ETV Bharat / state

ಅನುಕೂಲ ಸಿಂಧು ರಾಜಕಾರಣ ನಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತಿವೆ : ಸಭಾಪತಿ ಬಸವರಾಜ ಹೊರಟ್ಟಿ

author img

By

Published : Sep 24, 2021, 8:28 PM IST

Updated : Sep 24, 2021, 10:25 PM IST

ಈ ಎಲ್ಲಾ ನಿರೀಕ್ಷೆಗಳೊಂದಿಗೆ ಒಂದೇ ದಿನದಲ್ಲಿ ಸಂಪೂರ್ಣ ಬದಲಾವಣೆಯ ನಿರೀಕ್ಷೆ ಮಾಡದಿದ್ದರೂ, ಒಂದು ಧನಾತ್ಮಕ ಪಲ್ಲಟವನ್ನಾದರೂ ಸಾಧಿಸುತ್ತದೆಂಬ ಆಶಯ ನನ್ನದಾಗಿದೆ. ದೇಶವು ಸಂವಿಧಾನವನ್ನು ಅಂಗೀಕರಿಸುವ ಮೊದಲೆ ಮೈಸೂರು ಸಂಸ್ಥಾನದಲ್ಲಿ ಮೇಲ್ಮನೆಯ ಪರಿಕಲ್ಪನೆ ಚಾಲನೆಯಲ್ಲಿತ್ತು. ರಾಷ್ಟ್ರ ಮಟ್ಟದಲ್ಲಿ ರಾಜ್ಯಸಭೆ ರಚನೆಯಾಗಲು ಈ ಪರಿಕಲ್ಪನೆಯೇ ಸ್ಫೂರ್ತಿಯಾಯಿತು. ಇದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾದ ನನಗೆ ಅತ್ಯಂತ ಹೆಮ್ಮೆಯ ವಿಚಾರ ಎಂಬುದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ..

Basavaraj Horatti
ಬಸವರಾಜ ಹೊರಟ್ಟಿ

ಬೆಂಗಳೂರು : ಕಾಲ ಸರಿದಂತೆ ಇಂದು ನಮ್ಮೆಲ್ಲರ ಅನುಕೂಲ ಸಿಂಧು ರಾಜಕಾರಣ ನಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ಸದನಗಳು ಆರೋಪ-ಪ್ರತ್ಯಾರೋಪಗಳ ಅಖಾಡಗಳಾಗಿವೆ. ಭಿನ್ನತೆಯೆಂಬುದು ವಿರೋಧ ಎಂಬ ಅರ್ಥಕ್ಕೆ ಎಡೆಮಾಡಿಕೊಡುತ್ತಿರುವುದು ವಿಷಾದನೀಯ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂದು ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಉಭಯ ಸದನಗಳ ಸದಸ್ಯರುಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೊಸ ಸಂಪ್ರದಾಯಕ್ಕೆ ನಾಂದಿ : ಚರ್ಚೆಗಳಿಗೆ ಅವಕಾಶವೇ ಇಲ್ಲದಂತೆ ವಿಧೇಯಕಗಳು ಮಂಡನೆಯಾಗಿ ಅನುಮೋದನೆ ಪಡೆಯುತ್ತಿವೆ. ವಿಧೇಯಕಗಳ ಮಂಡನೆಗೆ ಬಹುಮುಖ್ಯವಾಗಿ ಅಗತ್ಯವಾದ ಯಾವ ಕಾರ್ಯ ವಿಧಾನವನ್ನು ಪಾಲಿಸದೆ ಅವುಗಳನ್ನು ಏಕಾಏಕಿ ಜಾರಿಗೆ ತರಲಾಗುತ್ತಿದೆ.

ಜನರಿಂದ ಆಯ್ಕೆಯಾಗಿ ಬಂದ ನಾವು ಹೇಳಿದ ಕೂಡಲೇ ಎಲ್ಲಾ ಕಾರ್ಯಗಳು ನಡೆದು ಬಿಡಬೇಕು ಎಂಬ ಧೋರಣೆ ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತಲೇ ಇದೆ. ಒಂದು ವೇಳೆ ಅಧಿವೇಶನದಲ್ಲಿ ಮಂಡನೆಯಾಗದ ವಿಧೇಯಕಗಳನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅನುಷ್ಠಾನಗೊಳಿಸುತ್ತಿರುವ ಪರಿಪಾಠವಂತೂ ಅತ್ಯಂತ ನಿರಾಶಾದಾಯಕ ಸಂಪ್ರದಾಯಕ್ಕೆ ನಾಂದಿ ಹಾಡಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಷಮತೆಯೇ ಕಾರಣ : ಸುಗ್ರೀವಾಜ್ಞೆಯನ್ನು ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅತ್ಯಂತ ತುರ್ತಾಗಿ ಶಾಸನಗಳ ಅನಿವಾರ್ಯತೆಯುಂಟಾದ ಸಂದರ್ಭದಲ್ಲಿ ಮಾತ್ರ ಹೊರಡಿಸುವ ಒಂದು ಕಾಲವೂ ಇತ್ತು ಎಂಬುದನ್ನು ನೆನೆದರೆ, ಪ್ರಸ್ತುತ ಎಂತಹ ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮೆಲ್ಲರ ಪ್ರಸ್ತುತತೆ ಹೇಗೆ ಕಡಿಮೆಯಾಗುತ್ತಿದೆ ಎಂಬುದು ಅರಿವಾಗುತ್ತದೆ. ಇಂತಹ ಮಾರಕ ವಿಚಾರಗಳಿಗೆ ನಮ್ಮ ಸಮಾಜದಲ್ಲಿ ಬೇರು ಬಿಟ್ಟಿರುವ ವಿಷಮತೆಯೇ ಕಾರಣ ಎಂಬುದನ್ನು ಅರಿಯಬೇಕಿದೆ. ಈ ದಿಶೆಯಲ್ಲಿ ಆಳವಾಗಿ ಚಿಂತಿಸಲು ಆರಂಭಿಸಿದಾಗ ಚುನಾವಣೆಗಳನ್ನು ಹಣ-ಹೆಂಡ-ಸ್ವಜನ ಪಕ್ಷಪಾತಗಳಿಂದ ಮುಕ್ತವಾಗಿಸಿದರೆ ಮಾತ್ರ ಸಮಸ್ಯೆ ಗರಿಷ್ಠ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎನಿಸುತ್ತದೆ.

