ETV Bharat / state

ಟ್ಯಾಕ್ಸಿ ವಿತರಣೆ ಯೋಜನೆಯ ಅಧ್ಯಯನ ವರದಿ ತರಿಸಿ‌ ಕ್ರಮ: ಸಚಿವ ಸಿ.ಟಿ.ರವಿ - Banglore

ಕೆಎಸ್​ಟಿಡಿಸಿ ಸಬ್ಸಿಡಿ ದರದಲ್ಲಿ ನೀಡುವ ಟ್ಯಾಕ್ಸಿ ವಿತರಣೆ ಯೋಜನೆ ಸ್ಥಿತಿಗತಿ ಬಗ್ಗೆ ಅಧ್ಯಯನ ವರದಿ ತರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ
author img

By

Published : Aug 29, 2019, 11:10 PM IST

ಬೆಂಗಳೂರು: ಕೆಎಸ್​ಟಿಡಿಸಿ ಸಬ್ಸಿಡಿ ದರದಲ್ಲಿ ನೀಡುವ ಟ್ಯಾಕ್ಸಿ ವಿತರಣೆ ಯೋಜನೆ ಸ್ಥಿತಿಗತಿ ಬಗ್ಗೆ ಅಧ್ಯಯನ ವರದಿ ತರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ಕೆಎಸ್​ಟಿಡಿಸಿ ಟ್ಯಾಕ್ಸಿ ವಿತರಣೆ ಯೋಜನೆಯ ಅಧ್ಯಯನ ವರದಿ ತರಿಸಿ‌ ಕ್ರಮ: ಸಚಿವ ಸಿ.ಟಿ.ರವಿ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಬ್ಸಿಡಿ ‌ದರದಲ್ಲಿ‌ ಕೆಎಸ್​ಟಿಡಿಸಿಯಿಂದ ಟ್ಯಾಕ್ಸಿ ನೀಡಲಾಗುತ್ತಿದೆ. ಇದು ಉಪಯೋಗಕ್ಕೆ ಬರುತ್ತಿದಿಯಾ? ಇಲ್ಲವೋ ಅಂತಾ ವರದಿ‌ ಪಡೆಯುತ್ತೇವೆ. ಇಡೀ ಯೋಜನೆ ಸ್ವಾವಲಂಬಿ ಮಾಡಬೇಕು ಹೊರತು ಫಲಾನುಭವಿಗಳನ್ನು ಸಾಲಗಾರರನ್ನಾಗಿ ಮಾಡಬಾರದು. ಜಿಲ್ಲೆಗಳಲ್ಲಿ ಬೇಡಿಕೆಯೇ ಇಲ್ಲದೆ ಸಬ್ಸಿಡಿ ದರದಲ್ಲಿ ಟ್ಯಾಕ್ಸಿ ಕೊಡಲಾಗುತ್ತಿದೆ.‌ ಇದರಿಂದ ಫಲಾನುಭವಿಗಳಿಗೆ ಸಾಲದ ಹೊರೆ ಹೆಚ್ಚಿದೆ‌. 2017-18ರಲ್ಲಿ 2400ಜನರಿಗೆ ಸಬ್ಸಿಡಿ ದರದಲ್ಲಿ ಟ್ಯಾಕ್ಸಿ ವಿತರಣೆ ಮಾಡಲಾಗಿದೆ. ಇದರ ಲಾಭ ನಷ್ಟಗಳ ಬಗ್ಗೆ ಅಧ್ಯಯನ ವರದಿ ತರಿಸಿ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

40 ಪ್ರಮುಖ ಪ್ರವಾಸಿ ವರ್ತುಲಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಪ್ರಧಾನಮಂತ್ರಿಗಳು ದೇಶವನ್ನು ಟೂರಿಸ್ಟ್ ಹಬ್ ಮಾಡಲು ಉದ್ದೇಶಿಸಿದ್ದಾರೆ. ಆ ಸಂಬಂಧ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಕೇಂದ್ರ ಗುರುತು ಮಾಡಿದೆ. ಪ್ರಮುಖವಾಗಿ 17 ಸ್ಥಳಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಕರ್ನಾಟಕದ ಹಂಪಿ ಕೂಡ ಇದೆ. ಸರ್ಕಾರದಿಂದ ಯಾವ ರೀತಿಯ ಅಭಿವೃದ್ಧಿ ಮಾಡಬಹುದು ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಖಾಸಗಿ ಆಸಕ್ತರನ್ನ ಸೇರಿಸಿ ಪ್ರವಾಸೋದ್ಯಮದಲ್ಲಿ ಹೂಡಿಕೆ ಆಕರ್ಷಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.

