ETV Bharat / state

ರಮೇಶ್ ಜಾರಕಿಹೊಳಿಯಿಂದಲೇ ನಾನು ಬಿಜೆಪಿಯನ್ನು ಬಿಟ್ಟೆ: ಲಕ್ಷ್ಮಣ್ ಸವದಿ ಆರೋಪ

author img

By

Published : Apr 15, 2023, 8:57 PM IST

ರಮೇಶ್ ಜಾರಕಿಹೊಳಿ ಅವರಿಂದಲೇ ನಾನು ಬಿಜೆಪಿ ಪಕ್ಷವನ್ನು ಬಿಟ್ಟಿದ್ದೇನೆ ಎಂದು ಅಥಣಿ ಪಟ್ಟಣದ ತಮ್ಮ ನಿವಾಸದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಲಕ್ಷ್ಮಣ್ ಸವದಿ ಗಂಭೀರ ಆರೋಪಿಸಿದರು.

Laxman Savadi
ಕಾಂಗ್ರೆಸ್​ ಅಭ್ಯರ್ಥಿ ಲಕ್ಷ್ಮಣ್ ಸವದಿ
ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಲಕ್ಷ್ಮಣ್ ಸವದಿ ಮಾತನಾಡಿದರು.

ಚಿಕ್ಕೋಡಿ (ಬೆಳಗಾವಿ): ರಮೇಶ್ ಜಾರಕಿಹೊಳಿ ಅವರಿಗೆ ನನ್ನ ಮನೆಯನ್ನು ಅರ್ಧ ಖಾಲಿ ಮಾಡಿ ಕೊಡುತ್ತೇನೆ. ಬರುವುದಾದರೆ ಇಲ್ಲೇ ಬಂದು ಚುನಾವಣೆ ಮಾಡಲಿ ಎಂದು ಲಕ್ಷ್ಮಣ್ ಸವದಿ ಗೋಕಾಕ್ ಶಾಸಕರಿಗೆ ಸವಾಲು ಹಾಕಿದರು.

ಅಥಣಿ ಪಟ್ಟಣದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಮೇಶ್​ ಜಾರಕಿಹೊಳಿ ಅವರು ಅಥಣಿಗೆ ಬರುವುದಾದರೆ ನಾನು ನನ್ನ ಮನೆಯನ್ನು ಅರ್ಧ ಬಿಡುತ್ತೇನೆ ಅಥವಾ ಅಥಣಿಯಲ್ಲಿ ಮತ್ತೊಂದು ಮನೆ ಮಾಡಿ ಕೊಡುತ್ತೇನೆ. ಸೋಲು ಗೆಲುವು ನಾವು ನೀವು ಮಾಡುವುದಲ್ಲ. ಇದನ್ನು ಅಥಣಿ ಜನತೆ ಮಾಡುತ್ತಾರೆ. ಇಂತಹ ಮಹಾನುಭಾವನಿಂದ ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಹೊರಗೆ ಬಂದಿದ್ದೇನೆ ಎಂದು ರಮೇಶ್ ಜಾರಕಿಹೊಳಿಗೆ ಸವದಿ ವಿರುದ್ಧ ಗಂಭೀರ ಆರೋಪ ಮಾಡಿದರು.

ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ಆಕ್ರೋಶ: ರಮೇಶ್ ಜಾರಕಿಹೊಳಿ ನನಗೆ ಪೀಡೆ ಎಂದು ಹೇಳುತ್ತಾರೆ, ಆದರೆ, ಅವರು ಸ್ವಲ್ಪ ನೆನಪು ಮಾಡಿಕೊಳ್ಳಬೇಕು, ನಮ್ಮ ಕಡೆ ಹಳ್ಳಿಯಲ್ಲಿ ಮಾತನಾಡುತ್ತಾರೆ ಬಳುವ ಹೊಕ್ಕ ಮನೆ ಅಳಗಾಲು ಎಂದು ಹೇಳುತ್ತಾರೆ. ಆದರೆ ರಮೇಶ್ ಜಾರಕಿಹೊಳಿ ಕಾಲು ಇಟ್ಟಲ್ಲಿ ಪಕ್ಷಗಳು ಅಳಗಾಲು ಆಗುತ್ತಿವೆ. ಹಿಂದೆ ಕಾಂಗ್ರೆಸ್ ಪಕ್ಷ, ಇನ್ನೂ ಮುಂದೆ ಬಿಜೆಪಿ ಪಕ್ಷ ಅಳಗಾಲು ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಟೇಕೆ ಟಿಪ್ಪಣಿ ಮಾಡುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಹನಿ ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ, ಸಿಎಂ ಬೊಮ್ಮಾಯಿ ವಿರುದ್ಧ ಬಿಜೆಪಿ ಶಾಸಕರಿಂದಲೇ ಆರೋಪ: ಗೌರವ್ ವಲ್ಲಭ್​

