ETV Bharat / state

ದೇವಸ್ಥಾನದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆರೋಪ: ಪ್ರತಿಭಟನೆ

author img

By

Published : Nov 4, 2021, 8:12 PM IST

ವಿಜಯಪುರ ಪಟ್ಟಣದಲ್ಲಿ ಯುವಕನ ಮೇಲೆ ದೇಗುಲದ ಆಡಳಿತ ಮಂಡಳಿ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಪ್ರಜಾ ವಿಮೋಚನ ಚಳವಳಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Temple authority attacked a dalith youth brutally
ದೇವಸ್ಥಾನದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆರೋಪ

ದೊಡ್ಡಬಳ್ಳಾಪುರ: ದೇವಸ್ಥಾನದ ಒಳಗೆ ದಲಿಯ ಯುವಕನೋರ್ವ ಮೊಬೈಲ್​ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿ ದೇಗುಲದ ಆಡಳಿತ ಮಂಡಳಿಯವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕೇಳಿ ಬಂದಿದೆ.

ಘಟನೆ ಹಿನ್ನೆಲೆ: ವಿಜಯಪುರ ಪಟ್ಟಣದ ನಿವಾಸಿ ಎ.ನಾರಾಯಣಸ್ವಾಮಿ ಎಂಬುವವರ ಪುತ್ರ ದಿಲೀಪ್​ ಕುಮಾರ್​ ಅ.30ರಂದು ಕಾಲೇಜಿಗೆ ಹೋಗುವ ಮುನ್ನ ಆಂಜನೇಯ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ದಿಲೀಪ್​ಗೆ ದೂರವಾಣಿ ಕರೆ ಬಂದಿದೆ. ಆಗ ಅರ್ಚಕರು ದೇಗುಲದಲ್ಲಿ ಮೊಬೈಲ್​ ಬಳಕೆಗೆ ನಿಷೇಧವಿದೆ. ಹೊರಗಡೆ ಹೋಗಿ ಮಾತನಾಡುವಂತೆ ಸೂಚಿಸುತ್ತಾರೆ. ಅದರಂತೆ ಯುವಕ ದೇವಸ್ಥಾನದ ಹೊರಗೆ ಹೋಗಿ ಮಾತನಾಡಿದ್ದಾರೆ.

ಬಳಿಕ ದೇವಸ್ಥಾನದ ಸಮಿತಿ ಅಧ್ಯಕ್ಷ ಪ್ರಕಾಶ್ ದೇವಸ್ಥಾನದ ಆವರಣದೊಳಗೆ ಮೊಬೈಲ್​​​ನಲ್ಲಿ ಮಾತನಾಡುತ್ತಿರುತ್ತಾರೆ. ಇದನ್ನು ಗಮನಿಸಿದ ದಿಲೀಪ್​, ಪ್ರಕಾಶ್​​ನನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪ್ರಕಾಶ್ ಮತ್ತು ಆತನ ಸಹಚರರು ಯುವಕನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ, ವೈರನಿಂದ ಕತ್ತು ಬಿಗಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಯುವಕನ ಮೇಲೀನ ಹಲ್ಲೆ ಖಂಡಿಸಿ ಪ್ರತಿಭಟನೆ

ಒಂದು ವೇಳೆ ದಿಲೀಪ್ ಸಹೋದರ ಸ್ಥಳಕ್ಕೆ ಬರದಿದ್ದಲ್ಲಿ ತನ್ನ ಮಗನನ್ನು ಕೊಂದು ಬಿಡುತ್ತಿದ್ದರು ಎಂದು ಹಲ್ಲೆಗೊಳಗಾದ ಯುವಕನ ತಾಯಿ ಆರೋಪಿಸಿದ್ದಾರೆ.

ಘಟನೆಯಲ್ಲಿ ಯುವಕ ದಿಲೀಪ್​ ಗಂಭೀರವಾಗಿ ಗಾಯಗೊಂಡಿದ್ದು, ವಿಜಯಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಪ್ರಕಾಶ್ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.

