ETV Bharat / state

ಎಐಸಿಸಿ ವೀಕ್ಷಕರ ಭೇಟಿ ನಂತರ ಬಿ.ಕೆ.ಹರಿಪ್ರಸಾದ್, ಸಿ.ಎಂ. ಇಬ್ರಾಹಿಂ ಹೇಳಿದ್ದೇನು? - Rajya Sabha member B.K. Hariprasad Statement

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ರಾಜ್ಯದ ಕಾಂಗ್ರೆಸ್ ನಾಯಕರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ರಾಜ್ಯದ ಕೈ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Rajya Sabha member B.K. Hariprasad Statement
ಎಐಸಿಸಿ ವೀಕ್ಷಕರ ಭೇಟಿ ನಂತರ 'ಕೈ' ನಾಯಕರ ಮಾತು
author img

By

Published : Dec 19, 2019, 7:56 PM IST

ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ರಾಜ್ಯದ ಕಾಂಗ್ರೆಸ್ ನಾಯಕರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ರಾಜ್ಯದ ಕೈ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಮಧುಸೂದನ್ ಮಿಸ್ತ್ರಿ ಅವರಿಗೆ ಪಕ್ಷದ ಹಿತದೃಷ್ಟಿಯಿಂದ ಏನು ಮಾಡಬೇಕೆಂದು ಹೇಳಿದ್ದೇವೆ. ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಮುಂದೇನು ಮಾಡಬೇಕೆಂದು ಅಭಿಪ್ರಾಯ ಕೇಳಿದ್ದು, ನಾವು ತಿಳಿಸಿದ್ದೇವೆ ಎಂದರು. ಇನ್ನು ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯಾಗಿದೆ. ಪೊಲೀಸರು ಕಾನೂನು ಕೈಗೆತ್ತಿಕೊಂಡಿದ್ದು ಸರಿಯಲ್ಲ ಎಂದರು.

ಎಐಸಿಸಿ ವೀಕ್ಷಕರ ಭೇಟಿ ನಂತರ 'ಕೈ' ನಾಯಕರ ಮಾತು

ಪೌರತ್ವ ತಿದ್ದುಪಡಿ ಕಾಯ್ದೆ ಯಾರಿಗೆ ಬೇಕಿತ್ತು?

ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿ, ಸದ್ಯಕ್ಕೆ ಸಿಎಲ್​ಪಿ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಿರ್ಧಾರವಾಗಲ್ಲ. ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮತ್ತೆ ದೆಹಲಿಯಲ್ಲಿ ಹಿರಿಯ ನಾಯಕರ ಸಭೆ ನಡೆಸಿ, ತೀರ್ಮಾನ ಮಾಡಲಾಗುತ್ತದೆ ಎಂದರು. ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿ, ಏನೇನೋ ಕಾಯ್ದೆಯನ್ನು ತರ್ತಿದ್ದಾರೆ. ಬೇರೆ ದೇಶದಿಂದ ಬಂದವರನ್ನು ಏನ್ಮಾಡೋದು ಎಂದರು. ಮೊದಲು ಇಲ್ಲಿನವರಿಗೆ ಉದ್ಯೋಗ, ಅನ್ನ ಕೊಡಿ. ಅದು ಬಿಟ್ಟು 370, 380 ತಗೊಂಡು ಏನ್ಮಾಡೋದು ಎಂದು ಕೇಳಿದರು. ರಾಜ್ಯದಲ್ಲಿ ಮುಸ್ಲೀಮರಿಗೆ ಭಯ ಬೇಡ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ ನಮಗೇನೂ ತೊಂದರೆ ಇಲ್ಲ ಎಂದರು.

ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ರಾಜ್ಯದ ಕಾಂಗ್ರೆಸ್ ನಾಯಕರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ರಾಜ್ಯದ ಕೈ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಮಧುಸೂದನ್ ಮಿಸ್ತ್ರಿ ಅವರಿಗೆ ಪಕ್ಷದ ಹಿತದೃಷ್ಟಿಯಿಂದ ಏನು ಮಾಡಬೇಕೆಂದು ಹೇಳಿದ್ದೇವೆ. ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಮುಂದೇನು ಮಾಡಬೇಕೆಂದು ಅಭಿಪ್ರಾಯ ಕೇಳಿದ್ದು, ನಾವು ತಿಳಿಸಿದ್ದೇವೆ ಎಂದರು. ಇನ್ನು ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯಾಗಿದೆ. ಪೊಲೀಸರು ಕಾನೂನು ಕೈಗೆತ್ತಿಕೊಂಡಿದ್ದು ಸರಿಯಲ್ಲ ಎಂದರು.

