ಬೆಳಗಾವಿ : ದೇಶಾದ್ಯಂತ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸುವರ್ಣಸೌಧದ ಕಟ್ಟಡ ತ್ರಿವರ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ನೋಡುಗರ ಗಮನ ಸೆಳೆಯುತ್ತಿದೆ.
ಸ್ವಾತಂತ್ರ್ಯ ಗಳಿಸಿ 75ನೇ ವರ್ಷದ ಸವಿನೆನಪಿಗಾಗಿ ದೇಶದಾದ್ಯಂತ ಮಾರ್ಚ್ 12ರಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಡಳಿತದಿಂದ ಬೆಳಗಾವಿ ಸುವರ್ಣ ಸೌಧದ ಕಟ್ಟಡಕ್ಕೆ ತ್ರಿವರ್ಣ ಬಣ್ಣಗಳ ಲೈಟಿಂಗ್ ಮಾಡಿದ್ದು, ಕಟ್ಟಡ ಝಗಮಗಿಸುತ್ತದೆ.
ಸುವರ್ಣಸೌಧದ ಇಡೀ ಕಟ್ಟಡಕ್ಕೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಲೈಟಿಂಗ್ಸ್ನಿಂದ ಅಲಂಕಾರ ಮಾಡಲಾಗಿದ್ದು, ಸುತ್ತಮುತ್ತಲಿನ ನೂರಾರು ಜನರು ಸುವರ್ಣ ನೋಡಲು ಆಗಮಿಸುತ್ತಿದ್ದಾರೆ.
![belgavi suvarnasoudha independence day lighting](https://etvbharatimages.akamaized.net/etvbharat/prod-images/kn-bgm-06-15-suvran-soudha-vsl-ka10029_15082021204039_1508f_1629040239_890.jpg)
ಭಾನುವಾರ ಸಂಜೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಸುವರ್ಣಸೌಧ ನೋಡಲು ಕುಟುಂಬ ಸಮೇತ ಆಗಮಿಸಿದ್ದು ವಿಶೇಷವಾಗಿತ್ತು. ಇನ್ನು ಕೊರೊನಾ ಕಾರಣಕ್ಕೆ ಸುವರ್ಣಸೌಧದಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ.