ETV Bharat / state

Lockdown ವೇಳೆ ಕಳ್ಳರ ಕೈಚಳಕ.. ರಸ್ತೆ ಬದಿ ನಿಲ್ಲಿಸಿದ್ದ ರೋಡ್​ ರೋಲರ್ ಅನ್ನೇ ಗುಜರಿಗೆ ಹಾಕಿದ ಖದೀಮರು

author img

By

Published : Jun 23, 2021, 8:42 PM IST

ಲಾಕ್​​ಡೌನ್​ ವೇಳೆ ಕೆಲಸವಿಲ್ಲದೇ ರಸ್ತೆಬದಿ ನಿಲ್ಲಿಸಲಾಗಿದ್ದ ರೋಡ್ ರೋಲರ್ ಅನ್ನು ಕಳ್ಳರು ಹೊತ್ತೊಯ್ದು ಗುಜುರಿಗೆ ಹಾಕಿರುವುದು ಪತ್ತೆಯಾಗಿದೆ. ಸುಮಾರು 7 ಸಾವಿರಕ್ಕೂ ಅಧಿಕ ತೂಕದ ರೋಡ್​ ರೋಲರ್ ಅನ್ನು ಮೂರು ತುಂಡಾಗಿ ಮಾಡಿ ಈ ಕೃತ್ಯ ಮಾಡಿದ್ದು ಬೆಳಕಿಗೆ ಬಂದಿದೆ.

three-man-steeled-road-roller-and-sell-it-to-scrap-shop-in-bangalore
ರಸ್ತೆ ಬದಿ ನಿಲ್ಲಿಸಿದ್ದ ರೋಡ್​ ರೋಲರ್​ ಮೂರು ತುಂಡು ಮಾಡಿ ಮಾರಾಟ

ಬೆಂಗಳೂರು: ಲಾಕ್​​​​ಡೌನ್​ನಲ್ಲಿ ಕೆಲಸವಿಲ್ಲದೇ ನಿಂತಿದ್ದ ರೋಡ್​ ರೋಲರ್​​​​ ಅನ್ನೇ ಖದೀಮರು ತುಂಡು ತುಂಡು ಮಾಡಿ ಹೊತ್ತೊಯ್ದಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಆರೋಪಿ ಪವನ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಉಳಿದ ಇನ್ನಿಬ್ಬರ ಹುಟುಕಾಟಲ್ಲಿ ನಿರತರಾಗಿದ್ದಾರೆ.

ರಸ್ತೆ ಬದಿ ನಿಲ್ಲಿಸಿದ್ದ ರೋಡ್ ರೋಲರ್ ಮೂರು ತುಂಡುಗಳಾಗಿ ಬೇರ್ಪಡಿಸಿದ ದುಷ್ಕರ್ಮಿಗಳು ಪ್ರತಿ ಕೆ.ಜಿಗೆ 28 ​​ರೂ ಅಂತೆ ಮಾರಾಟ ಮಾಡಿದ್ದಾರೆ. ಚಂದ್ರಾ ಲೇಔಟ್ ಬಳಿ ನಿಲ್ಲಿಸಿದ್ದ ರೋಡ್ ರೋಲರ್ ಅನ್ನ ಬೈದರಹಳ್ಳಿಯ ಬಳಿಯ ಸೀಗೆಹಳ್ಳಿಗೆ ಕದ್ದೊಯ್ದಿದ್ದರು. ಗ್ಯಾಸ್ ಕಟ್ಟರ್ ಮತ್ತು ಯಂತ್ರಗಳನ್ನು ಬಳಸಿ, ರೋಡ್ ರೋಲರ್ ಮೂರು ತುಂಡುಗಳಾಗಿ ಕತ್ತರಿಸಿದ್ದಾರೆ. ಸ್ಕ್ರ್ಯಾಪ್ ವ್ಯಾಪಾರಿಯೊಬ್ಬರು ಪ್ರತಿ ಕೆ.ಜಿಗೆ 28 ​​ರೂ.ಗೆ ಖರೀದಿಸಲು ಒಪ್ಪಿಸಿದ್ದಾರೆ.

ಊರಿಂದ ಬಂದಾಗ ರೋಡ್ ರೋಲರ್ ನಾಪತ್ತೆ

ರೋಡ್ ರೋಲರ್ ಮಾಲೀಕ ವಿ ಸೆಲ್ವರಾಜ್ 12 ವರ್ಷಗಳ ಹಿಂದೆ ತಮಿಳುನಾಡು ಮೂಲದ ವ್ಯಕ್ತಿಯಿಂದ 2 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು. ಲಾಕ್‌ಡೌನ್ ಕಾರಣದಿಂದಾಗಿ ರೋಲರ್‌ ಬಳಕೆಯಲ್ಲಿರಲಿಲ್ಲ ಮತ್ತು ಸೆಲ್ವರಾಜ್ ರೋಲರ್ ನಾಗರಾಭಾವಿಯ 80 ಅಡಿ ರಸ್ತೆ ಬಳಿ ಮೈದಾನದಲ್ಲಿ ನಿಲ್ಲಿಸಿದ್ದರು. ಬಳಿಕ ಸೆಲ್ವರಾಜ್ ಮೇ 25 ರಂದು ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದ. ಜೂನ್ 19 ರಂದು ಹಿಂದಿರುಗಿ ನೋಡಿದಾಗ ರೋಲರ್ ಸ್ಥಳದಿಂದ ಕಾಣೆಯಾಗಿತ್ತು. ಹೀಗಾಗಿ ಚಂದ್ರಾ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು.

ಮಾಲೀಕರು ನೀಡಿದ ದೂರಿನನ್ವಯ ಪೊಲೀಸ್ ಹಿರಿಯ ಅಧಿಕಾರಿಗಳು ರೋಡ್ ರೋಲರ್ ಪತ್ತೆಗಾಗಿ ಚಂದ್ರ ಲೇಔಟ್ ಇನ್ಸ್‌ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ತಂಡವನ್ನು ಸಜ್ಜುಗೊಳಿಸಲಾಗಿತ್ತು. ರೋಲರ್ ಅನ್ನು ಟ್ರಕ್​​​​ನಲ್ಲಿ ತೆಗೆದುಕೊಂಡು ಹೋಗಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಿದಾಗ ನಾಗರಭಾವಿ ನಿವಾಸಿ ಎನ್ ವಿನಯ್ ಪ್ರಮುಖ ಆರೋಪಿ ಎಂಬುದು ತಿಳಿದು ಬಂದಿದೆ.

Pavan
ಬಂಧಿತ ಆರೋಪಿ ಪವನ್​

ಜೊತೆಗೆ ಕಾಮಾಕ್ಷಿಪಾಳ್ಯದ ನಿವಾಸಿ ವಿನಯ್​​ ಕಾರು ಚಾಲಕ ಪವನ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸುತ್ತಿದ್ದು, ಈತ ರೋಡ್​​​ ರೋಲರ್ ​​ಅನ್ನು ಸೀಗೆಹಳ್ಳಿಗೆ ಕೊಂಡೊಯ್ಯುವಾಗ ಆ ಸ್ಥಳದಲ್ಲಿದ್ದರು ಎಂದು ತಿಳಿದು ಬಂದಿದೆ.

