ETV Bharat / state

ಮಡಿವಾಳ ಸಮಾಜಕ್ಕೆ ಎಸ್​ಸಿ ಮೀಸಲಾತಿ ನೀಡದಿದ್ದರೆ ಆತ್ಮಹತ್ಯೆ: ಪ್ರತಿಭಟನಾಕಾರರ ಎಚ್ಚರಿಕೆ

ಉತ್ತರಕರ್ನಾಟಕ ಮಡಿವಾಳರ ಸಂಘದಿಂದ ಸಮಾಜದ ಮುಖಂಡರು ಬೆಳಗಾವಿಯ ಸುವರ್ಣ ಸೌಧ ಗಾರ್ಡನ್ ಬಳಿ‌ ಪ್ರತಿಭಟನೆ ನಡೆಸಿದರು.

author img

By ETV Bharat Karnataka Team

Published : Dec 5, 2023, 7:06 PM IST

Updated : Dec 5, 2023, 7:57 PM IST

Madiwala community Protest
ಎಸ್ಸಿ ಮೀಸಲಾತಿಗೆ ಆಗ್ರಹಿಸಿ ಮಡಿವಾಳ ಸಮಾಜದಿಂದ ಪ್ರತಿಭಟನೆ
ಎಸ್ಸಿ ಮೀಸಲಾತಿಗೆ ಆಗ್ರಹಿಸಿ ಮಡಿವಾಳ ಸಮಾಜದಿಂದ ಪ್ರತಿಭಟನೆ

ಬೆಳಗಾವಿ: ಮಡಿವಾಳ ಸಮಾಜವನ್ನು ಕೂಡಲೇ ಪರಿಶಿಷ್ಟ ಜಾತಿಗೆ ಸೇರಿಸಬೇಕು. ಡಾ ಅನ್ನಪೂರ್ಣಮ್ಮನವರ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಕೂಡಲೇ ಅನುಷ್ಠಾನಕ್ಕೆ ತರಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಡಿವಾಳ ಸಮಾಜ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಉತ್ತರಕರ್ನಾಟಕ ಮಡಿವಾಳರ ಸಂಘದ ಬಾಗಲಕೋಟೆ ಪದಾಧಿಕಾರಿಗಳು ಇಂದು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿ‌ ಪ್ರತಿಭಟನೆ ನಡೆಸಿದರು. ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು 2008ರಲ್ಲಿ ಅಂದಿನ ಸರ್ಕಾರಕ್ಕೆ ಡಾ‌ ಅನ್ನಪೂರ್ಣಮ್ಮನವರ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ‌. ವರದಿ ಸಲ್ಲಿಸಿ 16 ವರ್ಷ ಕಳೆದರೂ ಅನುಷ್ಠಾನಗೊಳ್ಳದಿರುವುದು ದುರ್ದೈವದ ಸಂಗತಿ.

ಮಡಿವಾಳರು ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯಿಂದ ವಂಚಿತರಾಗಿದ್ದು, ಕೂಡಲೇ ಆ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಮೀಸಲಾತಿ ಕಲ್ಪಿಸಬೇಕು. ಅದೇ ರೀತಿ 12ನೇ ಶತಮಾನದ ನಿಜ ಶರಣ ಮಡಿವಾಳ ಮಾಚಿದೇವರ ಜನ್ಮಸ್ಥಳ ದೇವರ ಹಿಪ್ಪರಗಿ ಮತ್ತು ಐಕ್ಯ ಸ್ಥಳವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

18 ರಾಜ್ಯಗಳಲ್ಲಿ ಎಸ್ಸಿ ಮೀಸಲಾತಿ ನೀಡಿ ಆದೇಶ: 1984ರಲ್ಲಿ ಧೋಬಿ, ರಜಕ, ಅಗಸರು, ಮಣ್ಣನ್, ಸಾಕಲಿ ಹೆಸರುಗಳಿಂದ ಕರೆಯುವ ಮಡಿವಾಳರನ್ನು ಈಗಾಗಲೇ ದೇಶದ 18 ರಾಜ್ಯಗಳಲ್ಲಿ ಒಬಿಸಿಯಿಂದ ಎಸ್ಸಿ ಮೀಸಲಾತಿ ನೀಡಿ ಆದೇಶಿಸಲಾಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಮಡಿವಾಳ ಸಮಾಜಕ್ಕೆ ಎಸ್ಸಿ ಮೀಸಲಾತಿ ಸಿಕ್ಕಿಲ್ಲ.