ಸಮಾಜ ತಲೆತಗ್ಗಿಸುವಂತಾಗಿದೆ : ಬದಲಾದ ದಿನಮಾನಗಳಲ್ಲಿ ಚಕ್ರ ಉರುಳುತ್ತಲೇ ಇರುತ್ತದೆ ಎಂಬುದನ್ನು ನಾವೆಲ್ಲರೂ ಹೊಸ ಭರವಸೆಯೊಂದಿಗೆ ಹಾಗೂ ನಿರೀಕ್ಷೆಗಳೊಂದಿಗೆ ಕನಸುಗಳನ್ನು ಕಟ್ಟಿಕೊಳ್ಳೋಣ. ಚಕ್ರ ಉರುಳಿದಂತೆ ಹಳಿತಪ್ಪಿದ ಗಾಲಿಯನ್ನು ಮತ್ತೆ ಹೊಸ ಉತ್ಸಾಹ-ಚೈತನ್ಯಗಳೊಂದಿಗೆ ಹಳಿಗೆ ತರೋಣ. ಯಾಕೆಂದರೆ, ಈ ದೇಶವನ್ನು ತ್ಯಾಗ, ಬಲಿದಾನಗಳಿಂದ,ನಿಸ್ವಾರ್ಥದಿಂದ ನಮ್ಮ ಪೂರ್ವಜರು ಕಟ್ಟಿದ್ದಾರೆ. ಅವುಗಳನ್ನು ನಿರರ್ಥಕ ಮಾಡುವುದು ಬೇಡ.

ಮಹಾತ್ಮ ಗಾಂಧೀಜಿಯವರು ಈ ದೇಶದಲ್ಲಿ ಮಧ್ಯರಾತ್ರಿ ಮಹಿಳೆಯರು ಸುರಕ್ಷಿತವಾಗಿ ಸಂಚರಿಸಿದಾಗ ಮಾತ್ರ ಈ ದೇಶಕ್ಕೆ ವಾಸ್ತವವಾಗಿ ಸ್ವಾತಂತ್ರ್ಯ ಬರುತ್ತದೆಂದು ತುಂಬಾ ಮಾರ್ಮಿಕವಾಗಿ ಹೇಳಿದ್ದರು. ಇಂದು ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರು ತಲೆತಗ್ಗಿಸುವಂತೆ ಮಾಡಿದೆ ಎಂದರು.

ಕಾನೂನು ರಚಿಸಲು ಸದನಕ್ಕೆ ಅಧಿಕಾರ ಇದೆ : ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣ ಹಾಗೂ ಶಿಕ್ಷಣದ ಮೂಲಕ ಘನತೆಯ ಬದುಕಿಗೆ ಪೂರಕ ವಾತಾವರಣವನ್ನು ಕಲ್ಪಿಸಿಕೊಡುವುದು ಸದನಗಳಿಗೆ ಕಷ್ಟಸಾಧ್ಯವೇನಲ್ಲ. ಯಾಕೆಂದರೆ, ಸದನಗಳಿಗೆ ತಮ್ಮದೆ ಆದ ಮಹತ್ವವಿದೆ. ಸದನಗಳ ಮೌಲ್ಯಗಳ ಪರಿಧಿಯಲ್ಲಿಯೇ ಕಾನೂನುಗಳನ್ನು ರಚಿಸುವ ಹಾಗೂ ಬದಲಾಯಿಸುವ, ಮಾರ್ಪಾಡು ಮಾಡುವ ಹಾಗೂ ರದ್ದುಪಡಿಸುವ ಸರ್ವಸ್ವತಂತ್ರ ಅಧಿಕಾರ ಇದೆ. ಇದೊಂದು ಸಮಾಜವನ್ನು ಹೊಸ ದಿಕ್ಕಿನೆಡೆಗೆ ಕರೆದೊಯ್ಯಲು ಇರುವ ಮಂತ್ರದಂಡವೆಂದು ಅತ್ಯಂತ ಜವಾಬ್ದಾರಿಯಿಂದ ಆಲೋಚಿಸಬೇಕಾಗುತ್ತದೆ. ನಾವೆಲ್ಲರೂ ಹಾಗೆಯೇ ಚಿಂತಿಸೋಣ ಎನ್ನುವುದು ನನ್ನ ಅನಿಸಿಕೆ ಎಂದರು.

