ಚಿಕ್ಕೋಡಿ : ಕಾಗವಾಡ ವಿಧಾನಸಭಾ ಉಪಚುನಾವಣೆಗೆ ನಿನ್ನೆ ಮತದಾನವಾಗಿದ್ದು, ಮತದಾರರ ಭವಿಷ್ಯ ವಿ.ವಿ ಪ್ಯಾಡ್ನಲ್ಲಿ ಭದ್ರವಾಗಿದ್ದು ಡಿ.9 ರಂದು ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ.
ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಚುನಾವಣೆ ಬಳಿಕ ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಮತಕ್ಷೇತ್ರದಲ್ಲಿ ಯಾವೆಲ್ಲ ತೊಂದರೆಗಳಿವೆ ಎಂಬುವುದನ್ನು ಕಾರ್ಯಕರ್ತರ ಜೊತೆ ಚರ್ಚಿಸಿದ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.