ETV Bharat / state

ಬಿಎಸ್​​​ವೈ ರಾಜೀನಾಮೆ ಕೊಡಲ್ಲ, ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ: ಸೋಮಶೇಖರ್ ಸ್ವಾಮೀಜಿ

author img

By

Published : Jul 22, 2021, 1:49 PM IST

ಸಿಎಂ ಬದಲಾವಣೆಯಾಗುತ್ತಾರೆ ಎಂಬ ವದಂತಿಯ ನಡುವೆ ಸಾಲು ಸಾಲು ಮಠಾಧೀಶರು ಹಾಗೂ ಸ್ವಾಮೀಜಿಗಳು ಬಿಎಸ್​ವೈ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಇದೀಗ ಪುಷ್ಪಗಿರಿ ಮಠದ ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ ಸಹ ಬಿಎಸ್​​ವೈ ಸಿಎಂ ಆಗಿ ಮುಂದುವರಿಯಲಿ ಎಂದಿದ್ದಾರೆ.

somashekhar-shivacharya-swamy-reacted-on-bjp-leadership-row
ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ​ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ, ಬಿಜೆಪಿ ಹೈಕಮಾಂಡ್​ ಅವರಿಂದ ರಾಜೀನಾಮೆ ಪಡೆಯುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಮಧ್ಯೆ ಸಿಎಂ ಪರ ರಾಜ್ಯದ ಅನೇಕ ಸ್ವಾಮೀಜಿಗಳು ಅವರ ಪರ ಬ್ಯಾಟಿಂಗ್​ ಬೀಸುತ್ತಿದ್ದಾರೆ.

ಹೌದು, ಕಳೆದ ಮೂರ್ನಾಲ್ಕು ದಿನಗಳಿಂದ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಮಠಾಧೀಶರ ದಂಡೇ ಹರಿದುಬರುತ್ತಿದೆ. ಇಂದು ಸಹ ಕಲೆ ಸ್ವಾಮೀಜಿಗಳು ಬಿಎಸ್​ವೈ ನಿವಾಸಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ. ಬಿಎಸ್​ವೈ ರಾಜೀನಾಮೆ ಕೊಡಲ್ಲ. ಉಳಿದ ಅವಧಿವರೆಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಪುಷ್ಪಗಿರಿ ಮಠದ ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಎಸ್​​​ವೈ ರಾಜೀನಾಮೆ ಕೊಡಲ್ಲ ಅವರೇ ಮುಂದುವರಿಯುತ್ತಾರೆ: ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ

ಕಾವೇರಿ ನಿವಾಸದಲ್ಲಿ ಬಿಎಸ್​ವೈ ಭೇಟಿ ಬಳಿಕ ಮಾತನಾಡಿದ ಅವರು, ಬಿಎಸ್​​ವೈ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬುದು ರಾಜ್ಯದ ಜನತೆಯ ಆಶಯ. ರಾಜೀನಾಮೆ‌ ಕೇವಲ ವದಂತಿ ಅಷ್ಟೇ. ಅವರು ರಾಜೀನಾಮೆ ಕೊಡಲ್ಲ. 25 ಸಂಸದರನ್ನು ಕೊಟ್ಟಿದ್ದೇವೆ ಅಂದ್ರೆ ಕೇಂದ್ರದ ನಾಯಕರು ಅರ್ಥ ಮಾಡಿಕೊಳ್ಳಬೇಕು. ಆ ಕೊಡುಗೆ ಯಡಿಯೂರಪ್ಪ ಅವರದ್ದು. ಅವರನ್ನ ಸಿಎಂ ಸ್ಥಾನದಿಂದ ಇಳಿಸಬಾರದು ಎಂಬ ಸಂದೇಶವನ್ನು ಹೈಕಮಾಂಡ್​ಗೆ ರವಾನಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ​ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ, ಬಿಜೆಪಿ ಹೈಕಮಾಂಡ್​ ಅವರಿಂದ ರಾಜೀನಾಮೆ ಪಡೆಯುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಮಧ್ಯೆ ಸಿಎಂ ಪರ ರಾಜ್ಯದ ಅನೇಕ ಸ್ವಾಮೀಜಿಗಳು ಅವರ ಪರ ಬ್ಯಾಟಿಂಗ್​ ಬೀಸುತ್ತಿದ್ದಾರೆ.

ಹೌದು, ಕಳೆದ ಮೂರ್ನಾಲ್ಕು ದಿನಗಳಿಂದ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಮಠಾಧೀಶರ ದಂಡೇ ಹರಿದುಬರುತ್ತಿದೆ. ಇಂದು ಸಹ ಕಲೆ ಸ್ವಾಮೀಜಿಗಳು ಬಿಎಸ್​ವೈ ನಿವಾಸಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ. ಬಿಎಸ್​ವೈ ರಾಜೀನಾಮೆ ಕೊಡಲ್ಲ. ಉಳಿದ ಅವಧಿವರೆಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಪುಷ್ಪಗಿರಿ ಮಠದ ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಎಸ್​​​ವೈ ರಾಜೀನಾಮೆ ಕೊಡಲ್ಲ ಅವರೇ ಮುಂದುವರಿಯುತ್ತಾರೆ: ಸೋಮಶೇಖರ್ ಶಿವಾಚಾರ್ಯ ಸ್ವಾಮೀಜಿ

ಕಾವೇರಿ ನಿವಾಸದಲ್ಲಿ ಬಿಎಸ್​ವೈ ಭೇಟಿ ಬಳಿಕ ಮಾತನಾಡಿದ ಅವರು, ಬಿಎಸ್​​ವೈ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬುದು ರಾಜ್ಯದ ಜನತೆಯ ಆಶಯ. ರಾಜೀನಾಮೆ‌ ಕೇವಲ ವದಂತಿ ಅಷ್ಟೇ. ಅವರು ರಾಜೀನಾಮೆ ಕೊಡಲ್ಲ. 25 ಸಂಸದರನ್ನು ಕೊಟ್ಟಿದ್ದೇವೆ ಅಂದ್ರೆ ಕೇಂದ್ರದ ನಾಯಕರು ಅರ್ಥ ಮಾಡಿಕೊಳ್ಳಬೇಕು. ಆ ಕೊಡುಗೆ ಯಡಿಯೂರಪ್ಪ ಅವರದ್ದು. ಅವರನ್ನ ಸಿಎಂ ಸ್ಥಾನದಿಂದ ಇಳಿಸಬಾರದು ಎಂಬ ಸಂದೇಶವನ್ನು ಹೈಕಮಾಂಡ್​ಗೆ ರವಾನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.