ETV Bharat / state

ಸಿದ್ದರಾಮಯ್ಯರ ಅಹಂಕಾರದ ನಡವಳಿಕೆ ಶೋಭೆ ತರುವುದಿಲ್ಲ: ರವಿಕುಮಾರ್​ ಕಿಡಿ - ರವಿಕುಮಾರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ಸುದ್ದಿ

ಸಿದ್ದರಾಮಯ್ಯ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕುರಿತು ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್​ ಕಿಡಿಕಾರಿದ್ದು, ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯನವರ ನಡವಳಿಕೆ ಶಾಸನ ಸಭೆಗೆ ತೋರಿದ ಅಗೌರವ. ಅಹಂಕಾರದ ನಡವಳಿಕೆ ಶೋಭೆ ತರುವುದಿಲ್ಲ ಎಂದಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್
author img

By

Published : Oct 24, 2019, 8:45 PM IST

ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಟೀಕಿಸುವ ಭರದಲ್ಲಿ ಉನ್ನತ ಸಾಂವಿಧಾನಿಕ ಹುದ್ದೆಯ ಪ್ರತಿಷ್ಠೆ ಮತ್ತು ಘನತೆಯನ್ನು ಗಾಳಿಗೆ ತೂರಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.

ಸ್ಪೀಕರ್ ಕುರಿತು ‘ಅವನ್ಯಾವನೋ ಪುಣ್ಯಾತ್ಮನನ್ನು ಸ್ಪೀಕರ್ ಮಾಡಿ ಬಿಟ್ಟಿದ್ದಾರೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯನವರ ನಡವಳಿಕೆ ಶಾಸನ ಸಭೆಗೆ ತೋರಿದ ಅಗೌರವ. ಇಂತಹ ಅಹಂಕಾರದ ನಡವಳಿಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಆರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅವರು ಹೊಸಬ, ಏನೂ ಗೊತ್ತಿಲ್ಲ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಯನ್ನು ಯಾರೂ ಒಪ್ಪಲ್ಲ. ಸ್ವತಃ ತವರು ಕ್ಷೇತ್ರದಲ್ಲಿ ಗೆಲ್ಲಲಾಗದೇ ತಿರಸ್ಕೃತಗೊಂಡ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು.

Ravikumar Press release
ಪತ್ರಿಕಾ ಹೇಳಿಕೆ ಮೂಲಕ ಸಿದ್ದರಾಮಯ್ಯರಿಗೆ ಎಚ್ಚರಿಕೆ ನೀಡಿದ ರವಿಕುಮಾರ್

ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಯನ್ನು ಸೃಷ್ಟಿಸಿರುವುದೇ ಸದನದ ಸದಸ್ಯರನ್ನು ನಿಯಂತ್ರಿಸಲಿಕ್ಕೆ. ಸದನದಲ್ಲಿ ಸದಸ್ಯನಿಗೆ ಮಾತನಾಡಲು ಕಾಲಮಿತಿ ನಿಗದಿ ಮಾಡುವುದು ಸ್ಪೀಕರ್ ಪರಮಾಧಿಕಾರ. ತನಗೆ ಹೆಚ್ಚು ಅವಧಿ ಮಾತನಾಡಲು ಅವಕಾಶ ನೀಡುವುದಿಲ್ಲ ಎನ್ನುವ ಸಿಟ್ಟಿಗೆ ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸುವುದು ಯಾರಿಗೂ ಶೋಭೆ ತರುವುದಿಲ್ಲ. ಸದನದ ಹೊರಗೆ ಮಾತನಾಡಿ ಸದನಕ್ಕಿರುವ ಘನತೆ ಗೌರವವನ್ನು ಗಾಳಿಗೆ ತೂರುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿಗಳೇ ಸದನಕ್ಕೆ ಅಗೌರವ ತೋರುವಂತೆ ಮಾತನಾಡುವ ಪರಂಪರೆಯನ್ನು ಮುಂದುವರೆಸಬಾರದು ಎಂದು ಬಿಜೆಪಿ ಆಗ್ರಹಪಡಿಸುತ್ತದೆ. ಸದನದ ವಿಷಯದಲ್ಲೂ ರಾಜಕೀಯವಾಗಿ ಟೀಕೆ ಮುಂದುವರಿಸಿದರೆ ಸಿದ್ದರಾಮಯ್ಯನವರ ವಿರುದ್ಧ ಎಲ್ಲೆಡೆ ಪ್ರತಿಭಟನೆ ನಡೆಸಬೇಕಾದೀತು ಎಂದು ಪತ್ರಿಕಾ ಹೇಳಿಕೆ ಮೂಲಕ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಟೀಕಿಸುವ ಭರದಲ್ಲಿ ಉನ್ನತ ಸಾಂವಿಧಾನಿಕ ಹುದ್ದೆಯ ಪ್ರತಿಷ್ಠೆ ಮತ್ತು ಘನತೆಯನ್ನು ಗಾಳಿಗೆ ತೂರಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.