ನಾವು ವಾಹನ ಕಳ್ಳತನದ ಆರೋಪದ ಮೇಲೆ ಪವನ್ ಎಂಬಾತನ ಬಂಧಿಸಿದ್ದೇವೆ. ಸ್ಕ್ರ್ಯಾಪ್ ವ್ಯಾಪಾರಿ ಇಸ್ಮಾಯಿಲ್ ಎಂದು ಗುರುತಿಸಿ ಪ್ರತಿ ಕೆ.ಜಿ.ಗೆ 28 ​​ರೂ.ಗೆ ಮಾರಾಟ ಮಾಡಲು ವಿನಯ್ ಒಪ್ಪಿಕೊಂಡಿದ್ದನು ಎಂದು ಪವನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾನೆ. ರೋಡ್ ರೋಲರ್ 7,800 ಕಿ.ಗ್ರಾಂ ತೂಗುತ್ತದೆ. ಪ್ರಕರಣದಲ್ಲಿ ವಿನಯ್ ಮತ್ತು ಇಸ್ಮಾಯಿಲ್ ಹುಡುಕಾಟ ಪ್ರಾರಂಭಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ: ವಾಹನಗಳ ಮೇಲೆ ದುಷ್ಕರ್ಮಿಗಳ ಕೆಂಗಣ್ಣು.. ತುಮಕೂರಲ್ಲಿ 10ಕ್ಕೂ ಹೆಚ್ಚು ಕಾರುಗಳ ಮೇಲೆ ಕಲ್ಲು ತೂರಾಟ!

ಬೆಂಗಳೂರು: ಲಾಕ್​​​​ಡೌನ್​ನಲ್ಲಿ ಕೆಲಸವಿಲ್ಲದೇ ನಿಂತಿದ್ದ ರೋಡ್​ ರೋಲರ್​​​​ ಅನ್ನೇ ಖದೀಮರು ತುಂಡು ತುಂಡು ಮಾಡಿ ಹೊತ್ತೊಯ್ದಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಆರೋಪಿ ಪವನ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಉಳಿದ ಇನ್ನಿಬ್ಬರ ಹುಟುಕಾಟಲ್ಲಿ ನಿರತರಾಗಿದ್ದಾರೆ.

ರಸ್ತೆ ಬದಿ ನಿಲ್ಲಿಸಿದ್ದ ರೋಡ್ ರೋಲರ್ ಮೂರು ತುಂಡುಗಳಾಗಿ ಬೇರ್ಪಡಿಸಿದ ದುಷ್ಕರ್ಮಿಗಳು ಪ್ರತಿ ಕೆ.ಜಿಗೆ 28 ​​ರೂ ಅಂತೆ ಮಾರಾಟ ಮಾಡಿದ್ದಾರೆ. ಚಂದ್ರಾ ಲೇಔಟ್ ಬಳಿ ನಿಲ್ಲಿಸಿದ್ದ ರೋಡ್ ರೋಲರ್ ಅನ್ನ ಬೈದರಹಳ್ಳಿಯ ಬಳಿಯ ಸೀಗೆಹಳ್ಳಿಗೆ ಕದ್ದೊಯ್ದಿದ್ದರು. ಗ್ಯಾಸ್ ಕಟ್ಟರ್ ಮತ್ತು ಯಂತ್ರಗಳನ್ನು ಬಳಸಿ, ರೋಡ್ ರೋಲರ್ ಮೂರು ತುಂಡುಗಳಾಗಿ ಕತ್ತರಿಸಿದ್ದಾರೆ. ಸ್ಕ್ರ್ಯಾಪ್ ವ್ಯಾಪಾರಿಯೊಬ್ಬರು ಪ್ರತಿ ಕೆ.ಜಿಗೆ 28 ​​ರೂ.ಗೆ ಖರೀದಿಸಲು ಒಪ್ಪಿಸಿದ್ದಾರೆ.