ರಾಜ್ಯದಲ್ಲಿ ಮಾತ್ರ ಮಡಿವಾಳ ಸಮಾಜ ಆರ್ಥಿಕ, ಸಾಮಾಜಿಕವಾಗಿ ಬಹಳಷ್ಟು ಹಿಂದುಳಿದಿದೆ. ಆದರೆ ರಾಜ್ಯದಲ್ಲಿ ಸುಮಾರು 30 ಲಕ್ಷ ಜನಸಂಖ್ಯೆ ಇರುವ ಮಡಿವಾಳ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತಗೊಂಡಿದೆ. ಡಾ ಅನ್ನಪೂರ್ಣಮ್ಮನವರ ವರದಿಯನ್ನಾಧರಿಸಿ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಈಟಿವಿ ಭಾರತ ಜೊತೆಗೆ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ವೀರಘಂಟಿ ಮಾತನಾಡಿ, ಎಲ್ಲ ಜನರ ಬಟ್ಟೆಗಳ‌ ಮಲೀನ ತೊಳೆಯುವ ಮಡಿವಾಳ ಸಮಾಜವನ್ನು ಎಸ್ಸಿಗೆ ಸೇರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ನಾವು ಊರೊಳಗೆ ಇದ್ದು ಅಸ್ಪೃಶ್ಯರಾಗಿದ್ದೇವೆ. ಈ ಬಾರಿಯೂ ನಮ್ಮ ಬೇಡಿಕೆ ಈಡೇರದಿದ್ದರೆ ಗುಜರಾತ ಮಾದರಿ ಹೋರಾಟ ಮಾಡಿ, ಮೀಸಲಾತಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ ಕೆ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಕೃಷ್ಣ ವೀರಘಂಟಿ, ಗೌರವಾಧ್ಯಕ್ಷ ಎಚ್.ಎಂ. ಅಶೋಕ, ಕಾರ್ಯಾಧ್ಯಕ್ಷ ಸಾಯಬಣ್ಣ ಮಡಿವಾಳರ ಸೇರಿ ಮತ್ತಿತರರು ಇದ್ದರು.

ಇದನ್ನೂಓದಿ:ವೇತ‌ನ ತಾರತಮ್ಯ ಹೋಗಲಾಡಿಸಿ, ಸೇವಾ ಭದ್ರತೆ ಒದಗಿಸಿ : ವಿಶೇಷಚೇತನ ಶಾಲಾ ಶಿಕ್ಷಕರ ಆಗ್ರಹ

ಎಸ್ಸಿ ಮೀಸಲಾತಿಗೆ ಆಗ್ರಹಿಸಿ ಮಡಿವಾಳ ಸಮಾಜದಿಂದ ಪ್ರತಿಭಟನೆ

ಬೆಳಗಾವಿ: ಮಡಿವಾಳ ಸಮಾಜವನ್ನು ಕೂಡಲೇ ಪರಿಶಿಷ್ಟ ಜಾತಿಗೆ ಸೇರಿಸಬೇಕು. ಡಾ ಅನ್ನಪೂರ್ಣಮ್ಮನವರ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಕೂಡಲೇ ಅನುಷ್ಠಾನಕ್ಕೆ ತರಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಡಿವಾಳ ಸಮಾಜ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಉತ್ತರಕರ್ನಾಟಕ ಮಡಿವಾಳರ ಸಂಘದ ಬಾಗಲಕೋಟೆ ಪದಾಧಿಕಾರಿಗಳು ಇಂದು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿ‌ ಪ್ರತಿಭಟನೆ ನಡೆಸಿದರು. ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು 2008ರಲ್ಲಿ ಅಂದಿನ ಸರ್ಕಾರಕ್ಕೆ ಡಾ‌ ಅನ್ನಪೂರ್ಣಮ್ಮನವರ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ‌. ವರದಿ ಸಲ್ಲಿಸಿ 16 ವರ್ಷ ಕಳೆದರೂ ಅನುಷ್ಠಾನಗೊಳ್ಳದಿರುವುದು ದುರ್ದೈವದ ಸಂಗತಿ.