ಪಕ್ಷಬೇಧ ಮರೆತು ವಿಶ್ವಾಸಾರ್ಹತೆಯಿಂದ ವರ್ತಿಸಬೇಕು : ಈ ಸದನಕ್ಕೆ ನಾವೆಲ್ಲರೂ ಜಾತಿ, ಧರ್ಮ, ಲಿಂಗಗಳ ಬೇಧವಿಲ್ಲದೆ ಆರಿಸಿ ಬರುವ ಅವಕಾಶ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಇಲ್ಲಿ ವೈವಿಧ್ಯಮಯ ಹಿನ್ನೆಲೆಯ ಪ್ರತಿನಿಧಿಗಳು ಆಯ್ಕೆಯಾಗಿ ಬರುತ್ತಾರೆ. ಇಂತಹ ಪವಿತ್ರ ವಾತಾವರಣದಲ್ಲಿ ಜನರ ಬೇಕು-ಬೇಡಗಳ, ದುಃಖ-ದುಮ್ಮಾನಗಳನ್ನು ಆಲಿಸುವ, ಚರ್ಚಿಸುವ, ನಿರ್ವಹಿಸುವ ಔದಾರ್ಯ ತೋರಬೇಕಾಗಿದೆ.

ಪಕ್ಷಬೇಧ ಮರೆತು ಪರಸ್ಪರ ವಿಶ್ವಾಸಾರ್ಹತೆಯಿಂದ ವರ್ತಿಸಿ ಸದಸ್ಯರೆಲ್ಲರೂ ತಮ್ಮ ಅನುಭವ ಹಾಗೂ ಜ್ಞಾನಗಳನ್ನು ಧಾರೆಯೆರೆದು ನಿಸ್ವಾರ್ಥವಾದ ಜನಸೇವೆ ಮಾಡಬೇಕಾದುದು ಹಿಂದೆಗಿಂತಲೂ ಇಂದು ತುರ್ತು ಅಗತ್ಯ ಎಂಬುದನ್ನು ನಾವೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕಿದೆ ಎಂದರು.

ಸದನದಲ್ಲಿ ಸಭಾಪತಿಯವರ ಹಾಗೂ ಸಭಾಧ್ಯಕ್ಷರ ಸ್ಥಾನಗಳಿಗೆ ಅವುಗಳದೆ ಆದ ಗೌರವ, ಘನತೆಯಿದೆ. ಈ ಘನತೆಗೆ ಚ್ಯುತಿ ಬಾರದಂತೆ ಸಂಸದೀಯಪಟುಗಳ ವರ್ತನೆ ಇರಬೇಕಾಗುತ್ತದೆ. ಇವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಎತ್ತಿ ಹಿಡಿಯುವ ಕೆಲಸದಲ್ಲಿಯೆ ಸದಾ ನಿರತವಾಗಿರುವಂತಹ ಸ್ಥಾನಗಳಾಗಿವೆ ಎಂಬುದು ಸರ್ವವಿಧಿತ. ವಿಧಾನ ಮಂಡಲದ ಕಾರ್ಯ ಕಲಾಪಗಳು ವರ್ಷದಲ್ಲಿ ಕನಿಷ್ಠ ಅರವತ್ತು ದಿನ ನಡೆಯಬೇಕು ಎನ್ನುವ ವಿಚಾರವನ್ನು ಪಕ್ಷಬೇಧ ಮರೆತು ನಾವೆಲ್ಲರೂ ಒಪ್ಪಿಕೊಂಡಿದ್ದರೂ ಸಹ ಅದು ಇತ್ತೀಚಿನ ವರ್ಷಗಳಲ್ಲಿ ಸಾಧ್ಯವಾಗಿಲ್ಲ ಎನ್ನುವುದು ಕಟು ಸತ್ಯ.

ರಕ್ಷಿತ ಪರಿಧಿ ದಾಟಿದ್ರೆ ಸರ್ವಾಧಿಕಾರಿಗಳ ಉಗಮ : ಸ್ಥಾಯಿ ಸಮಿತಿಗಳು ವಿಧಾನ ಮಂಡಲದ ಸದನಗಳ ಮುಂದುವರೆದ ಭಾಗವೇ ಆಗಿದ್ದು, ಅಧಿವೇಶನಗಳು ಇಲ್ಲದಿರುವಾಗ ಅಲ್ಲಿ ಪ್ರಸ್ತಾಪಿಸುವಂತಹ ನೀತಿ, ನಿಯಮ, ಕಾನೂನುಗಳ ಅನುಷ್ಠಾನಗಳ ಸಂಬಂಧ ವಿಧಾನ ಮಂಡಲದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಜವಾಬ್ದಾರಿ ನಿರ್ವಹಿಸುವುದೂ ಕೂಡ ಅತ್ಯಂತ ಆದ್ಯ ವಿಚಾರವೆ ಆಗಿರುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದೀಯ ಮೌಲ್ಯಗಳು ಒಂದು ರಕ್ಷಿತ ಪರಿಧಿಯನ್ನು ದಾಟಿದರೆ ಅಲ್ಲಿ ಸರ್ವಾಧಿಕಾರಿಗಳ ಉಗಮ ತಾನೆ ತಾನಾಗಿ ಸೃಷ್ಠಿಯಾಗಿ ಬಿಡುತ್ತದೆ. ಸಂವಿಧಾನದ ಮಾರ್ಗದರ್ಶನದಲ್ಲಿಯೇ ನಡೆಯಬೇಕಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರ ಪೂರಕವಾಗಿ ಹಾಗೂ ಪ್ರಜಾಪರವಾಗಿ ನಡೆದುಕೊಳ್ಳಬೇಕಾಗುತ್ತದೆ. ಪರಿಸ್ಥಿತಿ ಹೀಗಿಲ್ಲದಿರುವಾಗ ಕಾರ್ಯಾಂಗವು ಶಾಸಕಾಂಗದ ಮೇಲೆ ಸವಾರಿ ಮಾಡುವ ಅಪಾಯಕಾರಿ ಹಂತವನ್ನು ನಾವು ಸುಗ್ರೀವಾಜ್ಞೆಗಳನ್ನು ತರುತ್ತಿರುವ ಹಿನ್ನೆಲೆಯಲ್ಲಿ ಗಮನಿಸಬೇಕಾಗುತ್ತದೆ. ಈ ನಡೆಯನ್ನು ಸದನದ ಪ್ರಸ್ತುತತೆಯನ್ನು ಗೌಣಗೊಳಿಸುವ ನಡೆ ಎಂದೇ ಅರ್ಥೈಸಬಹುದಾಗಿದೆ.