ಊರಿಂದ ಬಂದಾಗ ರೋಡ್ ರೋಲರ್ ನಾಪತ್ತೆ

ರೋಡ್ ರೋಲರ್ ಮಾಲೀಕ ವಿ ಸೆಲ್ವರಾಜ್ 12 ವರ್ಷಗಳ ಹಿಂದೆ ತಮಿಳುನಾಡು ಮೂಲದ ವ್ಯಕ್ತಿಯಿಂದ 2 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು. ಲಾಕ್‌ಡೌನ್ ಕಾರಣದಿಂದಾಗಿ ರೋಲರ್‌ ಬಳಕೆಯಲ್ಲಿರಲಿಲ್ಲ ಮತ್ತು ಸೆಲ್ವರಾಜ್ ರೋಲರ್ ನಾಗರಾಭಾವಿಯ 80 ಅಡಿ ರಸ್ತೆ ಬಳಿ ಮೈದಾನದಲ್ಲಿ ನಿಲ್ಲಿಸಿದ್ದರು. ಬಳಿಕ ಸೆಲ್ವರಾಜ್ ಮೇ 25 ರಂದು ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದ. ಜೂನ್ 19 ರಂದು ಹಿಂದಿರುಗಿ ನೋಡಿದಾಗ ರೋಲರ್ ಸ್ಥಳದಿಂದ ಕಾಣೆಯಾಗಿತ್ತು. ಹೀಗಾಗಿ ಚಂದ್ರಾ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು.

ಮಾಲೀಕರು ನೀಡಿದ ದೂರಿನನ್ವಯ ಪೊಲೀಸ್ ಹಿರಿಯ ಅಧಿಕಾರಿಗಳು ರೋಡ್ ರೋಲರ್ ಪತ್ತೆಗಾಗಿ ಚಂದ್ರ ಲೇಔಟ್ ಇನ್ಸ್‌ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ತಂಡವನ್ನು ಸಜ್ಜುಗೊಳಿಸಲಾಗಿತ್ತು. ರೋಲರ್ ಅನ್ನು ಟ್ರಕ್​​​​ನಲ್ಲಿ ತೆಗೆದುಕೊಂಡು ಹೋಗಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಿದಾಗ ನಾಗರಭಾವಿ ನಿವಾಸಿ ಎನ್ ವಿನಯ್ ಪ್ರಮುಖ ಆರೋಪಿ ಎಂಬುದು ತಿಳಿದು ಬಂದಿದೆ.

Pavan
ಬಂಧಿತ ಆರೋಪಿ ಪವನ್​

ಜೊತೆಗೆ ಕಾಮಾಕ್ಷಿಪಾಳ್ಯದ ನಿವಾಸಿ ವಿನಯ್​​ ಕಾರು ಚಾಲಕ ಪವನ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸುತ್ತಿದ್ದು, ಈತ ರೋಡ್​​​ ರೋಲರ್ ​​ಅನ್ನು ಸೀಗೆಹಳ್ಳಿಗೆ ಕೊಂಡೊಯ್ಯುವಾಗ ಆ ಸ್ಥಳದಲ್ಲಿದ್ದರು ಎಂದು ತಿಳಿದು ಬಂದಿದೆ.

ನಾವು ವಾಹನ ಕಳ್ಳತನದ ಆರೋಪದ ಮೇಲೆ ಪವನ್ ಎಂಬಾತನ ಬಂಧಿಸಿದ್ದೇವೆ. ಸ್ಕ್ರ್ಯಾಪ್ ವ್ಯಾಪಾರಿ ಇಸ್ಮಾಯಿಲ್ ಎಂದು ಗುರುತಿಸಿ ಪ್ರತಿ ಕೆ.ಜಿ.ಗೆ 28 ​​ರೂ.ಗೆ ಮಾರಾಟ ಮಾಡಲು ವಿನಯ್ ಒಪ್ಪಿಕೊಂಡಿದ್ದನು ಎಂದು ಪವನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾನೆ. ರೋಡ್ ರೋಲರ್ 7,800 ಕಿ.ಗ್ರಾಂ ತೂಗುತ್ತದೆ. ಪ್ರಕರಣದಲ್ಲಿ ವಿನಯ್ ಮತ್ತು ಇಸ್ಮಾಯಿಲ್ ಹುಡುಕಾಟ ಪ್ರಾರಂಭಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ: ವಾಹನಗಳ ಮೇಲೆ ದುಷ್ಕರ್ಮಿಗಳ ಕೆಂಗಣ್ಣು.. ತುಮಕೂರಲ್ಲಿ 10ಕ್ಕೂ ಹೆಚ್ಚು ಕಾರುಗಳ ಮೇಲೆ ಕಲ್ಲು ತೂರಾಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.