ETV Bharat / state

ಅನರ್ಹರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ನೈತಿಕವಾಗಿ ಬೆತ್ತಲಾಗಿದೆ: ವಿ.ಎಸ್.ಉಗ್ರಪ್ಪ - ನೀತಿ ಸಂಹಿತೆ ಉಲ್ಲಂಘನೆ

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್​. ಉಗ್ರಪ್ಪ, ಯಡಿಯೂರಪ್ಪನವರು ನಮಗೂ ಅತೃಪ್ತರ ರಾಜೀನಾಮೆಗೆ ಸಂಬಂಧವಿಲ್ಲ ಎನ್ನುತ್ತಿದ್ದರು. ಆದ್ರೆ ಈಗ ಅನರ್ಹರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿರುವ ಯಡಿಯೂರಪ್ಪ ನೈತಿಕವಾಗಿ ಬೆತ್ತಲಾಗಿದ್ದಾರೆ ಎಂದರು.

ಮಾಜಿ ಸಂಸದ ವಿ.ಎಸ್​. ಉಗ್ರಪ್ಪ
author img

By

Published : Nov 15, 2019, 4:50 PM IST

ಬೆಂಗಳೂರು: ಅನರ್ಹರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿರುವ ಸಿಎಂ ಬಿ.ಎಸ್​. ಯಡಿಯೂರಪ್ಪ ನೈತಿಕವಾಗಿ ಬೆತ್ತಲಾಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪನವರು ನಮಗೂ ಅತೃಪ್ತರ ರಾಜೀನಾಮೆಗೆ ಸಂಬಂಧವಿಲ್ಲ ಎನ್ನುತ್ತಿದ್ದರು. ಆಪರೇಷನ್ ಕಮಲ ಮಾಡಿಲ್ಲ ಅಂತ ಹೇಳಿದ್ದರು. ಆದರೆ ಈಗ ಅವರು ಮಾಡಿರುವುದೇನು? ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ. ಕೊಟ್ಟ ಭರವಸೆ ಈಡೇರಿಸುತ್ತೇವೆ ಅಂತ ಹೇಳಿದ್ದಾರೆ. ಅನರ್ಹರಿಗೆ ಕೊಟ್ಟ ಭರವಸೆ ಈಡೇರಿಸ್ತಾರಂತೆ. ಯಡಿಯೂರಪ್ಪ ಇಲ್ಲಿಯವರೆಗೆ ಹೇಳಿದ್ದು ಸುಳ್ಳಲ್ವಾ? ಸುಳ್ಳನ್ನ ಹೇಳಿದ್ದಕ್ಕೆ ಸಿಎಂ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಂಸದ ವಿ.ಎಸ್​. ಉಗ್ರಪ್ಪ

ಯಡಿಯೂರಪ್ಪ ಮತದಾರರ ಓಲೈಕೆ ಪ್ರಯತ್ನ ಮಾಡಿದ್ದಾರೆ. ಅನರ್ಹರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಭಾಷಾ ಉಲ್ಲಂಘನೆಯನ್ನೂ ಮಾಡಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಕನ್ನಡೇತರ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ. ಶಕ್ತಿಸೌಧದ ವ್ಯಾಪ್ತಿಗೆ ಬರುವ ಶಿವಾಜಿನಗರ ಕ್ಷೇತ್ರದಲ್ಲಿ ಅನ್ಯ ಭಾಷಿಗರಿಗೆ ಟಿಕೆಟ್ ನೀಡುವ ಮೂಲಕ ಕನ್ನಡಿಗರನ್ನು ಅವಮಾನಿಸಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗ ಸುಮೋಟೋ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ರು.

ಆರ್. ಶಂಕರ್​ಗೆ ಟಿಕೆಟ್ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ವಿಶ್ವಾಸದ್ರೋಹವೆಸಗಿದ್ದಾರೆ. ರೋಷನ್ ಬೇಗ್, ಶಂಕರ್​ಗೆ ದ್ರೋಹ ಎಸಗಿದ್ದಾರೆ. ಇವರ ಒತ್ತಡಕ್ಕೆ ತಾನೇ ಅವರು ರಾಜೀನಾಮೆ ಕೊಟ್ಟಿದ್ದು. ಇಂದು ಅವರನ್ನ ಬೀದಿಪಾಲು ಮಾಡಿದ್ದಾರೆ. ಉಳಿದ 15 ಜನಕ್ಕೂ ಮುಂದೇ ಇದೇ ಸ್ಥಿತಿ ಬರಲಿದೆ. ಅಲ್ಲಿಗೆ ಹೋಗಿರುವ ಎಲ್ಲ ಸ್ನೇಹಿತರಿಗೂ ಇದೇ ಗತಿ ಆಗಲಿದೆ. ಇದಕ್ಕೆ ಹೆಚ್ಚಿನ ದಿನ ಕಾಯಬೇಕಿಲ್ಲ ಎಂದರು.