ಸ್ಪೀಕರ್ ಕುರಿತು ‘ಅವನ್ಯಾವನೋ ಪುಣ್ಯಾತ್ಮನನ್ನು ಸ್ಪೀಕರ್ ಮಾಡಿ ಬಿಟ್ಟಿದ್ದಾರೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯನವರ ನಡವಳಿಕೆ ಶಾಸನ ಸಭೆಗೆ ತೋರಿದ ಅಗೌರವ. ಇಂತಹ ಅಹಂಕಾರದ ನಡವಳಿಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಆರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅವರು ಹೊಸಬ, ಏನೂ ಗೊತ್ತಿಲ್ಲ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಯನ್ನು ಯಾರೂ ಒಪ್ಪಲ್ಲ. ಸ್ವತಃ ತವರು ಕ್ಷೇತ್ರದಲ್ಲಿ ಗೆಲ್ಲಲಾಗದೇ ತಿರಸ್ಕೃತಗೊಂಡ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು.

Ravikumar Press release
ಪತ್ರಿಕಾ ಹೇಳಿಕೆ ಮೂಲಕ ಸಿದ್ದರಾಮಯ್ಯರಿಗೆ ಎಚ್ಚರಿಕೆ ನೀಡಿದ ರವಿಕುಮಾರ್

ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಯನ್ನು ಸೃಷ್ಟಿಸಿರುವುದೇ ಸದನದ ಸದಸ್ಯರನ್ನು ನಿಯಂತ್ರಿಸಲಿಕ್ಕೆ. ಸದನದಲ್ಲಿ ಸದಸ್ಯನಿಗೆ ಮಾತನಾಡಲು ಕಾಲಮಿತಿ ನಿಗದಿ ಮಾಡುವುದು ಸ್ಪೀಕರ್ ಪರಮಾಧಿಕಾರ. ತನಗೆ ಹೆಚ್ಚು ಅವಧಿ ಮಾತನಾಡಲು ಅವಕಾಶ ನೀಡುವುದಿಲ್ಲ ಎನ್ನುವ ಸಿಟ್ಟಿಗೆ ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸುವುದು ಯಾರಿಗೂ ಶೋಭೆ ತರುವುದಿಲ್ಲ. ಸದನದ ಹೊರಗೆ ಮಾತನಾಡಿ ಸದನಕ್ಕಿರುವ ಘನತೆ ಗೌರವವನ್ನು ಗಾಳಿಗೆ ತೂರುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿಗಳೇ ಸದನಕ್ಕೆ ಅಗೌರವ ತೋರುವಂತೆ ಮಾತನಾಡುವ ಪರಂಪರೆಯನ್ನು ಮುಂದುವರೆಸಬಾರದು ಎಂದು ಬಿಜೆಪಿ ಆಗ್ರಹಪಡಿಸುತ್ತದೆ. ಸದನದ ವಿಷಯದಲ್ಲೂ ರಾಜಕೀಯವಾಗಿ ಟೀಕೆ ಮುಂದುವರಿಸಿದರೆ ಸಿದ್ದರಾಮಯ್ಯನವರ ವಿರುದ್ಧ ಎಲ್ಲೆಡೆ ಪ್ರತಿಭಟನೆ ನಡೆಸಬೇಕಾದೀತು ಎಂದು ಪತ್ರಿಕಾ ಹೇಳಿಕೆ ಮೂಲಕ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

Intro:



ಬೆಂಗಳೂರು:ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕುರಿತು ಟೀಕಿಸುವ ಭರದಲ್ಲಿ ಉನ್ನತ ಸಾಂವಿಧಾನಿಕ
ಹುದ್ದೆಯ ಪ್ರತಿಷ್ಠೆ ಮತ್ತು ಘನತೆಯನ್ನು ಗಾಳಿಗೆ ತೂರಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.

