ETV Bharat / state

ಅನರ್ಹತೆಗೆ ರೆಬೆಲ್ಸ್​ ಅಸಮಾಧಾನ.. ಸ್ಪೀಕರ್​ ಆದೇಶಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟ್‌ಗೆ ಮೊರೆ! - Rebel MLAs Angry over Disqualification

ಸ್ಪೀಕರ್ ಆದೇಶಕ್ಕೆ ಮೊದಲು ತಡೆಯಾಜ್ಞೆ ನೀಡಬೇಕು ಎಂದು ಅತೃಪ್ತ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಕೋರಲಿದ್ದಾರೆ. ಆ ಮೂಲಕ ತಮ್ಮನ್ನ ಅನರ್ಹಗೊಳಿಸಿದ ಸ್ಪೀಕರ್‌ ವಿರುದ್ಧವೇ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.

ರೆಬೆಲ್ಸ್​ ಅಸಮಾಧಾನ
author img

By

Published : Jul 28, 2019, 12:59 PM IST

ಬೆಂಗಳೂರು : ಸ್ಪೀಕರ್​ ರಮೇಶ್​ಕುಮಾರ್​ 17 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ. ಈದರ ಬೆನ್ನಲ್ಲೇ ರೆಬೆಲ್ಸ್​ ಸುಪ್ರೀಂಕೋರ್ಟ್​ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಸ್ಪೀಕರ್ ಆದೇಶಕ್ಕೆ ಮೊದಲು ತಡೆಯಾಜ್ಞೆ ನೀಡಬೇಕು ಎಂದು ಅತೃಪ್ತ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಕೋರಲಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಅತೃಪ್ತ ಶಾಸಕರ ಅರ್ಜಿ ಬಾಕಿ ಉಳಿದಿದ್ದು, ಸ್ಪೀಕರ್ ಅವರ ತೀರ್ಪನ್ನು ಪ್ರಶ್ನಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತಮ್ಮನ್ನು ಅನರ್ಹಗೊಳಿಸಲಾರರು, ಬದಲಾಗಿ ರಾಜೀನಾಮೆಯನ್ನು ಸ್ವೀಕರಿಸಲಿದ್ದಾರೆಂದು ಅತೃಪ್ತ ಶಾಸಕರು ಭಾವಿಸಿದ್ದರು. ಆದರೆ, ರಾಜೀನಾಮೆ ಪತ್ರವನ್ನು ಪರಿಗಣಿಸದೆ ಶಾಸಕಾಂಗ ಪಕ್ಷದ ನಾಯಕರು ನೀಡಿದ ದೂರನ್ನೇ ಪರಿಗಣಿಸಿ ಅನರ್ಹತೆ ತೀರ್ಪು ನೀಡಿರುವುದು ಸಮಂಜಸವಲ್ಲ. ತೀರ್ಪು ಏಕಪಕ್ಷೀಯವಾಗಿದೆ. ಸ್ವಇಚ್ಛೆಯಿಂದ ನೀಡಿರುವ ರಾಜೀನಾಮೆ ಅಂಗೀಕರಿಸದಿರುವುದು ಶಾಸಕರ ಹಕ್ಕು ಮೊಟಕುಗೊಳಿಸಿದಂತೆ ಎಂದು ಅತೃಪ್ತರು ಆರೋಪಿಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸಲು ಅತೃಪ್ತ ಶಾಸಕರು ಮುಂದಾಗಿದ್ದಾರೆ.

