ETV Bharat / state

ಅ.23-24ರಂದು ಉಪ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಜೆಡಿಎಸ್ ಜಿಲ್ಲಾಧ್ಯಕ್ಷ ಆರ್. ಪ್ರಕಾಶ್

author img

By

Published : Oct 16, 2019, 3:18 PM IST

Updated : Oct 16, 2019, 3:38 PM IST

ಉಪಚುನಾವಣೆಗೆ 15 ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ನ್ಯಾಯಾಲಯದ ತೀರ್ಪು ನೋಡಿ 23-24 ಕ್ಕೆ ಪಟ್ಟಿ ಬಿಡುಗಡೆ ಮಾಡ್ತೀವಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್. ಪ್ರಕಾಶ್ ತಿಳಿಸಿದ್ದಾರೆ.

ಜೆಡಿಎಸ್ ಜಿಲ್ಲಾಧ್ಯಕ್ಷ ಆರ್. ಪ್ರಕಾಶ್

ಬೆಂಗಳೂರು: ಡಿಸೆಂಬರ್​ನಲ್ಲಿ ನಡೆಯಲಿರುವ ಉಪಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 15 ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ನ್ಯಾಯಾಲಯದ ತೀರ್ಪು ನೋಡಿ ಅಕ್ಟೋಬರ್​ 23-24 ಕ್ಕೆ ಪಟ್ಟಿ ಬಿಡುಗಡೆ ಮಾಡ್ತೀವಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್. ಪ್ರಕಾಶ್ ತಿಳಿಸಿದ್ದಾರೆ.

ನಗರದ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜೀನಾಮೆ ನೀಡಿ ನಂತರ ಅನರ್ಹರಾಗಿರುವ 15 ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ. 15 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಬ್ಲೂ ಪ್ರಿಂಟ್ ರೆಡಿ ಮಾಡಿದ್ದು, ನ್ಯಾಯಾಲಯದ ತೀರ್ಪು ನೋಡಿ ಅ. 23-24 ಕ್ಕೆ ಪಟ್ಟಿ ಬಿಡುಗಡೆ ಮಾಡ್ತೀವಿ ಎಂದರು. ಎಸ್.ಟಿ. ಸೋಮಶೇಖರ್ ಪಲಾಯನ ಮಾಡಿದ್ದೇ ಸೋಲುವ ಭಯದಿಂದ, ಬಿಜೆಪಿ ವಿರುದ್ಧ ಗುಡುಗಿದ್ದ ಅವರು ಈಗ ಬಿಜೆಪಿ ಸೇರ್ತಿದ್ದಾರೆ. ನಮ್ಮ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇಲ್ಲ, ಈ ಬಾರಿ ಕೂಡ ಯಶವಂತಪುರಕ್ಕೆ ಜವರಾಯಿಗೌಡರೇ ಜೆಡಿಎಸ್ ಅಭ್ಯರ್ಥಿ ಆಗ್ತಾರೆ ಎಂದು ಹೇಳಿದರು.

ಇನ್ನು ನಗರದ ಐದೂ ಜನ ಅನರ್ಹ ಶಾಸಕರಲ್ಲಿ ಅಕ್ರಮ ಹಣ ಇದೆ. ಮತದಾರರಿಗೆ ಈಗಲೇ ಹಣ ಹಂಚೋಕೆ ಶುರು ಮಾಡಿದ್ದಾರೆ. ಆದರೂ ಐಟಿ ಇಲಾಖೆ ಯಾಕೆ ಈ ಐವರು ಶಾಸಕರ ಮೇಲೆ ದಾಳಿ ಮಾಡ್ತಿಲ್ಲ. ಎಲ್ಲ ನಿಯಮ ಗಾಳಿಗೆ ತೂರಿ ಟೆಂಡರ್ ತೆಗೆದುಕೊಳ್ತಿದ್ದಾರೆ. ಆ ಮೂಲಕ ಹಣ ಮಾಡುತ್ತಲೂ ಇದ್ದಾರೆ. ದಯಮಾಡಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.