ಗೋಲ್ಡನ್ ಚಾರಿಯೇಟ್ ಐಷಾರಾಮಿ ರೈಲಿನ ಯೋಜನೆಯಿಂದ ಇಲಾಖೆಗೆ 41 ಕೋಟಿ ನಷ್ಟವಾಗಿದೆ. ಹಾಗಾಗಿ ಅದನ್ನು ನಿಲ್ಲಿಸಲಾಗಿದೆ. ಜಂಗಲ್ ಲಾಡ್ಜಸ್ ಮತ್ತು ಕೆಎಸ್​ಟಿಡಿಸಿ ಲಾಭದಲ್ಲಿವೆ. ಅದನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯಲ್ಲಿ 243 ಅಧಿಕಾರಿಗಳ ಹುದ್ದೆ ಖಾಲಿ ಇದೆ. ಅದನ್ನು ಭರ್ತಿ ಮಾಡಲಾಗುತ್ತದೆ‌. ಎಲ್ಲರನ್ನು ತೃಪ್ತಿ ಪಡಿಸಲು ಮಾತ್ರ ಪ್ರವಾಸೋದ್ಯಮ ಇಲಾಖೆ ಅನುದಾನ ಬಳಕೆಯಾಗುತ್ತಿದೆ ಹೊರತು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ ಎಂದು ಇದೇ ವೇಳೆ ಹೇಳಿದರು.

ರಾಜ್ಯದಲ್ಲಿ 25 ಮಹಾ ಪುರುಷರ ಜಯಂತಿ ಆಚರಿಸುತ್ತಿದ್ದೇವೆ. ಇದರಲ್ಲಿ ಕೆಲವು ಜನ ಸಹಭಾಗಿತ್ವದ ಜಯಂತಿ ಇದ್ದರೆ, ಇನ್ನು ಕೆಲವು ಜನ ಸಹಭಾಗಿತ್ವ ಇಲ್ಲದ ಜಯಂತಿ ಆಗಿವೆ. ಈ ಜಯಂತಿ ಆಚರಣೆ ಬಗ್ಗೆ ಮರು ಚಿಂತನೆ ಆಗಬೇಕಿದೆ ಎಂದರು. ಜಯಂತಿಗಳ ಆಚರಣೆ ಸರಿ. ಆದರೆ ಯಾವ ರೀತಿ ಆಚರಣೆ ಮಾಡಬೇಕು ಎಂಬುದರ‌ ಬಗ್ಗೆ ಮರು ಚಿಂತನೆ‌ ಆಗಬೇಕಿದೆ. ಸಮುದಾಯದವರ ಜತೆ ಸಮಲೋಚನೆ ನಡೆಸಿ ಸ್ವರೂಪ ಬದಲಾಯಿಸಿ ಆಚರಿಸಲು ಚಿಂತನೆ ನಡೆಸಿದ್ದೇವೆ ಎಂದು ವಿವರಿಸಿದರು.

ಕಲಾವಿದರಿಗೆ ಕೊಡುವ ಮಾಶಾಸನ ಮುಂದುವರಿಸುತ್ತೇವೆ. ಆದರೆ ಸಂಘ-ಸಂಸ್ಥೆಗಳಿಗೆ ಅನುದಾನ ನೀಡುವ ಬಗ್ಗೆ ಬಜೆಟ್ ಪ್ರಾವಿಷನ್ ಮಾಡಿಕೊಂಡಿಲ್ಲ. ಈ ಬಗ್ಗೆ ಮರು ಪರಿಶೀಲಿಸಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ‌ಮಾಡುತ್ತೇವೆ ಎಂದು ತಿಳಿಸಿದರು


