ETV Bharat / state

ಹೊಸ ಸಂಚಲನ ಸೃಷ್ಟಿಸಿದ ಈಟಿವಿ ಭಾರತ ವರದಿ.. ಗೋಹತ್ಯೆ ನಿಷೇಧ ಕಾಯ್ದೆಗೆ ಮತ್ತಷ್ಟು ಬಲ.. - ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಕರ್ನಾಟಕದಲ್ಲಿ ಗೋ ಹತ್ಯಾನಿಷೇಧ ಕಾಯ್ದೆ ಜಾರಿಗೆ ತರುವುದು ಶತಃಸಿದ್ಧ. ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೇ ಈ ವಿಷಯ ಪ್ರಸ್ತಾಪಿಸಿದ್ದೆವು‌. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಗೋ ಹತ್ಯಾ ನಿಷೇಧ ಕಡ್ಡಾಯಗೊಳಿಸುತ್ತೇವೆ. ಇರುವ ಕಾಯ್ದೆಗೆ ಮತ್ತಷ್ಟು ಶಕ್ತಿ ತುಂಬಲಾಗುತ್ತದೆ ಎಂದು ಬಿಜಿಪಿ ಎಂಎಲ್‌ಸಿ ಎನ್‌.ರವಿಕುಮಾರ್‌ ಹೇಳಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಶತಃಸಿದ್ದ: ರವಿಕುಮಾರ್
author img

By

Published : Oct 28, 2019, 4:03 PM IST

ಬೆಂಗಳೂರು: ಅಧಿಕಾರಿಗಳ ನಿರ್ಲಕ್ಷದಿಂದ ಅಮೃತ್​ ಮಹಲ್ ತಳಿಯ ಜಾನುವಾರುಗಳು ರೋಧನೆ ಅನುಭವಿಸುತ್ತಿರುವ ಬಗ್ಗೆ ಈಟಿವಿ ಭಾರತ ಬಿತ್ತರಿಸಿದ ವರದಿ ರಾಜ್ಯದಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿದೆ. ಕರ್ನಾಟಕದಲ್ಲಿ ಗೋ ಹತ್ಯಾ ನಿಷೇಧ ಕಡ್ಡಾಯಗೊಳಿಸುವುದಷ್ಟೇ ಅಲ್ಲ, ಅದನ್ನ ಮತ್ತಷ್ಟು ಬಲಪಡಿಸುವುದಾಗಿ ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ... ಜಿಲ್ಲಾಡಳಿತದ ಕಣ್ಣು ತೆರೆಸಿದ ಈಟಿವಿ ಭಾರತ .. 1 ಗಂಟೆಯೊಳಗೆ ಫಲಶ್ರುತಿ.. ಅವು ನರಕದಿಂದ ಪಾರಾಗಲಿ!

ಬಿಜೆಪಿ ಕಚೇರಿಯಲ್ಲಿ ಗೋ ಪೂಜೆಯ ಸಂಭ್ರಮಾಚರಣೆ ಮಾಡಲಾಯಿತು. ಲಕ್ಷ್ಮಿ ಪೂಜೆ ಪ್ರಯುಕ್ತ ಗೋ ಪೂಜೆ ಹಾಗೂ ಭಗಿನಿ ನಿವೇದಿತಾ ಜನ್ಮದಿನವನ್ನು ಆಚರಿಸಲಾಯಿತು. ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎನ್. ರವಿಕುಮಾರ್, ಚನ್ನರಾಯಪಟ್ಟಣದ ಬಳಿಯ ಅಮೃತಮಹಲ್ ಕಾವಲ್​ನಲ್ಲಿ ತೊಂದರೆಗೆ ಸಿಲುಕಿದ್ದ ಎಲ್ಲ ಗೋವುಗಳನ್ನು ರಕ್ಷಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ವತಃ ಸಿಎಂ ಯಡಿಯೂರಪ್ಪ ಅವರೇ ಆಸಕ್ತಿ ವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ಗೋವು ಸಂರಕ್ಷಣೆ ಮಾಡಿಸಿ, ಅವುಗಳಿಗೆ ಮೇವು ಹಾಗೂ ಪ್ರತ್ಯೇಕ ಸ್ಥಳದಲ್ಲಿ ಆಶ್ರಯದ ವ್ಯವಸ್ಥೆ ಮಾಡಿಸಿದ್ದಾರೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆಗೆ ಮತ್ತಷ್ಟು ಬಲ ತುಂಬ್ತೀವಿ.. ಎನ್‌.ರವಿಕುಮಾರ್

