ETV Bharat / state

ದಿಢೀರ್ ಬೆಳಗಾವಿ ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿನತ್ತ ಸಿಎಂ ಯಡಿಯೂರಪ್ಪ.. - ಬೆಳಗಾವಿ ಪ್ರವಾಸವನ್ನು ಮೊಟಕು

ನಾಳೆ ಬೆಳಗ್ಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಡಲು 8.30ಕ್ಕೆ ಪ್ಲೈಟ್ ನಿಗದಿಯಾಗಿತ್ತು. ಆದ್ರೆ, ಸಿಎಂ ಪ್ರವಾಸ ರದ್ದುಪಡಿಸಿ ದಿಢೀರ್ ಆಗಿ ಬೆಂಗಳೂರಿಗೆ ತೆರಳುತ್ತಿರುವುದು ಕುತೂಹಲ ‌ಮೂಡಿಸಿದೆ..

belgavi-trip-cancelled-cm-bsy-on-its-way-to-bangalore
ಸಿಎಂ ಬಿಎಸ್​ವೈ
author img

By

Published : Mar 30, 2021, 5:40 PM IST

ಬೆಳಗಾವಿ : ಇಂದು ಬೆಳಗಾವಿಯಲ್ಲಿ ವಾಸ್ತವ್ಯ ಹೂಡಬೇಕಿದ್ದ ಸಿಎಂ ಬಿ ಎಸ್ ಯಡಿಯೂರಪ್ಪನವರ ತಮ್ಮ ಕಾರ್ಯಕ್ರಮಗಳನ್ನು ರದ್ದುಪಡಿಸಿ ದಿಢೀರ್ ಆಗಿ ಬೆಳಗಾವಿ ಪ್ರವಾಸ ಮೊಟಕುಗೊಳಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಿದ್ದಾರೆ.

ಉಪಚುನಾವಣೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಇಂದು ಮಧ್ಯಾಹ್ನ ಬೆಳಗಾವಿಗೆ ಆಗಮಿಸಿದ್ದ ಸಿಎಂ, ಬೆಳಗಾವಿಯಲ್ಲಿಯೇ ವಾಸ್ತವ್ಯ ಹೂಡಬೇಕಿತ್ತು. ಆದ್ರೆ, ನಗರದ ಖಾಸಗಿ ಹೋಟೆಲ್​ನಿಂದ ಧಾರವಾಡ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎನ್ನಲಾಗಿದೆ.‌

belgavi-trip-cancelled-cm-bsy-on-its-way-to-bangalore
ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ

ದಿ.ಸುರೇಶ ಅಂಗಡಿ ಅವರಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆ ಗೆಲ್ಲಲು ಕಾರ್ಯತಂತ್ರ ರೂಪಿಸುವ ಸಲುವಾಗಿ ಇಂದು ರಾತ್ರಿ ಬೆಳಗಾವಿ ನಗರ ಮತ್ತು‌ ಗ್ರಾಮಾಂತರ ಜಿಲ್ಲಾ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಬೇಕಿತ್ತು. ನಾಳೆ ಬೆಳಗ್ಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಡಲು 8.30ಕ್ಕೆ ಪ್ಲೈಟ್ ನಿಗದಿಯಾಗಿತ್ತು. ಆದ್ರೆ, ಸಿಎಂ ಪ್ರವಾಸ ರದ್ದುಪಡಿಸಿ ದಿಢೀರ್ ಆಗಿ ಬೆಂಗಳೂರಿಗೆ ತೆರಳುತ್ತಿರುವುದು ಕುತೂಹಲ ‌ಮೂಡಿಸಿದೆ.

ಬೆಳಗಾವಿ : ಇಂದು ಬೆಳಗಾವಿಯಲ್ಲಿ ವಾಸ್ತವ್ಯ ಹೂಡಬೇಕಿದ್ದ ಸಿಎಂ ಬಿ ಎಸ್ ಯಡಿಯೂರಪ್ಪನವರ ತಮ್ಮ ಕಾರ್ಯಕ್ರಮಗಳನ್ನು ರದ್ದುಪಡಿಸಿ ದಿಢೀರ್ ಆಗಿ ಬೆಳಗಾವಿ ಪ್ರವಾಸ ಮೊಟಕುಗೊಳಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಿದ್ದಾರೆ.

ಉಪಚುನಾವಣೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಇಂದು ಮಧ್ಯಾಹ್ನ ಬೆಳಗಾವಿಗೆ ಆಗಮಿಸಿದ್ದ ಸಿಎಂ, ಬೆಳಗಾವಿಯಲ್ಲಿಯೇ ವಾಸ್ತವ್ಯ ಹೂಡಬೇಕಿತ್ತು. ಆದ್ರೆ, ನಗರದ ಖಾಸಗಿ ಹೋಟೆಲ್​ನಿಂದ ಧಾರವಾಡ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎನ್ನಲಾಗಿದೆ.‌

belgavi-trip-cancelled-cm-bsy-on-its-way-to-bangalore
ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ

ದಿ.ಸುರೇಶ ಅಂಗಡಿ ಅವರಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆ ಗೆಲ್ಲಲು ಕಾರ್ಯತಂತ್ರ ರೂಪಿಸುವ ಸಲುವಾಗಿ ಇಂದು ರಾತ್ರಿ ಬೆಳಗಾವಿ ನಗರ ಮತ್ತು‌ ಗ್ರಾಮಾಂತರ ಜಿಲ್ಲಾ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಬೇಕಿತ್ತು. ನಾಳೆ ಬೆಳಗ್ಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಡಲು 8.30ಕ್ಕೆ ಪ್ಲೈಟ್ ನಿಗದಿಯಾಗಿತ್ತು. ಆದ್ರೆ, ಸಿಎಂ ಪ್ರವಾಸ ರದ್ದುಪಡಿಸಿ ದಿಢೀರ್ ಆಗಿ ಬೆಂಗಳೂರಿಗೆ ತೆರಳುತ್ತಿರುವುದು ಕುತೂಹಲ ‌ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.