ETV Bharat / state

ಹುತಾತ್ಮ ಯೋಧರಿಗೆ ಪುಣ್ಯಭೂಮಿ ಫೌಂಡೇಷನ್‌ ವತಿಯಿಂದ ​ಶ್ರದ್ಧಾಂಜಲಿ

ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಬೆಂಗಳೂರಿನ ರಾಮಮೂರ್ತಿನಗರ ಎನ್​ಆರ್​​ಐ ಲೇಔಟ್​​ನಲ್ಲಿ ಮೇಣದ ಬತ್ತಿ ಹಿಡಿದು ಐದು ನಿಮಿಷಗಳ ಕಾಲ ಮೌನಾಚರಣೆ ಮಾಡುವ‌ ಮೂಲಕ ವೀರ ಮರಣವನ್ನಪ್ಪಿದ ಯೋಧರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

author img

By

Published : Jun 20, 2020, 10:03 AM IST

Bangalore
ಹುತಾತ್ಮರಾದ ಯೋಧರಿಗೆ ಪುಣ್ಯ ಭೂಮಿ ಫೌಂಡೇಷನ್‌ ​ವತಿಯಿಂದ ಶ್ರದ್ದಾಂಜಲಿ

ಬೆಂಗಳೂರು: ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಪುಣ್ಯಭೂಮಿ ಫೌಂಡೇಷನ್‌ ವತಿಯಿಂದ ಎನ್​ಆರ್​​ಐ ಲೇಔಟ್​​ನ ಸುತ್ತಮುತ್ತಲಿನ ನೂರಾರು ಜನರು ಶ್ರದ್ಧಾಂಜಲಿ ಸಲ್ಲಿಸಿದರು.

ಇದೇ ವೇಳೆ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸುವ ಪ್ರತಿಜ್ಞೆ ಕೈಗೊಳ್ಳುವಂತೆ ಮನವಿ ಮಾಡಲಾಯಿತು.

ಹುತಾತ್ಮರಾದ ಯೋಧರಿಗೆ ಪುಣ್ಯ ಭೂಮಿ ಫೌಂಡೇಷನ್‌ ​ವತಿಯಿಂದ ಶ್ರದ್ಧಾಂಜಲಿ

ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಷನ್​​ನ ಅಧ್ಯಕ್ಷೆ ಶಾಂತಕೃಷ್ಣ ಮೂರ್ತಿ, ಚೀನಾದ ಹೆಚ್ಚು ವಸ್ತುಗಳು ನಮ್ಮ ದೇಶದಲ್ಲಿ ಮಾರಾಟವಾಗುತ್ತಿದ್ದು, ಅದಕ್ಕೆಲ್ಲಾ ಬಹಿಷ್ಕಾರ ಹಾಕುವ ಮೂಲಕ ಸೈನಿಕರಿಗೆ ಗೌರವ ಸೂಚಿಸೋಣ ಎಂದು ಕರೆ ಕೊಟ್ಟರು.

ಅಲ್ಲಿನ ಮೊಬೈಲ್ ಆ್ಯಪ್​​ಗಳಾದ ಪೇಟಿಎಂ, ಟಿಕ್​ಟಾಕ್, ಯುಸಿ ಬ್ರೌಜರ್, ಶೇರ್ ಇಟ್, ವಿ ಚಾಟ್ ಸೇರಿದಂತೆ ಹಲವಾರು ಆ್ಯಪ್​​ಗಳ ಮೂಲಕ ಹೆಚ್ಚಿನ ಹಣ ಸಂದಾಯವಾಗುತ್ತಿದ್ದು ಕೂಡಲೇ ಅನ್‌ ಇನ್ಸ್‌ಟ್ಸಾಲ್ ಮಾಡುವ ಸಂಕಲ್ಪ ಮಾಡಬೇಕಾಗಿದೆ ಎಂದರು.

ಬೆಂಗಳೂರು: ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಪುಣ್ಯಭೂಮಿ ಫೌಂಡೇಷನ್‌ ವತಿಯಿಂದ ಎನ್​ಆರ್​​ಐ ಲೇಔಟ್​​ನ ಸುತ್ತಮುತ್ತಲಿನ ನೂರಾರು ಜನರು ಶ್ರದ್ಧಾಂಜಲಿ ಸಲ್ಲಿಸಿದರು.

ಇದೇ ವೇಳೆ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸುವ ಪ್ರತಿಜ್ಞೆ ಕೈಗೊಳ್ಳುವಂತೆ ಮನವಿ ಮಾಡಲಾಯಿತು.

ಹುತಾತ್ಮರಾದ ಯೋಧರಿಗೆ ಪುಣ್ಯ ಭೂಮಿ ಫೌಂಡೇಷನ್‌ ​ವತಿಯಿಂದ ಶ್ರದ್ಧಾಂಜಲಿ

ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಷನ್​​ನ ಅಧ್ಯಕ್ಷೆ ಶಾಂತಕೃಷ್ಣ ಮೂರ್ತಿ, ಚೀನಾದ ಹೆಚ್ಚು ವಸ್ತುಗಳು ನಮ್ಮ ದೇಶದಲ್ಲಿ ಮಾರಾಟವಾಗುತ್ತಿದ್ದು, ಅದಕ್ಕೆಲ್ಲಾ ಬಹಿಷ್ಕಾರ ಹಾಕುವ ಮೂಲಕ ಸೈನಿಕರಿಗೆ ಗೌರವ ಸೂಚಿಸೋಣ ಎಂದು ಕರೆ ಕೊಟ್ಟರು.

ಅಲ್ಲಿನ ಮೊಬೈಲ್ ಆ್ಯಪ್​​ಗಳಾದ ಪೇಟಿಎಂ, ಟಿಕ್​ಟಾಕ್, ಯುಸಿ ಬ್ರೌಜರ್, ಶೇರ್ ಇಟ್, ವಿ ಚಾಟ್ ಸೇರಿದಂತೆ ಹಲವಾರು ಆ್ಯಪ್​​ಗಳ ಮೂಲಕ ಹೆಚ್ಚಿನ ಹಣ ಸಂದಾಯವಾಗುತ್ತಿದ್ದು ಕೂಡಲೇ ಅನ್‌ ಇನ್ಸ್‌ಟ್ಸಾಲ್ ಮಾಡುವ ಸಂಕಲ್ಪ ಮಾಡಬೇಕಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.