ETV Bharat / state

ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ - undefined

ಕುಡಿಯುವ ನೀರಿಗಾಗಿ ಆಗ್ರಹಿಸಿ ಯಲಹಂಕ ಉಪನಗರದ ಡೈರಿ ವೃತ್ತದಲ್ಲಿ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ
author img

By

Published : Jun 25, 2019, 3:55 PM IST

ಬೆಂಗಳೂರು: ಬೇಸಿಗೆ ಸಮೀಪವಾಗುತ್ತಿದ್ದಂತೆ ನಗರದಲ್ಲಿ ನೀರಿನ ಅಭಾವ ಸೃಷ್ಠಿಯಾಗುತ್ತಿದೆ. ಕೆಲವೊಂದು ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಆದರೆ, ಇರುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡದೇ ಕುಡಿಯುವ ನೀರಿನಲ್ಲಿ ತ್ಯಾಜ್ಯ ಸೇರಿ ಕಲುಷಿತಗೊಂಡಿದೆ. ಇದನ್ನು ಬಗೆಹರಿಸಿ ಎಂದು ವಾರ್ಡ್ ನಂ.3 ಮತ್ತು 4ರ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಬಳಿ ದೂರು ನೀಡಿದರೆ ದುರ್ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕುಡಿಯುವ ನೀರಿಗಾಗಿ ಪ್ರತಿಭಟನೆ

ಬಿಬಿಎಂಪಿ ವಾರ್ಡ್ ನಂ. 3ರ ವ್ಯಾಪ್ತಿಯ ಬೆಟ್ಟಹಳ್ಳಿಯಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಹಾಗೂ ಕಲುಷಿತಗೊಂಡಿರುವ ಬಗ್ಗೆ ವಾರ್ಡ್ ನಂ. 3 ಮತ್ತು 4ರ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಬಳಿ ದೂರು ನೀಡಿದರೆ ದುರ್ವರ್ತನೆ ತೋರತ್ತಿದ್ದಾರೆಂದು ಆರೋಪಿಸಿದ್ದಾರೆ. ಹೀಗಾಗಿ ಇವರ ದುರ್ನಡತೆ ಖಂಡಿಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಟ್ರಸ್ಟ್‌ ಹಾಗೂ ಬೆಟ್ಟಹಳ್ಳಿ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.


ಪ್ರತಿಭಟನೆಯನ್ನುದ್ದೇಶಿಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಟ್ರಸ್ಟ್‌ ಗೌರವಾಧ್ಯಕ್ಷ ಎ.ಎಂ.ಕಲಂದರ್ ಮಾತನಾಡಿ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ , ಆದಿತ್ಯನಗರ ಗ್ರಾಮಗಳಲ್ಲಿ ಹೆಚ್ಚಾಗಿ ದಲಿತ ಹಾಗೂ ಹಿಂದುಳಿದ ವರ್ಗಗಳ ಬಡಜನತೆ ವಾಸಿಸುತ್ತಿದ್ದಾರೆ. ನಮಗೆ ಶುದ್ಧ ಕುಡಿಯುವ ನೀರು ಪೂರೈಸದೇ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ದುರ್ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಹೋರಾತ್ರಿ ಧರಣಿ: ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆಂದು ಆಶ್ವಾಸನೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಿ, ಬಿಬಿಎಂಪಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಬೇಸಿಗೆ ಸಮೀಪವಾಗುತ್ತಿದ್ದಂತೆ ನಗರದಲ್ಲಿ ನೀರಿನ ಅಭಾವ ಸೃಷ್ಠಿಯಾಗುತ್ತಿದೆ. ಕೆಲವೊಂದು ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಆದರೆ, ಇರುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡದೇ ಕುಡಿಯುವ ನೀರಿನಲ್ಲಿ ತ್ಯಾಜ್ಯ ಸೇರಿ ಕಲುಷಿತಗೊಂಡಿದೆ. ಇದನ್ನು ಬಗೆಹರಿಸಿ ಎಂದು ವಾರ್ಡ್ ನಂ.3 ಮತ್ತು 4ರ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಬಳಿ ದೂರು ನೀಡಿದರೆ ದುರ್ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕುಡಿಯುವ ನೀರಿಗಾಗಿ ಪ್ರತಿಭಟನೆ