ಈಟಿವಿ ಭಾರತ ನಿನ್ನೆಯಷ್ಟೇ ಚನ್ನರಾಯಪಟ್ಟಣದ ಅಮೃತ್‌ ಮಹಲ್‌ ಕಾವಲ್‌ನಲ್ಲಿ ಜಾನುವಾರುಗಳು ನರಕ ಅನುಭವಿಸುತ್ತಿರುವ ಬಗ್ಗೆ ಲಕ್ಷ ಲಕ್ಷ ನೀಡಿದ್ರೂ ನಿರ್ಲಕ್ಷ್ಯ.. ಅಮೃತ್ ಮಹಲ್ ಜಾನುವಾರುಗಳಿಗೆ ನರಕ.. ಎಂಬ ಸುದ್ದಿ ಪ್ರಸಾರ ಮಾಡಿತ್ತು. ಇದಾದ 1 ಗಂಟೆಯೊಳಗೆ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಶಾಸಕರು ಭೇಟಿ ನೀಡಿದರು.

ಬೆಂಗಳೂರು: ಅಧಿಕಾರಿಗಳ ನಿರ್ಲಕ್ಷದಿಂದ ಅಮೃತ್​ ಮಹಲ್ ತಳಿಯ ಜಾನುವಾರುಗಳು ರೋಧನೆ ಅನುಭವಿಸುತ್ತಿರುವ ಬಗ್ಗೆ ಈಟಿವಿ ಭಾರತ ಬಿತ್ತರಿಸಿದ ವರದಿ ರಾಜ್ಯದಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿದೆ. ಕರ್ನಾಟಕದಲ್ಲಿ ಗೋ ಹತ್ಯಾ ನಿಷೇಧ ಕಡ್ಡಾಯಗೊಳಿಸುವುದಷ್ಟೇ ಅಲ್ಲ, ಅದನ್ನ ಮತ್ತಷ್ಟು ಬಲಪಡಿಸುವುದಾಗಿ ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ... ಜಿಲ್ಲಾಡಳಿತದ ಕಣ್ಣು ತೆರೆಸಿದ ಈಟಿವಿ ಭಾರತ .. 1 ಗಂಟೆಯೊಳಗೆ ಫಲಶ್ರುತಿ.. ಅವು ನರಕದಿಂದ ಪಾರಾಗಲಿ!

ಬಿಜೆಪಿ ಕಚೇರಿಯಲ್ಲಿ ಗೋ ಪೂಜೆಯ ಸಂಭ್ರಮಾಚರಣೆ ಮಾಡಲಾಯಿತು. ಲಕ್ಷ್ಮಿ ಪೂಜೆ ಪ್ರಯುಕ್ತ ಗೋ ಪೂಜೆ ಹಾಗೂ ಭಗಿನಿ ನಿವೇದಿತಾ ಜನ್ಮದಿನವನ್ನು ಆಚರಿಸಲಾಯಿತು. ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎನ್. ರವಿಕುಮಾರ್, ಚನ್ನರಾಯಪಟ್ಟಣದ ಬಳಿಯ ಅಮೃತಮಹಲ್ ಕಾವಲ್​ನಲ್ಲಿ ತೊಂದರೆಗೆ ಸಿಲುಕಿದ್ದ ಎಲ್ಲ ಗೋವುಗಳನ್ನು ರಕ್ಷಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ವತಃ ಸಿಎಂ ಯಡಿಯೂರಪ್ಪ ಅವರೇ ಆಸಕ್ತಿ ವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ಗೋವು ಸಂರಕ್ಷಣೆ ಮಾಡಿಸಿ, ಅವುಗಳಿಗೆ ಮೇವು ಹಾಗೂ ಪ್ರತ್ಯೇಕ ಸ್ಥಳದಲ್ಲಿ ಆಶ್ರಯದ ವ್ಯವಸ್ಥೆ ಮಾಡಿಸಿದ್ದಾರೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆಗೆ ಮತ್ತಷ್ಟು ಬಲ ತುಂಬ್ತೀವಿ.. ಎನ್‌.ರವಿಕುಮಾರ್

ಈಟಿವಿ ಭಾರತ ನಿನ್ನೆಯಷ್ಟೇ ಚನ್ನರಾಯಪಟ್ಟಣದ ಅಮೃತ್‌ ಮಹಲ್‌ ಕಾವಲ್‌ನಲ್ಲಿ ಜಾನುವಾರುಗಳು ನರಕ ಅನುಭವಿಸುತ್ತಿರುವ ಬಗ್ಗೆ ಲಕ್ಷ ಲಕ್ಷ ನೀಡಿದ್ರೂ ನಿರ್ಲಕ್ಷ್ಯ.. ಅಮೃತ್ ಮಹಲ್ ಜಾನುವಾರುಗಳಿಗೆ ನರಕ.. ಎಂಬ ಸುದ್ದಿ ಪ್ರಸಾರ ಮಾಡಿತ್ತು. ಇದಾದ 1 ಗಂಟೆಯೊಳಗೆ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಶಾಸಕರು ಭೇಟಿ ನೀಡಿದರು.