ವಿಧಾನಸಭಾ ಸ್ಪೀಕರ್ ಆಯ್ಕೆ ಅವಿರೋಧವಾಗಿ ನಡೆದಿದ್ದು, ಸ್ವತಃ ಸಿದ್ದರಾಮಯ್ಯ ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷ ಕೂಡ ಇದಕ್ಕೆ ಬೆಂಬಲಿಸಿದೆ. ಇಡೀ ಸದನ ಸರ್ವಾನುಮತದಿಂದ ಆಯ್ಕೆ
ಮಾಡಿದ ಸ್ಪೀಕರ್ ಕುರಿತು ‘ಅವನ್ಯಾವನೋ ಪುಣ್ಯಾತ್ಮನನ್ನು ಸ್ಪೀಕರ್ ಮಾಡಿ ಬಿಟ್ಟಿದ್ದಾರೆ’ ಎಂದು
ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯನವರ ನಡವಳಿಕೆ, ಶಾಸನ ಸಭೆಗೆ ತೋರಿದ
ಅಗೌರವವಷ್ಟೇ ಅಲ್ಲ ಸಮಸ್ತ ಜನಪ್ರತಿನಿಧಿಗಳಿಗೆ ಮಾಡಿದ ಅವಮಾನವೂ ಹೌದು. ಸಿದ್ದರಾಮಯ್ಯ
ಅವರಂತಹ ನಾಯಕರಿಗೆ ಇಂತಹ ಅಹಂಕಾರದ ನಡವಳಿಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಆರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು, ‚ಅವರು ಹೊಸಬ, ಏನೂ ಗೊತ್ತಿಲ್ಲ‛ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಯನ್ನು ಯಾರೂ ಒಪ್ಪುವುದು ಸಾಧ್ಯವಿಲ್ಲ. ಸ್ವತಃ ತವರು ಕ್ಷೇತ್ರದಲ್ಲಿ ಗೆಲ್ಲಲಾಗದೇ ಮತದಾರರಿಂದ ತಿರಸ್ಕೃಗೊಂಡ ಸಿದ್ದರಾಮಯ್ಯ,
ಆತ್ಮಾವಲೋಕನ ಮಾಡಿಕೊಳ್ಳಬೇಕು. ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಯನ್ನು ಸೃಷ್ಟಿಸಿರುವುದೇ, ಸದನದ
ಸದಸ್ಯರನ್ನು ನಿಯಂತ್ರಿಸುವ ಕಾರ್ಯ ನಿಭಾಯಿಸುವುದಕ್ಕೇ ಹೊರತು, ಸಿದ್ದರಾಮಯ್ಯ ಬಯಸಿದಂತೆ
ಎಷ್ಟಾದರೂ ಹೊತ್ತು ಮಾತಾಡಲು ಅವಕಾಶ ನೀಡುವ ಉದ್ದೇಶಕ್ಕಲ್ಲ. ಸದಸ್ಯನಿಗೆ ಮಾತನಾಡಲು ಕಾಲಮಿತಿ
ನಿಗದಿ ಮಾಡುವುದು ಸ್ಪೀಕರ್ ಪರಮಾಧಿಕಾರ. ತನಗೆ ಹೆಚ್ಚು ಅವಧಿ ಮಾತನಾಡಲು ಅವಕಾಶ
ನೀಡುವುದಿಲ್ಲ ಎನ್ನುವ ಸಿಟ್ಟಿಗೆ ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸುವುದು ಯಾರಿಗೂ ಶೋಭೆ ತರುವುದಿಲ್ಲ.
ಸದನದ ಹೊರಗೆ ಮಾತನಾಡಿ ಸದನಕ್ಕಿರುವ ಘನತೆ – ಗೌರವವನ್ನು ಗಾಳಿಗೆ ತೂರುವುದು ಅಕ್ಷಮ್ಯ
ಅಪರಾಧ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿಗಳೇ ಸದನಕ್ಕೆ ಅಗೌರವ ತೋರುವಂತೆ ಮಾತನಾಡುವ ಪರಂಪರೆಯನ್ನು ಮುಂದುವರೆಸಬಾರದು ಎಂದು ಬಿಜೆಪಿ ಆಗ್ರಹಪಡಿಸುತ್ತದೆ. ಸದನದ ವಿಷಯದಲ್ಲೂ ರಾಜಕೀಯವಾಗಿ ಟೀಕೆ ಮುಂದುವರಿಸಿದರೆ, ಸಿದ್ದರಾಮಯ್ಯನವರ ವಿರುದ್ಧ ಎಲ್ಲೆಡೆ ಪ್ರತಿಭಟನೆ ನಡೆಸಬೇಕಾದೀತು ಎಂದು ಪತ್ರಿಕಾ ಹೇಳಿಕೆ ಮೂಲಕ ರವಿಕುಮಾರ್ ಎಚ್ಚರಿಕೆ ನೀಡಿದರು.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.