ಆರೋಪಿಗಳ ಗಡಿಪಾರಿಗೆ ದಲಿತ ಸಂಘಟನೆಗಳ ಒತ್ತಾಯ, ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ:

ಆರೋಪಿ ಪ್ರಕಾಶ್ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಿಸಿದ್ದಾರೆ. ಪರಿಶಿಷ್ಟ ಜಾತಿಯವರನ್ನ ಕೀಳಾಗಿ ನೋಡುತ್ತಾರೆ. ಇವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಪ್ರಜಾ ವಿಮೋಚನ ಚಳವಳಿ ಸಂಘಟನೆ ಕಾರ್ಯಕರ್ತರು ದೊಡ್ಡಬಳ್ಳಾಪುರ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಶಾಮನೂರು ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್​ ಘಟಕದ ಪಿಲ್ಲರ್ ಕುಸಿತ; ಮೂವರು ಕಾರ್ಮಿಕರು ದುರ್ಮರಣ

ದೊಡ್ಡಬಳ್ಳಾಪುರ: ದೇವಸ್ಥಾನದ ಒಳಗೆ ದಲಿಯ ಯುವಕನೋರ್ವ ಮೊಬೈಲ್​ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿ ದೇಗುಲದ ಆಡಳಿತ ಮಂಡಳಿಯವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಕೇಳಿ ಬಂದಿದೆ.

ಘಟನೆ ಹಿನ್ನೆಲೆ: ವಿಜಯಪುರ ಪಟ್ಟಣದ ನಿವಾಸಿ ಎ.ನಾರಾಯಣಸ್ವಾಮಿ ಎಂಬುವವರ ಪುತ್ರ ದಿಲೀಪ್​ ಕುಮಾರ್​ ಅ.30ರಂದು ಕಾಲೇಜಿಗೆ ಹೋಗುವ ಮುನ್ನ ಆಂಜನೇಯ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ದಿಲೀಪ್​ಗೆ ದೂರವಾಣಿ ಕರೆ ಬಂದಿದೆ. ಆಗ ಅರ್ಚಕರು ದೇಗುಲದಲ್ಲಿ ಮೊಬೈಲ್​ ಬಳಕೆಗೆ ನಿಷೇಧವಿದೆ. ಹೊರಗಡೆ ಹೋಗಿ ಮಾತನಾಡುವಂತೆ ಸೂಚಿಸುತ್ತಾರೆ. ಅದರಂತೆ ಯುವಕ ದೇವಸ್ಥಾನದ ಹೊರಗೆ ಹೋಗಿ ಮಾತನಾಡಿದ್ದಾರೆ.

ಬಳಿಕ ದೇವಸ್ಥಾನದ ಸಮಿತಿ ಅಧ್ಯಕ್ಷ ಪ್ರಕಾಶ್ ದೇವಸ್ಥಾನದ ಆವರಣದೊಳಗೆ ಮೊಬೈಲ್​​​ನಲ್ಲಿ ಮಾತನಾಡುತ್ತಿರುತ್ತಾರೆ. ಇದನ್ನು ಗಮನಿಸಿದ ದಿಲೀಪ್​, ಪ್ರಕಾಶ್​​ನನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪ್ರಕಾಶ್ ಮತ್ತು ಆತನ ಸಹಚರರು ಯುವಕನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ, ವೈರನಿಂದ ಕತ್ತು ಬಿಗಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಯುವಕನ ಮೇಲೀನ ಹಲ್ಲೆ ಖಂಡಿಸಿ ಪ್ರತಿಭಟನೆ

ಒಂದು ವೇಳೆ ದಿಲೀಪ್ ಸಹೋದರ ಸ್ಥಳಕ್ಕೆ ಬರದಿದ್ದಲ್ಲಿ ತನ್ನ ಮಗನನ್ನು ಕೊಂದು ಬಿಡುತ್ತಿದ್ದರು ಎಂದು ಹಲ್ಲೆಗೊಳಗಾದ ಯುವಕನ ತಾಯಿ ಆರೋಪಿಸಿದ್ದಾರೆ.

ಘಟನೆಯಲ್ಲಿ ಯುವಕ ದಿಲೀಪ್​ ಗಂಭೀರವಾಗಿ ಗಾಯಗೊಂಡಿದ್ದು, ವಿಜಯಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಪ್ರಕಾಶ್ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.

ಆರೋಪಿಗಳ ಗಡಿಪಾರಿಗೆ ದಲಿತ ಸಂಘಟನೆಗಳ ಒತ್ತಾಯ, ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ:

ಆರೋಪಿ ಪ್ರಕಾಶ್ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಿಸಿದ್ದಾರೆ. ಪರಿಶಿಷ್ಟ ಜಾತಿಯವರನ್ನ ಕೀಳಾಗಿ ನೋಡುತ್ತಾರೆ. ಇವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಪ್ರಜಾ ವಿಮೋಚನ ಚಳವಳಿ ಸಂಘಟನೆ ಕಾರ್ಯಕರ್ತರು ದೊಡ್ಡಬಳ್ಳಾಪುರ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಶಾಮನೂರು ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್​ ಘಟಕದ ಪಿಲ್ಲರ್ ಕುಸಿತ; ಮೂವರು ಕಾರ್ಮಿಕರು ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.