ಬೆಂಗಳೂರು: ಉದ್ಯಾನ ನಗರಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ದಿನೇ ದಿನೇ ಕೊರೊನಾಗೆ ಹೆಚ್ಚೆಚ್ಚು ಜನ ಬಲಿಯಾಗುತ್ತಿದ್ದಾರೆ. ಜೊತೆಗೆ ಸೋಂಕಿತರ ಸಂಖ್ಯೆಯೂ ಕೂಡ ಏರುಗತಿಯಲ್ಲಿ ಸಾಗುತ್ತಿದೆ.
ಹೀಗಾಗಿ ಟಾಸ್ಕ್ ಫೋರ್ಸ್ ಸಮಿತಿಯು ಬೆಂಗಳೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬೆಂಗಳೂರಿನ ಸಂಪೂರ್ಣ ವರದಿಯನ್ನು ಸಮಿತಿಯು ಸಲ್ಲಿಸಿದೆ. ಬೆಂಗಳೂರಿನಲ್ಲಿ ಕೊರೊನಾಗೆ ಬ್ರೇಕ್ ಹಾಕಲು ಮಹತ್ವದ ನಿರ್ಧಾರಗಳನ್ನು ಕೈಗೊಳಲು ಸೂಚಿಸಿದೆ.
ವರದಿಯಲ್ಲೇನಿದೆ?
- ಬೆಂಗಳೂರಿಗೆ ಅಂತರ್ ಜಿಲ್ಲೆ ಒಡಾಟಕ್ಕೆ ಕಡಿವಾಣ ಹಾಕಬೇಕು. ಇನ್ಮುಂದೆ ಯಾರನ್ನೂ ಬೆಂಗಳೂರಿನಿಂದ ಬೇರೆ ಜಿಲ್ಲೆಗೆ ಹಾಗೂ ಬೇರೆ ಜಿಲ್ಲೆಯವರು ಬೆಂಗಳೂರಿಗೆ ಬರದಂತೆ ನೋಡಿಕೊಳ್ಳಬೇಕು.
- ಎಲ್ಲಾ ಎಸಿಂಪ್ಟಮ್ಯಾಟಿಕ್ ವಾರಿಯರ್ಸ್ ರೋಗಿಗಳನ್ನು ಮನೆಯಲ್ಲೇ ಐಸೊಲೇಷನ್ ಮಾಡಬೇಕು.
- ಬೆಂಗಳೂರಿನಲ್ಲಿನ ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಸರ್ಕಾರ ಪಡೆದು ಅದರಲ್ಲಿ, 200 ಬೆಡ್ಗಳನ್ನು ನಿರ್ಮಿಸುವಂತೆ ಸಲಹೆ
- ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿಸಬೇಕು. ಇದರಿಂದ 10 ನಿಮಿಷದಲ್ಲಿ ಕೋವಿಡ್ ವರದಿ ಸಿಗಲಿದೆ. ಹೈರಿಸ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
- ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಅಗತ್ಯವಿದ್ದು, 200 ಆ್ಯಂಬುಲೆನ್ಸ್ ನೀಡುವಂತೆ ಮನವಿ.