ದೂರದರ್ಶಿತ್ವವುಳ್ಳ, ಸ್ವಾರ್ಥ ರಾಜಕೀಯ ಮುಕ್ತ, ಕಾನೂನು ಅನುಷ್ಠಾನಕ್ಕೆ ಹಾಗೂ ಶಾಸನ ರಚನೆಗೆ ನಾವೆಲ್ಲರೂ ಕಟಿಬದ್ಧರಾಗಿ ರಾಷ್ಟ್ರ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಯಾವುದೇ ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಪಕ್ಷಬೇಧ ಮರೆತು ಒಂದಾಗಿ ನಿಲ್ಲುವ ಪ್ರತಿಜ್ಞೆಗೈಯೋಣ ಎಂದು ಮನವಿ ಮಾಡಿದರು.

ಪೂರ್ವಿಕ ಸಂಸದೀಯ ಪಟುಗಳ ಹೆಜ್ಚೆಯ ಮೆಲುಕು : ರಾಜಕಾರಣದಲ್ಲಿ ಯುವ ಪೀಳಿಗೆಗೆ ಆದ್ಯತೆ ನೀಡಿ ಮುತ್ಸದ್ದಿತನದ ಹಾಗೂ ಸಕ್ರಿಯ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕೋಣ. ವ್ಯಕ್ತಿ ನಿಷ್ಠೆಯನ್ನು ಪ್ರಧಾನವಾಗಿಸದೆ ವಸ್ತುನಿಷ್ಠವಾಗಿ ಈ ಸಮಾಜವನ್ನು ರೂಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎನ್ನುವುದನ್ನು ನಾನು ಪ್ರಾಮಾಣಿವಾಗಿ ಹೇಳ ಬಯಸುತ್ತೇನೆ. ಜನರಿಂದ ಆಯ್ಕೆಯಾದ ನಾವೆಲ್ಲರೂ ಒಂದು ನಿರ್ದಿಷ್ಟ ನೀತಿ ಸಂಹಿತೆ ಪಾಲಿಸುವುದರ ಮೂಲಕ ನಮ್ಮ ಪೂರ್ವಿಕ ಸಂಸದೀಯ ಪಟುಗಳ ಹೆಜ್ಚೆ ಗುರುತುಗಳಲ್ಲಿರುವ ತತ್ವಾದರ್ಶ-ಮೌಲ್ಯಗಳನ್ನು ಸಕಾಲಿಕ ವಿವೇಕದೊಂದಿಗೆ ಗ್ರಹಿಸಿಕೊಳ್ಳೋಣ.

ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ಸದಾ ಜಾಗೃತವಾಗಿಟ್ಟುಕೊಂಡು ಅಧಿವೇಶನ ನಡೆಯುವ ಪ್ರತಿಯೊಂದು ದಿನವೂ, ಅಧಿವೇಶನದಲ್ಲಿ ಭಾಗವಹಿಸಿ, ವಿಚಾರಗಳನ್ನು ಮಂಡಿಸಿ, ಆರೋಗ್ಯಕರ ಚರ್ಚೆಗಳಿಗೆ ನಾಂದಿ ಹಾಡೋಣ. ಸ್ವಜನ ಪಕ್ಷಪಾತವೆಂಬುದು ಈ ದೇಶಕ್ಕೆ ಬಂದೊದಗಿದ ಆಪತ್ತು ಎಂಬುದನ್ನು ಮನಗಂಡು ಸಂಸದೀಯ ಮೌಲ್ಯಗಳ ಅಪಮೌಲ್ಯವನ್ನು ತಡೆದುಈ ದೇಶವನ್ನು ಮಾದರಿಯಾಗಿಸೋಣ ಎಂದರು.

ಈ ಎಲ್ಲಾ ನಿರೀಕ್ಷೆಗಳೊಂದಿಗೆ ಒಂದೇ ದಿನದಲ್ಲಿ ಸಂಪೂರ್ಣ ಬದಲಾವಣೆಯ ನಿರೀಕ್ಷೆ ಮಾಡದಿದ್ದರೂ, ಒಂದು ಧನಾತ್ಮಕ ಪಲ್ಲಟವನ್ನಾದರೂ ಸಾಧಿಸುತ್ತದೆಂಬ ಆಶಯ ನನ್ನದಾಗಿದೆ. ದೇಶವು ಸಂವಿಧಾನವನ್ನು ಅಂಗೀಕರಿಸುವ ಮೊದಲೆ ಮೈಸೂರು ಸಂಸ್ಥಾನದಲ್ಲಿ ಮೇಲ್ಮನೆಯ ಪರಿಕಲ್ಪನೆ ಚಾಲನೆಯಲ್ಲಿತ್ತು. ರಾಷ್ಟ್ರ ಮಟ್ಟದಲ್ಲಿ ರಾಜ್ಯಸಭೆ ರಚನೆಯಾಗಲು ಈ ಪರಿಕಲ್ಪನೆಯೇ ಸ್ಫೂರ್ತಿಯಾಯಿತು. ಇದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾದ ನನಗೆ ಅತ್ಯಂತ ಹೆಮ್ಮೆಯ ವಿಚಾರ ಎಂಬುದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ.

