ETV Bharat / state

ತಮ್ಮ ರಾಜ್ಯಕ್ಕೆ ನಮ್ಮನ್ನು ಕಳುಹಿಸಿಕೊಡುವಂತೆ ತಾಲೂಕಾಡಳಿತಕ್ಕೆ ಮನವಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಸುಮಾರು ಎರಡು ತಿಂಗಳ ಹಿಂದೆ ನಡೆದ ಹಜರತ್​ ಖ್ವಾಜಾ ಶಮನಾಪೀರ ದರ್ಗಾ ಉರುಸ್​​ಗೆ ದೇಶದ ನಾನಾ ರಾಜ್ಯಗಳ 20ಕ್ಕೂ ಹೆಚ್ಚು ಮಂದಿ ಬಂದಿದ್ದು, ಲಾಕ್​​ಡೌನ್ ಹಿನ್ನೆಲೆ ತಮ್ಮ ಮೂಲ ರಾಜ್ಯಗಳಿಗೆ ಹೋಗಲು ಸಾಧ್ಯವಾಗಿಲ್ಲ. ಸದ್ಯ ತಮ್ಮನ್ನು ತಮ್ಮ ತಾಯ್ನಾಡಿಗೆ ಕಳುಹಿಸಿಕೊಡಬೇಕಾಗಿ ತಾಲೂಕು ಆಡಳಿತವನ್ನು ಒತ್ತಾಯಿಸುತ್ತಿದ್ದಾರೆ.

author img

By

Published : May 15, 2020, 2:52 PM IST

Updated : May 15, 2020, 4:44 PM IST

Inter state labours request to send them back to their native
ತಮ್ಮ ರಾಜ್ಯಕ್ಕೆ ನಮ್ಮನ್ನು ಕಳುಹಿಸಿಕೊಡುವಂತೆ ಅಂತರ್​-ರಾಜ್ಯ ಕಾರ್ಮಿಕರ ಅಳಲು

ಚಿಕ್ಕೋಡಿ(ಬೆಳಗಾವಿ): ಎರಡು ತಿಂಗಳ ಹಿಂದೆ ಸದಲಗಾ ಪಟ್ಟಣದಲ್ಲಿ ಜರುಗಿದ ಉರುಸ್​​ಗೆ ದೇಶದ ನಾನಾ ರಾಜ್ಯಗಳ 20ಕ್ಕೂ ಹೆಚ್ಚು ಮಂದಿ ಬಂದಿದ್ದು, ಲಾಕ್​​ಡೌನ್ ಹಿನ್ನೆಲೆ ತಮ್ಮ ಮೂಲ ರಾಜ್ಯಗಳಿಗೆ ಹೋಗಲು ಸಾಧ್ಯವಾಗಿಲ್ಲ. ಸದ್ಯ ತಮ್ಮನ್ನು ತಮ್ಮ ತಾಯ್ನಾಡಿಗೆ ಕಳುಹಿಸಿಕೊಡಬೇಕೆಂದು ತಾಲೂಕು ಆಡಳಿತವನ್ನು ಒತ್ತಾಯಿಸುತ್ತಿದ್ದಾರೆ.

ತಮ್ಮ ರಾಜ್ಯಕ್ಕೆ ನಮ್ಮನ್ನು ಕಳುಹಿಸಿಕೊಡುವಂತೆ ಅಂತರ್​-ರಾಜ್ಯ ಕಾರ್ಮಿಕರ ಅಳಲು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಹಜರತ್​ ಖ್ವಾಜಾ ಶಮನಾಪೀರ ದರ್ಗಾದ ಉರುಸ್​​ ನಡೆದಿದೆ. ನಂತರ ಏಕಾಏಕಿ ಲಾಕ್​ಡೌನ್ ಜಾರಿಯಾಗಿದ್ದು, ವಿವಿಧ ರಾಜ್ಯಗಳ ಹಲವಾರು ಕಾರ್ಮಿಕರು ಅಲ್ಲೇ ಉಳಿದಿದ್ದಾರೆ. ಅದರಲ್ಲಿ ಒಬ್ಬ ಬಿಹಾರದವನು, ಆರು ಜನ ಮಧ್ಯಪ್ರದೇಶ, ಆರು ಜನ ಉತ್ತರ ಪ್ರದೇಶ, ಇಬ್ಬರು ಗುಜರಾತ್​, ಇಬ್ಬರು ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಾವೇರಿಯ ಇಬ್ಬರು ಸೇರಿದಂತೆ 20ಕ್ಕೂ ಹೆಚ್ಚು ಜನರಿದ್ದಾರೆ.