ಬಿಬಿಎಂಪಿ ವಾರ್ಡ್ ನಂ. 3ರ ವ್ಯಾಪ್ತಿಯ ಬೆಟ್ಟಹಳ್ಳಿಯಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಹಾಗೂ ಕಲುಷಿತಗೊಂಡಿರುವ ಬಗ್ಗೆ ವಾರ್ಡ್ ನಂ. 3 ಮತ್ತು 4ರ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಬಳಿ ದೂರು ನೀಡಿದರೆ ದುರ್ವರ್ತನೆ ತೋರತ್ತಿದ್ದಾರೆಂದು ಆರೋಪಿಸಿದ್ದಾರೆ. ಹೀಗಾಗಿ ಇವರ ದುರ್ನಡತೆ ಖಂಡಿಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಟ್ರಸ್ಟ್‌ ಹಾಗೂ ಬೆಟ್ಟಹಳ್ಳಿ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.


ಪ್ರತಿಭಟನೆಯನ್ನುದ್ದೇಶಿಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಟ್ರಸ್ಟ್‌ ಗೌರವಾಧ್ಯಕ್ಷ ಎ.ಎಂ.ಕಲಂದರ್ ಮಾತನಾಡಿ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ , ಆದಿತ್ಯನಗರ ಗ್ರಾಮಗಳಲ್ಲಿ ಹೆಚ್ಚಾಗಿ ದಲಿತ ಹಾಗೂ ಹಿಂದುಳಿದ ವರ್ಗಗಳ ಬಡಜನತೆ ವಾಸಿಸುತ್ತಿದ್ದಾರೆ. ನಮಗೆ ಶುದ್ಧ ಕುಡಿಯುವ ನೀರು ಪೂರೈಸದೇ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ದುರ್ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಹೋರಾತ್ರಿ ಧರಣಿ: ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆಂದು ಆಶ್ವಾಸನೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಿ, ಬಿಬಿಎಂಪಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Intro:ಸಂಜಯ್ ನಾಗ್ ಬೆಂಗಳೂರು KA10014

(ಪ್ಯಾಕೇಜ್)
_________
ಕುಡಿಯುವ ನೀರು ಕೇಳಿದ್ರೆ ಕಿಡಿಕಾರುವ ಇಂಜಿನಿಯರ್ ವರ್ತನೆ ಖಂಡಿಸಿ ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ

ಬೆಂಗಳೂರು: ಬೇಸಿಗೆ ಸಮೀಪವಾಗುತ್ತಿದ್ದಂತೆ ನಗರದಲ್ಲಿ ನೀರಿನ ಅಭಾವ ಸೃಷ್ಠಿಯಾಗುತ್ತಿದೆ. ಕೆಲವೊಂದು ಕೊಳವೆ ಭಾವಿಗಳು ಬತ್ತಿಹೋಗುತ್ತಿವೆ. ಆದರೆ, ಇರುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡದೇ, ಕುಡಿಯುವ ನೀರಿನಲ್ಲಿ ತ್ಯಾಜ್ಯ ಸೇರಿ ಕಲುಷಿತಗೊಂಡಿದೆ ಇದನ್ಮು ಬಗೆಹರಿಸಿ ಎಂದು ವಾರ್ಡ್ ನಂ.3 ಮತ್ತು 4ರ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಬಳಿ ದೂರು ನೀಡಿದರೆ ದುರ್ವರ್ತನೆ ತೋರಿದ್ದಾರೆ.