ಮಡಿವಾಳರು ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯಿಂದ ವಂಚಿತರಾಗಿದ್ದು, ಕೂಡಲೇ ಆ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಮೀಸಲಾತಿ ಕಲ್ಪಿಸಬೇಕು. ಅದೇ ರೀತಿ 12ನೇ ಶತಮಾನದ ನಿಜ ಶರಣ ಮಡಿವಾಳ ಮಾಚಿದೇವರ ಜನ್ಮಸ್ಥಳ ದೇವರ ಹಿಪ್ಪರಗಿ ಮತ್ತು ಐಕ್ಯ ಸ್ಥಳವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

18 ರಾಜ್ಯಗಳಲ್ಲಿ ಎಸ್ಸಿ ಮೀಸಲಾತಿ ನೀಡಿ ಆದೇಶ: 1984ರಲ್ಲಿ ಧೋಬಿ, ರಜಕ, ಅಗಸರು, ಮಣ್ಣನ್, ಸಾಕಲಿ ಹೆಸರುಗಳಿಂದ ಕರೆಯುವ ಮಡಿವಾಳರನ್ನು ಈಗಾಗಲೇ ದೇಶದ 18 ರಾಜ್ಯಗಳಲ್ಲಿ ಒಬಿಸಿಯಿಂದ ಎಸ್ಸಿ ಮೀಸಲಾತಿ ನೀಡಿ ಆದೇಶಿಸಲಾಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಮಡಿವಾಳ ಸಮಾಜಕ್ಕೆ ಎಸ್ಸಿ ಮೀಸಲಾತಿ ಸಿಕ್ಕಿಲ್ಲ.

ರಾಜ್ಯದಲ್ಲಿ ಮಾತ್ರ ಮಡಿವಾಳ ಸಮಾಜ ಆರ್ಥಿಕ, ಸಾಮಾಜಿಕವಾಗಿ ಬಹಳಷ್ಟು ಹಿಂದುಳಿದಿದೆ. ಆದರೆ ರಾಜ್ಯದಲ್ಲಿ ಸುಮಾರು 30 ಲಕ್ಷ ಜನಸಂಖ್ಯೆ ಇರುವ ಮಡಿವಾಳ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತಗೊಂಡಿದೆ. ಡಾ ಅನ್ನಪೂರ್ಣಮ್ಮನವರ ವರದಿಯನ್ನಾಧರಿಸಿ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಈಟಿವಿ ಭಾರತ ಜೊತೆಗೆ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ವೀರಘಂಟಿ ಮಾತನಾಡಿ, ಎಲ್ಲ ಜನರ ಬಟ್ಟೆಗಳ‌ ಮಲೀನ ತೊಳೆಯುವ ಮಡಿವಾಳ ಸಮಾಜವನ್ನು ಎಸ್ಸಿಗೆ ಸೇರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ನಾವು ಊರೊಳಗೆ ಇದ್ದು ಅಸ್ಪೃಶ್ಯರಾಗಿದ್ದೇವೆ. ಈ ಬಾರಿಯೂ ನಮ್ಮ ಬೇಡಿಕೆ ಈಡೇರದಿದ್ದರೆ ಗುಜರಾತ ಮಾದರಿ ಹೋರಾಟ ಮಾಡಿ, ಮೀಸಲಾತಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ ಕೆ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಕೃಷ್ಣ ವೀರಘಂಟಿ, ಗೌರವಾಧ್ಯಕ್ಷ ಎಚ್.ಎಂ. ಅಶೋಕ, ಕಾರ್ಯಾಧ್ಯಕ್ಷ ಸಾಯಬಣ್ಣ ಮಡಿವಾಳರ ಸೇರಿ ಮತ್ತಿತರರು ಇದ್ದರು.

ಇದನ್ನೂಓದಿ:ವೇತ‌ನ ತಾರತಮ್ಯ ಹೋಗಲಾಡಿಸಿ, ಸೇವಾ ಭದ್ರತೆ ಒದಗಿಸಿ : ವಿಶೇಷಚೇತನ ಶಾಲಾ ಶಿಕ್ಷಕರ ಆಗ್ರಹ

Last Updated : Dec 5, 2023, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.