ಇಲ್ಲಿಯವರೆಗೆ ಸರ್ಕಾರದಿಂದ ಹಾಲನ್ನು ಮಾತ್ರ ವಿತರಿಸಲಾಗಿದೆ. ಇಲ್ಲಿಯವರೆಗೆ ಸದಲಗಾ ಗ್ರಾಮಸ್ಥರು ಅವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಈಗ ತಾವಿಲ್ಲದೆ ಊರಿನಲ್ಲಿ ತಮ್ಮ ತಂದೆ-ತಾಯಿಗಳಿಗೆ ತೊಂದರೆಯಾಗುತ್ತಿದ್ದು, ತಮ್ಮನ್ನು ಆದಷ್ಟು ಬೇಗ ಊರಿಗೆ ಕಳುಹಿಸಿಕೊಡಿ‌ ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಚಿಕ್ಕೋಡಿ(ಬೆಳಗಾವಿ): ಎರಡು ತಿಂಗಳ ಹಿಂದೆ ಸದಲಗಾ ಪಟ್ಟಣದಲ್ಲಿ ಜರುಗಿದ ಉರುಸ್​​ಗೆ ದೇಶದ ನಾನಾ ರಾಜ್ಯಗಳ 20ಕ್ಕೂ ಹೆಚ್ಚು ಮಂದಿ ಬಂದಿದ್ದು, ಲಾಕ್​​ಡೌನ್ ಹಿನ್ನೆಲೆ ತಮ್ಮ ಮೂಲ ರಾಜ್ಯಗಳಿಗೆ ಹೋಗಲು ಸಾಧ್ಯವಾಗಿಲ್ಲ. ಸದ್ಯ ತಮ್ಮನ್ನು ತಮ್ಮ ತಾಯ್ನಾಡಿಗೆ ಕಳುಹಿಸಿಕೊಡಬೇಕೆಂದು ತಾಲೂಕು ಆಡಳಿತವನ್ನು ಒತ್ತಾಯಿಸುತ್ತಿದ್ದಾರೆ.

ತಮ್ಮ ರಾಜ್ಯಕ್ಕೆ ನಮ್ಮನ್ನು ಕಳುಹಿಸಿಕೊಡುವಂತೆ ಅಂತರ್​-ರಾಜ್ಯ ಕಾರ್ಮಿಕರ ಅಳಲು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಹಜರತ್​ ಖ್ವಾಜಾ ಶಮನಾಪೀರ ದರ್ಗಾದ ಉರುಸ್​​ ನಡೆದಿದೆ. ನಂತರ ಏಕಾಏಕಿ ಲಾಕ್​ಡೌನ್ ಜಾರಿಯಾಗಿದ್ದು, ವಿವಿಧ ರಾಜ್ಯಗಳ ಹಲವಾರು ಕಾರ್ಮಿಕರು ಅಲ್ಲೇ ಉಳಿದಿದ್ದಾರೆ. ಅದರಲ್ಲಿ ಒಬ್ಬ ಬಿಹಾರದವನು, ಆರು ಜನ ಮಧ್ಯಪ್ರದೇಶ, ಆರು ಜನ ಉತ್ತರ ಪ್ರದೇಶ, ಇಬ್ಬರು ಗುಜರಾತ್​, ಇಬ್ಬರು ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಾವೇರಿಯ ಇಬ್ಬರು ಸೇರಿದಂತೆ 20ಕ್ಕೂ ಹೆಚ್ಚು ಜನರಿದ್ದಾರೆ.

ಇಲ್ಲಿಯವರೆಗೆ ಸರ್ಕಾರದಿಂದ ಹಾಲನ್ನು ಮಾತ್ರ ವಿತರಿಸಲಾಗಿದೆ. ಇಲ್ಲಿಯವರೆಗೆ ಸದಲಗಾ ಗ್ರಾಮಸ್ಥರು ಅವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಈಗ ತಾವಿಲ್ಲದೆ ಊರಿನಲ್ಲಿ ತಮ್ಮ ತಂದೆ-ತಾಯಿಗಳಿಗೆ ತೊಂದರೆಯಾಗುತ್ತಿದ್ದು, ತಮ್ಮನ್ನು ಆದಷ್ಟು ಬೇಗ ಊರಿಗೆ ಕಳುಹಿಸಿಕೊಡಿ‌ ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

Last Updated : May 15, 2020, 4:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.