ಬೆಂಗಳೂರು: ಕೆಎಸ್​ಟಿಡಿಸಿ ಸಬ್ಸಿಡಿ ದರದಲ್ಲಿ ನೀಡುವ ಟ್ಯಾಕ್ಸಿ ವಿತರಣೆ ಯೋಜನೆ ಸ್ಥಿತಿಗತಿ ಬಗ್ಗೆ ಅಧ್ಯಯನ ವರದಿ ತರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ಕೆಎಸ್​ಟಿಡಿಸಿ ಟ್ಯಾಕ್ಸಿ ವಿತರಣೆ ಯೋಜನೆಯ ಅಧ್ಯಯನ ವರದಿ ತರಿಸಿ‌ ಕ್ರಮ: ಸಚಿವ ಸಿ.ಟಿ.ರವಿ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಬ್ಸಿಡಿ ‌ದರದಲ್ಲಿ‌ ಕೆಎಸ್​ಟಿಡಿಸಿಯಿಂದ ಟ್ಯಾಕ್ಸಿ ನೀಡಲಾಗುತ್ತಿದೆ. ಇದು ಉಪಯೋಗಕ್ಕೆ ಬರುತ್ತಿದಿಯಾ? ಇಲ್ಲವೋ ಅಂತಾ ವರದಿ‌ ಪಡೆಯುತ್ತೇವೆ. ಇಡೀ ಯೋಜನೆ ಸ್ವಾವಲಂಬಿ ಮಾಡಬೇಕು ಹೊರತು ಫಲಾನುಭವಿಗಳನ್ನು ಸಾಲಗಾರರನ್ನಾಗಿ ಮಾಡಬಾರದು. ಜಿಲ್ಲೆಗಳಲ್ಲಿ ಬೇಡಿಕೆಯೇ ಇಲ್ಲದೆ ಸಬ್ಸಿಡಿ ದರದಲ್ಲಿ ಟ್ಯಾಕ್ಸಿ ಕೊಡಲಾಗುತ್ತಿದೆ.‌ ಇದರಿಂದ ಫಲಾನುಭವಿಗಳಿಗೆ ಸಾಲದ ಹೊರೆ ಹೆಚ್ಚಿದೆ‌. 2017-18ರಲ್ಲಿ 2400ಜನರಿಗೆ ಸಬ್ಸಿಡಿ ದರದಲ್ಲಿ ಟ್ಯಾಕ್ಸಿ ವಿತರಣೆ ಮಾಡಲಾಗಿದೆ. ಇದರ ಲಾಭ ನಷ್ಟಗಳ ಬಗ್ಗೆ ಅಧ್ಯಯನ ವರದಿ ತರಿಸಿ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

40 ಪ್ರಮುಖ ಪ್ರವಾಸಿ ವರ್ತುಲಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಪ್ರಧಾನಮಂತ್ರಿಗಳು ದೇಶವನ್ನು ಟೂರಿಸ್ಟ್ ಹಬ್ ಮಾಡಲು ಉದ್ದೇಶಿಸಿದ್ದಾರೆ. ಆ ಸಂಬಂಧ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಕೇಂದ್ರ ಗುರುತು ಮಾಡಿದೆ. ಪ್ರಮುಖವಾಗಿ 17 ಸ್ಥಳಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಕರ್ನಾಟಕದ ಹಂಪಿ ಕೂಡ ಇದೆ. ಸರ್ಕಾರದಿಂದ ಯಾವ ರೀತಿಯ ಅಭಿವೃದ್ಧಿ ಮಾಡಬಹುದು ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಖಾಸಗಿ ಆಸಕ್ತರನ್ನ ಸೇರಿಸಿ ಪ್ರವಾಸೋದ್ಯಮದಲ್ಲಿ ಹೂಡಿಕೆ ಆಕರ್ಷಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.

ಗೋಲ್ಡನ್ ಚಾರಿಯೇಟ್ ಐಷಾರಾಮಿ ರೈಲಿನ ಯೋಜನೆಯಿಂದ ಇಲಾಖೆಗೆ 41 ಕೋಟಿ ನಷ್ಟವಾಗಿದೆ. ಹಾಗಾಗಿ ಅದನ್ನು ನಿಲ್ಲಿಸಲಾಗಿದೆ. ಜಂಗಲ್ ಲಾಡ್ಜಸ್ ಮತ್ತು ಕೆಎಸ್​ಟಿಡಿಸಿ ಲಾಭದಲ್ಲಿವೆ. ಅದನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯಲ್ಲಿ 243 ಅಧಿಕಾರಿಗಳ ಹುದ್ದೆ ಖಾಲಿ ಇದೆ. ಅದನ್ನು ಭರ್ತಿ ಮಾಡಲಾಗುತ್ತದೆ‌. ಎಲ್ಲರನ್ನು ತೃಪ್ತಿ ಪಡಿಸಲು ಮಾತ್ರ ಪ್ರವಾಸೋದ್ಯಮ ಇಲಾಖೆ ಅನುದಾನ ಬಳಕೆಯಾಗುತ್ತಿದೆ ಹೊರತು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ ಎಂದು ಇದೇ ವೇಳೆ ಹೇಳಿದರು.

ರಾಜ್ಯದಲ್ಲಿ 25 ಮಹಾ ಪುರುಷರ ಜಯಂತಿ ಆಚರಿಸುತ್ತಿದ್ದೇವೆ. ಇದರಲ್ಲಿ ಕೆಲವು ಜನ ಸಹಭಾಗಿತ್ವದ ಜಯಂತಿ ಇದ್ದರೆ, ಇನ್ನು ಕೆಲವು ಜನ ಸಹಭಾಗಿತ್ವ ಇಲ್ಲದ ಜಯಂತಿ ಆಗಿವೆ. ಈ ಜಯಂತಿ ಆಚರಣೆ ಬಗ್ಗೆ ಮರು ಚಿಂತನೆ ಆಗಬೇಕಿದೆ ಎಂದರು. ಜಯಂತಿಗಳ ಆಚರಣೆ ಸರಿ. ಆದರೆ ಯಾವ ರೀತಿ ಆಚರಣೆ ಮಾಡಬೇಕು ಎಂಬುದರ‌ ಬಗ್ಗೆ ಮರು ಚಿಂತನೆ‌ ಆಗಬೇಕಿದೆ. ಸಮುದಾಯದವರ ಜತೆ ಸಮಲೋಚನೆ ನಡೆಸಿ ಸ್ವರೂಪ ಬದಲಾಯಿಸಿ ಆಚರಿಸಲು ಚಿಂತನೆ ನಡೆಸಿದ್ದೇವೆ ಎಂದು ವಿವರಿಸಿದರು.

ಕಲಾವಿದರಿಗೆ ಕೊಡುವ ಮಾಶಾಸನ ಮುಂದುವರಿಸುತ್ತೇವೆ. ಆದರೆ ಸಂಘ-ಸಂಸ್ಥೆಗಳಿಗೆ ಅನುದಾನ ನೀಡುವ ಬಗ್ಗೆ ಬಜೆಟ್ ಪ್ರಾವಿಷನ್ ಮಾಡಿಕೊಂಡಿಲ್ಲ. ಈ ಬಗ್ಗೆ ಮರು ಪರಿಶೀಲಿಸಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ‌ಮಾಡುತ್ತೇವೆ ಎಂದು ತಿಳಿಸಿದರು


Intro:Body:KN_BNG_05_KSTDCTAXI_STUDYREPORT_SCRIPT_7201951

ಕೆಎಸ್ ಟಿಡಿಸಿ ನೀಡುವ ಟ್ಯಾಕ್ಸಿ ವಿತರಣೆ ಯೋಜನೆ ಬಗ್ಗೆ ಅಧ್ಯಯನ ವರದಿ ತರಿಸಿ‌ ಕ್ರಮ: ಸಚಿವ ಸಿ.ಟಿ.ರವಿ