ಎಐಸಿಸಿ ವೀಕ್ಷಕರ ಭೇಟಿ ನಂತರ 'ಕೈ' ನಾಯಕರ ಮಾತು

ಪೌರತ್ವ ತಿದ್ದುಪಡಿ ಕಾಯ್ದೆ ಯಾರಿಗೆ ಬೇಕಿತ್ತು?

ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿ, ಸದ್ಯಕ್ಕೆ ಸಿಎಲ್​ಪಿ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಿರ್ಧಾರವಾಗಲ್ಲ. ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮತ್ತೆ ದೆಹಲಿಯಲ್ಲಿ ಹಿರಿಯ ನಾಯಕರ ಸಭೆ ನಡೆಸಿ, ತೀರ್ಮಾನ ಮಾಡಲಾಗುತ್ತದೆ ಎಂದರು. ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿ, ಏನೇನೋ ಕಾಯ್ದೆಯನ್ನು ತರ್ತಿದ್ದಾರೆ. ಬೇರೆ ದೇಶದಿಂದ ಬಂದವರನ್ನು ಏನ್ಮಾಡೋದು ಎಂದರು. ಮೊದಲು ಇಲ್ಲಿನವರಿಗೆ ಉದ್ಯೋಗ, ಅನ್ನ ಕೊಡಿ. ಅದು ಬಿಟ್ಟು 370, 380 ತಗೊಂಡು ಏನ್ಮಾಡೋದು ಎಂದು ಕೇಳಿದರು. ರಾಜ್ಯದಲ್ಲಿ ಮುಸ್ಲೀಮರಿಗೆ ಭಯ ಬೇಡ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ ನಮಗೇನೂ ತೊಂದರೆ ಇಲ್ಲ ಎಂದರು.

Intro:newsBody:ಎಐಸಿಸಿ ವೀಕ್ಷಕರ ಭೇಟಿ ನಂತರ ನಾಯಕರು ಹೇಳಿದ್ದೇನು?!

