ETV Bharat / state

ಅಕ್ರಮ ವಲಸಿಗರು, ವಿದೇಶಿಯರನ್ನು ಡಿಟೆನ್ಷನ್ ಕೇಂದ್ರದಲ್ಲಿಡಿ: ಹೈಕೋರ್ಟ್​ ಆದೇಶ

author img

By

Published : Jun 9, 2020, 1:54 AM IST

ವೀಸಾ ಅವಧಿ ಮುಗಿದ ನಂತರವೂ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರು ಹಾಗೂ ವಿದೇಶಿಯರ ಕುರಿತು ಹೈಕೋರ್ಟ್​ ಇಂದು ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

Significant order from High Court on illegal migrants
ಹೈಕೋರ್ಟ್

ಬೆಂಗಳೂರು: ವೀಸಾ ಅವಧಿ ಮುಗಿದ ನಂತರವೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರು ಹಾಗೂ ಅಕ್ರಮ ವಲಸಿಗರನ್ನು ಅವರ ದೇಶಗಳಿಗೆ ವಾಪಸ್​​ ಕಳುಹಿಸುವವರೆಗೂ ಡಿಟೆನ್ಷನ್ ಸೆಂಟರ್​​ (ಬಂಧನ ಕೇಂದ್ರ) ನಲ್ಲಿ ಇಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಅಕ್ರಮ ಬಾಂಗ್ಲಾ ವಲಸಿಗರು ಎಂಬ ಆರೋಪದಡಿ ಬಂಧಿತರಾಗಿದ್ದ ಬಾಬುಲ್ ಖಾನ್ ಹಾಗೂ ಥಾನೀಯ ಎಂಬುವರಿಗೆ ಜಾಮೀನು ನೀಡುವ ವೇಳೆ ಹೈಕೋರ್ಟ್ ಈ ಆದೇಶ ಮಾಡಿದೆ. ಅಲ್ಲದೆ, ಅಕ್ರಮ ವಲಸಿಗರು ಹಾಗೂ ವೀಸಾ ಇಲ್ಲದೆ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರ ಪ್ರಕರಣದಲ್ಲಿ ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ನೀಡಿದೆ.

ಅಕ್ರಮ ವಲಸಿಗರ ಕುರಿತು ಹೈಕೋರ್ಟ್ ನೀಡಿರುವ ಮಾರ್ಗಸೂಚಿಗಳು:

  • ವಿದೇಶಿಯರು ಅಕ್ರಮವಾಗಿ ನೆಲೆಸಿರುವುದು ದೃಢಪಟ್ಟರೆ, ಎಫ್‌ಐಆರ್ ದಾಖಲಿಸಿದ ಕ್ಷಣದಿಂದಲೇ ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಶುರುವಾಗಬೇಕು.
  • ಸಂಬಂಧಪಟ್ಟ ಪೊಲೀಸ್ ಠಾಣೆಗಳು ಅಕ್ರಮ ವಾಸಿಗಳ ಗಡಿಪಾರು ಪ್ರಕ್ರಿಯೆ ಕುರಿತು ಸಕ್ಷಮ ಪ್ರಾಧಿಕಾರಗಳಿಗೆ ತುರ್ತಾಗಿ ಮಾಹಿತಿ ನೀಡಬೇಕು.
  • ಒಂದೊಮ್ಮೆ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ್ದರೆ, ಪ್ರಕರಣ ಇತ್ಯರ್ಥವಾಗುವರೆಗೂ ಆರೋಪಿಗಳನ್ನು ಸಾಮಾನ್ಯ ಜೈಲಿನಲ್ಲಿಡಬೇಕು.
  • ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರೂ ಬಿಡುಗಡೆ ಮಾಡದೆ ವಾಪಸ್ ಕಳುಹಿಸುವವರೆಗೂ ಬಂಧನ ಕೇಂದ್ರದಲ್ಲಿಯೇ ಇರಿಸಬೇಕು.
  • ಶಿಕ್ಷೆಗೆ ಗುರಿಯಾದಲ್ಲಿ ಅವಧಿ ಪೂರ್ಣವಾಗುವವರೆಗೆ ಜೈಲಿನಲ್ಲಿಟ್ಟು, ಶಿಕ್ಷಾವಧಿ ಮುಗಿದ ಬಳಿಕ ಗಡಿಪಾರು ಮಾಡುವವರೆಗೆ ಬಂಧನ ಕೇಂದ್ರದಲ್ಲಿಡಬೇಕು.
  • ರಾಷ್ಟ್ರೀಯತೆ ಬಗ್ಗೆ ವಿವಾದವಿದ್ದರೆ ಇತ್ಯರ್ಥವಾಗಿ ದೇಶದಿಂದ ಹೊರಗೆ ಕಳಿಸುವವರೆಗೂ ಬಂಧನ ಕೇಂದ್ರದಲ್ಲಿಡಬೇಕು.
  • ವಿಚಾರಣಾ ನ್ಯಾಯಾಲಯಗಳು ಇಂತಹವರ ವಿರುದ್ಧದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಹಾಗೂ ಅವರ ಹೇಳಿಕೆ ದಾಖಲಿಸಿಕೊಂಡು ಇಂಗ್ಲೀಷ್‌ನಲ್ಲಿಯೇ ತೀರ್ಪು ಬರೆಸಬೇಕು.
  • ಬಂಧಿತರು ಮಹಿಳೆಯರು ಅಥವಾ ಮಕ್ಕಳಾಗಿದ್ದರೆ ಜೈಲು ಪ್ರಾಧಿಕಾರ, ಬಂಧನ ಕೇಂದ್ರ, ವಿಚಾರಣಾ ನ್ಯಾಯಾಲಯಗಳು ಮತ್ತು ಬಾಲ ನ್ಯಾಯಮಂಡಳಿ ನಿಯಮಗಳನ್ನು ಮತ್ತು ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಬೆಂಗಳೂರು: ವೀಸಾ ಅವಧಿ ಮುಗಿದ ನಂತರವೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರು ಹಾಗೂ ಅಕ್ರಮ ವಲಸಿಗರನ್ನು ಅವರ ದೇಶಗಳಿಗೆ ವಾಪಸ್​​ ಕಳುಹಿಸುವವರೆಗೂ ಡಿಟೆನ್ಷನ್ ಸೆಂಟರ್​​ (ಬಂಧನ ಕೇಂದ್ರ) ನಲ್ಲಿ ಇಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಅಕ್ರಮ ಬಾಂಗ್ಲಾ ವಲಸಿಗರು ಎಂಬ ಆರೋಪದಡಿ ಬಂಧಿತರಾಗಿದ್ದ ಬಾಬುಲ್ ಖಾನ್ ಹಾಗೂ ಥಾನೀಯ ಎಂಬುವರಿಗೆ ಜಾಮೀನು ನೀಡುವ ವೇಳೆ ಹೈಕೋರ್ಟ್ ಈ ಆದೇಶ ಮಾಡಿದೆ. ಅಲ್ಲದೆ, ಅಕ್ರಮ ವಲಸಿಗರು ಹಾಗೂ ವೀಸಾ ಇಲ್ಲದೆ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರ ಪ್ರಕರಣದಲ್ಲಿ ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ನೀಡಿದೆ.