ಬೆಂಗಳೂರು: ಕೆಎಸ್ ಟಿಡಿಸಿ ಸಬ್ಸಿಡಿ ದರದಲ್ಲಿ ನೀಡುವ ಟ್ಯಾಕ್ಸಿ ವಿತರಣೆ ಯೋಜನೆ ಸ್ಥಿತಿಗತಿ ಬಗ್ಗೆ ಅಧ್ಯಯನ ವರದಿ ತರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಬ್ಸಿಡಿ ‌ದರದಲ್ಲಿ‌
ಕೆಎಸ್ ಟಿಡಿಸಿಯಿಂದ ಟ್ಯಾಕ್ಸಿ ನೀಡಲಾಗುತ್ತಿದೆ. ಇದು ಉಪಯೋಗಕ್ಕೆ ಬರುತ್ತಿದಿಯಾ?. ಇಲ್ಲವೋ ಅಂತಾ ವರದಿ‌ ಪಡೆಯುತ್ತೇವೆ. ಇಡೀ ಯೋಜನೆ ಸ್ವಾವಲಂಬಿ ಮಾಡಬೇಕು ಹೊರತು ಫಲಾನುಭವಿಗಳು ಸಾಲಗಾರರನ್ನಾಗಿ ಮಾಡಬಾರದು. ಜಿಲ್ಲೆಗಳಲ್ಲಿ ಬೇಡಿಕೆಯೇ ಇಲ್ಲದೆ ಸಬ್ಸಿಡಿ ದರದಲ್ಲಿ ಟ್ಯಾಕ್ಸಿ ಕೊಡಲಾಗುತ್ತಿದೆ.‌ಇದರಿಂದ ಫಲಾನುಭವಿಗಳಿಗೆ ಸಾಲದ ಹೊರೆ ಹೆಚ್ಚಿದೆ‌. 2017-18ರಲ್ಲಿ 2400ಜನರಿಗೆ ಸಬ್ಸಿಡಿ ದರದಲ್ಲಿ ಟ್ಯಾಕ್ಸಿ ವಿತರಣೆ ಮಾಡಲಾಗಿದೆ. ಇದರ ಲಾಭ ನಷ್ಟಗಳ ಬಗ್ಗೆ ಅಧ್ಯಯನ ವರದಿ ತರಿಸಿ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

40 ಪ್ರಮುಖ ಪ್ರವಾಸಿ ವರ್ತುಲಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಪ್ರಧಾನ ಮಂತ್ರಿಗಳು ದೇಶವನ್ನು ಟೂರಿಸ್ಟ್ ಹಬ್ ಮಾಡಲು ಉದ್ದೇಶಿಸಿದ್ದಾರೆ. ಆ ಸಂಬಂಧ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಕೇಂದ್ರ ಗುರುತು ಮಾಡಿದೆ. ಪ್ರಮುಖವಾಗಿ 17 ಸ್ಥಳಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಕರ್ನಾಟಕದ ಹಂಪಿ ಕೂಡ ಇದೆ. ಸರ್ಕಾರದಿಂದ ಯಾವ ರೀತಿಯ ಅಭಿವೃದ್ಧಿ ಮಾಡಬಹುದು ಎಂದು ಅಧಿಕಾರಿಳ ಜೊತೆ ಚರ್ಚೆ ನಡೆಸಿದ್ದೇನೆ. ಖಾಸಗಿ ಆಸಕ್ತರನ್ನ ಸೇರಿಸಿ ಪ್ರವಾಸೋದ್ಯಮಕ್ಕೆ ಹೂಡಿಕೆ ಆಕರ್ಷಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.

ಗೋಲ್ಡನ್ ಚಾರಿಯೇಟ್ ಐಷಾರಾಮಿ
ರೈಲಿನ ಯೋಜನೆಯಿಂದ ಇಲಾಖೆಗೆ 41 ಕೋಟಿ ನಷ್ಟವಾಗಿದೆ. ಹಾಗಾಗಿ ಅದನ್ನು ನಿಲ್ಲಿಸಲಾಗಿದೆ. ಜಂಗಲ್ ಲಾಡ್ಜಸ್ ಮತ್ತು ಕೆಎಸ್ ಟಿಡಿಸಿ ಲಾಭದಲ್ಲಿವೆ. ಅದನ್ನು ಮತ್ತಷ್ಟು ಅಭಿವೃದ್ದಿ ಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯಲ್ಲಿ 243 ಅಧಿಕಾರಿಗಳ ಹುದ್ದೆ ಖಾಲಿ ಇದೆ. ಅದನ್ನು ಭರ್ತಿ ಮಾಡಲಾಗುತ್ತದೆ‌. ಎಲ್ಲರನ್ನು ತೃಪ್ತಿ ಪಡಿಸಲು ಮಾತ್ರ ಪ್ರವಾಸೋದ್ಯಮ ಇಲಾಖೆ ಅನುದಾನ ಬಳಕೆಯಾಗುತ್ತಿದೆ ಹೊರತು ಪ್ರವಾಸೋದ್ಯಮ ಅಭಿವೃದ್ದಿಗೆ ಬಳಕೆಯಾಗುತ್ತಿಲ್ಲ ಎಂದು ಇದೇ ವೇಳೆ ತಿಳಿಸಿದರು.

