ಚಿಕ್ಕೋಡಿ : ಮಾಸ್ಕ್ ಹಾಕಿಕೊಳ್ತೀರೋ ಅಥವಾ ವೆಂಟಿಲೇಟರ್ ಹಾಕಿಕೊಳ್ತೀರೋ.. ನಿರ್ಧಾರ ನಿಮ್ಮ ಕೈಯಲ್ಲೇ ಇದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಇನ್ನೇನು 3ನೇ ಹಂತ ತಲುಪಲಿದೆ. ಕೊರೊನಾ ನಿಯಂತ್ರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. 4ನೇ ಹಂತ ತಲುಪುವುದರೊಳಗಾಗಿ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕರೆ ಕೊಟ್ಟರು.
ಇನ್ನೂ ಯುವಕರು ವಾಲೆಂಟಿಯರ್ಸ್ ಆಗಿ ಮುಂದೆ ಬಂದು ಸಾರ್ವಜನಿಕರು ಕೊರೊನಾವನ್ನು ನಿರ್ಲಕ್ಷ್ಯ ಮಾಡದಂತೆ ನೋಡಿಕೊಳ್ಳಿ. ಪ್ಯಾರಾ ಮೆಡಿಕಲ್, ಆ್ಯಂಬುಲೆನ್ಸ್, ಪೊಲೀಸ್ ಸಿಬ್ಬಂದಿ, ಯೋಧರು, ರೈತರು ದೇಶ ರಕ್ಷಣೆ ಸಂದರ್ಭದಲ್ಲಿ ತಮ್ಮ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅವರಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ನಮ್ಮ ಮನೆ, ನಮ್ಮ ಊರು, ನಮ್ಮ ದೇಶ ಸುರಕ್ಷತೆಯಾಗಿರಬೇಕು. ಇದಕ್ಕೆ ಸಾರ್ವಜನಿಕರು ಮನೆಯಲ್ಲೇ ಇದ್ದು ಹೆಚ್ಚಿನ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.