ಜಗದೀಶ್ ಶೆಟ್ಟರ್ ಟಿಕೆಟ್ ವಿಚಾರ: ಜಗದೀಶ್ ಶೆಟ್ಟರ್ ಅವರ ಮನೆತನವನ್ನೇ ಬಿಜೆಪಿ ಪಕ್ಷಕ್ಕೆ ಮೀಸಲು ಇಟ್ಟಿದ್ದರು. ಇವತ್ತು ಅವರಿಗೆ ಟಿಕೆಟ್ ಕೊಡುತ್ತಿಲ್ಲ. ನನಗೂ ಅಚ್ಚರಿಯಾಗಿದೆ. ಶೆಟ್ಟರ್ ಪಕ್ಷದಲ್ಲಿ ತಳಮಟ್ಟದಿಂದ ಸಿಎಂ ಸ್ಥಾನದವರಿಗೆ ಕಾರ್ಯ ನಿರ್ವಹಣೆ ಮಾಡಿದ್ದಾರೆ. ನಾನು ಪಕ್ಷವನ್ನು ಬಿಟ್ಟು ಬಂದಿದ್ದೇನೆ, ಇನ್ಮುಂದೆ ಬಿಜೆಪಿ ಬಗ್ಗೆ ಮಾತನಾಡನಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​ಗೆ ಬಿಜೆಪಿ ಅಭ್ಯರ್ಥಿಗಳ ಭಯ ಕಾಡ್ತಿದೆ: ಕಟೀಲ್

ಮೂಲ ಕಾಂಗ್ರೆಸ್ ನಾಯಕನ ಮನೆಗೆ ಸವದಿ ಭೇಟಿ ಮಾತುಕತೆ: ಅಥಣಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಅಥಣಿಗೆ ಬರುತ್ತಿದ್ದಂತೆ ಮೂಲ ಕಾಂಗ್ರೆಸ್ಸಿಗರ ನಾಯಕರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಅಥಣಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಜಾನನ್ ಮಂಗಸೂಳಿ, ಧರೆಪ್ಪ ಠಕ್ಕಣ್ಣವರ, ಸದಾಶಿವ ಬುಟಾಳಿ ಮನೆಗೆ ಭೇಟಿ ಕೆಲ ಹೊತ್ತು ಮಾತುಕತೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಂಡರು. ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಹಾಗೂ ಅಭ್ಯರ್ಥಿ ಗೆಲುವಿಗೆ ಕೈ ಜೋಡಿಸುವಂತೆ ಸವದಿ ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಸವದಿ ಅಥಣಿಗೆ ಬರುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತ. ಕೈ ಕಾರ್ಯಕರ್ತರು ಹಾಗೂ ಸವದಿ ಬೆಂಬಲಿಗರು ಪಟಾಕಿ ಸಿಡಿಸಿ ಸ್ವಾಗತ ಮಾಡಿದರು.

ಇದನ್ನೂ ಓದಿ: ಸೋಮಣ್ಣ ಮತಬೇಟೆ ಶುರು; ವಸತಿ ಸಚಿವರಿಗೆ ಬೆನ್ನೆಲುಬಾಗಿ ನಿಂತ ರಾಜ್ಯ ನಾಯಕರು

ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಲಕ್ಷ್ಮಣ್ ಸವದಿ ಮಾತನಾಡಿದರು.

ಚಿಕ್ಕೋಡಿ (ಬೆಳಗಾವಿ): ರಮೇಶ್ ಜಾರಕಿಹೊಳಿ ಅವರಿಗೆ ನನ್ನ ಮನೆಯನ್ನು ಅರ್ಧ ಖಾಲಿ ಮಾಡಿ ಕೊಡುತ್ತೇನೆ. ಬರುವುದಾದರೆ ಇಲ್ಲೇ ಬಂದು ಚುನಾವಣೆ ಮಾಡಲಿ ಎಂದು ಲಕ್ಷ್ಮಣ್ ಸವದಿ ಗೋಕಾಕ್ ಶಾಸಕರಿಗೆ ಸವಾಲು ಹಾಕಿದರು.

ಅಥಣಿ ಪಟ್ಟಣದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಮೇಶ್​ ಜಾರಕಿಹೊಳಿ ಅವರು ಅಥಣಿಗೆ ಬರುವುದಾದರೆ ನಾನು ನನ್ನ ಮನೆಯನ್ನು ಅರ್ಧ ಬಿಡುತ್ತೇನೆ ಅಥವಾ ಅಥಣಿಯಲ್ಲಿ ಮತ್ತೊಂದು ಮನೆ ಮಾಡಿ ಕೊಡುತ್ತೇನೆ. ಸೋಲು ಗೆಲುವು ನಾವು ನೀವು ಮಾಡುವುದಲ್ಲ. ಇದನ್ನು ಅಥಣಿ ಜನತೆ ಮಾಡುತ್ತಾರೆ. ಇಂತಹ ಮಹಾನುಭಾವನಿಂದ ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಹೊರಗೆ ಬಂದಿದ್ದೇನೆ ಎಂದು ರಮೇಶ್ ಜಾರಕಿಹೊಳಿಗೆ ಸವದಿ ವಿರುದ್ಧ ಗಂಭೀರ ಆರೋಪ ಮಾಡಿದರು.

ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ಆಕ್ರೋಶ: ರಮೇಶ್ ಜಾರಕಿಹೊಳಿ ನನಗೆ ಪೀಡೆ ಎಂದು ಹೇಳುತ್ತಾರೆ, ಆದರೆ, ಅವರು ಸ್ವಲ್ಪ ನೆನಪು ಮಾಡಿಕೊಳ್ಳಬೇಕು, ನಮ್ಮ ಕಡೆ ಹಳ್ಳಿಯಲ್ಲಿ ಮಾತನಾಡುತ್ತಾರೆ ಬಳುವ ಹೊಕ್ಕ ಮನೆ ಅಳಗಾಲು ಎಂದು ಹೇಳುತ್ತಾರೆ. ಆದರೆ ರಮೇಶ್ ಜಾರಕಿಹೊಳಿ ಕಾಲು ಇಟ್ಟಲ್ಲಿ ಪಕ್ಷಗಳು ಅಳಗಾಲು ಆಗುತ್ತಿವೆ. ಹಿಂದೆ ಕಾಂಗ್ರೆಸ್ ಪಕ್ಷ, ಇನ್ನೂ ಮುಂದೆ ಬಿಜೆಪಿ ಪಕ್ಷ ಅಳಗಾಲು ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಟೇಕೆ ಟಿಪ್ಪಣಿ ಮಾಡುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಹನಿ ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ, ಸಿಎಂ ಬೊಮ್ಮಾಯಿ ವಿರುದ್ಧ ಬಿಜೆಪಿ ಶಾಸಕರಿಂದಲೇ ಆರೋಪ: ಗೌರವ್ ವಲ್ಲಭ್​

ಜಗದೀಶ್ ಶೆಟ್ಟರ್ ಟಿಕೆಟ್ ವಿಚಾರ: ಜಗದೀಶ್ ಶೆಟ್ಟರ್ ಅವರ ಮನೆತನವನ್ನೇ ಬಿಜೆಪಿ ಪಕ್ಷಕ್ಕೆ ಮೀಸಲು ಇಟ್ಟಿದ್ದರು. ಇವತ್ತು ಅವರಿಗೆ ಟಿಕೆಟ್ ಕೊಡುತ್ತಿಲ್ಲ. ನನಗೂ ಅಚ್ಚರಿಯಾಗಿದೆ. ಶೆಟ್ಟರ್ ಪಕ್ಷದಲ್ಲಿ ತಳಮಟ್ಟದಿಂದ ಸಿಎಂ ಸ್ಥಾನದವರಿಗೆ ಕಾರ್ಯ ನಿರ್ವಹಣೆ ಮಾಡಿದ್ದಾರೆ. ನಾನು ಪಕ್ಷವನ್ನು ಬಿಟ್ಟು ಬಂದಿದ್ದೇನೆ, ಇನ್ಮುಂದೆ ಬಿಜೆಪಿ ಬಗ್ಗೆ ಮಾತನಾಡನಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​ಗೆ ಬಿಜೆಪಿ ಅಭ್ಯರ್ಥಿಗಳ ಭಯ ಕಾಡ್ತಿದೆ: ಕಟೀಲ್

ಮೂಲ ಕಾಂಗ್ರೆಸ್ ನಾಯಕನ ಮನೆಗೆ ಸವದಿ ಭೇಟಿ ಮಾತುಕತೆ: ಅಥಣಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಅಥಣಿಗೆ ಬರುತ್ತಿದ್ದಂತೆ ಮೂಲ ಕಾಂಗ್ರೆಸ್ಸಿಗರ ನಾಯಕರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಅಥಣಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಜಾನನ್ ಮಂಗಸೂಳಿ, ಧರೆಪ್ಪ ಠಕ್ಕಣ್ಣವರ, ಸದಾಶಿವ ಬುಟಾಳಿ ಮನೆಗೆ ಭೇಟಿ ಕೆಲ ಹೊತ್ತು ಮಾತುಕತೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಂಡರು. ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಹಾಗೂ ಅಭ್ಯರ್ಥಿ ಗೆಲುವಿಗೆ ಕೈ ಜೋಡಿಸುವಂತೆ ಸವದಿ ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಸವದಿ ಅಥಣಿಗೆ ಬರುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತ. ಕೈ ಕಾರ್ಯಕರ್ತರು ಹಾಗೂ ಸವದಿ ಬೆಂಬಲಿಗರು ಪಟಾಕಿ ಸಿಡಿಸಿ ಸ್ವಾಗತ ಮಾಡಿದರು.

ಇದನ್ನೂ ಓದಿ: ಸೋಮಣ್ಣ ಮತಬೇಟೆ ಶುರು; ವಸತಿ ಸಚಿವರಿಗೆ ಬೆನ್ನೆಲುಬಾಗಿ ನಿಂತ ರಾಜ್ಯ ನಾಯಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.