ಸಂಸದೀಯ ಮೌಲ್ಯಗಳನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಈಗಿರುವ ನಿಯಮಗಳನ್ನು ಹೇಗೆ ಬಲಪಡಿಸಬೇಕು. ಅವುಗಳನ್ನು ಯಾವ ರೀತಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂಬ ಕುರಿತು ಚಿಂತನೆ ನಡೆಸಿ ಅವುಗಳನ್ನು ನಾವೆಲ್ಲರೂ ಸೇರಿ ಕಾರ್ಯರೂಪಗೊಳಿಸುವ ಸಂಕಲ್ಪದೊಂದಿಗೆ ಅತ್ಯಂತ ಸಂತೋಷದಿಂದ ನಾನು ಇಂದಿನ ಈ ಸಭೆಯಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಅ.1 ರಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ: Conditions Apply!

ಬೆಂಗಳೂರು : ಕಾಲ ಸರಿದಂತೆ ಇಂದು ನಮ್ಮೆಲ್ಲರ ಅನುಕೂಲ ಸಿಂಧು ರಾಜಕಾರಣ ನಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ಸದನಗಳು ಆರೋಪ-ಪ್ರತ್ಯಾರೋಪಗಳ ಅಖಾಡಗಳಾಗಿವೆ. ಭಿನ್ನತೆಯೆಂಬುದು ವಿರೋಧ ಎಂಬ ಅರ್ಥಕ್ಕೆ ಎಡೆಮಾಡಿಕೊಡುತ್ತಿರುವುದು ವಿಷಾದನೀಯ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂದು ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಉಭಯ ಸದನಗಳ ಸದಸ್ಯರುಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೊಸ ಸಂಪ್ರದಾಯಕ್ಕೆ ನಾಂದಿ : ಚರ್ಚೆಗಳಿಗೆ ಅವಕಾಶವೇ ಇಲ್ಲದಂತೆ ವಿಧೇಯಕಗಳು ಮಂಡನೆಯಾಗಿ ಅನುಮೋದನೆ ಪಡೆಯುತ್ತಿವೆ. ವಿಧೇಯಕಗಳ ಮಂಡನೆಗೆ ಬಹುಮುಖ್ಯವಾಗಿ ಅಗತ್ಯವಾದ ಯಾವ ಕಾರ್ಯ ವಿಧಾನವನ್ನು ಪಾಲಿಸದೆ ಅವುಗಳನ್ನು ಏಕಾಏಕಿ ಜಾರಿಗೆ ತರಲಾಗುತ್ತಿದೆ.

ಜನರಿಂದ ಆಯ್ಕೆಯಾಗಿ ಬಂದ ನಾವು ಹೇಳಿದ ಕೂಡಲೇ ಎಲ್ಲಾ ಕಾರ್ಯಗಳು ನಡೆದು ಬಿಡಬೇಕು ಎಂಬ ಧೋರಣೆ ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತಲೇ ಇದೆ. ಒಂದು ವೇಳೆ ಅಧಿವೇಶನದಲ್ಲಿ ಮಂಡನೆಯಾಗದ ವಿಧೇಯಕಗಳನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅನುಷ್ಠಾನಗೊಳಿಸುತ್ತಿರುವ ಪರಿಪಾಠವಂತೂ ಅತ್ಯಂತ ನಿರಾಶಾದಾಯಕ ಸಂಪ್ರದಾಯಕ್ಕೆ ನಾಂದಿ ಹಾಡಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಷಮತೆಯೇ ಕಾರಣ : ಸುಗ್ರೀವಾಜ್ಞೆಯನ್ನು ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅತ್ಯಂತ ತುರ್ತಾಗಿ ಶಾಸನಗಳ ಅನಿವಾರ್ಯತೆಯುಂಟಾದ ಸಂದರ್ಭದಲ್ಲಿ ಮಾತ್ರ ಹೊರಡಿಸುವ ಒಂದು ಕಾಲವೂ ಇತ್ತು ಎಂಬುದನ್ನು ನೆನೆದರೆ, ಪ್ರಸ್ತುತ ಎಂತಹ ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮೆಲ್ಲರ ಪ್ರಸ್ತುತತೆ ಹೇಗೆ ಕಡಿಮೆಯಾಗುತ್ತಿದೆ ಎಂಬುದು ಅರಿವಾಗುತ್ತದೆ. ಇಂತಹ ಮಾರಕ ವಿಚಾರಗಳಿಗೆ ನಮ್ಮ ಸಮಾಜದಲ್ಲಿ ಬೇರು ಬಿಟ್ಟಿರುವ ವಿಷಮತೆಯೇ ಕಾರಣ ಎಂಬುದನ್ನು ಅರಿಯಬೇಕಿದೆ. ಈ ದಿಶೆಯಲ್ಲಿ ಆಳವಾಗಿ ಚಿಂತಿಸಲು ಆರಂಭಿಸಿದಾಗ ಚುನಾವಣೆಗಳನ್ನು ಹಣ-ಹೆಂಡ-ಸ್ವಜನ ಪಕ್ಷಪಾತಗಳಿಂದ ಮುಕ್ತವಾಗಿಸಿದರೆ ಮಾತ್ರ ಸಮಸ್ಯೆ ಗರಿಷ್ಠ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎನಿಸುತ್ತದೆ.