ಬೆಂಗಳೂರು: ಅನರ್ಹರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿರುವ ಸಿಎಂ ಬಿ.ಎಸ್​. ಯಡಿಯೂರಪ್ಪ ನೈತಿಕವಾಗಿ ಬೆತ್ತಲಾಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪನವರು ನಮಗೂ ಅತೃಪ್ತರ ರಾಜೀನಾಮೆಗೆ ಸಂಬಂಧವಿಲ್ಲ ಎನ್ನುತ್ತಿದ್ದರು. ಆಪರೇಷನ್ ಕಮಲ ಮಾಡಿಲ್ಲ ಅಂತ ಹೇಳಿದ್ದರು. ಆದರೆ ಈಗ ಅವರು ಮಾಡಿರುವುದೇನು? ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ. ಕೊಟ್ಟ ಭರವಸೆ ಈಡೇರಿಸುತ್ತೇವೆ ಅಂತ ಹೇಳಿದ್ದಾರೆ. ಅನರ್ಹರಿಗೆ ಕೊಟ್ಟ ಭರವಸೆ ಈಡೇರಿಸ್ತಾರಂತೆ. ಯಡಿಯೂರಪ್ಪ ಇಲ್ಲಿಯವರೆಗೆ ಹೇಳಿದ್ದು ಸುಳ್ಳಲ್ವಾ? ಸುಳ್ಳನ್ನ ಹೇಳಿದ್ದಕ್ಕೆ ಸಿಎಂ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಂಸದ ವಿ.ಎಸ್​. ಉಗ್ರಪ್ಪ

ಯಡಿಯೂರಪ್ಪ ಮತದಾರರ ಓಲೈಕೆ ಪ್ರಯತ್ನ ಮಾಡಿದ್ದಾರೆ. ಅನರ್ಹರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಭಾಷಾ ಉಲ್ಲಂಘನೆಯನ್ನೂ ಮಾಡಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಕನ್ನಡೇತರ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ. ಶಕ್ತಿಸೌಧದ ವ್ಯಾಪ್ತಿಗೆ ಬರುವ ಶಿವಾಜಿನಗರ ಕ್ಷೇತ್ರದಲ್ಲಿ ಅನ್ಯ ಭಾಷಿಗರಿಗೆ ಟಿಕೆಟ್ ನೀಡುವ ಮೂಲಕ ಕನ್ನಡಿಗರನ್ನು ಅವಮಾನಿಸಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗ ಸುಮೋಟೋ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ರು.

ಆರ್. ಶಂಕರ್​ಗೆ ಟಿಕೆಟ್ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ವಿಶ್ವಾಸದ್ರೋಹವೆಸಗಿದ್ದಾರೆ. ರೋಷನ್ ಬೇಗ್, ಶಂಕರ್​ಗೆ ದ್ರೋಹ ಎಸಗಿದ್ದಾರೆ. ಇವರ ಒತ್ತಡಕ್ಕೆ ತಾನೇ ಅವರು ರಾಜೀನಾಮೆ ಕೊಟ್ಟಿದ್ದು. ಇಂದು ಅವರನ್ನ ಬೀದಿಪಾಲು ಮಾಡಿದ್ದಾರೆ. ಉಳಿದ 15 ಜನಕ್ಕೂ ಮುಂದೇ ಇದೇ ಸ್ಥಿತಿ ಬರಲಿದೆ. ಅಲ್ಲಿಗೆ ಹೋಗಿರುವ ಎಲ್ಲ ಸ್ನೇಹಿತರಿಗೂ ಇದೇ ಗತಿ ಆಗಲಿದೆ. ಇದಕ್ಕೆ ಹೆಚ್ಚಿನ ದಿನ ಕಾಯಬೇಕಿಲ್ಲ ಎಂದರು.

