ETV Bharat / state

ಸರ್ಕಾರದ ವಿರುದ್ಧ ವಿಶೇಷಚೇತನರ ಕಾಲ್ನಡಿಗೆ ಪ್ರತಿಭಟನೆ - ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶೇಷಚೇತನ

ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬಂದ ವಿಶೇಷಚೇತನರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ವಿಶೇಷಚೇತನರ ಕಾಲ್ನಡಿಗೆ ಪ್ರತಿಭಟನೆ
ವಿಶೇಷಚೇತನರ ಕಾಲ್ನಡಿಗೆ ಪ್ರತಿಭಟನೆ
author img

By

Published : Jan 16, 2020, 10:37 PM IST

Updated : Jan 17, 2020, 11:13 AM IST

ಬೆಂಗಳೂರು: ಕಾಲಿಲ್ಲದೇ ಇದ್ದರೂ ವೀಲ್ ಚೇರ್, ಸ್ಟಿಕ್ ಸಹಾಯದಿಂದ, ಇನ್ನೂ ಕೆಲವರು ರಸ್ತೆ ಮೇಲೆ ತೆವಲುತ್ತಾ ನಗರದ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ವಿಶೇಷಚೇತನರು ಕಾಲ್ನಡಿಗೆಯಲ್ಲಿ ಬಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು‌.

ಕನಿಷ್ಠ ಗೌರವ ಧನವನ್ನು ಏರಿಕೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅವರು ಪ್ರತಿಭಟನೆ ನಡೆಸಿದರು‌. ಆದ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಶೇಷಚೇತನರ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಮಾತ್ರ ಸ್ಥಳಕ್ಕೆ ಬರಲೇ ಇಲ್ಲ. ಬದಲಾಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮನವಿ ಸ್ವೀಕರಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ವಿಶೇಷಚೇತನರು ಪ್ರತಿಭಟನೆ ನಡೆಸಿದರು

ಕಳೆದ ಹನ್ನೆರಡು ವರ್ಷದಿಂದ ವಿಕಲಚೇತನರಿಗೆ ದಿನಕ್ಕೆ ಕೇವಲ 100 ರೂ, ವಿದ್ಯಾವಂತರಿಗೆ 200 ರೂಪಾಯಿ ಗೌರವ ಧನ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಿಶೇಷಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ರಾಜ್ಯ ಸಂಚಾಲಕ ದೇವರಾಜ್ ತಿಳಿಸಿದರು.

ಬೆಂಗಳೂರು: ಕಾಲಿಲ್ಲದೇ ಇದ್ದರೂ ವೀಲ್ ಚೇರ್, ಸ್ಟಿಕ್ ಸಹಾಯದಿಂದ, ಇನ್ನೂ ಕೆಲವರು ರಸ್ತೆ ಮೇಲೆ ತೆವಲುತ್ತಾ ನಗರದ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ವಿಶೇಷಚೇತನರು ಕಾಲ್ನಡಿಗೆಯಲ್ಲಿ ಬಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು‌.

ಕನಿಷ್ಠ ಗೌರವ ಧನವನ್ನು ಏರಿಕೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅವರು ಪ್ರತಿಭಟನೆ ನಡೆಸಿದರು‌. ಆದ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಶೇಷಚೇತನರ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಮಾತ್ರ ಸ್ಥಳಕ್ಕೆ ಬರಲೇ ಇಲ್ಲ. ಬದಲಾಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮನವಿ ಸ್ವೀಕರಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ವಿಶೇಷಚೇತನರು ಪ್ರತಿಭಟನೆ ನಡೆಸಿದರು

ಕಳೆದ ಹನ್ನೆರಡು ವರ್ಷದಿಂದ ವಿಕಲಚೇತನರಿಗೆ ದಿನಕ್ಕೆ ಕೇವಲ 100 ರೂ, ವಿದ್ಯಾವಂತರಿಗೆ 200 ರೂಪಾಯಿ ಗೌರವ ಧನ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಿಶೇಷಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ರಾಜ್ಯ ಸಂಚಾಲಕ ದೇವರಾಜ್ ತಿಳಿಸಿದರು.

Intro:ಸರ್ಕಾರದ ವಿರುದ್ಧ ವಿಕಲಚೇತನರ ಕಾಲ್ನಡಿಗೆ ಪ್ರತಿಭಟನೆ- ಸ್ಥಳಕ್ಕೆ ಬಾರದ ಸಚಿವರು


ಬೆಂಗಳೂರು: ರಾಜ್ಯದ ಮೂಲೆ ಮೂಲೆಯಿಂದ ಬಂದ ವಿಕಲಚೇತನರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕಾಲಿಲ್ಲದೆ ಇದ್ದರೂ ವೀಲ್ ಚೇರ್, ಸ್ಟಿಕ್ ಸಹಾಯದಿಂದ ,ಇನ್ನು ಕೆಲವರು ರಸ್ತೆ ಮೇಲೆ ತೆವಳಿಕೊಂಡು, ಕೈಇಲ್ಲದವರು, ವಿವಿಧ ದೈಹಿಕ ನ್ಯೂನ್ಯತೆ ಇದ್ದರೂ ಸಹ ನಗರದ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಕಾಲ್ನಡಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿದರು‌ .
ಕನಿಷ್ಟ ಗೌರವ ಧನವನ್ನು ಏರಿಕೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಿದರು‌. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಮಾತ್ರ ಸ್ಥಳಕ್ಕೆ ಬರಲಿಲ್ಲ. ಬದಲಾಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮನವಿ ಸ್ವೀಕರಿಸಿದರು.