ಬೆಂಗಳೂರು: ಎಐಸಿಸಿ ವೀಕ್ಷಕರ ಆದ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ನಗರದ ಕುಮಾರಕೃಪ ಅತಿಥಿಗೃಹದಲ್ಲಿ ವಿವಿಧ ನಾಯಕರು ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದು, ಸಭೆಯ ನಂತರ ಮುಖಂಡರು ಆಡಿದ ಮಾತು ಇಂತಿದೆ.
ರಾಜ್ಯಸಭೆ ಸದಸ್ಯ ಬಿಕೆ ಹರಿಪ್ರಸಾದ್ ಮಾತನಾಡಿ, ಮಿಸ್ತ್ರೀ ಅವರಿಗೆ ಪಕ್ಷದ ಹಿತದೃಷ್ಟಿಯಿಂದ ಏನು ಮಾಡಬೇಕು ಅಂತ ಹೇಳಿದ್ದೇವೆ. ಅವರ ಮುಂದೆ ತಿಳಿಸಿದ ಅಭಿಪ್ರಾಯ ಹೊರಗಡೆ ಹೇಳಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷರು ಮತ್ತು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಮುಂದೇನು ಮಾಡಬೇಕು ಅಂತ ಅಭಿಪ್ರಾಯ ಕೇಳಿದ್ದಾರೆ.. ಮುಂದೆ ತಿಳಿಸಿದ್ದೇವೆ. ಪೌರತ್ವ ತಿದ್ದುಪಡಿ ಕಾಯಿದೆ ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆಗಿದೆ. ಪೊಲೀಸರು ಕಾನೂನು ಕೈಗೆತ್ತಿಕೊಂಡಿದ್ದು ಸರಿಯಲ್ಲ. ಇಂತಹ ಸೂಕ್ಷ್ಮ ವಿಚಾರಗಳನ್ನ ಕೇಂದ್ರ ಅತುರ ಮಾಡಿದ್ದು ಸರಿಯಲ್ಲ ಎಂದು ವಿವರಿಸಿದರು.
ಸಂವಿಧಾನಕ್ಕೆ ವಿರುದ್ಧವಾದ ನಿರ್ಣಯ
ಮಾಜಿ ಸಂಸದ ಡಾ ಎಂ ವೀರಪ್ಪ ಮೊಯ್ಲಿ ಮಾತನಾಡಿ, ಸಂವಿಧಾನಕ್ಕೆ ಹಾಗೂ ಜನರ ಅಭಿಪ್ರಾಯಕ್ಕೆ ವಿರುದ್ಧವಾದ ಪ್ರತಿಯೊಂದು ವಿಚಾರವನ್ನು ಕಾಂಗ್ರೆಸ್ ಖಂಡಿಸುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಕಾಂಗ್ರೆಸ್, ಜನರಿಗೆ ತೊಂದರೆಯಾದ ಸಂದರ್ಭದಲ್ಲೆಲ್ಲ ಅವರ ಪರವಾಗಿ ನಿಂತಿದೆ. ಇಂದು ಬಿಜೆಪಿ ಸರ್ಕಾರ ಕೈಗೊಂಡಿರುವ ನಿರ್ಧಾರದ ವಿರುದ್ಧ ಇಡೀ ದೇಶವೇ ಎದ್ದುನಿಂತಿದೆ. ಜನರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ. ಇಡೀ ದೇಶವೇ ವಿರುದ್ಧವಾಗಿ ನಿಂತರೂ ಕೂಡ ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹಟಕ್ಕೆ ಬಿದ್ದವರಂತೆ ಮಾತನಾಡುವುದು ಸರಿಯಲ್ಲ. ಜನರ ಹಕ್ಕು ಹಾಗೂ ಕರ್ತವ್ಯಕ್ಕೆ ಜೀವಂತ ಕಾರ್ಯ ಕೂಡ ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಗಿದೆ. ಇದನ್ನು ನಾವು ಖಂಡಿಸುತ್ತೇವೆ. ರಾಜ್ಯದಲ್ಲಿ ಯಾವುದೇ ಕಾರಣವಿಲ್ಲದೆ 144ನೇ ಶಿಕ್ಷಣ ಜಾರಿಗೆ ತಂದಿರುವುದು ಸರಿಯಲ್ಲ. ಇದೇ ಮೊದಲ ಬಾರಿಗೆ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಮಹಾದಾಯಿ ವಿಚಾರದಲ್ಲಿ ಕೂಡ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡಿವೆ. ಚುನಾವಣೆಗೆ ಮುನ್ನ ಒಂದು ಹೇಳಿಕೆ ನಂತರ ಒಂದು ಹೇಳಿಕೆ ನೀಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ಯಾರಿಗೆ ಬೇಕಿತ್ತು
ವಿಧಾನಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಮಾತನಾಡಿ, ಸದ್ಯಕ್ಕೆ ಸಿಎಲ್ಪಿ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಿರ್ಧಾರ ಆಗಲ್ಲ. ಅಭಿಪ್ರಾಯಗಳನ್ನ ಸಂಗ್ರಹಿಸುತ್ತಿದ್ದಾರಷ್ಟೇ. ಮತ್ತೇ ದೆಹಲಿಲೀ ಹಿರಿಯ ಸಭೆ ಮಾಡಿ ತೀರ್ಮಾನ ಮಾಡ್ತಾರೆ.‌ ಇನ್ನೂ ಪ್ರೊಸಸ್ ಜಾಸ್ತಿ ಇದೆ ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿ, ದೇಶದ ಮೂಲ ನಿವಾಸಿಗಳು ಕರುಣಾನಿಧಿ ಮತ್ತು ಅವರಪ್ಪ. ಆರ್ಯರು ಬೇರೆಡೆಯಿಂದ ಬಂದೋರು. ನಮ್ಮ ದೇವರು ಎಮ್ಮೆ,ಮಹಿಷಿ. ಹಸು ಬೇರೆಡೆಯಿಂದ ಬಂದದ್ದು. ದ್ರಾವಿಡರು ಈ ನೆಲದವರು. ಆರ್ಯರು ಬೇರೆಡೆಯಿಂದ ಬಂದವರು. ಅವರು ಹೋಗ್ತಾರಾ ? ಯಾಕೋ ಮೋದಿ ಮೇಲೆ ಅಮಿತ್ ಶಾಗೆ ಸಿಟ್ಟು ಇದ್ದಂಗಿದೆ. ಏನೇನೋ ಕಾಯ್ದೆ ತರ್ತಿದ್ದಾರೆ. ಬೇರೆ ದೇಶದಿಂದ ಬಂದವರನ್ನ ಏನ್ಮಾಡೋದು ? ಮೊದಲು ಇಲ್ಲಿನವರಿಗೆ ಉದ್ಯೋಗ, ಅನ್ನ ಕೊಡಿ. ಅದು ಬಿಟ್ಟು 370, 380 ತಗೊಂಡು ಏನ್ಮಾಡೋದು ? ಯುವಕರಿಗೆ ಉದ್ಯೋಗ ಕೊಡಿ. ಈರುಳ್ಳಿ ಇನ್ನೂರು ರೂ. ಆಗಿದೆ. ರಾಜ್ಯದಲ್ಲಿ ಮುಸ್ಲಿಮರಿಗೆ ಭಯ ಬೇಡ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ ನಮಗೇನೂ ತೊಂದರೆ ಇಲ್ಲ ಎಂದರು.
ಈ ಬಿಲ್ ಯಾರಿಗೆ ಬೇಕಿತ್ತು? ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಮೊದಲು ಗಮನ ಹರಿಸಲಿ. ನಮಗೆ ಅನ್ನ ಸಿಗ್ತಿಲ್ಲ ಅಲ್ಲಿಂದ ಕರೆದುಕೊಂಡು ಬಂದು ಪೌರತ್ವ ಕೊಡ್ತೀನಿ ಅನ್ತಾರೆ. ಮೊದಲು ನಮಗೆ ಅನ್ನ ಕೊಡಿ. ಪಾಕಿಸ್ತಾನ, ಬಾಂಗ್ಲಾದೇಶದ ಹಿಂದೂಗಳಿಗೆ ಪೌರತ್ವ ಕೊಡಲಿ. ನಾವು ಅದಕ್ಕೆ ವಿರೋಧ ಇಲ್ಲ. ನನಗೆ ಎಷ್ಟು ಜನ ಮಕ್ಕಳ ಇದ್ದಾರೆ ಅಂತ ನನಗೆ ಗೊತ್ತಿಲ್ಲ. ಯಾವ್ ಕ್ಲಾಸ್ ನಲ್ಲಿ ಓದುತ್ತಿದ್ದಾರೆ ಎಂದು ಗೊತ್ತಿಲ್ಲ. 1971 ರಲ್ಲಿ ನೀನು ಎಲ್ಲಿ ಓದ್ದಿದ್ದೆ? ನಿಮ್ಮ ಅಪ್ಪ ಯಾರು? ನಿಮ್ಮ ಅಮ್ಮ ಯಾರು? ಎಲ್ಲಿ ಹುಟ್ಟಿದೆ ಅಂತ ದಾಖಲೆ ಕೇಳಿದ್ರೆ ಕೊಡೋಕ್ಕೆ ಆಗುತ್ತಾ? ಎಮ್ಮೆ(ಮಹಿಷಿ) ನಮ್ಮ ಮನೆ ದೇವರು. ಹಸು ಹೊರಗಡೆಯಿಂದ ಬಂದಿದ್ದು. ಡ್ರಾವಿಡರು ಈ ದೇಶದ ಮೂಲ ನಿವಾಸಿಗಳು. ಕರಣಾನಿಧಿ ಅವರ ತಂದೆ ಮೂಲ ಡ್ರಾವಿಡರು. ನಿಜವಾಗಲೂ ಈ ದೇಶದ ವಲಸಿಗರು ಆರ್ಯರು. ಡ್ರಾವಿಡರು ಕನ್ನಡ, ತಮಿಳಿ, ತೆಲುಗು ಮಲಾಯಳಿ ಭಾಷಿಕರು ನಿಜವಾದ ಡ್ರಾವಿಡರು. ಹಾಗಾದ್ರೆ ಇವರೆಲ್ಲ ವಲಸಿಗರು ಹೊರಗಡೆ ಹೋಗ್ತಾರಾ?ಕರ್ನಾಟಕದಲ್ಲಿ ಯಾರು ಉದ್ವೇಗ ಆಗೋದು ಬೇಡ ಕರ್ನಾಟಕದಲ್ಲಿ ಹಿಂದು- ಮುಸ್ಲಿಂ ಧರ್ಮದ ಕಿತ್ತಾಟ ಆಗಲ್ಲ. ಭಾರತವನ್ನ ಬಿಗಿಯಾಗಿ ಕಟ್ಟುವ ಕೆಲಸ ನಾವೆಲ್ಲ ಮಾಡೋಣ ಎಂದರು.Conclusion:news

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.