ಸಮಾಜ ತಲೆತಗ್ಗಿಸುವಂತಾಗಿದೆ : ಬದಲಾದ ದಿನಮಾನಗಳಲ್ಲಿ ಚಕ್ರ ಉರುಳುತ್ತಲೇ ಇರುತ್ತದೆ ಎಂಬುದನ್ನು ನಾವೆಲ್ಲರೂ ಹೊಸ ಭರವಸೆಯೊಂದಿಗೆ ಹಾಗೂ ನಿರೀಕ್ಷೆಗಳೊಂದಿಗೆ ಕನಸುಗಳನ್ನು ಕಟ್ಟಿಕೊಳ್ಳೋಣ. ಚಕ್ರ ಉರುಳಿದಂತೆ ಹಳಿತಪ್ಪಿದ ಗಾಲಿಯನ್ನು ಮತ್ತೆ ಹೊಸ ಉತ್ಸಾಹ-ಚೈತನ್ಯಗಳೊಂದಿಗೆ ಹಳಿಗೆ ತರೋಣ. ಯಾಕೆಂದರೆ, ಈ ದೇಶವನ್ನು ತ್ಯಾಗ, ಬಲಿದಾನಗಳಿಂದ,ನಿಸ್ವಾರ್ಥದಿಂದ ನಮ್ಮ ಪೂರ್ವಜರು ಕಟ್ಟಿದ್ದಾರೆ. ಅವುಗಳನ್ನು ನಿರರ್ಥಕ ಮಾಡುವುದು ಬೇಡ.

ಮಹಾತ್ಮ ಗಾಂಧೀಜಿಯವರು ಈ ದೇಶದಲ್ಲಿ ಮಧ್ಯರಾತ್ರಿ ಮಹಿಳೆಯರು ಸುರಕ್ಷಿತವಾಗಿ ಸಂಚರಿಸಿದಾಗ ಮಾತ್ರ ಈ ದೇಶಕ್ಕೆ ವಾಸ್ತವವಾಗಿ ಸ್ವಾತಂತ್ರ್ಯ ಬರುತ್ತದೆಂದು ತುಂಬಾ ಮಾರ್ಮಿಕವಾಗಿ ಹೇಳಿದ್ದರು. ಇಂದು ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರು ತಲೆತಗ್ಗಿಸುವಂತೆ ಮಾಡಿದೆ ಎಂದರು.

ಕಾನೂನು ರಚಿಸಲು ಸದನಕ್ಕೆ ಅಧಿಕಾರ ಇದೆ : ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣ ಹಾಗೂ ಶಿಕ್ಷಣದ ಮೂಲಕ ಘನತೆಯ ಬದುಕಿಗೆ ಪೂರಕ ವಾತಾವರಣವನ್ನು ಕಲ್ಪಿಸಿಕೊಡುವುದು ಸದನಗಳಿಗೆ ಕಷ್ಟಸಾಧ್ಯವೇನಲ್ಲ. ಯಾಕೆಂದರೆ, ಸದನಗಳಿಗೆ ತಮ್ಮದೆ ಆದ ಮಹತ್ವವಿದೆ. ಸದನಗಳ ಮೌಲ್ಯಗಳ ಪರಿಧಿಯಲ್ಲಿಯೇ ಕಾನೂನುಗಳನ್ನು ರಚಿಸುವ ಹಾಗೂ ಬದಲಾಯಿಸುವ, ಮಾರ್ಪಾಡು ಮಾಡುವ ಹಾಗೂ ರದ್ದುಪಡಿಸುವ ಸರ್ವಸ್ವತಂತ್ರ ಅಧಿಕಾರ ಇದೆ. ಇದೊಂದು ಸಮಾಜವನ್ನು ಹೊಸ ದಿಕ್ಕಿನೆಡೆಗೆ ಕರೆದೊಯ್ಯಲು ಇರುವ ಮಂತ್ರದಂಡವೆಂದು ಅತ್ಯಂತ ಜವಾಬ್ದಾರಿಯಿಂದ ಆಲೋಚಿಸಬೇಕಾಗುತ್ತದೆ. ನಾವೆಲ್ಲರೂ ಹಾಗೆಯೇ ಚಿಂತಿಸೋಣ ಎನ್ನುವುದು ನನ್ನ ಅನಿಸಿಕೆ ಎಂದರು.

ಪಕ್ಷಬೇಧ ಮರೆತು ವಿಶ್ವಾಸಾರ್ಹತೆಯಿಂದ ವರ್ತಿಸಬೇಕು : ಈ ಸದನಕ್ಕೆ ನಾವೆಲ್ಲರೂ ಜಾತಿ, ಧರ್ಮ, ಲಿಂಗಗಳ ಬೇಧವಿಲ್ಲದೆ ಆರಿಸಿ ಬರುವ ಅವಕಾಶ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಇಲ್ಲಿ ವೈವಿಧ್ಯಮಯ ಹಿನ್ನೆಲೆಯ ಪ್ರತಿನಿಧಿಗಳು ಆಯ್ಕೆಯಾಗಿ ಬರುತ್ತಾರೆ. ಇಂತಹ ಪವಿತ್ರ ವಾತಾವರಣದಲ್ಲಿ ಜನರ ಬೇಕು-ಬೇಡಗಳ, ದುಃಖ-ದುಮ್ಮಾನಗಳನ್ನು ಆಲಿಸುವ, ಚರ್ಚಿಸುವ, ನಿರ್ವಹಿಸುವ ಔದಾರ್ಯ ತೋರಬೇಕಾಗಿದೆ.

