ETV Bharat / state

ಪ್ರವಾಹ ಪೀಡಿತ ಜಿಲ್ಲೆಗಳ ಶಾಲೆಗಳಲ್ಲಿ ಶನಿವಾರ, ಭಾನುವಾರವೂ ಪಾಠ ಪ್ರವಚನ

author img

By

Published : Aug 19, 2019, 11:12 PM IST

ಪ್ರವಾಹ ಹಾಗೂ ಭಾರಿ ಮಳೆ ಹಿನ್ನೆಲೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾಲು ಸಾಲು ರಜೆ‌ ನೀಡಲಾಗಿತ್ತು. ಈ ರಜೆಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಎಷ್ಟು ದಿನಗಳ ಕಾಲ ರಜೆಯನ್ನು ನೀಡಲಾಗಿತ್ತೋ ಅಷ್ಟನ್ನು ಬೇರೆ ದಿನಗಳಲ್ಲಿ ತರಗತಿ ನಡೆಸಿ ಸರಿದೂಗಿಸಲು ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಅಲ್ಲದೇ ಅವಶ್ಯಕತೆ ಇದ್ದರೆ ಶನಿವಾರ, ಭಾನುವಾರವೂ ಶಾಲೆಗಳಲ್ಲಿ ತರಗತಿ ನಡೆಸಬಹುದಾಗಿದೆ.

ಶಾಲೆ

ಬೆಂಗಳೂರು: ಪ್ರವಾಹ ಹಾಗೂ ಭಾರಿ ಮಳೆ ಹಿನ್ನೆಲೆ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹಾಗಾಗಿ ರಜೆಗಳನ್ನು ಸರಿದೂಗಿಸಲು ಶನಿವಾರ ಮತ್ತು ಭಾನುವಾರ ತರಗತಿ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ.

ಸಾಲು ಸಾಲು ರಜೆ‌ ನೀಡಿಕೆ ಹಿನ್ನೆಲೆ ಈ‌ ಮೊದಲು ದಸರಾ ರಜೆಯನ್ನ ಕಡಿತಗೊಳಿಸಲು‌ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಆದರೆ ಈ ನಿರ್ಧಾರದಿಂದ ಈಗ ಹಿಂದೆ ಸರಿದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಜಿಲ್ಲಾ ನಿರ್ದೇಶಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ರಜೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಪ್ರವಾಹ ಉಂಟಾಗಿದ್ದ ಜಿಲ್ಲೆಗಳಲ್ಲಿ ಮಾತ್ರ ಎಷ್ಟು ದಿನಗಳ ಕಾಲ ರಜೆಯನ್ನು ನೀಡಲಾಗಿದ್ಯೋ ಅಷ್ಟು ದಿನಗಳನ್ನು ಬೇರೆ ದಿನಗಳಲ್ಲಿ ತರಗತಿ ನಡೆಸಿ ಸರಿದೂಗಿಸಲು ಹೇಳಲಾಗಿದೆ. ಅವಶ್ಯಕತೆ ಇದ್ದರೆ ಶನಿವಾರ ಭಾನುವಾರವೂ ಶಾಲೆಗಳಲ್ಲಿ ತರಗತಿ ನಡೆಸಲು ಸೂಚಿಸಲಾಗಿದೆ.

ಬೆಂಗಳೂರು: ಪ್ರವಾಹ ಹಾಗೂ ಭಾರಿ ಮಳೆ ಹಿನ್ನೆಲೆ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹಾಗಾಗಿ ರಜೆಗಳನ್ನು ಸರಿದೂಗಿಸಲು ಶನಿವಾರ ಮತ್ತು ಭಾನುವಾರ ತರಗತಿ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ.

ಸಾಲು ಸಾಲು ರಜೆ‌ ನೀಡಿಕೆ ಹಿನ್ನೆಲೆ ಈ‌ ಮೊದಲು ದಸರಾ ರಜೆಯನ್ನ ಕಡಿತಗೊಳಿಸಲು‌ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಆದರೆ ಈ ನಿರ್ಧಾರದಿಂದ ಈಗ ಹಿಂದೆ ಸರಿದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಜಿಲ್ಲಾ ನಿರ್ದೇಶಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ರಜೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಪ್ರವಾಹ ಉಂಟಾಗಿದ್ದ ಜಿಲ್ಲೆಗಳಲ್ಲಿ ಮಾತ್ರ ಎಷ್ಟು ದಿನಗಳ ಕಾಲ ರಜೆಯನ್ನು ನೀಡಲಾಗಿದ್ಯೋ ಅಷ್ಟು ದಿನಗಳನ್ನು ಬೇರೆ ದಿನಗಳಲ್ಲಿ ತರಗತಿ ನಡೆಸಿ ಸರಿದೂಗಿಸಲು ಹೇಳಲಾಗಿದೆ. ಅವಶ್ಯಕತೆ ಇದ್ದರೆ ಶನಿವಾರ ಭಾನುವಾರವೂ ಶಾಲೆಗಳಲ್ಲಿ ತರಗತಿ ನಡೆಸಲು ಸೂಚಿಸಲಾಗಿದೆ.

Intro:ಪ್ರವಾಹ ಪೀಡಿತ ಜಿಲ್ಲೆಗಳ ಶಾಲೆಗಳಲ್ಲಿ ಶನಿವಾರ ಭಾನುವಾರವೂ ಪಾಠ ಪ್ರವಚ..‌

ಬೆಂಗಳೂರು: ಪ್ರವಾಹ ಹಾಗೂ ಭಾರಿ ಮಳೆ ಹಿನ್ನಲೆ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು..
ಸಾಲು ಸಾಲು ರಜೆ‌ ನೀಡಿಕೆ ಹಿನ್ನಲೆ ಈ‌ ಮೊದಲು ದಸರಾ ರಜೆಯನ್ನ ಕಡಿತಗೊಳಿಸಲು‌ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿತ್ತು..‌ ಆದರೆ ಈ ನಿರ್ಧಾರದಿಂದ ಈಗ ಹಿಂದೆ ಸರಿದಿರೋ ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಜಿಲ್ಲಾ ನಿರ್ದೇಶಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.. ರಜೆಯನ್ನು ಸರಿದೋಗಿಸುವ ನಿಟ್ಟಿನಲ್ಲಿ ಪ್ರವಾಹವಾಗಿರೋ ಜಿಲ್ಲೆಗಳಲ್ಲಿ ಮಾತ್ರ
ಎಷ್ಟು ದಿನಗಳ ಕಾಲ ರಜೆಯನ್ನು ನೀಡಲಾಗಿದ್ಯೋ ಅಷ್ಟು ದಿನವನ್ನ ಬೇರೆ ದಿನಗಳಲ್ಲಿ ತರಗತಿ ನಡೆಸಿ ಸರಿದೂಗಿಸಲು ಹೇಳಲಾಗಿದೆ.. ಅವಶ್ಯಕತೆ ಇದ್ದರೆ ಶನಿವಾರ ಭಾನುವಾರವೂ ಶಾಲೆಗಳಲ್ಲಿ ತರಗತಿ ನಡೆಸಬಹುದಾಗಿದೆ..

KN_BNG_02_WEEKEND_SCHOOL_SCRIPT_7201801Body:..Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.