Intro:Body:KN_BNG_01_VSUGRAPPA_PC_SCRIPT_7201951

ಅನರ್ಹರನ್ನು ಪಕ್ಷ ಸೇರಿಸುವ ಮೂಲಕ ಬಿಜೆಪಿ ನೈತಿಕವಾಗಿ ಬೆತ್ತಲಾಗಿದೆ: ವಿ.ಎಸ್.ಉಗ್ರಪ್ಪ

ಬೆಂಗಳೂರು: 16 ಅನರ್ಹರನ್ನು ಬಿಜೆಪಿ ಸೇರ್ಪಡೆಗೊಳಿಸಿರುವ ಸಿಎಂ ಯಡಿಯೂರಪ್ಪ ನೈತಿಕವಾಗಿ ಬೆತ್ತಲಾಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮಗೂ, ಅತೃಪ್ತರ ರಾಜೀನಾಮೆಗೆ ಸಂಬಂಧವಿಲ್ಲ ಅನ್ನುತ್ತಿದ್ದರು. ಆಪರೇಷನ್ ಕಮಲ ಮಾಡಿಲ್ಲ ಅಂತ ಹೇಳಿದ್ದರು. ಆದರೆ ಇದೀಗ ಅವರು ಮಾಡಿರುವುದೇನು?. ಬಿಜೆಪಿ ನೈತಿಕವಾಗಿ ದಿವಾಳಿಯಾಗಿದೆ. ಕೊಟ್ಟ ಭರವಸೆ ಈಡೇರಿಸುತ್ತೇವೆ ಅಂತ ಹೇಳಿದ್ದಾರೆ. ಅನರ್ಹರಿಗೆ ಕೊಟ್ಟ ಭರವಸೆ ಈಡೇರಿಸ್ತಾರಂತೆ. ಯಡಿಯೂರಪ್ಪ ಇಲ್ಲಿಯವರೆಗೆ ಹೇಳಿದ್ದು ಸುಳ್ಳಲ್ವಾ?. ಸುಳ್ಳನ್ನ ಹೇಳಿದ್ದಕ್ಕೆ ಸಿಎಂ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ಅವರು ಮತದಾರರ ಓಲೈಕೆ ಪ್ರಯತ್ನ ಮಾಡಿದ್ದಾರೆ. ಅನರ್ಹರನ್ನು ಸಚಿವರನ್ನಾಗಿ ಮಾಡುತ್ತೇವೆ ಅಂದಿದ್ದಾರೆ.ಇದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಭಾಷಾ ಉಲ್ಲಂಘನೆಯನ್ನೂ ಮಾಡಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಕನ್ನಡೇತರ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ. ಶಕ್ತಿಸೌಧ ವ್ಯಾಪ್ತಿಗೆ ಬರುವ ಶಿವಾಜಿನಗರ ಕ್ಷೇತ್ರದಲ್ಲಿ ಅನ್ಯ ಭಾಷಿಗರಿಗೆ ಟಿಕೆಟ್ ನೀಡುವ ಮೂಲಕ ಕ್ನಡಿಗರನ್ನು ಅವಮಾನಿಸಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗ ಸುಮೋಟೋ ಅಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಆರ್.ಶಂಕರ್ ಗೆ ಟಿಕೆಟ್ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ವಿಶ್ವಾಸದ್ರೋಹವೆಸಗಿದ್ದಾರೆ. ರೋಷನ್ ಬೇಗ್, ಶಂಕರ್ ಗೆ ದ್ರೋಹ ಎಸಗಿದ್ದಾರೆ. ಇವರ ಒತ್ತಡಕ್ಕೆ ತಾನೇ ಅವರು ರಾಜೀನಾಮೆ ಕೊಟ್ಟಿದ್ದು. ಇಂದು ಅವರನ್ನ ಬೀದಿಪಾಲು ಮಾಡಿದ್ದಾರೆ. ಉಳಿದ 15 ಜನಕ್ಕೂ ಮುಂದೇ ಇದೇ ಸ್ಥಿತಿ ಬರಲಿದೆ. ಅಲ್ಲಿಗೆ ಹೋಗಿರುವ ಎಲ್ಲ ಸ್ನೇಹಿತರಿಗೂ ಇದೇ ಗತಿ ಆಗಲಿದೆ. ಇದಕ್ಕೆ ಹೆಚ್ಚಿನ ದಿನ ಕಾಯಬೇಕಿಲ್ಲ ಎಂದು ತಿಳಿಸಿದರು.

ಇವರನ್ನು ನಂಬಿಸಿ ಕತ್ತು ಕೂಯ್ಸಿ ಕೊಂಡಿದ್ದಾರೆ. ಯಡಿಯೂರಪ್ಪ ಎಷ್ಟು ದಿನ ಇರ್ತಾರೋ ಗೊತ್ತಿಲ್ಲ
ಇವರೆಲ್ಲರನ್ನ ಹೇಗೆ ಕಾಯ್ತಾರೋ ಗೊತ್ತಿಲ್ಲ. ಮತದಾರರ ನಾಡಿಮಿಡಿತ ನೋಡಿದರೆ ಕಷ್ಟವಾಗಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.