ಅಕ್ರಮ ವಲಸಿಗರ ಕುರಿತು ಹೈಕೋರ್ಟ್ ನೀಡಿರುವ ಮಾರ್ಗಸೂಚಿಗಳು:

  • ವಿದೇಶಿಯರು ಅಕ್ರಮವಾಗಿ ನೆಲೆಸಿರುವುದು ದೃಢಪಟ್ಟರೆ, ಎಫ್‌ಐಆರ್ ದಾಖಲಿಸಿದ ಕ್ಷಣದಿಂದಲೇ ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಶುರುವಾಗಬೇಕು.
  • ಸಂಬಂಧಪಟ್ಟ ಪೊಲೀಸ್ ಠಾಣೆಗಳು ಅಕ್ರಮ ವಾಸಿಗಳ ಗಡಿಪಾರು ಪ್ರಕ್ರಿಯೆ ಕುರಿತು ಸಕ್ಷಮ ಪ್ರಾಧಿಕಾರಗಳಿಗೆ ತುರ್ತಾಗಿ ಮಾಹಿತಿ ನೀಡಬೇಕು.
  • ಒಂದೊಮ್ಮೆ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ್ದರೆ, ಪ್ರಕರಣ ಇತ್ಯರ್ಥವಾಗುವರೆಗೂ ಆರೋಪಿಗಳನ್ನು ಸಾಮಾನ್ಯ ಜೈಲಿನಲ್ಲಿಡಬೇಕು.
  • ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರೂ ಬಿಡುಗಡೆ ಮಾಡದೆ ವಾಪಸ್ ಕಳುಹಿಸುವವರೆಗೂ ಬಂಧನ ಕೇಂದ್ರದಲ್ಲಿಯೇ ಇರಿಸಬೇಕು.
  • ಶಿಕ್ಷೆಗೆ ಗುರಿಯಾದಲ್ಲಿ ಅವಧಿ ಪೂರ್ಣವಾಗುವವರೆಗೆ ಜೈಲಿನಲ್ಲಿಟ್ಟು, ಶಿಕ್ಷಾವಧಿ ಮುಗಿದ ಬಳಿಕ ಗಡಿಪಾರು ಮಾಡುವವರೆಗೆ ಬಂಧನ ಕೇಂದ್ರದಲ್ಲಿಡಬೇಕು.
  • ರಾಷ್ಟ್ರೀಯತೆ ಬಗ್ಗೆ ವಿವಾದವಿದ್ದರೆ ಇತ್ಯರ್ಥವಾಗಿ ದೇಶದಿಂದ ಹೊರಗೆ ಕಳಿಸುವವರೆಗೂ ಬಂಧನ ಕೇಂದ್ರದಲ್ಲಿಡಬೇಕು.
  • ವಿಚಾರಣಾ ನ್ಯಾಯಾಲಯಗಳು ಇಂತಹವರ ವಿರುದ್ಧದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಹಾಗೂ ಅವರ ಹೇಳಿಕೆ ದಾಖಲಿಸಿಕೊಂಡು ಇಂಗ್ಲೀಷ್‌ನಲ್ಲಿಯೇ ತೀರ್ಪು ಬರೆಸಬೇಕು.
  • ಬಂಧಿತರು ಮಹಿಳೆಯರು ಅಥವಾ ಮಕ್ಕಳಾಗಿದ್ದರೆ ಜೈಲು ಪ್ರಾಧಿಕಾರ, ಬಂಧನ ಕೇಂದ್ರ, ವಿಚಾರಣಾ ನ್ಯಾಯಾಲಯಗಳು ಮತ್ತು ಬಾಲ ನ್ಯಾಯಮಂಡಳಿ ನಿಯಮಗಳನ್ನು ಮತ್ತು ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸಬೇಕು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.