ಪಕ್ಷಬೇಧ ಮರೆತು ಪರಸ್ಪರ ವಿಶ್ವಾಸಾರ್ಹತೆಯಿಂದ ವರ್ತಿಸಿ ಸದಸ್ಯರೆಲ್ಲರೂ ತಮ್ಮ ಅನುಭವ ಹಾಗೂ ಜ್ಞಾನಗಳನ್ನು ಧಾರೆಯೆರೆದು ನಿಸ್ವಾರ್ಥವಾದ ಜನಸೇವೆ ಮಾಡಬೇಕಾದುದು ಹಿಂದೆಗಿಂತಲೂ ಇಂದು ತುರ್ತು ಅಗತ್ಯ ಎಂಬುದನ್ನು ನಾವೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕಿದೆ ಎಂದರು.

ಸದನದಲ್ಲಿ ಸಭಾಪತಿಯವರ ಹಾಗೂ ಸಭಾಧ್ಯಕ್ಷರ ಸ್ಥಾನಗಳಿಗೆ ಅವುಗಳದೆ ಆದ ಗೌರವ, ಘನತೆಯಿದೆ. ಈ ಘನತೆಗೆ ಚ್ಯುತಿ ಬಾರದಂತೆ ಸಂಸದೀಯಪಟುಗಳ ವರ್ತನೆ ಇರಬೇಕಾಗುತ್ತದೆ. ಇವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಎತ್ತಿ ಹಿಡಿಯುವ ಕೆಲಸದಲ್ಲಿಯೆ ಸದಾ ನಿರತವಾಗಿರುವಂತಹ ಸ್ಥಾನಗಳಾಗಿವೆ ಎಂಬುದು ಸರ್ವವಿಧಿತ. ವಿಧಾನ ಮಂಡಲದ ಕಾರ್ಯ ಕಲಾಪಗಳು ವರ್ಷದಲ್ಲಿ ಕನಿಷ್ಠ ಅರವತ್ತು ದಿನ ನಡೆಯಬೇಕು ಎನ್ನುವ ವಿಚಾರವನ್ನು ಪಕ್ಷಬೇಧ ಮರೆತು ನಾವೆಲ್ಲರೂ ಒಪ್ಪಿಕೊಂಡಿದ್ದರೂ ಸಹ ಅದು ಇತ್ತೀಚಿನ ವರ್ಷಗಳಲ್ಲಿ ಸಾಧ್ಯವಾಗಿಲ್ಲ ಎನ್ನುವುದು ಕಟು ಸತ್ಯ.

ರಕ್ಷಿತ ಪರಿಧಿ ದಾಟಿದ್ರೆ ಸರ್ವಾಧಿಕಾರಿಗಳ ಉಗಮ : ಸ್ಥಾಯಿ ಸಮಿತಿಗಳು ವಿಧಾನ ಮಂಡಲದ ಸದನಗಳ ಮುಂದುವರೆದ ಭಾಗವೇ ಆಗಿದ್ದು, ಅಧಿವೇಶನಗಳು ಇಲ್ಲದಿರುವಾಗ ಅಲ್ಲಿ ಪ್ರಸ್ತಾಪಿಸುವಂತಹ ನೀತಿ, ನಿಯಮ, ಕಾನೂನುಗಳ ಅನುಷ್ಠಾನಗಳ ಸಂಬಂಧ ವಿಧಾನ ಮಂಡಲದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಜವಾಬ್ದಾರಿ ನಿರ್ವಹಿಸುವುದೂ ಕೂಡ ಅತ್ಯಂತ ಆದ್ಯ ವಿಚಾರವೆ ಆಗಿರುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದೀಯ ಮೌಲ್ಯಗಳು ಒಂದು ರಕ್ಷಿತ ಪರಿಧಿಯನ್ನು ದಾಟಿದರೆ ಅಲ್ಲಿ ಸರ್ವಾಧಿಕಾರಿಗಳ ಉಗಮ ತಾನೆ ತಾನಾಗಿ ಸೃಷ್ಠಿಯಾಗಿ ಬಿಡುತ್ತದೆ. ಸಂವಿಧಾನದ ಮಾರ್ಗದರ್ಶನದಲ್ಲಿಯೇ ನಡೆಯಬೇಕಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರ ಪೂರಕವಾಗಿ ಹಾಗೂ ಪ್ರಜಾಪರವಾಗಿ ನಡೆದುಕೊಳ್ಳಬೇಕಾಗುತ್ತದೆ. ಪರಿಸ್ಥಿತಿ ಹೀಗಿಲ್ಲದಿರುವಾಗ ಕಾರ್ಯಾಂಗವು ಶಾಸಕಾಂಗದ ಮೇಲೆ ಸವಾರಿ ಮಾಡುವ ಅಪಾಯಕಾರಿ ಹಂತವನ್ನು ನಾವು ಸುಗ್ರೀವಾಜ್ಞೆಗಳನ್ನು ತರುತ್ತಿರುವ ಹಿನ್ನೆಲೆಯಲ್ಲಿ ಗಮನಿಸಬೇಕಾಗುತ್ತದೆ. ಈ ನಡೆಯನ್ನು ಸದನದ ಪ್ರಸ್ತುತತೆಯನ್ನು ಗೌಣಗೊಳಿಸುವ ನಡೆ ಎಂದೇ ಅರ್ಥೈಸಬಹುದಾಗಿದೆ.

ದೂರದರ್ಶಿತ್ವವುಳ್ಳ, ಸ್ವಾರ್ಥ ರಾಜಕೀಯ ಮುಕ್ತ, ಕಾನೂನು ಅನುಷ್ಠಾನಕ್ಕೆ ಹಾಗೂ ಶಾಸನ ರಚನೆಗೆ ನಾವೆಲ್ಲರೂ ಕಟಿಬದ್ಧರಾಗಿ ರಾಷ್ಟ್ರ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಯಾವುದೇ ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಪಕ್ಷಬೇಧ ಮರೆತು ಒಂದಾಗಿ ನಿಲ್ಲುವ ಪ್ರತಿಜ್ಞೆಗೈಯೋಣ ಎಂದು ಮನವಿ ಮಾಡಿದರು.

