ETV Bharat / state

ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಸುಲಿಗೆ.. ನೀವು ಮನೆಯಲ್ಲಿ ಒಬ್ಬರೇ ವಾಸ ಮಾಡ್ತೀರಾ? ಹಾಗಿದ್ರೆ ಎಚ್ಚರ!

author img

By

Published : Feb 11, 2022, 6:31 PM IST

ನಿತ್ಯ ನಗರದಲ್ಲಿ ತಿರುಗುತ್ತಿದ್ದ ಈ ಗ್ಯಾಂಗ್ ಮನೆಯೊಂದರಲ್ಲಿ ಒಬ್ಬರೇ ಇರುವುದನ್ನು ಪತ್ತೆ ಮಾಡಿಕೊಂಡಿದ್ದರು. ಬಳಿಕ ಒಂದು ದಿನ ಮನೆ ಬಾಡಿಗೆ ಕೇಳಿ, ನಾಳೆ ಪುನಃ ಬರುತ್ತೇವೆ ಅಂತಾ ಹೇಳಿ ವಾಪಸ್ ಹೋಗಿದ್ದರು..

thieves-gang-arrested-in-bengaluru
ಬಾಡಿಗೆ ಮನೆ ಹುಡುಕುತ್ತ ಸುಲಿಗೆ

ಬೆಂಗಳೂರು : ನಗರದಲ್ಲಿ ಮನೆ ಬಾಡಿಗೆಗೆ ಇದೆ ಅಂತಾ ಮನೆ ಮುಂದೆ ಬೋರ್ಡ್ ಹಾಕುವ ಮುನ್ನ ಎಚ್ಚರ. ಬಾಡಿಗೆ ಮನೆ ಕೇಳುವ ನೆಪದಲ್ಲಿ ಜನರ ಸುಲಿಗೆ ಮಾಡುವ ಗ್ಯಾಂಗ್​ವೊಂದು ಪತ್ತೆಯಾಗಿದೆ. ದೊಡ್ಡ ಮನೆಗಳು, ಮೂರ್ನಾಲ್ಕು ಬಾಡಿಗೆ ಮನೆ ಇರುವ ಕಟ್ಟಡಗಳನ್ನೇ ಗುರಿ ಮಾಡಿಕೊಂಡ ಆರೋಪಿಗಳು ಅಂದರ್​ ಆಗಿದ್ದಾರೆ.

ತಬ್ರೇಜ್ ಅಹಮ್ಮದ್, ಸಮೀರ್ ಪಾಷ, ಸಾಧಿಕ್ ಖಾನ್, ಮಹಮ್ಮದ್ ಅದ್ನಾನ್ ಹಾಗೂ ರಫೀಕ್ ಪಾಷ ಎಂಬುವರು ಬಂಧಿತ ಆರೋಪಿಗಳು. ಈ ಗ್ಯಾಂಗ್​ನವರು ಮನೆಗಳಲ್ಲಿ ಒಬ್ಬರೇ ವಾಸಿಸುತ್ತಿರುವುದನ್ನು ಅರಿತ ಕೂಡಲೇ ಕೈಚಳಕ ತೋರಿಸುತ್ತಿದ್ದರು.

ನಿತ್ಯ ನಗರದಲ್ಲಿ ತಿರುಗುತ್ತಿದ್ದ ಈ ಗ್ಯಾಂಗ್ ಮನೆಯೊಂದರಲ್ಲಿ ಒಬ್ಬರೇ ಇರುವುದನ್ನು ಪತ್ತೆ ಮಾಡಿಕೊಂಡಿದ್ದರು. ಬಳಿಕ ಒಂದು ದಿನ ಮನೆ ಬಾಡಿಗೆ ಕೇಳಿ, ನಾಳೆ ಪುನಃ ಬರುತ್ತೇವೆ ಅಂತಾ ಹೇಳಿ ವಾಪಸ್ ಹೋಗಿದ್ದರು.