ಹೌದು, ಬಿಬಿಎಂಪಿ ವಾರ್ಡ್ ನಂ.3ರ ವ್ಯಾಪ್ತಿಯ ಬೆಟ್ಟಹಳ್ಳಿಯಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಹಾಗೂ ಕಲುಷಿತಗೊಂಡಿರುವ ಬಗ್ಗೆ ವಾರ್ಡ್ ನಂ.3ಮತ್ತು 4ರ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಬಳಿ ದೂರು ನೀಡಿದರೆ ದುರ್ವರ್ತನೆ ತೋರತ್ತಿದ್ದಾರೆಂದು ಆರೋಪಿಸಿದ್ದಾರೆ.
ಹೀಗಾಗಿ ಈತನ ದುರ್ನಡತೆ ಖಂಡಿಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಟ್ರಸ್ಟ್‌ ಹಾಗೂ ಬೆಟ್ಟಹಳ್ಳಿ ಮಹಿಳೆಯರು ಖಾಲಿಕೊಡಗಳನ್ನು ಪ್ರದರ್ಶಿಸಿ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಯಲಹಂಕ ಉಪನಗರದ ಡೈರಿ ವೃತ್ತದಿಂದ ಖಾಲಿ ಕೊಡಗಳನ್ನು ಹಿಡಿದುಕೊಂಡು ಚಂದ್ರಶೇಖರ್ ಆಜಾದ್ ನೇತೃತ್ವದಲ್ಲಿ ಮೆರವಣಿಗೆ ಜಾಥಾ ನಡೆಸಿದ ಪ್ರತಿಭಟನಾಕಾರರು ವಾರ್ಡ್ ನಂ.3 ಮತ್ತು 4ರ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಸಮರ್ಪಕವಾಗಿ ಶುದ್ದ ಕುಡಿಯುವ ನೀರನ್ನು ಪೂರೈಸಬೇಕೆಂದು ಪಟ್ಟು ಹಿಡಿದರು.

ಅಟ್ಟೂರು ವಾರ್ಡ್ ನಂ.3ರ ವ್ಯಾಪ್ತಿಯ ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ , ಆದಿತ್ಯನಗರ ಗ್ರಾಮಗಳಿಗೆ ಕಳೆದ 3ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ. ಅಪರೂಪಕ್ಕೆ ನೀರು ಬಂದರು ಸಹ ತ್ಯಾಜ್ಯನೀರು ಸೇರಿಕೊಂಡು ಹುಳ ಬಿದ್ದಿರುವುದರಿಂದ ಸ್ನಾನಕ್ಕೂ ಕೂಡಾ ಬಳಸಲು ಯೋಗ್ಯವಾಗಿರುವುದಿಲ್ಲ. ಈ ಸಮಸ್ಯೆ ಬಗೆಹರಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೆ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ. ಪದೇ ಪದೆ ಕೇಳಿದರೆ ದುರ್ವರ್ತನೆ ತೋರುತ್ತಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಪ್ರತಿನಿತ್ಯ ಬಳಕೆ ಸೇರಿದಂತೆ ಕುಡಿಯಲು ನೀರು ಬೇಕೆ ಬೇಕು. ಹೀಗಾಗಿ, ವಾಟಾರ್ ಟ್ಯಾಂಕರ್ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಆದರೆ ನಾವು ಬಡಕೂಲಿ ಕಾರ್ಮಿಕರು ವಾಟರ್ ಟ್ಯಾಂಕರ್ ನವರು ಕೇಳುವ 450ರೂ. ಕೊಡಲು ನಾವು ಶಕ್ತರಲ್ಲ. ಹೀಗಾಗಿ, ಅನೇಖ ಬಾರಿ ಬಿಬಿಎಂಪಿ ಅಧಿಕಾರಿಗಳು ಹಾಗೂ ವಾಟರ್ ಮ್ಯಾನ್ ಗಳ ಬಳಿ ಕೇಳಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಪ್ರತಿಭಟನೆಯನ್ನುದ್ದೇಶಿಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಟ್ರಸ್ಟ್‌ ಗೌರವಾಧ್ಯಕ್ಷ ಎ.ಎಂ.ಕಲಂದರ್ ಮಾತನಾಡಿ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ , ಆದಿತ್ಯನಗರ ಗ್ರಾಮಗಳಲ್ಲಿ ಹೆಚ್ಚಾಗಿ ದಲಿತ ಹಾಗೂ ಹಿಂದುಳಿದ ವರ್ಗಗಳ ಬಡಜನತೆ ವಾಸಿಸುತ್ತಿದ್ದಾರೆ. ನಮಗೆ ಶುದ್ದ ಕುಡಿಯುವ ನೀರು ಪೂರೈಸದೇ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ದುರ್ವರ್ತನೆ ತೋರುತ್ತಿದ್ದಾರೆ. ಕಳೆದ ಮೂರು ನಾಲ್ಕು ತಿಂಗಳಿನಿಂದ ಸಾಕಷ್ಟು ಬಾರಿ ಸಮಸ್ಯೆ ಬಗ್ಗೆ ಮೌಕಿಕವಾಗಿ ಹಾಗೂ ಲಿಖಿತವಾಗಿ ದೂರು ನೀಡಿದ್ದೇವೆ. ಆದರೆ ಸಮಸ್ಯೆ ಬಗೆಹರಿಸಬೇಕಾದ ಸಹಾಯಕ ಅಭಿಯಂತರ ಸಚಿನ್ ಬೇಜವಾಬ್ದಾರಿತನ ಪ್ರದರ್ಶಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ದುರ್ವರ್ತನೆ ತೋರುತ್ತಾರೆ ಎಂದು ಆರೋಪಿಸಿದರು.