ಜಯಂತಿ ಆಚರಣೆ ರೂಪುರೇಷೆ ಬದಲಾವಣೆಗೆ ಚಿಂತನೆ:

ರಾಜ್ಯದಲ್ಲಿ 25 ಮಹಾ ಪುರುಷರ ಜಯಂತಿ ಆಚರಿಸುತ್ತಿದ್ದೇವೆ. ಇದರಲ್ಲಿ ಕೆಲವು ಜನ ಸಹಭಾಗಿತ್ವ ದ ಜಯಂತಿ ಇದ್ದರೆ, ಇನ್ನು ಕೆಲವು ಜನ ಸಹಭಾಗಿತ್ವ ಇಲ್ಲದ ಜಯಂತಿ ಆಗಿದೆ‌. ಈ ಜಯಂತಿ ಆಚರಣೆ ಬಗ್ಗೆ ಮರು ಚಿಂತನೆ ಆಗಬೇಕಿದೆ ಎಂದರು.

ಜಯಂತಿಗಳ ಆಚರಣೆ ಸರಿ. ಆದರೆ ಯಾವ ರೀತಿ ಆಚರಣೆ ಮಾಡಬೇಕು ಎಂಬುದರ‌ ಬಗ್ಗೆ ಮರುಚಿಂತನೆ‌ ಆಗಬೇಕಿದೆ. ಸಮುದಾಯದವರ ಜತೆ ಸಮಲೋಚನೆ ನಡೆಸಿ ಸ್ವರೂಪ ಬದಲಾಯಿಸಿ ಆಚರಿಸಲು ಚಿಂತನೆ ನಡೆಸಿದ್ದೇವೆ ಎಂದು ವಿವರಿಸಿದರು.

ಸಮುದಾಯದ ಮುಖಂಡರ ಜೊತೆ, ರಾಜಕೀಯ ಮುಖಂಡರ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ. ಮಹಾತ್ಮರು ಬದುಕಿದ ರೀತಿಯೇ ಬೇರೆ. ನಾವು ಅದಕ್ಕೆ ಜಾತಿಯ ಲೇಪನ ಮಾಡಿ ಆಚರಣೆ ಆಗುತ್ತಿದೆ. ಅದನ್ನು ವಿಭಿನ್ನವಾಗಿ ಆಚರಣೆ ಮಾಡಲು ಚಿಂತನೆ ಇದೆ ಎಂದು ತಿಳಿಸಿದರು.

ಇದೇ ವೇಳೆ ಪ್ರತ್ಯೇಕ ನಾಡಧ್ವಜದ ಬಗ್ಗೆ ಮಾತನಾಡಿದ ಅವರು, ನಾಡಧ್ವಜವನ್ನು ಸಾಂಸ್ಕೃತಿಕ ಸಂಕೇತವಾಗಿ ಬಳಸಲು ಅವಕಾಶವಿದೆ. ಹೊರತು ಸಂವಿಧಾನಾತ್ಮಕವಾಗಿ ಬಳಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರಕ್ಕೆ ಒಂದೇ ತ್ರಿವರ್ಣ ಧ್ವಜ ಮಾತ್ರ ಬಳಕೆ ಮಾಡಲು ಧ್ವಜಸಂಹಿತೆಯಲ್ಲಿ ಅವಕಾಶವಿದೆ‌. ಅದಕ್ಕೆ ನಾವು ಬದ್ಧ ಎಂದು ತಿಳಿಸಿದರು.

ಕಲಾವಿದರಿಗೆ ಕೊಡುವ ಮಾಶಾಸನ ಮುಂದುವರಿಸುತ್ತೇವೆ.
ಆದರೆ ಸಂಘಸಂಸ್ಥೆಗಳಿಗೆ ಅನುದಾನ ನೀಡುವ ಬಗ್ಗೆ ಬಜೆಟ್ ಪ್ರಾವಿಷನ್ ಮಾಡಿಕೊಂಡಿಲ್ಲ. ಈ ಬಗ್ಗೆ ಮರು ಪರಿಶೀಲಿಸಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ‌ಮಾಡುತ್ತೇವೆ ಎಂದು ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.