ETV Bharat / state

20 ಕಿಲೋ ಮೀಟರ್ ನಡುವೆ 2 ಟೋಲ್: ಚಿಕ್ಕೋಡಿಯಲ್ಲಿ ಪ್ರತಿಭಟನೆ - 2 toll charges between 20 km

ಟೋಲ್​ ಶುಲ್ಕ ವಸೂಲಾತಿ ಹೆಸರಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬೆಳಗಾವಿ ಜಿಲ್ಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಚಿಕ್ಕೋಡಿಯಲ್ಲಿ ಪ್ರತಿಭಟನೆ
author img

By

Published : Sep 17, 2019, 5:28 PM IST

ಚಿಕ್ಕೋಡಿ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಕಬ್ಬೂರ ಪಟ್ಟಣದ ಬಳಿ ಹಾಗೂ ಚಿಂಚಣಿ ಗ್ರಾಮದ ಸೇರಿದಂತೆ ಕೇವಲ 20 ಕಿಲೋ ಮೀಟರ್ ಅಂತರದಲ್ಲಿಯೇ ಎರಡು ಟೋಲ್ ಗೇಟ್ ಆರಂಭಿಸಲಾಗಿದ್ದು,ಇದನ್ನು ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ ನಡೆಸಲಾಯಿತು.

ಕಬ್ಬೂರ ಪಟ್ಟಣದ ಬಳಿ ಇರುವ ಟೋಲ್​ನಲ್ಲಿ ಒಂದು ಕಾರಿಗೆ 30 ರೂ. ಸಂಗ್ರಹಿಸಿದರೆ, ಚಿಂಚಣಿ ಬಳಿ ಇರುವ ಟೋಲ್‍ನಲ್ಲಿ 40 ರೂ. ಶುಲ್ಕ ಪಡೆಯಲಾಗುತ್ತಿದೆ. ಇದು ವಾಹನ ಸವಾವರರಿಗೆ ಹೊರೆಯಾಗುತ್ತದೆ. ಆದ್ದರಿಂದ ಸ್ಥಳೀಯ ಮತ್ತು ಶಾಲಾ ವಾಹನಗಳಿಗೆ ರಿಯಾಯತಿ ನೀಡುವಂತೆ ಪ್ರತಿಭಟಕಾರರು ಒತ್ತಾಯಿಸಿದ್ದಾರೆ.

ಚಿಕ್ಕೋಡಿಯಲ್ಲಿ ಪ್ರತಿಭಟನೆ

ರಾಜ್ಯ ಹೆದ್ದಾರಿಯಲ್ಲಿ ಆರಂಭಿಸಿರುವ ಟೋಲ್‍ಗೇಟ್‍ಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ.ಕೂಡಲೇ ಸ್ಥಳೀಯ ವಾಹನಗಳಿಗೆ ಟೋಲ್ ರಿಯಾಯತಿ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ಚಿಕ್ಕೋಡಿ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಕಬ್ಬೂರ ಪಟ್ಟಣದ ಬಳಿ ಹಾಗೂ ಚಿಂಚಣಿ ಗ್ರಾಮದ ಸೇರಿದಂತೆ ಕೇವಲ 20 ಕಿಲೋ ಮೀಟರ್ ಅಂತರದಲ್ಲಿಯೇ ಎರಡು ಟೋಲ್ ಗೇಟ್ ಆರಂಭಿಸಲಾಗಿದ್ದು,ಇದನ್ನು ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ ನಡೆಸಲಾಯಿತು.

ಕಬ್ಬೂರ ಪಟ್ಟಣದ ಬಳಿ ಇರುವ ಟೋಲ್​ನಲ್ಲಿ ಒಂದು ಕಾರಿಗೆ 30 ರೂ. ಸಂಗ್ರಹಿಸಿದರೆ, ಚಿಂಚಣಿ ಬಳಿ ಇರುವ ಟೋಲ್‍ನಲ್ಲಿ 40 ರೂ. ಶುಲ್ಕ ಪಡೆಯಲಾಗುತ್ತಿದೆ. ಇದು ವಾಹನ ಸವಾವರರಿಗೆ ಹೊರೆಯಾಗುತ್ತದೆ. ಆದ್ದರಿಂದ ಸ್ಥಳೀಯ ಮತ್ತು ಶಾಲಾ ವಾಹನಗಳಿಗೆ ರಿಯಾಯತಿ ನೀಡುವಂತೆ ಪ್ರತಿಭಟಕಾರರು ಒತ್ತಾಯಿಸಿದ್ದಾರೆ.

ಚಿಕ್ಕೋಡಿಯಲ್ಲಿ ಪ್ರತಿಭಟನೆ

ರಾಜ್ಯ ಹೆದ್ದಾರಿಯಲ್ಲಿ ಆರಂಭಿಸಿರುವ ಟೋಲ್‍ಗೇಟ್‍ಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ.ಕೂಡಲೇ ಸ್ಥಳೀಯ ವಾಹನಗಳಿಗೆ ಟೋಲ್ ರಿಯಾಯತಿ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

Intro:ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ
Body:
ಚಿಕ್ಕೋಡಿ :

ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಕಬ್ಬೂರ ಪಟ್ಟಣದ ಬಳಿ ಹಾಗೂ ಚಿಂಚಣಿ ಗ್ರಾಮದ ಸೇರಿದಂತೆ ಕೇವಲ 20 ಕಿಲೋ ಮೀಟರ್ ಅಂತರದಲ್ಲಿಯೇ ಎರಡು ಕಡೆಗೆ ಟೋಲ್ ಗೇಟ್ ಆರಂಭಿಸಲಾಗಿದೆ. ಇದರಿಂದ ಸ್ಥಳೀಯ ಗ್ರಾಮಗಳ ಸಾರ್ವಜನಿಕರಿಗೆ ಅನ್ಯಾಯವಾಗಲಿದ್ದು, ಸ್ಥಳೀಯ ವಾಹಗಳಿಗೆ ಟೋಲ್ ರಿಯಾಯತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಬಳಿ ಆರಂಭಿಸಿದ ಟೋಲ್ ರದ್ದತಿಗೆ ಆಗ್ರಹಿಸಿ ಟೊಲ್ ವಸೂಲಾತಿ ಬಂದ್ ಮಾಡಿ ಚಿಂಚಣಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಮತ್ತು ವಾಹನ ಚಾಲಕರು ಪ್ರತಿಭಟನೆ ನಡೆಸಿದರು.

ಕಬ್ಬೂರ ಪಟ್ಟಣದ ಬಳಿ ಇರುವ ಟೋಲ್ ಗೇಟ್‍ದಲ್ಲಿ ಒಂದು ಕಾರಿಗೆ 30 ರೂ. ಸಂಗ್ರಹಿಸಿದರೇ, ಚಿಂಚಣಿ ಬಳಿ ಇರುವ ಟೋಲ್‍ಗೇಟ್‍ದಲ್ಲಿ ಒಂದು ಕಾರಿಗೆ 40 ರೂ. ಸುಂಕ ಪಡೆಯಲಾಗುತ್ತಿದ್ದು, ಕೇವಲ 20 ಕಿ.ಮೀ.ಅಂತರದಲ್ಲಿಯೇ ಎರಡು ಟೋಲ್‍ಗೇಟ್ ಆರಂಭಿಸಿರುವುದರಿಂದ ಸ್ಥಳೀಯ ಜನರಿಗೆ ಹೊರೆಯಾಗುತ್ತದೆ. ಆದ್ದರಿಂದ ಸ್ಥಳೀಯ ವಾಹಗಳಿಗೆ ಟೋಲ್ ರಿಯಾಯತಿ ನೀಡಬೇಕು. ಶಾಲಾ ಮಕ್ಕಳ ವಾಹನಕ್ಕೂ ರಿಯಾಯತಿ ನೀಡುವಂತೆ ಒತ್ತಾಯಿಸಿದರು.

ರಾಜ್ಯ ಹೆದ್ದಾರಿಯಲ್ಲಿ ಆರಂಭಿಸಿರುವ ಟೋಲ್‍ಗೇಟ್‍ಗಳಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಕುಡಿಯುವ ನೀರು ಸೇರದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಟೋಲ್ ಆರಂಭಿಸುವ ಮೊದಲು ಟೋಲ್ ಗೇಟ್‍ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಆರಂಭಿಸುವಂತೆ ಆಗ್ರಹಿಸಿದರು. ಕೂಡಲೇ ಸ್ಥಳೀಯ ವಾಹನಗಳಿಗೆ ಟೋಲ್ ರಿಯಾಯತಿ ನೀಡದಿದ್ದಲ್ಲಿ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದರು.          

ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಒಂದೇ ತಾಲೂಕಿನಲ್ಲಿ ಕೇವಲ 20 ಕಿ.ಮೀ.ಗಳಲ್ಲಿ ಎರಡು ಟೋಲ್ ಆರಂಭಿಸಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಎರಡೂ ಟೋಲ್‍ನ್ನು ಒಂದೆ ಕಂಪನಿಯವರು ಆರಂಭಿಸಿದ್ದು, ಕಬ್ಬೂರದಲ್ಲಿ 30 ರೂ. ಮತ್ತು ಚಿಂಚಣಿ ಬಳಿಯಲ್ಲಿರುವ ಟೋಲ್‍ದಲ್ಲಿ 40 ರೂ. ಸುಂಕ ಸಂಗ್ರಹಿಸುತ್ತಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಚಿಂಚಣಿ ಗ್ರಾಮದ ಬಳಿ ಇರುವ ಟೋಲ್‍ಗೇಟ್‍ದಲ್ಲಿ ಸ್ಥಳೀಯ ಗ್ರಾಮಗಳ ವಾಹನ ಚಾಲಕರು ಟೋಲ್ ಬಂದ್ ಮಾಡಿದ್ದರಿಂದ ಟೋಲ್‍ಗೇಟ್‍ದಲ್ಲಿ ಅಲ್ಪ ಸಮಯ ಗೊಂದಲದ ವಾತಾವರಣ ಉಂಟಾಗಿತ್ತು. ಇದೊಂದು ಹಗಲು ಧರೋಡೆಯಾಗಿದೆ ಎಂದು ಸ್ಥಳೀಯ ವಾಹನಗಳ ಚಾಲಕರು ಟೋಲ್ ಗೇಟ್ ಬಳಿ ಸುಂಕ ಸಂಗ್ರಹಿಸುತ್ತಿರುವವರ ವಿರುದ್ಧ ಹಿಡಿ ಶಾಪ ಹಾಕಿದರು.

ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.