ಬೆಂಗಳೂರು: ಡಿಸೆಂಬರ್​ನಲ್ಲಿ ನಡೆಯಲಿರುವ ಉಪಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 15 ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ನ್ಯಾಯಾಲಯದ ತೀರ್ಪು ನೋಡಿ ಅಕ್ಟೋಬರ್​ 23-24 ಕ್ಕೆ ಪಟ್ಟಿ ಬಿಡುಗಡೆ ಮಾಡ್ತೀವಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್. ಪ್ರಕಾಶ್ ತಿಳಿಸಿದ್ದಾರೆ.

ನಗರದ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜೀನಾಮೆ ನೀಡಿ ನಂತರ ಅನರ್ಹರಾಗಿರುವ 15 ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ. 15 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಬ್ಲೂ ಪ್ರಿಂಟ್ ರೆಡಿ ಮಾಡಿದ್ದು, ನ್ಯಾಯಾಲಯದ ತೀರ್ಪು ನೋಡಿ ಅ. 23-24 ಕ್ಕೆ ಪಟ್ಟಿ ಬಿಡುಗಡೆ ಮಾಡ್ತೀವಿ ಎಂದರು. ಎಸ್.ಟಿ. ಸೋಮಶೇಖರ್ ಪಲಾಯನ ಮಾಡಿದ್ದೇ ಸೋಲುವ ಭಯದಿಂದ, ಬಿಜೆಪಿ ವಿರುದ್ಧ ಗುಡುಗಿದ್ದ ಅವರು ಈಗ ಬಿಜೆಪಿ ಸೇರ್ತಿದ್ದಾರೆ. ನಮ್ಮ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇಲ್ಲ, ಈ ಬಾರಿ ಕೂಡ ಯಶವಂತಪುರಕ್ಕೆ ಜವರಾಯಿಗೌಡರೇ ಜೆಡಿಎಸ್ ಅಭ್ಯರ್ಥಿ ಆಗ್ತಾರೆ ಎಂದು ಹೇಳಿದರು.

ಇನ್ನು ನಗರದ ಐದೂ ಜನ ಅನರ್ಹ ಶಾಸಕರಲ್ಲಿ ಅಕ್ರಮ ಹಣ ಇದೆ. ಮತದಾರರಿಗೆ ಈಗಲೇ ಹಣ ಹಂಚೋಕೆ ಶುರು ಮಾಡಿದ್ದಾರೆ. ಆದರೂ ಐಟಿ ಇಲಾಖೆ ಯಾಕೆ ಈ ಐವರು ಶಾಸಕರ ಮೇಲೆ ದಾಳಿ ಮಾಡ್ತಿಲ್ಲ. ಎಲ್ಲ ನಿಯಮ ಗಾಳಿಗೆ ತೂರಿ ಟೆಂಡರ್ ತೆಗೆದುಕೊಳ್ತಿದ್ದಾರೆ. ಆ ಮೂಲಕ ಹಣ ಮಾಡುತ್ತಲೂ ಇದ್ದಾರೆ. ದಯಮಾಡಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.

Intro:newsBody:ಉಪಚುನಾವಣೆ ಅಭ್ಯರ್ಥಿ ಪಟ್ಟಿ ಅ. 23-24 ಕ್ಕೆ ಪಟ್ಟಿ ಬಿಡುಗಡೆ ಮಾಡ್ತೀವಿ: ಪ್ರಕಾಶ್

