ETV Bharat / state

ನಾಳೆ ಅಥವಾ ನಾಡಿದ್ದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ಕೇರಳದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಆವರಿಸಿದ್ದು, ಬಹುಶಃ ನಾಳೆ ಅಥವಾ ನಾಡಿದ್ದು ರಾಜ್ಯದ ಕರಾವಳಿಗೆ ಮುಂಗಾರು ಪ್ರವೇಶವಾಗಬಹುದು. ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯಕ್ಕೆ ವ್ಯಾಪಿಸಬಹುದು ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ಹವಾಮಾನ ತಜ್ಞ ಗವಾಸ್ಕರ್ ತಿಳಿಸಿದ್ದಾರೆ.

author img

By

Published : Jun 11, 2019, 10:39 PM IST

ವಾಯು ಚಂಡಮಾರುತದಿಂದ ರಾಜ್ಯಕ್ಕೆ ಮುಂಗಾರು ಪ್ರವೇಶ ಇನ್ನೂ ನಿಧಾನ

ಬೆಂಗಳೂರು: ಈಗಾಗಲೇ ಮಾನ್ಸೂನ್ ಪ್ರವೇಶ ತಡವಾಗಿದ್ದು, ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ ಮುಂಗಾರು ಪ್ರವೇಶ ಇನ್ನಷ್ಟು ತಡವಾಗಿದೆ. ಜೂನ್ ಮೊದಲ ವಾರದಲ್ಲೇ ರಾಜ್ಯದ ಅರ್ಧ ಭಾಗಕ್ಕೆ ಮುಂಗಾರು ಪ್ರವೇಶ ಆಗಬೇಕಿತ್ತು. ಆದರೆ ಮಾನ್ಸೂನ್ ಮಳೆ ಇನ್ನೂ ಕೇರಳ ದಾಟಿ ರಾಜ್ಯಕ್ಕೆ ಎಂಟ್ರಿಯಾಗಿಲ್ಲ.

ಕರಾವಳಿ ಹಾಗೂ ಕೊಡಗಿನಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯಾಗುತ್ತಿದೆ. ಆದರೆ ಮುಂಗಾರು ಪ್ರವೇಶ ಆಗದ ಕಾರಣ ರಾಜ್ಯದ ಇತರೆ ಜಿಲ್ಲೆಗಳಿಗೆ ಮಳೆ ಕೊರತೆಯಾಗಿದೆ. ನಿರೀಕ್ಷೆಯಂತೆ ಮುಂಗಾರು ಮಳೆಯಾಗದ ಕಾರಣ ರೈತರ ವ್ಯವಸಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ.

ಕೇರಳದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಆವರಿಸಿದ್ದು, ಬಹುಶಃ ನಾಳೆ ಅಥವಾ ನಾಡಿದ್ದು ಕರಾವಳಿಗೆ ಮುಂಗಾರು ಪ್ರವೇಶವಾಗಬಹುದು. ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯಕ್ಕೆ ವ್ಯಾಪಿಸಬಹುದು ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ಹವಾಮಾನ ತಜ್ಞ ಗವಾಸ್ಕರ್ ಈಟಿವಿ ಭಾರತ್​​ಗೆ ತಿಳಿಸಿದರು. ಅಲ್ಲದೆ 2011ರ ಬಳಿಕ ಇದೇ ಮೊದಲ ಬಾರಿಗೆ ಮಾನ್ಸೂನ್ ಇಷ್ಟು ತಡವಾಗಿ ರಾಜ್ಯಕ್ಕೆ ಪ್ರವೇಶವಾಗ್ತಿದೆ ಎಂದರು.

ಕಳೆದ 8 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಮುಂಗಾರು ಪ್ರವೇಶ ಇಷ್ಟೊಂದು ತಡವಾಗಿದೆ. 2014, 2015ರಲ್ಲಿ ಜೂನ್​ 9ಕ್ಕೆ ಅಧಿಕೃತವಾಗಿ ಮುಂಗಾರು ಆರಂಭವಾಗಿತ್ತು. ಆದ್ರೆ ಈ ಬಾರಿಯ ಮುಂಗಾರು ಪ್ರವೇಶದ ಬಗ್ಗೆ ಹವಾಮಾನ ಇಲಾಖೆ ಈವರೆಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ಬೆಂಗಳೂರು: ಈಗಾಗಲೇ ಮಾನ್ಸೂನ್ ಪ್ರವೇಶ ತಡವಾಗಿದ್ದು, ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ ಮುಂಗಾರು ಪ್ರವೇಶ ಇನ್ನಷ್ಟು ತಡವಾಗಿದೆ. ಜೂನ್ ಮೊದಲ ವಾರದಲ್ಲೇ ರಾಜ್ಯದ ಅರ್ಧ ಭಾಗಕ್ಕೆ ಮುಂಗಾರು ಪ್ರವೇಶ ಆಗಬೇಕಿತ್ತು. ಆದರೆ ಮಾನ್ಸೂನ್ ಮಳೆ ಇನ್ನೂ ಕೇರಳ ದಾಟಿ ರಾಜ್ಯಕ್ಕೆ ಎಂಟ್ರಿಯಾಗಿಲ್ಲ.

ಕರಾವಳಿ ಹಾಗೂ ಕೊಡಗಿನಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯಾಗುತ್ತಿದೆ. ಆದರೆ ಮುಂಗಾರು ಪ್ರವೇಶ ಆಗದ ಕಾರಣ ರಾಜ್ಯದ ಇತರೆ ಜಿಲ್ಲೆಗಳಿಗೆ ಮಳೆ ಕೊರತೆಯಾಗಿದೆ. ನಿರೀಕ್ಷೆಯಂತೆ ಮುಂಗಾರು ಮಳೆಯಾಗದ ಕಾರಣ ರೈತರ ವ್ಯವಸಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ.

ಕೇರಳದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಆವರಿಸಿದ್ದು, ಬಹುಶಃ ನಾಳೆ ಅಥವಾ ನಾಡಿದ್ದು ಕರಾವಳಿಗೆ ಮುಂಗಾರು ಪ್ರವೇಶವಾಗಬಹುದು. ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯಕ್ಕೆ ವ್ಯಾಪಿಸಬಹುದು ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ಹವಾಮಾನ ತಜ್ಞ ಗವಾಸ್ಕರ್ ಈಟಿವಿ ಭಾರತ್​​ಗೆ ತಿಳಿಸಿದರು. ಅಲ್ಲದೆ 2011ರ ಬಳಿಕ ಇದೇ ಮೊದಲ ಬಾರಿಗೆ ಮಾನ್ಸೂನ್ ಇಷ್ಟು ತಡವಾಗಿ ರಾಜ್ಯಕ್ಕೆ ಪ್ರವೇಶವಾಗ್ತಿದೆ ಎಂದರು.

ಕಳೆದ 8 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಮುಂಗಾರು ಪ್ರವೇಶ ಇಷ್ಟೊಂದು ತಡವಾಗಿದೆ. 2014, 2015ರಲ್ಲಿ ಜೂನ್​ 9ಕ್ಕೆ ಅಧಿಕೃತವಾಗಿ ಮುಂಗಾರು ಆರಂಭವಾಗಿತ್ತು. ಆದ್ರೆ ಈ ಬಾರಿಯ ಮುಂಗಾರು ಪ್ರವೇಶದ ಬಗ್ಗೆ ಹವಾಮಾನ ಇಲಾಖೆ ಈವರೆಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

Intro:ವಾಯು ಚಂಡಮಾರುತದಿಂದ ರಾಜ್ಯಕ್ಕೆ ಮುಂಗಾರು ಪ್ರವೇಶ ಇನ್ನೂ ನಿಧಾನ


ಬೆಂಗಳೂರು- ಈಗಾಗಲೇ ಮಾನ್ಸೂನ್ ಪ್ರವೇಶ ನಿಧಾನವಾಗಿದ್ದು, ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯು ಚಂಡಮಾರುತದಿಂದಾಗಿ ಮುಂಗಾರು ಪ್ರವೇಶ ಇನ್ನಷ್ಟು ತಡವಾಗಿದೆ. ಜೂನ್ ಮೊದಲ ವಾರದಲ್ಲೇ ರಾಜ್ಯದ ಅರ್ಧ ಭಾಗಕ್ಕೆ ಮುಂಗಾರು ಪ್ರವೇಶ ಆಗಬೇಕಿತ್ತು. ಆದರೆ ಮಾನ್ಸೂನ್ ಮಳೆ ಇನ್ನೂ ಕೇರಳ ದಾಟಿ ರಾಜ್ಯಕ್ಕೆ ಎಂಟ್ರಿಯಾಗಲೇ ಇಲ್ಲ.
ಕರಾವಳಿ ಹಾಗೂ ಕೊಡಗಿನಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯಾಗುತ್ತಿದೆ. ಆದರೆ ಮುಂಗಾರು ಪ್ರವೇಶ ಆಗದ ಕಾರಣ ರಾಜ್ಯದ ಇತರೆ ಜಿಲ್ಲೆಗಳಿಗೆ ಮಳೆಕೊರತೆಯಾಗಿದೆ. ನಿರೀಕ್ಷೆಯಂತೆ ಮುಂಗಾರು ಮಳೆಯಾಗದ ಕಾರಣ ರೈತರ ವ್ಯವಸಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ.




ರಾಜ್ಯಕ್ಕೆ ನಾಲ್ಕೈದು ದಿನ ತಡವಾಗಿ ಮಾನ್ಸೂನ್ ಮಳೆ


ಕೇರಳ ರಾಜ್ಯಕ್ಕೆ ಮುಂಗಾರು ಮಳೆ ಸಂಪೂರ್ಣವಾಗಿ ಆವರಿಸಿದ್ದು, ಹನ್ನೊಂದು ತಾರೀಕಿನವರೆಗೂ ರಾಜ್ಯಕ್ಕೆ ಬಂದಿಲ್ಲ. ಬಹುಷಃ ನಾಳೆ- ನಾಡಿದ್ದು ಕರಾವಳಿಗೆ ಮುಂಗಾರು ಪ್ರವೇಶವಾಗಬಹುದು. ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯಕ್ಕೆ ವ್ಯಾಪಿಸಬಹುದು ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ಹವಾಮಾನ ತಜ್ಞರಾದ ಗವಾಸ್ಕರ್ ಈಟಿವಿ ಭಾರತ್ ಗೆ ತಿಳಿಸಿದರು. ಅಲ್ಲದೆ 2011 ರ ಬಳಿಕ ಇದೇ ಮೊದಲ ಬಾರಿಗೆ ಮಾನ್ಸೂನ್ ಇಷ್ಟು ತಡವಾಗಿ ರಾಜ್ಯಕ್ಕೆ ಪ್ರವೇಶವಾಗ್ತಿದೆ ಎಂದರು.




ಸೌಮ್ಯಶ್ರೀ
KN_BNG_06_11_mansoon_late_entry_script_sowmya_7202707

Please use file visualsBody:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.