ಅಹೋರಾತ್ರಿ ಧರಣಿ: ಇನ್ನೆರಡು ದಿನಗಳಲ್ಲಿ ಸಮಸ್ಯೆಗೆ ಬಗೆಹರಿಸುತ್ತೇನೆಂದು ಆಶ್ವಾಸನೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ, ಹೋರಾಟವನ್ನು ತೀವ್ರಗೊಳಿಸಿ, ಬಿಬಿಎಂಪಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Body:ವಾಟರ್ ಮ್ಯಾನ್ ಹೇಳಿದಂತೆ ಕೇಳುತ್ತೇನೆ: ಸಮರ್ಪಕವಾಗಿ ಶುದ್ದ ನೀರು ಸರಬರಾಜು ಮಾಡಿ ಎಂದು ಮಹಿಳೆಯರು ಅಹವಾಲು ನೀಡಲು ಮುಂದಾದಾಗ ಈ ಸಮಸ್ಯೆ ವಾಟರ್ ಮ್ಯಾನ್ ಕಡೆಯಿಂದ ಆಗಿದೆ. ಹೀಗಾಗಿ, ಆತ ಕೆಲ ಸಲಹೆ ನೀಡಿದ್ದಾನೆ. ಆತ ಹೇಳಿದಂತೆ ವಾಟರ್ ಲೈನ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮುಂದೇನಾದರೂ ಸಮಸ್ಯೆ ಉದ್ಭವವಾದರೆ ಆತನೇ ಹೊಣೆಗಾರ ಎಂದು ಮತ್ತೆಯೂ ಬೇಜವಾಬ್ದಾರಿ ಹೇಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಜಾರಿಕೊಂಡರು.
ಇನ್ನು, ಪಾಪ ಮಹಿಳೆಯರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದರೆ, ನೋಡಿ ಮುಸಿಮುಸಿ ನಕ್ಕು ವಿಕೃತ ಮಜಾ ತೆಗೆದುಕೊಳ್ಳುತ್ತಿದ್ದರು.

ಇದನ್ನೆಲ್ಲ ನೋಡಿದ ಮೇಲೆ ಬಡವರು ಕುಡಿಯುವ ನೀರು ಕೇಳಿದರೆ ಕುಹಕವಾಡಿ ದುರ್ವರ್ತನೆ ತೋರುವ ಇಂತಹ ಅಧಿಕಾರಿಗಳ ವಿರುದ್ದ ಮೇಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಇಂತಹ ಕಿ ಅಧಿಕಾರಿಗಳಿಗಳಿಗೆ ಕಡಿವಾಣ ಇಲ್ಲದಂತಾಗುತ್ತದೆ.




Conclusion:ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ್ ಆಜಾದ್, ಕಾನೂನು ಸಲಹೆಗಾರ ಮುದ್ದಯ್ಯ, ಜನಜಾಗೃತಿ ವೇದಿಕೆಯ ವೈಸಿ ವೆಂಕಟೇಶ್, ಸೇರಿ ಗ್ರಾಮಗಳ ನಾಗರಿಕರು ಪಾಲ್ಗೊಂಡಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.