ಬೆಂಗಳೂರು: ಡಿಸೆಂಬರ್ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 17 ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದೇವೆ ಎಂದು ಜೆಡಿಎಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಆರ್. ಪ್ರಕಾಶ್ ತಿಳಿಸಿದ್ದಾರೆ.
ನಗರದ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜೀನಾಮೆ ನೀಡಿ ನಂತರ ಅನರ್ಹರಾಗಿರುವ 17 ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ. 17 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಬ್ಲೂ ಪ್ರಿಂಟ್ ರೆಡಿ ಮಾಡಿದ್ದೇವೆ. ನ್ಯಾಯಾಲಯದ ತೀರ್ಪು ನೋಡಿ 23-24 ಕ್ಕೆ ಪಟ್ಟಿ ಬಿಡುಗಡೆ ಮಾಡ್ತೀವಿ ಎಂದರು.
ಜವರಾಯಿಗೌಡ ಅಭ್ಯರ್ಥಿ
ಯಶವಂತಪುರದಲ್ಲಿ ಕೂದಲೆಳೆ ಅಂತರದಲ್ಲಿ ಕಳೆದಬಾರಿ ಸೋತಿದ್ವಿ. ಈ ಬಾರಿ ನಿಶ್ಚಿತವಾಗಿ ಗೆಲ್ತೀವಿ. ಜವರಾಯಿಗೌಡ ಗೆಲ್ತಾರೆ. ಎಸ್.ಟಿ. ಸೋಮಶೇಖರ್ ಪಲಾಯನ ಮಾಡಿದ್ದೇ ಸೋಲುವ ಭಯದಿಂದ. ಬಿಜೆಪಿ ವಿರುದ್ಧ ಗುಡುಗಿದ್ದ ಸೋಮಶೇಖರ್ ಈಗ ಬಿಜೆಪಿ ಸೇರ್ತಿದ್ದಾರೆ. ನಮ್ಮ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಜವರಾಯಿಗೌಡ ಕಾಂಗ್ರೆಸ್ ಹೋಗ್ತಾರೆ ಎಂಬ ವದಂತಿ ಹರಡಿದೆ. ಆದ್ರೆ ಅದು ಸುಳ್ಳು ಈ ಬಾರಿ ಕೂಡ ಯಶವಂತಪುರಕ್ಕೆ ಜವರಾಯಿಗೌಡರೇ ಜೆಡಿಎಸ್ ಅಭ್ಯರ್ಥಿ ಆಗ್ತಾರೆ ಎಂದು ಹೇಳಿದರು.
ಕಿರು ಹೊತ್ತಿಗೆ
ನಮ್ಮ ಪಕ್ಷ ಅಸ್ತಿತ್ವ ಉಳಿಸಿಕೊಳ್ಳಲಿದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಕೂಡ ಜೆಡಿಎಸ್ 93,000 ಮತಗಳಲ್ಲಿ ಗೆದ್ದಿದ್ವಿ. ಈ ಬಾರಿ ಆ ಕ್ಷೇತ್ರವನ್ನೂ ಉಳಿಸಿಕೊಳ್ತೇವೆ. ಮಹಾಲಕ್ಷ್ಮಿ ಲೇಔಟ್ ಶಾಸಕರು ಕ್ಷೇತ್ರದ ಜನತೆಗೆ ಮಾಡಿದ ದ್ರೋಹವನ್ನು ಮನೆ ಮನೆಗೆ ತಲುಪಿಸ್ತೇವೆ. ಗೋಪಾಲಯ್ಯನವರಿಗೆ 23 ಪ್ರಶ್ನೆ ಕೇಳಿ ಕಿರು ಹೊತ್ತಿಗೆ ಬಿಡುಗಡೆ ಮಾಡ್ತೀವಿ. ಯಶವಂತಪುರ ಹಾಗೂ ಮಹಾಲಕ್ಷ್ಮಿ ಲೇಔಟ್ ಎರಡೂ ಕ್ಷೇತ್ರಗಳನ್ನ ನಾವು ಗೆಲ್ತೇವೆ ಎಂದರು.
ಬೆಂಗಳೂರಿನ ಐದೂ ಜನ ಅನರ್ಹ ಶಾಸಕರಲ್ಲಿ ಅಕ್ರಮ ಹಣ ಇದೆ. ಮತದಾರರಿಗೆ ಈಗಲೇ ಹಣ ಹಂಚೋಕೆ ಶುರು ಮಾಡಿದ್ದಾರೆ. ಅವರ ಬಳಿ ನೂರಾರು ಕೋಟಿ ಇದೆ. ಐಟಿ ಇಲಾಖೆ ಯಾಕೆ ಈ ಐವರು ಶಾಸಕರ ಮೇಲೆ ದಾಳಿ ಮಾಡ್ತಿಲ್ಲ. ಎಲ್ಲ ನಿಯಮ ಗಾಳಿಗೆ ತೂರಿ ಟೆಂಡರ್ ತೆಗೆದುಕೊಳ್ತಿದ್ದಾರೆ. ಆ ಮೂಲಕ ಹಣ ಮಾಡುತ್ತಲೂ ಇದ್ದಾರೆ. ದಯಮಾಡಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭ ಅವರು ಒತ್ತಾಯಿಸಿದರು.
Conclusion:news
Last Updated : Oct 16, 2019, 3:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.