದಷ್ಟು ಬೇಗ ಬೆಳಗಾವಿಗೆ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲಾಗುವುದು ಎಂದರು.

16 ಕೆ.ಎಲ್‌ ಸಾಮರ್ಥ್ಯದ ಆಕ್ಸಿಜನ್ ಲಿಕ್ವಿಡ್ ಇದ್ದ ಈ ಟ್ಯಾಂಕರ್ ಬಳ್ಳಾರಿಯಿಂದ ಬೆಳಗಾವಿಗೆ ಬರುತ್ತಿತ್ತು. ಈ ವೇಳೆ ಅಪಘಾತಕ್ಕೀಡಾಗಿ ಟ್ಯಾಂಕರ್‌ನ ಚಕ್ರ ಸ್ಫೋಟಗೊಂಡು ಎಕ್ಸಲ್ ತುಂಡಾಗಿತ್ತು.

ಇದನ್ನೂ ಓದಿ : ಚಾಮರಾಜನಗರ ದುರಂತ: ತನಿಖೆ ನಡೆಸಲು ಮುಂದಾದ ಲೋಕಾಯುಕ್ತ ಸಂಸ್ಥೆ

Last Updated : May 7, 2021, 2:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.