ETV Bharat / state

ಎಚ್ಚರ.. ಎಚ್ಚರ... ಎಲ್ಲೆಂದರಲ್ಲಿ ಉಗುಳಿದ್ರೆ ಬೀಳುತ್ತೆ ಭಾರಿ ದಂಡ; ವಸೂಲಿ ಆಯ್ತು ಬರೋಬ್ಬರಿ 3 ಲಕ್ಷ ರೂ. ಪೆನಾಲ್ಟಿ - ಎಲ್ಲೆಂದರಲ್ಲಿ ಉಗುಳಿದ್ರೆ ದಂಡ ವಸೂಲಿ

ಕೋವಿಡ್​ ಎಂಬ ಮಹಾಮಾರಿ ಸ್ವಚ್ಛತೆ ಕುರಿತು ಪ್ರತಿ ಕ್ಷಣವೂ ನಮ್ಮನ್ನು ಎಚ್ಚರಿಸಿದೆ. ಅದಾಗ್ಯೂ ಒಂದಿಷ್ಟು ಮಂದಿ ಸ್ವಚ್ಛತೆ ಪಾಲನೆಗೆ ಹಿಂದೇಟು ಹಾಕುತ್ತಾರೆ. ನಿತ್ಯ ಸಾವಿರಾರು ಮಂದಿ ಸೇರುವ ಬಸ್​ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸಾರಿಗೆ ನಿಗಮ ಹಲವು ಕ್ರಮಗಳನ್ನು ಕೈಗೊಂಡಿದೆ.

Transport agency took measures at bus stand  to control covide
ಎಚ್ಚರ: ಎಲ್ಲೆಂದರಲ್ಲಿ ಉಗುಳಿದ್ರೆ ಬೀಳುತ್ತೆ ಭಾರಿ ದಂಡ; ವಸೂಲಿ ಆಯ್ತು ಬರೋಬ್ಬರಿ 3 ಲಕ್ಷ ರೂಪಾಯಿ!
author img

By

Published : Feb 18, 2021, 12:55 PM IST

ಬೆಂಗಳೂರು: ಮಹಾಮಾರಿ ಕೋವಿಡ್​ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಸಂಕಷ್ಟದ ಜೊತೆಗೆ ಒಂದಿಷ್ಟು ಪಾಠವನ್ನೂ ಕಲಿಸಿದೆ, ಹೌದು ಈ ಸೋಂಕು ಹರಡುವ ಪರಿಣಾಮ ಸ್ವಚ್ಛತೆಗೆ ಭಾರಿ ಮಹತ್ವ ಕೊಡಲು ಆರಂಭಿಸಿದೆವು. ಆದರೂ ಬುದ್ಧಿ ಕಲಿಯದ ಕೆಲವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ.

ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆ ಬಸ್ ನಿಲ್ದಾಣ, ಕಚೇರಿ, ಘಟಕ ಹಾಗೂ ವಿಭಾಗೀಯ ಕಾರ್ಯಾಗಾರ, ತರಬೇತಿ ಕೇಂದ್ರ ಸೇರಿದಂತೆ ಉಪಹಾರ ಗೃಹಗಳ ಆವರಣಗಳಲ್ಲಿ ಉಗುಳುವಂತಹ ವ್ಯಕ್ತಿಗಳಿಗೆ ದಂಡ ವಿಧಿಸುವ ಕಾರ್ಯ ನಡೆಯುತ್ತಿದೆ. ಬೆಂಗಳೂರು, ದಾವಣಗೆರೆ, ರಾಮನಗರ, ತುಮಕೂರು ಸೇರಿದಂತೆ ಮಂಡ್ಯ, ಹಾಸನ, ಮಂಗಳೂರು ಭಾಗಗಳಲ್ಲಿ ಎಲ್ಲೆಂದರಲ್ಲಿ ಉಗುಳಿದ ವ್ಯಕ್ತಿಗಳಿಗೆ ದಂಡ ವಿಧಿಸಲಾಗಿದೆ.

ಬೆಂಗಳೂರು ಬಸ್​ ನಿಲ್ದಾಣ

ಬಸ್​​ ನಿಲ್ದಾಣಗಳ ಪರಿಸ್ಥಿತಿ:

ನಿತ್ಯ ಚಟುವಟಿಕೆಗಳಿಂದ ಇರುತ್ತಿದ್ದ ಸ್ಥಳಗಳೆಂದರೆ ಬಸ್​​ ನಿಲ್ದಾಣಗಳು. ನಿತ್ಯ ಲಕ್ಷಾಂತರ ಪ್ರಯಾಣಿಕರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪ್ರಯಾಣ ಬೆಳೆಸುತ್ತಾರೆ. ಆದರೆ ಮಹಾಮಾರಿ ಕೊರೊನಾ ಸೋಂಕು ದೇಶಕ್ಕೆ ಕಾಲಿಟ್ಟ ಸಮಯದಿಂದ ವಾತಾವರಣವೇ ಬದಲಾಗಿ ಹೋಯ್ತು. ಈಸಾಂಕ್ರಾಮಿಕ ರೋಗ ಹಿನ್ನೆಲೆ, ಸಾಕಷ್ಟು ಮುಂಜಾಗ್ರತಾ ಕ್ರಮಕ್ಕೆ ನಿಗಮಗಳು ಮುಂದಾದವು.

ಕೋವಿಡ್​ ಸಮಸ್ಯೆ:

ಮೊದ ಮೊದಲು ಕೊರೊನಾ ಕಾರಣಕ್ಕೆ ಸಾಮಾಜಿಕ ಅಂತರ, ಬಸ್​​​​ನಲ್ಲಿ ಇಂತಿಷ್ಟು ಪ್ರಯಾಣಿಕರು ಪ್ರಯಾಣಿಸಬೇಕು ಎಂದು ಆದೇಶಿಸಿದರು. ಬಳಿಕ ನಷ್ಟದ ಸುಳಿಗೆ ಸಿಲುಕಿದ ಸಾರಿಗೆ ಸಂಸ್ಥೆಗಳು ಸಂಪೂರ್ಣ ಸೀಟು ಭರ್ತಿ ಮಾಡಲು ಮುಂದಾದವು.‌ ಇದೀಗ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದರೂ ಸಮಸ್ಯೆ ಸಂಪೂರ್ಣವಾಗಿ ದೂರಗೊಂಡಿಲ್ಲ.

ಸದ್ಯದ ಪರಿಸ್ಥಿತಿ:

ಈ ನಿಟ್ಟಿನಲ್ಲಿ ಸದ್ಯ ನಿಲ್ದಾಣಗಳಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋದನ್ನು ನೋಡಿದರೆ, ಬಸ್​​ ನಿಲ್ದಾಣಗಳಲ್ಲಿ, ಬಸ್ಸಿನೊಳಗೆ ಪ್ರಯಾಣಿಕರು ಫೇಸ್ ಮಾಸ್ಕ್ ಅನ್ನು ತಪ್ಪದೇ ಹಾಕುತ್ತಿದ್ದರೂ ಸಾಮಾಜಿಕ ಅಂತರ ಪಾಲನೆ ಶೂನ್ಯ ಪ್ರಮಾಣದಲ್ಲಿದೆ. ಕಾರಣ ಸಾವಿರಾರು ಜನರು ಟರ್ಮಿನಲ್​ಗೆ ಆಗಮಿಸುವುದರಿಂದ ಸಾಮಾಜಿಕ ಅಂತರ ಪಾಲನೆ ಕಷ್ಟವಾಗಿದೆ. ಇನ್ನು ಬಸ್ಸುಗಳು ಡಿಪೋದಿಂದ ಹೊರಡುವಾಗ ಸ್ಯಾನಿಟೈಸ್ ಆಗಿ ಹೊರ ಬರುತ್ತಿದೆ. ಆದರೆ ಪ್ರಯಾಣಿಕರಿಗಾಗಿ ಬಸ್ಸಿನೊಳಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಿಲ್ಲ, ಥರ್ಮಲ್ ಸ್ಕ್ರೀನಿಂಗ್​​ಗೂ ಬ್ರೇಕ್ ಹಾಕಲಾಗಿದೆ.