ಪೂರ್ವಿಕ ಸಂಸದೀಯ ಪಟುಗಳ ಹೆಜ್ಚೆಯ ಮೆಲುಕು : ರಾಜಕಾರಣದಲ್ಲಿ ಯುವ ಪೀಳಿಗೆಗೆ ಆದ್ಯತೆ ನೀಡಿ ಮುತ್ಸದ್ದಿತನದ ಹಾಗೂ ಸಕ್ರಿಯ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕೋಣ. ವ್ಯಕ್ತಿ ನಿಷ್ಠೆಯನ್ನು ಪ್ರಧಾನವಾಗಿಸದೆ ವಸ್ತುನಿಷ್ಠವಾಗಿ ಈ ಸಮಾಜವನ್ನು ರೂಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎನ್ನುವುದನ್ನು ನಾನು ಪ್ರಾಮಾಣಿವಾಗಿ ಹೇಳ ಬಯಸುತ್ತೇನೆ. ಜನರಿಂದ ಆಯ್ಕೆಯಾದ ನಾವೆಲ್ಲರೂ ಒಂದು ನಿರ್ದಿಷ್ಟ ನೀತಿ ಸಂಹಿತೆ ಪಾಲಿಸುವುದರ ಮೂಲಕ ನಮ್ಮ ಪೂರ್ವಿಕ ಸಂಸದೀಯ ಪಟುಗಳ ಹೆಜ್ಚೆ ಗುರುತುಗಳಲ್ಲಿರುವ ತತ್ವಾದರ್ಶ-ಮೌಲ್ಯಗಳನ್ನು ಸಕಾಲಿಕ ವಿವೇಕದೊಂದಿಗೆ ಗ್ರಹಿಸಿಕೊಳ್ಳೋಣ.

ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ಸದಾ ಜಾಗೃತವಾಗಿಟ್ಟುಕೊಂಡು ಅಧಿವೇಶನ ನಡೆಯುವ ಪ್ರತಿಯೊಂದು ದಿನವೂ, ಅಧಿವೇಶನದಲ್ಲಿ ಭಾಗವಹಿಸಿ, ವಿಚಾರಗಳನ್ನು ಮಂಡಿಸಿ, ಆರೋಗ್ಯಕರ ಚರ್ಚೆಗಳಿಗೆ ನಾಂದಿ ಹಾಡೋಣ. ಸ್ವಜನ ಪಕ್ಷಪಾತವೆಂಬುದು ಈ ದೇಶಕ್ಕೆ ಬಂದೊದಗಿದ ಆಪತ್ತು ಎಂಬುದನ್ನು ಮನಗಂಡು ಸಂಸದೀಯ ಮೌಲ್ಯಗಳ ಅಪಮೌಲ್ಯವನ್ನು ತಡೆದುಈ ದೇಶವನ್ನು ಮಾದರಿಯಾಗಿಸೋಣ ಎಂದರು.

ಈ ಎಲ್ಲಾ ನಿರೀಕ್ಷೆಗಳೊಂದಿಗೆ ಒಂದೇ ದಿನದಲ್ಲಿ ಸಂಪೂರ್ಣ ಬದಲಾವಣೆಯ ನಿರೀಕ್ಷೆ ಮಾಡದಿದ್ದರೂ, ಒಂದು ಧನಾತ್ಮಕ ಪಲ್ಲಟವನ್ನಾದರೂ ಸಾಧಿಸುತ್ತದೆಂಬ ಆಶಯ ನನ್ನದಾಗಿದೆ. ದೇಶವು ಸಂವಿಧಾನವನ್ನು ಅಂಗೀಕರಿಸುವ ಮೊದಲೆ ಮೈಸೂರು ಸಂಸ್ಥಾನದಲ್ಲಿ ಮೇಲ್ಮನೆಯ ಪರಿಕಲ್ಪನೆ ಚಾಲನೆಯಲ್ಲಿತ್ತು. ರಾಷ್ಟ್ರ ಮಟ್ಟದಲ್ಲಿ ರಾಜ್ಯಸಭೆ ರಚನೆಯಾಗಲು ಈ ಪರಿಕಲ್ಪನೆಯೇ ಸ್ಫೂರ್ತಿಯಾಯಿತು. ಇದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾದ ನನಗೆ ಅತ್ಯಂತ ಹೆಮ್ಮೆಯ ವಿಚಾರ ಎಂಬುದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ.

ಸಂಸದೀಯ ಮೌಲ್ಯಗಳನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಈಗಿರುವ ನಿಯಮಗಳನ್ನು ಹೇಗೆ ಬಲಪಡಿಸಬೇಕು. ಅವುಗಳನ್ನು ಯಾವ ರೀತಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂಬ ಕುರಿತು ಚಿಂತನೆ ನಡೆಸಿ ಅವುಗಳನ್ನು ನಾವೆಲ್ಲರೂ ಸೇರಿ ಕಾರ್ಯರೂಪಗೊಳಿಸುವ ಸಂಕಲ್ಪದೊಂದಿಗೆ ಅತ್ಯಂತ ಸಂತೋಷದಿಂದ ನಾನು ಇಂದಿನ ಈ ಸಭೆಯಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಅ.1 ರಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ: Conditions Apply!

Last Updated : Sep 24, 2021, 10:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.