ಬೆಂಗಳೂರು : ಸ್ಪೀಕರ್​ ರಮೇಶ್​ಕುಮಾರ್​ 17 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ. ಈದರ ಬೆನ್ನಲ್ಲೇ ರೆಬೆಲ್ಸ್​ ಸುಪ್ರೀಂಕೋರ್ಟ್​ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಸ್ಪೀಕರ್ ಆದೇಶಕ್ಕೆ ಮೊದಲು ತಡೆಯಾಜ್ಞೆ ನೀಡಬೇಕು ಎಂದು ಅತೃಪ್ತ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಕೋರಲಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಅತೃಪ್ತ ಶಾಸಕರ ಅರ್ಜಿ ಬಾಕಿ ಉಳಿದಿದ್ದು, ಸ್ಪೀಕರ್ ಅವರ ತೀರ್ಪನ್ನು ಪ್ರಶ್ನಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತಮ್ಮನ್ನು ಅನರ್ಹಗೊಳಿಸಲಾರರು, ಬದಲಾಗಿ ರಾಜೀನಾಮೆಯನ್ನು ಸ್ವೀಕರಿಸಲಿದ್ದಾರೆಂದು ಅತೃಪ್ತ ಶಾಸಕರು ಭಾವಿಸಿದ್ದರು. ಆದರೆ, ರಾಜೀನಾಮೆ ಪತ್ರವನ್ನು ಪರಿಗಣಿಸದೆ ಶಾಸಕಾಂಗ ಪಕ್ಷದ ನಾಯಕರು ನೀಡಿದ ದೂರನ್ನೇ ಪರಿಗಣಿಸಿ ಅನರ್ಹತೆ ತೀರ್ಪು ನೀಡಿರುವುದು ಸಮಂಜಸವಲ್ಲ. ತೀರ್ಪು ಏಕಪಕ್ಷೀಯವಾಗಿದೆ. ಸ್ವಇಚ್ಛೆಯಿಂದ ನೀಡಿರುವ ರಾಜೀನಾಮೆ ಅಂಗೀಕರಿಸದಿರುವುದು ಶಾಸಕರ ಹಕ್ಕು ಮೊಟಕುಗೊಳಿಸಿದಂತೆ ಎಂದು ಅತೃಪ್ತರು ಆರೋಪಿಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸಲು ಅತೃಪ್ತ ಶಾಸಕರು ಮುಂದಾಗಿದ್ದಾರೆ.

Intro:ಅನರ್ಹತೆಗೆ ಅತೃಪ್ತ ಶಾಸಕರ ಅಸಮಾಧಾನ
ಸುಪ್ರೀಂಕೋರ್ಟ್ ನಲ್ಲಿ ಹೋರಾಡಲು ನಿರ್ಧಾರ

ಬೆಂಗಳೂರು : ಸ್ಪೀಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ್ದರ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ಬಾಕಿಉಳಿದಿದ್ದು ಸ್ಪೀಕರ್ ಅವರ ತೀರ್ಪನ್ನು ಪ್ರಶ್ನಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.


Body: ಸ್ಪೀಕರ್ ಅವರು ಮೂವರು ಶಾಸಕರನ್ನು ಇತ್ತೀಚೆಗೆ ಅನರ್ಹಗೊಳಿಸಿದಂತೆ ತಮ್ಮನ್ನು ಅನರ್ಹಗೊಳಿಸಲಾರರು.ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕರಿಸಬಹುದೆನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸ್ಪೀಕರ್ ಅವರು ಅನರ್ಹತೆ ಗೊಳಿಸಿ ರುವ ಕ್ರಮದ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ವಿಧಾನಸಭಾಧ್ಯಕ್ಷರು ತಾವು ರಾಜೀನಾಮೆ ನೀಡಿದ ಪತ್ರವನ್ನು ಪರಿಗಣಿಸದೇ ಶಾಸಕಾಂಗ ಪಕ್ಷದ ನಾಯಕರು ನೀಡಿದ ದೂರನ್ನೇ ಪರಿಗಣಿಸಿ ಅನರ್ಹತೆ ತೀರ್ಪು ನೀಡಿರುವುದು ಸಮಂಜಸವಲ್ಲ.ತೀರ್ಪು ಏಕಪಕ್ಷೀಯವಾಗಿದೆ. ಸ್ವ ಇಚ್ಚೆಯಿಂದ ನೀಡಿರುವ ರಾಜೀನಾಮೆ ಅಂಗೀಕರಿಸದಿರುವುದು ಶಾಸಕರ ಹಕ್ಕು ಮೊಟಕುಗೊಳಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸಲು ಮುಂದಾಗಿದ್ದಾರೆ.


Conclusion: ಸ್ಪೀಕರ್ ಅವರ ತೀರ್ಪಿಗೆ ಮೊದಲು ತಡೆಯಾಜ್ಞೆ ನೀಡಬೇಕೆಂದು ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ನಲ್ಲಿ ಕೋರಲಿದ್ದಾರೆ. ಅತೃಪ್ತ ಶಾಸಕರಾದ ಬಿ.ಸಿ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ, ಡಾ.ಕೆಸುಧಾಕರ್, ಎಂ.ಟಿ.ಬಿ.ನಾಗರಾಜ್ ಹೆಚ್ ವಿಶ್ವನಾಥ್, ಕೆ.ಗೋಪಾಲಯ್ಯ, ನಾರಾಯಣಗೌಡ ಸೇರಿದಂತೆ ೧೪ ಜನ ಶಾಸಕರನ್ನು ಅನರ್ಹತೆಗೊಳಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.