ಆದರೆ, ಮರುದಿನ ಅದೇ ಮನೆಗೆ ಬಂದಿದ್ದ ಆರೋಪಿಗಳು, ಮನೆ ನೋಡುವ ನೆಪದಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಬೆದರಿಸಿ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಅಷ್ಟೇ ಅಲ್ಲ, ಮನೆಗಳಲ್ಲಿ ಕುಡಿಯುವ ನೀರು ಕೇಳುವ ನೆಪದಲ್ಲೂ ಮಹಿಳೆಯರ ಚಿನ್ನದ ಸರ ಎಗರಿಸಿದ್ದರು. ಈ ಬಗ್ಗೆ ಕುಮಾರಸ್ವಾಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ನಗರದ ಹಲವೆಡೆ ಬೈಕ್ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಸದ್ಯ ಬಂಧಿತರಿಂದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಪೊಲೀಸ್ ಇನ್ಸ್​ಪೆಕ್ಟರ್​ ಕಾರಿನಲ್ಲೇ ಕಳ್ಳತನ: ಲ್ಯಾಪ್​ಟಾಪ್​, 50 ಸಾವಿರ ದೋಚಿ ಎಸ್ಕೇಪ್!

ಬೆಂಗಳೂರು : ನಗರದಲ್ಲಿ ಮನೆ ಬಾಡಿಗೆಗೆ ಇದೆ ಅಂತಾ ಮನೆ ಮುಂದೆ ಬೋರ್ಡ್ ಹಾಕುವ ಮುನ್ನ ಎಚ್ಚರ. ಬಾಡಿಗೆ ಮನೆ ಕೇಳುವ ನೆಪದಲ್ಲಿ ಜನರ ಸುಲಿಗೆ ಮಾಡುವ ಗ್ಯಾಂಗ್​ವೊಂದು ಪತ್ತೆಯಾಗಿದೆ. ದೊಡ್ಡ ಮನೆಗಳು, ಮೂರ್ನಾಲ್ಕು ಬಾಡಿಗೆ ಮನೆ ಇರುವ ಕಟ್ಟಡಗಳನ್ನೇ ಗುರಿ ಮಾಡಿಕೊಂಡ ಆರೋಪಿಗಳು ಅಂದರ್​ ಆಗಿದ್ದಾರೆ.

ತಬ್ರೇಜ್ ಅಹಮ್ಮದ್, ಸಮೀರ್ ಪಾಷ, ಸಾಧಿಕ್ ಖಾನ್, ಮಹಮ್ಮದ್ ಅದ್ನಾನ್ ಹಾಗೂ ರಫೀಕ್ ಪಾಷ ಎಂಬುವರು ಬಂಧಿತ ಆರೋಪಿಗಳು. ಈ ಗ್ಯಾಂಗ್​ನವರು ಮನೆಗಳಲ್ಲಿ ಒಬ್ಬರೇ ವಾಸಿಸುತ್ತಿರುವುದನ್ನು ಅರಿತ ಕೂಡಲೇ ಕೈಚಳಕ ತೋರಿಸುತ್ತಿದ್ದರು.

ನಿತ್ಯ ನಗರದಲ್ಲಿ ತಿರುಗುತ್ತಿದ್ದ ಈ ಗ್ಯಾಂಗ್ ಮನೆಯೊಂದರಲ್ಲಿ ಒಬ್ಬರೇ ಇರುವುದನ್ನು ಪತ್ತೆ ಮಾಡಿಕೊಂಡಿದ್ದರು. ಬಳಿಕ ಒಂದು ದಿನ ಮನೆ ಬಾಡಿಗೆ ಕೇಳಿ, ನಾಳೆ ಪುನಃ ಬರುತ್ತೇವೆ ಅಂತಾ ಹೇಳಿ ವಾಪಸ್ ಹೋಗಿದ್ದರು.

ಆದರೆ, ಮರುದಿನ ಅದೇ ಮನೆಗೆ ಬಂದಿದ್ದ ಆರೋಪಿಗಳು, ಮನೆ ನೋಡುವ ನೆಪದಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಬೆದರಿಸಿ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಅಷ್ಟೇ ಅಲ್ಲ, ಮನೆಗಳಲ್ಲಿ ಕುಡಿಯುವ ನೀರು ಕೇಳುವ ನೆಪದಲ್ಲೂ ಮಹಿಳೆಯರ ಚಿನ್ನದ ಸರ ಎಗರಿಸಿದ್ದರು. ಈ ಬಗ್ಗೆ ಕುಮಾರಸ್ವಾಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ನಗರದ ಹಲವೆಡೆ ಬೈಕ್ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಸದ್ಯ ಬಂಧಿತರಿಂದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಪೊಲೀಸ್ ಇನ್ಸ್​ಪೆಕ್ಟರ್​ ಕಾರಿನಲ್ಲೇ ಕಳ್ಳತನ: ಲ್ಯಾಪ್​ಟಾಪ್​, 50 ಸಾವಿರ ದೋಚಿ ಎಸ್ಕೇಪ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.