Intro:



ಬೆಂಗಳೂರು: ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ.ಕರ್ನಾಟಕದಲ್ಲಿ ಗೋ ಹತ್ಯಾ ನಿಷೇಧ ಕಡ್ಡಾಯಗೊಳಿಸುತ್ತೇವೆ.ಇರುವ ಕಾಯ್ದೆಗೆ ಮತ್ತಷ್ಟು ಶಕ್ತಿ ತುಂಬಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಗೋಪೂಜೆಯ ಸಂಭ್ರಮಾಚರಣೆ ಮಾಡಲಾಯಿತು. ಲಕ್ಷ್ಮೀಪೂಜೆ ಪ್ರಯುಕ್ತ ಗೋ ಪೂಜೆ ಹಾಗೂ ಭಗಿನಿ ನಿವೇದಿತಾ ಜನ್ಮದಿನವನ್ನು ಆಚರಿಸಲಾಯಿತು.

ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್, ಚನ್ನರಾಯಪಟ್ಟಣದ ಬಳಿಯ ಅಮೃತಮಹಲ್ ಕಾವಲ್ ನಲ್ಲಿ ತೊಂದರೆಗೆ ಸಿಲುಕಿದ್ದ ಎಲ್ಲ ಗೋವುಗಳನ್ನು ರಕ್ಷಿಸಲಾಗಿದೆ.ವಿಷಯ ತಿಳಿಯುತ್ತಿದ್ದಂತೆಯೇ ಸ್ವತಃ ಸಿಎಂ ಯಡಿಯೂರಪ್ಪ ಅವರೇ ಆಸಕ್ತಿ ವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ಗೋವು ಸಂರಕ್ಷಣೆ ಮಾಡಿಸಿ,ಅವುಗಳಿಗೆ ಮೇವು ಹಾಗೂ ಪ್ರತ್ಯೇಕ ಸ್ಥಳದಲ್ಲಿ ಆಶ್ರಯದ ವ್ಯವಸ್ಥೆ ಮಾಡಿಸಿದ್ದಾರೆ ಎಂದರು.

ಈ ಕರ್ನಾಟಕದಲ್ಲಿ ಗೋ ಹತ್ಯಾನಿಷೇಧ ಕಾಯ್ದೆ ಜಾರಿಗೆ ತರುವುದು ಶತಸಿದ್ದ.ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೇ ಈ ವಿಷಯ ಪ್ರಸ್ತಾಪಿಸಿದ್ದೆವು‌.ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ.ಕರ್ನಾಟಕದಲ್ಲಿ ಗೋ ಹತ್ಯಾ ನಿಷೇಧ ಕಡ್ಡಾಯಗೊಳಿಸುತ್ತೇವೆ.ಇರುವ ಕಾಯ್ದೆಗೆ ಮತ್ತಷ್ಟು ಶಕ್ತಿ ತುಂಬಲಾಗುತ್ತದೆ ಎಂದರು.

ಸಿದ್ದರಾಮಯ್ಯಗೆ ಭ್ರಮನಿರಸವಾಗಲಿದೆ:

ಯಡಿಯೂರಪ್ಪನವರ ಸರ್ಕಾರದ ಕಾರ್ಯವೈಖರಿ ಕುಮಾರಸ್ವಾಮಿಯವರಿಗೆ ಮೆಚ್ಚುಗೆಯಾಗಿದೆ ಹಾಗಾಗಿ ಅವರು ಸರ್ಕಾರವನ್ನು ಬೆಂಬಲಿಸುವ ಹೇಳಿಕೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಹತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ.ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬೆಂಬಲ‌ ಪಡೆಯುವ ಅಗತ್ಯವೇ ಬರುವುದಿಲ್ಲ.ಈ ಸರ್ಕಾರ ಉರುಳುವ ಕನಸು ಕಾಣುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಭ್ರಮನಿರಸನವಾಗುತ್ತದೆ. ಕುಮಾರಸ್ವಾಮಿಯವರನ್ನು ಬಿಜೆಪಿ ಅಭಿನಂದಿಸುತ್ತದೆ ಎಂದರು.Body:.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.