ಎಲ್ಲರನ್ನೂ ತಪಾಸಣೆ ಮಾಡಲು ಸಾಧ್ಯವೇ?

ಸಾವಿರಾರು ಪ್ರಯಾಣಿಕರು-ಪ್ರವೇಶ ನಿರ್ಗಮನ ಮಾಡುವ ಕಾರಣ ಅವರೆಲ್ಲರನ್ನೂ ತಪಾಸಣೆ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಪ್ರಯಾಣಿಕರೇ ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳುವಂತೆ ಮನವಿ ಮಾಡಲಾಗಿದೆ.

ಉಗುಳಿದವರಿಗೆ ಬೀಳುತ್ತೆ ದಂಡ:

ಆದರೆ, ನಿಗಮದ ಅಧಿಕಾರಿಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಉಗುಳಿದವರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ.

ಯಾವ-ಯಾವ ತಿಂಗಳಿನಲ್ಲಿ ಎಷ್ಟೆಷ್ಟು ದಂಡ ವಸೂಲಿ?

  • ಜೂನ್-2020: 1700ರೂ.
  • ಜುಲೈ- 2020: 14,100ರೂ.
  • ಆಗಸ್ಟ್- 2020: 37,500ರೂ.
  • ಸೆಪ್ಟೆಂಬರ್- 2020: 32,400ರೂ.
  • ಅಕ್ಟೋಬರ್- 2020: 47,400ರೂ.
  • ನವೆಂಬರ್- 2020: 58,600ರೂ.
  • ಡಿಸೆಂಬರ್ - 2020: 57,700ರೂ.
  • ಜನವರಿ- 2021: 55,800ರೂ.

ಈ ಸುದ್ದಿಯನ್ನೂ ಓದಿ: ದೇಶದಲ್ಲಿ ಕೋವಿಡ್​ ಮೃತರ ಸಂಖ್ಯೆ 1.56 ಲಕ್ಷಕ್ಕೆ ಏರಿಕೆ.. 94 ಲಕ್ಷ ಮಂದಿಗೆ ವ್ಯಾಕ್ಸಿನ್​​​

ರಾಜ್ಯದ ವಿವಿಧ ಜಿಲ್ಲೆಗಳ ಬಸ್​​ ನಿಲ್ದಾಣಗಳಲ್ಲಿ ಬಿತ್ತು ದಂಡ:

8 ತಿಂಗಳ ಅವಧಿಯಲ್ಲಿ ಒಟ್ಟು 3,05,200 ರೂಪಾಯಿಯಷ್ಟು ದಂಡ ಹಾಕಲಾಗಿದೆ. ಕೊರೊನಾ ಕಂಟ್ರೋಲ್​ಗೆ ಕೇವಲ ಫೇಸ್ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡಿದರೆ ಸಾಲದು ಎಲ್ಲೆಲ್ಲದರಲ್ಲಿ ಉಗುಳುವುದನ್ನು ನಿಲ್ಲಿಸಬೇಕಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ.

ಬೆಂಗಳೂರು: ಮಹಾಮಾರಿ ಕೋವಿಡ್​ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಸಂಕಷ್ಟದ ಜೊತೆಗೆ ಒಂದಿಷ್ಟು ಪಾಠವನ್ನೂ ಕಲಿಸಿದೆ, ಹೌದು ಈ ಸೋಂಕು ಹರಡುವ ಪರಿಣಾಮ ಸ್ವಚ್ಛತೆಗೆ ಭಾರಿ ಮಹತ್ವ ಕೊಡಲು ಆರಂಭಿಸಿದೆವು. ಆದರೂ ಬುದ್ಧಿ ಕಲಿಯದ ಕೆಲವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ.

ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆ ಬಸ್ ನಿಲ್ದಾಣ, ಕಚೇರಿ, ಘಟಕ ಹಾಗೂ ವಿಭಾಗೀಯ ಕಾರ್ಯಾಗಾರ, ತರಬೇತಿ ಕೇಂದ್ರ ಸೇರಿದಂತೆ ಉಪಹಾರ ಗೃಹಗಳ ಆವರಣಗಳಲ್ಲಿ ಉಗುಳುವಂತಹ ವ್ಯಕ್ತಿಗಳಿಗೆ ದಂಡ ವಿಧಿಸುವ ಕಾರ್ಯ ನಡೆಯುತ್ತಿದೆ. ಬೆಂಗಳೂರು, ದಾವಣಗೆರೆ, ರಾಮನಗರ, ತುಮಕೂರು ಸೇರಿದಂತೆ ಮಂಡ್ಯ, ಹಾಸನ, ಮಂಗಳೂರು ಭಾಗಗಳಲ್ಲಿ ಎಲ್ಲೆಂದರಲ್ಲಿ ಉಗುಳಿದ ವ್ಯಕ್ತಿಗಳಿಗೆ ದಂಡ ವಿಧಿಸಲಾಗಿದೆ.

ಬೆಂಗಳೂರು ಬಸ್​ ನಿಲ್ದಾಣ

ಬಸ್​​ ನಿಲ್ದಾಣಗಳ ಪರಿಸ್ಥಿತಿ:

ನಿತ್ಯ ಚಟುವಟಿಕೆಗಳಿಂದ ಇರುತ್ತಿದ್ದ ಸ್ಥಳಗಳೆಂದರೆ ಬಸ್​​ ನಿಲ್ದಾಣಗಳು. ನಿತ್ಯ ಲಕ್ಷಾಂತರ ಪ್ರಯಾಣಿಕರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪ್ರಯಾಣ ಬೆಳೆಸುತ್ತಾರೆ. ಆದರೆ ಮಹಾಮಾರಿ ಕೊರೊನಾ ಸೋಂಕು ದೇಶಕ್ಕೆ ಕಾಲಿಟ್ಟ ಸಮಯದಿಂದ ವಾತಾವರಣವೇ ಬದಲಾಗಿ ಹೋಯ್ತು. ಈಸಾಂಕ್ರಾಮಿಕ ರೋಗ ಹಿನ್ನೆಲೆ, ಸಾಕಷ್ಟು ಮುಂಜಾಗ್ರತಾ ಕ್ರಮಕ್ಕೆ ನಿಗಮಗಳು ಮುಂದಾದವು.

ಕೋವಿಡ್​ ಸಮಸ್ಯೆ:

ಮೊದ ಮೊದಲು ಕೊರೊನಾ ಕಾರಣಕ್ಕೆ ಸಾಮಾಜಿಕ ಅಂತರ, ಬಸ್​​​​ನಲ್ಲಿ ಇಂತಿಷ್ಟು ಪ್ರಯಾಣಿಕರು ಪ್ರಯಾಣಿಸಬೇಕು ಎಂದು ಆದೇಶಿಸಿದರು. ಬಳಿಕ ನಷ್ಟದ ಸುಳಿಗೆ ಸಿಲುಕಿದ ಸಾರಿಗೆ ಸಂಸ್ಥೆಗಳು ಸಂಪೂರ್ಣ ಸೀಟು ಭರ್ತಿ ಮಾಡಲು ಮುಂದಾದವು.‌ ಇದೀಗ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದರೂ ಸಮಸ್ಯೆ ಸಂಪೂರ್ಣವಾಗಿ ದೂರಗೊಂಡಿಲ್ಲ.

ಸದ್ಯದ ಪರಿಸ್ಥಿತಿ:

ಈ ನಿಟ್ಟಿನಲ್ಲಿ ಸದ್ಯ ನಿಲ್ದಾಣಗಳಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋದನ್ನು ನೋಡಿದರೆ, ಬಸ್​​ ನಿಲ್ದಾಣಗಳಲ್ಲಿ, ಬಸ್ಸಿನೊಳಗೆ ಪ್ರಯಾಣಿಕರು ಫೇಸ್ ಮಾಸ್ಕ್ ಅನ್ನು ತಪ್ಪದೇ ಹಾಕುತ್ತಿದ್ದರೂ ಸಾಮಾಜಿಕ ಅಂತರ ಪಾಲನೆ ಶೂನ್ಯ ಪ್ರಮಾಣದಲ್ಲಿದೆ. ಕಾರಣ ಸಾವಿರಾರು ಜನರು ಟರ್ಮಿನಲ್​ಗೆ ಆಗಮಿಸುವುದರಿಂದ ಸಾಮಾಜಿಕ ಅಂತರ ಪಾಲನೆ ಕಷ್ಟವಾಗಿದೆ. ಇನ್ನು ಬಸ್ಸುಗಳು ಡಿಪೋದಿಂದ ಹೊರಡುವಾಗ ಸ್ಯಾನಿಟೈಸ್ ಆಗಿ ಹೊರ ಬರುತ್ತಿದೆ. ಆದರೆ ಪ್ರಯಾಣಿಕರಿಗಾಗಿ ಬಸ್ಸಿನೊಳಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಿಲ್ಲ, ಥರ್ಮಲ್ ಸ್ಕ್ರೀನಿಂಗ್​​ಗೂ ಬ್ರೇಕ್ ಹಾಕಲಾಗಿದೆ.

ಎಲ್ಲರನ್ನೂ ತಪಾಸಣೆ ಮಾಡಲು ಸಾಧ್ಯವೇ?

ಸಾವಿರಾರು ಪ್ರಯಾಣಿಕರು-ಪ್ರವೇಶ ನಿರ್ಗಮನ ಮಾಡುವ ಕಾರಣ ಅವರೆಲ್ಲರನ್ನೂ ತಪಾಸಣೆ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಪ್ರಯಾಣಿಕರೇ ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳುವಂತೆ ಮನವಿ ಮಾಡಲಾಗಿದೆ.

ಉಗುಳಿದವರಿಗೆ ಬೀಳುತ್ತೆ ದಂಡ:

ಆದರೆ, ನಿಗಮದ ಅಧಿಕಾರಿಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಉಗುಳಿದವರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ.

ಯಾವ-ಯಾವ ತಿಂಗಳಿನಲ್ಲಿ ಎಷ್ಟೆಷ್ಟು ದಂಡ ವಸೂಲಿ?

  • ಜೂನ್-2020: 1700ರೂ.
  • ಜುಲೈ- 2020: 14,100ರೂ.
  • ಆಗಸ್ಟ್- 2020: 37,500ರೂ.
  • ಸೆಪ್ಟೆಂಬರ್- 2020: 32,400ರೂ.
  • ಅಕ್ಟೋಬರ್- 2020: 47,400ರೂ.
  • ನವೆಂಬರ್- 2020: 58,600ರೂ.
  • ಡಿಸೆಂಬರ್ - 2020: 57,700ರೂ.
  • ಜನವರಿ- 2021: 55,800ರೂ.

ಈ ಸುದ್ದಿಯನ್ನೂ ಓದಿ: ದೇಶದಲ್ಲಿ ಕೋವಿಡ್​ ಮೃತರ ಸಂಖ್ಯೆ 1.56 ಲಕ್ಷಕ್ಕೆ ಏರಿಕೆ.. 94 ಲಕ್ಷ ಮಂದಿಗೆ ವ್ಯಾಕ್ಸಿನ್​​​

ರಾಜ್ಯದ ವಿವಿಧ ಜಿಲ್ಲೆಗಳ ಬಸ್​​ ನಿಲ್ದಾಣಗಳಲ್ಲಿ ಬಿತ್ತು ದಂಡ:

8 ತಿಂಗಳ ಅವಧಿಯಲ್ಲಿ ಒಟ್ಟು 3,05,200 ರೂಪಾಯಿಯಷ್ಟು ದಂಡ ಹಾಕಲಾಗಿದೆ. ಕೊರೊನಾ ಕಂಟ್ರೋಲ್​ಗೆ ಕೇವಲ ಫೇಸ್ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡಿದರೆ ಸಾಲದು ಎಲ್ಲೆಲ್ಲದರಲ್ಲಿ ಉಗುಳುವುದನ್ನು ನಿಲ್ಲಿಸಬೇಕಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.