ಬೇಡಿಕೆಗಳು
-ಗೌರವ ಧನ ಹೆಚ್ಚಳಮಾಡಬೇಕು
-ಖಾಯಂಮಾತಿ ಆಗುಔರೆಗೆ ಆರನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿ ಅನ್ವಯ ಎಂಆರ್ ಡಬ್ಲ್ಯೂ, ಯುಆರ್ಡಬ್ಲ್ಯೂ ರವರಿಗೂ ಕನಿಷ್ಠ ವೇತನ ನೀಡಬೇಕು
-ಗ್ರಾಮೀಣ ಅಂಕವಿಕಲರ ಪುನರ್ವಸತಿ ಯೋಜನೆ ಬಲವರ್ಧನೆಗೊಳಿಸಬೇಕು
-ಕಾರ್ಯಕರ್ತರು ಸಾವನ್ನಪ್ಪಿದರೆ ಹತ್ತು ಲಕ್ಷ ರೂ ನೀಡಬೇಕು
- ವಿವಿದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ನೌಕರರ ಕ್ಷೇಮಾಭಿವೃದ್ಧಿ ಅದಿನಿಯಮ ರಚಿಸಿ, ರಾಜ್ಯ ವಿಕಲಚೇತನರ ಕಾರ್ಯಕರ್ತರನ್ನು ಕಲ್ಯಾಣ ಅಧಿಕಾರಿಗಳನ್ನಾಗಿ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಅಭಿವೃದ್ಧಿ ಸಹಾಯಕ ಅಧಿಕಾರಿಗಳಾಗಿ ಹುದ್ದೆ ನೀಡಿ ಖಾಯಂಗೊಳಿಸಬೇಕು.


ಕಳೆದ ಹನ್ನೆರಡು ವರ್ಷದಿಂದ ವಿಕಲಚೇತನರಿಗೆ ದಿನಕ್ಕೆ ಕೇವಲ ನೂರು ರೂ, ವಿದ್ಯಾವಂತರಿಗೆ 200 ರೂಪಾಯಿ ಗೌರವ ಧನ ಕೊಡುತ್ತಿದೆ. ಆದರೆ ಇದರಿಂದ ವಿಕಲಚೇತನರ ಕುಟುಂಬ ನಿರ್ವಹಣೆ ಕಷ್ಟ. ಸರ್ಕಾರ ಆದಷ್ಟು ಬೇಗ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದ್ದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ರಾಜ್ಯ ಸಂಚಾಲಕ ದೇವರಾಜ್ ತಿಳಿಸಿದರು.
ವಿಶೇಷಚೇತನರಾದ ರಾಜು ಮಾತನಾಡಿ, 600 ರೂ, 1400 ರೂ ಬರುವ ಮಾಸಾಸನವನ್ನೂ ಸರ್ಕಾರ ಪ್ರತೀ ತಿಂಗಳು ನೀಡುತ್ತಿಲ್ಲ. ಮೂರ್ನಾಲ್ಕು ತಿಂಗಳಿಂದ ಬಂದೇ ಇಲ್ಲ. ಇದನ್ನೇ ನಂಬಿ ಬದುಕಿರುವ ಕುಟುಂಬಗಳಿಗೆ ಬಹಳ ಕಷ್ಟವಾಗಿದೆ, ಬ್ಯಾಂಕ್ ಗಳಿಗೆ ಓಡಾಡುವ ಕೆಲಸ ಆಗಿದೆ ಎಂದರು. ಗೌರವ ಧನವನ್ನೂ ಮೂರ್ನಾಲ್ಕು ತಿಂಗಳಿಗೊಮ್ಮೆ ಒಟ್ಟಾಗಿ ಕೊಡುವುದು ಎಷ್ಟು ಸರಿ ಎಂದರು.
ಇನ್ನು ಮನವಿ ಸ್ವೀಕರಿಸಿದ ರಾಕೇಶ್ ಸಿಂಗ್ ಮಾತನಾಡಿ, ಬಜೆಟ್ ವರೆಗೆ ಕಾಯದೆ ಜನವರಿ ತಿಂಗಳಿಂದಲೇ ಗೌರವ ಧನ ಹೆಚ್ಚು ಮಾಡಲು ಪ್ರಯತ್ನಿಸಲಾಗುವುದು ಎಂದರು.


ನಾನೂ ನಿಮ್ಮಂತೆಯೇ ಇದ್ದವ- ರಾಕೇಶ್ ಸಿಂಗ್
ಪ್ರತಿಭಟನಾಕಾರರ ಮನವೊಲಿಸಿದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಿಮ್ಮೆಲ್ಲರ ಕಷ್ಟ ನನಗೂ ಅರ್ಥವಾಗುತ್ತದೆ. ನಾನೂ ಒಂಭತ್ತು ವರ್ಷ ನಡೆಯುತ್ತಿರಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು. ನಾನು ಚಿಕ್ಕ ಮಗುವಿದ್ದಾಗ ಮೇಲಿಂದ ಬಿದ್ದಿದ್ದೆ. ಬೆಡ್ ರೆಸ್ಟ್ ನಲ್ಲಿದ್ದೆ. ನಾನು ಒಂಭತ್ತು ವರ್ಷವಾದ ಬಳಿಕ ನಡೆಯಲು ಆರಂಭಿಸಿದ್ದು ಎಂದರು.




ಸೌಮ್ಯಶ್ರೀ
Kn_Bng_02_specially_abeld_7202707Body:..Conclusion:...
Last Updated : Jan 17, 2020, 11:13 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.